Advertisement
ಯಕ್ಷಗಾನ : ಮಾತು-ಮಸೆತ

ಇವಳು ಹೆಣ್ಣಲ್ಲ. ಜಗತ್ತಿನ ತಾಯಿ ಇವಳು…..

Share

ಶೇಣಿ ಗೋಪಾಲಕೃಷ್ಣ ಭಟ್ಟರ ‘ರಕ್ತಬೀಜ’
(ಪ್ರಸಂಗ : ಶ್ರೀ ದೇವಿ ಮಹಾತ್ಮ್ಯೆ)

(ಶುಂಭ ಮತ್ತು ಶ್ರೀದೇವಿಯ ಯುದ್ಧದ ಸನ್ನಿವೇಶ. ದೇವಿಯನ್ನು ನೋಡಿದ ರಕ್ತಬೀಜ ಹೀಗೆ ತರ್ಕಿಸುತ್ತಾನೆ)

…. ಭಲೇ… ಭಲೇ… ಈ ದರ್ಶನ ಜೀವಾತ್ಮನಿಗೆ ಮೊದಲೇ ಆಗಬೇಕು. ನಿರಾಕಾರ ನಿರ್ಗುಣವಾದಂತಹ ‘ಪರಬ್ರಹ್ಮ’ ಕೇವಲ ನಮ್ಮ ತರ್ಕಕ್ಕೆ ವಸ್ತು. ಸಾಕಾರ ಸ್ವರೂಪವಾದಂತಹ ಈ ವಿಶ್ವವನ್ನು ಕಂಡು ಅದನ್ನು ಗುರುತಿಸಬಹುದು. ಯಾವುದಾದರೂ ಒಂದು ವಸ್ತುವನ್ನು ಕಂಡಾಗ ಆ ವಸ್ತುವನ್ನು ತಯಾರಿಸಿದಂತಹ ವ್ಯಕ್ತಿಯ ಇಚ್ಚಾ – ಕ್ರಿಯಾ – ಜ್ಞಾನವನ್ನು ಗುರುತಿಸಬಲ್ಲ ಪ್ರಾಜ್ಞನಂತೆ ನಾನು ಇವಳನ್ನು ‘ಪರಬ್ರಹ್ಮ’ ಎಂದು ಗುರುತಿಸಿದೆ.

ಇವಳು ಹೆಣ್ಣಲ್ಲ. ಜಗತ್ತಿನ ತಾಯಿ ಇವಳು. ಪ್ರಪಂಚದಲ್ಲಿರುವ ಸಕಲ ಪುರುಷರನ್ನು ಆಕರ್ಷಿಸುವ ಮಾಯಾಮೋಹಿನಿಯಾದ ಹೆಂಡತಿಯೂ ಇವಳೇ. ಸಂಸಾರಕ್ಕೆ ಎಳೆಯುವ ಮಾಯಾರೂಪಿಣಿಯಾದ ಮಗಳೂ ಇವಳೇ. ಹಾಗಾದರೆ ತಾಯಿಯಾಗಿ, ಹೆಂಡತಿಯಾಗಿ, ಮಗಳಾಗಿ ‘ಮಾಯೆ’ ನನ್ನನ್ನು ಕಾಡಿತ್ತು. ನನಗೇನಂತೆ, ನನ್ನ ಇಚ್ಛಾ-ಕ್ರಿಯಾ-ಜ್ಞಾನಶಕ್ತಿಯನ್ನು ಮುಂದಿಟ್ಟುಕೊಂಡು ಇವಳನ್ನು ಇದಿರಿಸಿ, ಶಕ್ತಿಯಿಂದ ಇವಳು ಸೋಲುವಂತ ಮಾಡಿ ಮೈಯಿಂದಲ್ಲದಿದ್ದರೂ, ಮನಸ್ಸಿನಿಂದಾದರೂ ಸೋತರೆ ಸಾಕು. ‘ಕೈಹಿಡಿ’ ಅಂತ ಕೇಳಲು ಬಂದಿದ್ದೇನೆ. ‘ಕೈಹಿಡಿ’ ಇದಕ್ಕೆ ಅಂತರಾರ್ಥ ಬೇರೆ. ಯಾಕೆ? ‘ನನ್ನ ಅತ್ತೆಯ ಮಗಳಾಗಿ ಕೈಹಿಡಿದು ನನ್ನ ಪಾಣಿಗ್ರಹಣದ ಸತಿಯಾಗಿ ಬಾ’ ಎಂದು ಸ್ಥೂಲಾರ್ಥ… ‘ಇದೋ ಈ ಸಂಸಾರದಲ್ಲಿ ನನ್ನನ್ನು ಹೆತ್ತು ಹಾಕಿದ್ದಿ. ಮುಂದೇನು ಅಂತ ದಾರಿ ಕಾಣುವುದಿಲ್ಲ. ತಾಯಿಯಾಗಿ ಕೈ ಹಿಡಿದು ಮುಂದಕ್ಕೆ ಒಯ್ಯು’ ಎಂಬುದು ಇನ್ನೊಂದು.
ನೋಡೋಣ. ಸರ್ವಜ್ಞಳಲ್ಲವೇ ಇವಳು. ಅರ್ಥವಾದೀತಲ್ಲ ಇವಳಿಗೆ…. ಒಂದೋ ಇದು ಶುಂಭಾಸುರನ ಕೊನೆ. ಅಲ್ಲದಿದ್ದರೆ ಶುಂಭಾಸುರನ ಜೀವನದ ಪ್ರಾರಂಭ….

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಭಾರತದ ಆಹಾರ ನಾಳೆ ಬೆಳೆಯೋರು ಯಾರು? ರೈತರ ವಯಸ್ಸು ಹೆಚ್ಚುತ್ತಿದೆ, ಯುವಕರು ಕೃಷಿಯಿಂದ ದೂರವಾಗುತ್ತಿದ್ದಾರೆ..!

ಭಾರತ ಯುವ ದೇಶವಾಗಿದ್ದರೂ ಕೃಷಿಕರ ಸರಾಸರಿ ವಯಸ್ಸು 50–55 ವರ್ಷವಾಗಿದ್ದು, ಗ್ರಾಮೀಣ ಯುವಕರಲ್ಲಿ…

9 hours ago

ಹಸು ಕರು ಹಾಕಿದ ಬಳಿಕದ “ಪ್ಲಾಸೆಂಟಾ” ದಿಂದ ತಯಾರಿಸಬಹುದೇ ನೈಸರ್ಗಿಕ ದ್ರಾವಣ?

ಹಸು ಕರು ಹಾಕಿದ ಬಳಿಕ ಸಿಗುವ ಪ್ಲಾಸೆಂಟಾ ಅಥವಾ ‘ಮಾಸ’ವನ್ನು ತ್ಯಾಜ್ಯವಾಗಿ ಬಿಸಾಡದೆ,…

10 hours ago

ಹವಾಮಾನ ವರದಿ | 07-09-2026 | ಕರ್ನಾಟಕದಲ್ಲಿ ಮುಂದಿನ ಮಳೆಯ ಚಿತ್ರಣ ಹೇಗಿದೆ..?

ಸೆ.8 ರಿಂದ 10ರವರೆಗೆ ಕರಾವಳಿಯಲ್ಲಿ ಮೋಡ ಹೆಚ್ಚಾಗಿ ಅಲ್ಲಲ್ಲಿ ತುಂತುರು ಅಥವಾ ಸಾಮಾನ್ಯ…

17 hours ago

ಹೆಬ್ರಿಯ ಗೋಡಂಬಿ ತ್ಯಾಜ್ಯದಿಂದ ಹಡಗುಗಳಿಗೆ ಇಂಧನ..!

ಉಡುಪಿ ಜಿಲ್ಲೆಯ ಹೆಬ್ರಿ ಸಮೀಪ ಗೋಡಂಬಿ ಸಂಸ್ಕರಣಾ ತ್ಯಾಜ್ಯದಿಂದ ಜೈವಿಕ ಇಂಧನ ಮತ್ತು…

23 hours ago

ಮಡಿಕೇರಿಯಲ್ಲಿ ಅಡಿಕೆ ಹಾಳೆ ತಟ್ಟೆಗೂ ನಿಷೇಧ..!

ಮಡಿಕೇರಿ ನಗರಸಭೆ ವ್ಯಾಪ್ತಿಯಲ್ಲಿ ಅಡಿಕೆ ತಟ್ಟೆ, ಪೇಪರ್ ಕಪ್, ಪೇಪರ್ ಪ್ಲೇಟ್ ಸೇರಿದಂತೆ…

23 hours ago

ಹವಾಮಾನ ವರದಿ | 06-09-2026 | ಕರ್ನಾಟಕದಲ್ಲಿ ಮಳೆ ಇಳಿಮುಖದ ಲಕ್ಷಣ

ಕರ್ನಾಟಕದ ಬಹುತೇಕ ಭಾಗಗಳಲ್ಲಿ ಮಳೆಯ ಸಾಧ್ಯತೆ ಇಳಿಮುಖವಾಗುತ್ತಿದ್ದು, ಕರಾವಳಿ–ಮಲೆನಾಡಿನಲ್ಲಿ ಸೆ.8ರಿಂದ 10ರವರೆಗೆ ಅಲ್ಲಲ್ಲಿ…

2 days ago