Advertisement
ಯಕ್ಷಗಾನ : ಮಾತು-ಮಸೆತ

ಇವಳು ಹೆಣ್ಣಲ್ಲ. ಜಗತ್ತಿನ ತಾಯಿ ಇವಳು…..

Share

ಶೇಣಿ ಗೋಪಾಲಕೃಷ್ಣ ಭಟ್ಟರ ‘ರಕ್ತಬೀಜ’
(ಪ್ರಸಂಗ : ಶ್ರೀ ದೇವಿ ಮಹಾತ್ಮ್ಯೆ)

(ಶುಂಭ ಮತ್ತು ಶ್ರೀದೇವಿಯ ಯುದ್ಧದ ಸನ್ನಿವೇಶ. ದೇವಿಯನ್ನು ನೋಡಿದ ರಕ್ತಬೀಜ ಹೀಗೆ ತರ್ಕಿಸುತ್ತಾನೆ)

…. ಭಲೇ… ಭಲೇ… ಈ ದರ್ಶನ ಜೀವಾತ್ಮನಿಗೆ ಮೊದಲೇ ಆಗಬೇಕು. ನಿರಾಕಾರ ನಿರ್ಗುಣವಾದಂತಹ ‘ಪರಬ್ರಹ್ಮ’ ಕೇವಲ ನಮ್ಮ ತರ್ಕಕ್ಕೆ ವಸ್ತು. ಸಾಕಾರ ಸ್ವರೂಪವಾದಂತಹ ಈ ವಿಶ್ವವನ್ನು ಕಂಡು ಅದನ್ನು ಗುರುತಿಸಬಹುದು. ಯಾವುದಾದರೂ ಒಂದು ವಸ್ತುವನ್ನು ಕಂಡಾಗ ಆ ವಸ್ತುವನ್ನು ತಯಾರಿಸಿದಂತಹ ವ್ಯಕ್ತಿಯ ಇಚ್ಚಾ – ಕ್ರಿಯಾ – ಜ್ಞಾನವನ್ನು ಗುರುತಿಸಬಲ್ಲ ಪ್ರಾಜ್ಞನಂತೆ ನಾನು ಇವಳನ್ನು ‘ಪರಬ್ರಹ್ಮ’ ಎಂದು ಗುರುತಿಸಿದೆ.

ಇವಳು ಹೆಣ್ಣಲ್ಲ. ಜಗತ್ತಿನ ತಾಯಿ ಇವಳು. ಪ್ರಪಂಚದಲ್ಲಿರುವ ಸಕಲ ಪುರುಷರನ್ನು ಆಕರ್ಷಿಸುವ ಮಾಯಾಮೋಹಿನಿಯಾದ ಹೆಂಡತಿಯೂ ಇವಳೇ. ಸಂಸಾರಕ್ಕೆ ಎಳೆಯುವ ಮಾಯಾರೂಪಿಣಿಯಾದ ಮಗಳೂ ಇವಳೇ. ಹಾಗಾದರೆ ತಾಯಿಯಾಗಿ, ಹೆಂಡತಿಯಾಗಿ, ಮಗಳಾಗಿ ‘ಮಾಯೆ’ ನನ್ನನ್ನು ಕಾಡಿತ್ತು. ನನಗೇನಂತೆ, ನನ್ನ ಇಚ್ಛಾ-ಕ್ರಿಯಾ-ಜ್ಞಾನಶಕ್ತಿಯನ್ನು ಮುಂದಿಟ್ಟುಕೊಂಡು ಇವಳನ್ನು ಇದಿರಿಸಿ, ಶಕ್ತಿಯಿಂದ ಇವಳು ಸೋಲುವಂತ ಮಾಡಿ ಮೈಯಿಂದಲ್ಲದಿದ್ದರೂ, ಮನಸ್ಸಿನಿಂದಾದರೂ ಸೋತರೆ ಸಾಕು. ‘ಕೈಹಿಡಿ’ ಅಂತ ಕೇಳಲು ಬಂದಿದ್ದೇನೆ. ‘ಕೈಹಿಡಿ’ ಇದಕ್ಕೆ ಅಂತರಾರ್ಥ ಬೇರೆ. ಯಾಕೆ? ‘ನನ್ನ ಅತ್ತೆಯ ಮಗಳಾಗಿ ಕೈಹಿಡಿದು ನನ್ನ ಪಾಣಿಗ್ರಹಣದ ಸತಿಯಾಗಿ ಬಾ’ ಎಂದು ಸ್ಥೂಲಾರ್ಥ… ‘ಇದೋ ಈ ಸಂಸಾರದಲ್ಲಿ ನನ್ನನ್ನು ಹೆತ್ತು ಹಾಕಿದ್ದಿ. ಮುಂದೇನು ಅಂತ ದಾರಿ ಕಾಣುವುದಿಲ್ಲ. ತಾಯಿಯಾಗಿ ಕೈ ಹಿಡಿದು ಮುಂದಕ್ಕೆ ಒಯ್ಯು’ ಎಂಬುದು ಇನ್ನೊಂದು.
ನೋಡೋಣ. ಸರ್ವಜ್ಞಳಲ್ಲವೇ ಇವಳು. ಅರ್ಥವಾದೀತಲ್ಲ ಇವಳಿಗೆ…. ಒಂದೋ ಇದು ಶುಂಭಾಸುರನ ಕೊನೆ. ಅಲ್ಲದಿದ್ದರೆ ಶುಂಭಾಸುರನ ಜೀವನದ ಪ್ರಾರಂಭ….

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಗೋ ಸಂರಕ್ಷಣೆಗೆ Gen Z – 10 ಸಾವಿರ ‘ಗೋ ಮಿತ್ರ’ರಿಗೆ ತರಬೇತಿ – ಗ್ರಾಮೀಣ ಆರ್ಥಿಕತೆಗೆ ಹೊಸ ಮಾದರಿಯೇ?

ಉತ್ತರ ಪ್ರದೇಶದಲ್ಲಿ ಸುಮಾರು 10 ಸಾವಿರ ‘ಗೋ ಮಿತ್ರ’ರಿಗೆ ತರಬೇತಿ ನೀಡಿ ಗೋ…

3 hours ago

ಕಾಡು ಪ್ರಾಣಿಗಳ ಹಾವಳಿ: ಕೃಷಿಕರು ಪಾಠ ಕಲಿಯದಿದ್ದರೆ ಕೃಷಿ ಭೂಮಿಯೇ ಉಳಿಯದು

ದಕ್ಷಿಣ ಕನ್ನಡದಲ್ಲಿ ಕಾಡಾನೆಗಳ ಹಾವಳಿ ಕೃಷಿಕರ ಜೀವ ಮತ್ತು ಕೃಷಿಭೂಮಿಗೆ ಗಂಭೀರ ಅಪಾಯವಾಗುತ್ತಿರುವ…

4 hours ago

ಹವಾಮಾನ ವರದಿ | 17 – 08 -2026 | ಕರ್ನಾಟಕದಲ್ಲಿ ಮುಂದಿನ ದಿನಗಳ ಹವಾಮಾನ ಹೇಗಿರಲಿದೆ?

ಕರಾವಳಿ ಜಿಲ್ಲೆಗಳಲ್ಲಿ ಮುಂದಿನ 10 ದಿನಗಳವರೆಗೆ ಬಿಸಿಲು, ಮೋಡ ಹಾಗೂ ಅಲ್ಲಲ್ಲಿ ಸಾಮಾನ್ಯ…

9 hours ago

₹2,500 ಕೋಟಿಗೂ ಅಧಿಕ ತೆರಿಗೆ ವಂಚನೆ ಪತ್ತೆ..! ಅಡಿಕೆ ಆಮದು ಜಾಲದ ಹಿಂದೆ ಏನಿತ್ತು?

ದಕ್ಷಿಣ-ಪೂರ್ವ ಏಷ್ಯಾದಿಂದ ಆಮದು ಮಾಡಿದ ಅಡಿಕೆಯನ್ನು ಬಾಂಗ್ಲಾದೇಶ ಮೂಲದ ಅಡಿಕೆಯೆಂದು ತಪ್ಪಾಗಿ ಘೋಷಿಸಿ…

17 hours ago

ಹವಾಮಾನ ವರದಿ | 16-08-2026 | ಕರಾವಳಿ–ಮಲೆನಾಡಿನಲ್ಲಿ ಮಳೆ ಕಡಿಮೆ – ಉತ್ತರ ಒಳನಾಡಿನಲ್ಲಿ 19 ರಿಂದ ಮಳೆ ಹೆಚ್ಚಳ ಸಾಧ್ಯತೆ

ಕರಾವಳಿ ಮತ್ತು ಮಲೆನಾಡಿನಲ್ಲಿ ಆಗಸ್ಟ್ 24ರವರೆಗೂ ಬಿಸಿಲು, ಮೋಡ ಹಾಗೂ ಅಲ್ಲಲ್ಲಿ ಸಾಮಾನ್ಯ…

2 days ago

ಗ್ರಾಮೀಣ ಸಂಪರ್ಕಕ್ಕೆ 15 ಸಾವಿರ ಹೊಸ ಬಸ್‌ಗಳು: ಸಾರಿಗೆ ಸಚಿವ

ಗ್ರಾಮೀಣ ಹಾಗೂ ಸಾರಿಗೆ ಸಂಪರ್ಕದಿಂದ ವಂಚಿತ ಪ್ರದೇಶಗಳಿಗೆ ಸಾರ್ವಜನಿಕ ಸಾರಿಗೆ ಸೇವೆ ಹೆಚ್ಚಿಸುವ…

2 days ago