ಬೆಳ್ಳಾರೆ: ಕಳೆದ ಎರಡು ದಿನಗಳಿಂದ ಮಳೆಯಬ್ಬರ ಹೆಚ್ಚಾಗಿದೆ. ಸೋಮವಾರ ಮುಂಜಾನೆಯಿಂದ ಸುರಿದ ಭಾರಿ ಮಳೆಗೆ ಮುಕ್ಕೂರು ಭಾಗದ ಮಾಪಳ ಮಜಲು ಹೊಳೆಯಲ್ಲಿ ಭಾರಿ ಪ್ರಮಾಣದ ನೀರಿನ ಹರಿವು ಉಂಟಾಗಿದ್ದು ರಸ್ತೆ ಸಂಪೂರ್ಣ ಜಲಾವೃತವಾಗಿದೆ. ಸುತ್ತ ಮುತ್ತಲಿನ ಕೃಷಿಕರ ತೋಟಗಳೂ ಜಲಾವೃತ್ತಗೊಂಡಿದ್ದು ಬೆಳೆ ನಾಶವೂ ಆಗಿದೆ.ಹೊಳೆಯ ಆಳದಲ್ಲಿ ಕೆಸರು ತುಂಬಿದ್ದು ಅದನ್ನು ತೆಗೆಯುವ ಕಾರ್ಯ ಅಸಮರ್ಪಕವಾಗಿ ನಡೆದುದರಿಂದ ರಸ್ತೆಯ ಮೇಲೆ ನೀರು ಹರಿಯಲು ಕಾರಣ ಎಂದು ಸಾರ್ವಜನಿಕರು ತಿಳಿಸಿದ್ದಾರೆ.
ಇದೇ ವೇಳೆ ತಾಲೂಕಿನಲ್ಲೂ ಉತ್ತಮವಾದ ಮಳೆಯಾದ ವರದಿಯಾಗಿದೆ. ಕೃಷಿಕರು ಸಂಗ್ರಹಿಸಿದ ಮಳೆ ಲೆಕ್ಕದ ಪ್ರಕಾರ ಸೋಮವಾರ ಬೆಳಗ್ಗೆ ಬಾಳಿಲದಲ್ಲಿ 158 ಮಿಮೀ , ಗುತ್ತಿಗಾರಿನಲ್ಲಿ 113 ಮಿಮೀ , ಕಲ್ಲಾಜೆಯಲ್ಲಿ 135 ಮಿಮೀ , ಕೊಲ್ಲಮೊಗ್ರದಲ್ಲಿ 107 ಮಿಮೀ ಮಳೆಯಾಗಿದೆ.
ದಕ್ಷಿಣ ಕನ್ನಡದ ಸುಳ್ಯ, ಸುಬ್ರಹ್ಮಣ್ಯ, ಬೆಳ್ತಂಗಡಿ, ಧರ್ಮಸ್ಥಳ ಸುತ್ತಮುತ್ತ ಭಾಗಗಳ ಒಂದೆರಡು ಕಡೆ…
ಹೆಚ್ಚಿನ ಭಾಗಗಳಲ್ಲಿ ಸಂಜೆ, ರಾತ್ರಿ ಮೋಡದ ವಾತಾವರಣದ ಮುನ್ಸೂಚೆನೆ ಇದ್ದು, ಘಟ್ಟದ ಕೆಳಗಿನ…
ಕೊಡಗು ಜಿಲ್ಲೆಯ ಕಕ್ಕಬೆಯ ಕುಂಜಿಲ ಪ್ರದೇಶದಲ್ಲಿ ಮಳೆಯಾಗಿದೆ.
ಅಧಿಕ ತಾಪಮಾನದೊಂದಿಗೆ ಮೋಡದ ವಾತಾವರಣದ ಮುನ್ಸೂಚನೆ ಇದೆ. ಸಂಜೆ, ರಾತ್ರಿಯ ವೇಳೆ ಘಟ್ಟದ…
ಕಾಲ್ತುಳಿತ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಅಮಾಯಕರೇ ಸಾಯುತ್ತಾರೆ. ಅವರಿಗೆ ಯಾರು ಎಲ್ಲಿಂದ ಯಾಕೆ ತಳ್ಳುತ್ತಿದ್ದಾರೆಂದೇ…
ಅಡಿಕೆಯ ಮೈಟ್ ಬಗ್ಗೆ ಸಿಪಿಸಿಆರ್ಐ ನಿರ್ದೇಶಕರು ಮಾಹಿತಿ ಪ್ರಕಟಿಸಿದ್ದಾರೆ. ಈ ಬಾರಿ ಕೆಲವು…