ಸುಳ್ಯ : ಪಾಟಾಳಿ ಯಾನೆ ಗಾಣಿಗ ಸಮಾಜದ ಸತ್ಯನಾರಾಯಣ ಪೂಜಾ ಕಾರ್ಯಕ್ರಮ ಮತ್ತು ನೂತನ ಸಮಿತಿಗೆ ಅಧಿಕಾರ ಹಸ್ತಾಂತರ ಕಾರ್ಯಕ್ರಮ ನಡೆಯಿತು.
ನಿರ್ಗಮಿತ ಅಧ್ಯಕ್ಷರಾದ ಚಂದಾ ಪಾಟಾಳಿ ನೂತನ ಅಧ್ಯಕ್ಷರಾದ ರಮೇಶ್ ಅಧಿಕಾರ ಸ್ವಿಕರಿಸಿದರು. ಕಾರ್ಯದರ್ಶಿಯಾಗಿ ಸಂಜಯ್ ನೆಟ್ಟಾರು ಖಜಾಂಜಿಯಾಗಿ ಹರ್ಷಿತ್ ಇವರಿಗೆ ನಿರ್ಗಮಿತ ಕಾರ್ಯದರ್ಶಿ ಸಚಿತ್ ಖಜಾಂಜಿ ಸುನಿಲ್ ಕುಮಾರ್ ಅಧಿಕಾರ ಹಸ್ತಾಂತರಿಸಿದರು .
ಈ ಸಂದರ್ಭದಲ್ಲಿ ಸಮಿತಿ ಸದಸ್ಯರಾದ ಮಿಧುನ್ ಕರ್ಲಾಪ್ಪಾಡಿ ,ಸುರೇಶ್ , ಗೋಪಾಲ ಅಡ್ಕಾರು , ಮಾಲಿಂಗ ಬಾಜರತೊಟ್ಟಿ ,ವೆಂಕಟ್ರಮಣ , ದೇವಕಿ ಬೆಳ್ಳಾರೆ ,ಮದುಶ್ರೀ, ವಿಶಾಲಕ್ಷಿ ಮತ್ತು ನೂತನ ಸಮಿತಿ ಸದಸ್ಯರು ಮತ್ತು ನಿರ್ಗಮಿತ ಸದಸ್ಯರು ಹಾಜರಿದ್ದರು.
ಅನಾರೋಗ್ಯದಿಂದ ಬಳಳುತ್ತಿರು ಬಾಲಕೃಷ್ಣ ಅವರ 1 ವರ್ಷ 6 ತಿಂಗಳ ಮಗುವಿನ ಚಿಕಿತ್ಸೆಗಾಗಿ ಸಂಘದ ವತಿಯಿಂದ ಮತ್ತು ಸಮಸ್ತ ಸಮಾಜದ ಜನತೆಯಿಂದ ಹಣ ಸಂಗ್ರಹಿಸಿ ಆರೋಗ್ಯ ನಿಧಿ ನೀಡಲಾಗುವುದು ಸಮಾಜ ಬಾಂದವರು ಸಹಕರಿಸಲು ನಿರ್ಧರಿಸಲಾಯಿತು.
ಕರಾವಳಿ ಮತ್ತು ಮಲೆನಾಡಿನಲ್ಲಿ ಮುಂದಿನ 10 ದಿನಗಳವರೆಗೆ ಸಾಮಾನ್ಯ ಮಳೆ ಮುಂದುವರಿಯುವ ನಿರೀಕ್ಷೆಯಿದ್ದು,…
ಉತ್ತರ ಪ್ರದೇಶದಲ್ಲಿ 200 ಹಸುಗಳನ್ನು ಆಧರಿಸಿದ ಸಮಗ್ರ ಗೋ ಆರ್ಥಿಕತೆ ಮಾದರಿಯಲ್ಲಿ ಗೋಮಯದಿಂದ…
ರಬ್ಬರ್ ತೋಟಗಳು ಹಸಿರಾಗಿದ್ದರೂ ಅವು ನೈಸರ್ಗಿಕ ಮಳೆಕಾಡಿನ ಜೀವವೈವಿಧ್ಯವನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂದು…
ಭಾರತದ ಅಡುಗೆ ಎಣ್ಣೆ ಆಮದು ಎಂಟು ತಿಂಗಳಲ್ಲಿ ಶೇ.7ರಷ್ಟು ಏರಿಕೆಯಾಗಿದೆ. ಜೂನ್ನಲ್ಲಿ ಆಮದು…
ಕೇರಳದಲ್ಲಿ ಉತ್ಪಾದನೆಯಾಗುವ ಬಹುತೇಕ ಹಲಸು ಬಳಕೆಯಾಗದೆ ವ್ಯರ್ಥವಾಗುತ್ತಿದ್ದು, ವರ್ಷಕ್ಕೆ ಸುಮಾರು ₹1,200 ಕೋಟಿ…
ಅವೈಜ್ಞಾನಿಕ ಮಳೆ ಮುನ್ಸೂಚನೆಗಳ ಆಧಾರದ ಮೇಲೆ ಪದೇ ಪದೇ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸುವುದು…