ಬೆಳ್ಳಾರೆ: 70 ವರ್ಷದ ಈ ವೃದ್ಧ ದಂಪತಿಗಳಿಗೆ ಬೇಕಿದೆ ಆಸರೆ. ಅಮರಪಡ್ನೂರು ಗ್ರಾಮದ ಶೇಣಿ ಸಮೀಪ ಕುಳ್ಳಾಜೆಯಲ್ಲಿ ವಾಸ್ತವ್ಯವಿರುವ ಮಾಣಿಕ(78) , ಬೊಳ್ಳೆಚ್ಚಿ(70) ದಂಪತಿಗಳು 35 ವರ್ಷದಿಂದ ಈ ಸ್ಥಳದಲ್ಲಿ ಪಕ್ಕಾ ಸೂರಿಲ್ಲದೇ ಬದುಕುತ್ತಿದ್ದಾರೆ. ಈಗಲಾದರೂ ಪಕ್ಕಾ ಸೂರು ದೊರಕಿ ಸರಕಾರದ ಸವಲತ್ತು ವೃದ್ದ ದಂಪತಿಗೆ ದೊರೆಯುವಂತಾಗಲಿ ಎಂಬ ಆಶಯ ಸ್ಥಳೀಯರದ್ದು.
ಅಮರಪಡ್ನೂರು ಗ್ರಾಮದ ಶೇಣಿ ಸಮೀಪ ಕುಳ್ಳಾಜೆಯಲ್ಲಿ ವಾಸ್ತವ್ಯವಿರುವ ಮಾಣಿಕ ಅವರ ಕುಟುಂಬಕ್ಕೆ 70 ವರ್ಷ ಹಿಂದೆ ಸರಕಾರದಿಂದ ಮಂಜೂರಾದ 4:40 ಎಕ್ರೆ ಸ್ಥಳ ಇತ್ತು. ಅದು ಮಾಣಿಕ ಅವರ ಸಹೋದನ ಹೆಸರಿನಲ್ಲಿದೆ. ಸಹೋದರ ಈಗಾಗಲೇ ಮೃತಪಟ್ಟಿದ್ದು ಅವರ ಮಕ್ಕಳು ಇದೇ ಸ್ಥಳದ ಇನ್ನೊಂದು ಕಡೆ ಕಚ್ಚಾ ಸೂರಿನಲ್ಲಿದ್ದಾರೆ. ತೀರಾ ಕಡುಬಡವರಾದ ಮಾಣಿಕ ಅವರಿಗೆ ಒಬ್ಬ ಪುತ್ರನಿದ್ದು ಆತ ಉದ್ಯೋಗದ ನಿಮಿತ್ತ ದೂರದಲ್ಲಿ ವಾಸ್ತವ್ಯ ಹೊಂದಿದ್ದಾರೆ. ಇವರು ಜೀವನೋಪಾಯಕ್ಕೆ ಅಡಕೆ ಸುಲಿಯುವ ಮುಂತಾದ ಸಣ್ಣಪುಟ್ಟ ಕಾಯಕ ಮಾಡಿ ಜೀವನ ಸಾಗಿಸುತ್ತಿದ್ದಾರೆ. ವೃದ್ದಾಪ್ಯದಲ್ಲಿ ಆರೋಗ್ಯದ ಸಮಸ್ಯೆ ಕಾಡುತ್ತಿದ್ದು ಇವರ ಪತ್ನಿಗೆ ಇತ್ತಿಚೆಗೆ ಕಣ್ಣಿನ ಶಸ್ತ್ರ ಚಿಕಿತ್ಸೆಯಾಗಿದೆ. ವೃದ್ಧಾಪ್ಯ ವೇತನಕ್ಕೆ ಅರ್ಜಿ ಸಲ್ಲಿಸಲು ಅತ್ತಿತ್ತ ಓಡಾಡಿದ್ದು ಮಾತ್ರ. ಯಾವುದೆ ಫಲ ನೀಡಿಲ್ಲ. ಹೀಗಾಗಿ ಈ ಕುಟುಂಬಕ್ಕೆ ಸೌಲಭ್ಯ ಸಿಗುವಂತಾಗಲಿ ಎಂಬ ಆಶಯ ಸ್ಥಳೀಯರದ್ದು.
ಆಂಧ್ರಪ್ರದೇಶ ಸರ್ಕಾರ ರೈತರಿಂದ ನೇರವಾಗಿ ಕೃಷಿ ಉತ್ಪನ್ನಗಳನ್ನು ಮನೆ ಬಾಗಿಲಿಗೆ ತಲುಪಿಸುವ “Farm-to-Home”…
2025-26ರಲ್ಲಿ ಭಾರತದಲ್ಲಿ 3765.63 ಲಕ್ಷ ಟನ್ ಆಹಾರ ಉತ್ಪಾದನೆ ಸಾಧ್ಯತೆ ಇದ್ದು, ಇದು…
ವಿ.ಆರ್.ಎನ್ ಇನ್ಪೋಟೆಕ್ ಕಂಪೆನಿಯ ಕಸ್ಟಮರ್ ಸಪೋರ್ಟ್ ಎಕ್ಸಿಕ್ಯೂಟಿವ್ ಹಾಗೂ ಟೆಲಿಕಾಲರ್ ಹುದ್ದೆಗಳಿಗೆ ಮೇ…
ಬ್ಲಿಂಕಿಟ್ ಕಂಪೆನಿಯ ಪಿಕ್ಕರ್ ಹಾಗೂ ಪ್ಯಾಕರ್ ಹುದ್ದೆಗಳಿಗೆ ಜೂನ್ 1ರಂದು ಮಂಗಳೂರಿನಲ್ಲಿ ನೇರ…
ಬಕ್ರೀದ್ಗೂ ಮುನ್ನ ಗೋಹತ್ಯೆ ಮತ್ತು ಗೋ ರಕ್ಷಣೆಯ ವಿಚಾರ ಮತ್ತೆ ದೇಶದಲ್ಲಿ ಚರ್ಚೆಗೆ…
ಹವಾಮಾನ ಬದಲಾವಣೆಯ ಪರಿಣಾಮಗಳನ್ನು ಎದುರಿಸಲು ದಕ್ಷಿಣ ಕನ್ನಡದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ…