Advertisement
ಸುದ್ದಿಗಳು

ಏನೆಕಲ್ಲಿನಲ್ಲಿ ನ್ಯಾಯಕ್ಕಾಗಿ ಏಕಾಂಗಿ ಪ್ರತಿಭಟನೆ….!

Share

ಏನೆಕಲ್ಲು : ಏನೆಕಲ್ಲು ಗ್ರಾಮದ ಕೃಷಿ ಪತ್ತಿನ ಸೇವಾ ಸಹಕಾರಿ ಸಂಘದಿಂದ ಅನ್ಯಾಯ ನಡೆದಿದೆ ಎಂದು ಆರೋಪಿಸಿ  ಏಕಾಂಗಿಯಾಗಿ ಸಹಕಾರಿ ಸಂಘದ ಬಳಿ ಶೆಡ್ ನಿರ್ಮಿಸಿ 3 ದಿನಗಳಿಂದ ಸತ್ಯಾಗ್ರಹ ನಡೆಸಿ ಗುರುವಾರ ಸಂಜೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ ಘಟನೆ ನಡೆದಿದೆ.

ನ್ಯಾಯಕ್ಕಾಗಿ 3 ದಿನಗಳ ಕಾಲ ಉಪವಾಸ ಸತ್ಯಾಗ್ರಹ ಮಾಡಿದವರು  ಏನೆಕಲ್ಲು ಗ್ರಾಮದ ಪಿ ಆರ್ ಯಶೋಚಂದ್ರ.  ಕಾರಣ, ಏನೆಕಲ್ಲು ಏನೆಕಲ್ಲು ಕೃಷಿ ಪತ್ತಿನ ಸೇವಾ ಸಹಕಾರಿ ಸಂಘದ ಆಡಳಿತ ಮಂಡಳಿಯಿಂದ ಜಮೀನು ಅತಿಕ್ರಮಣ ಹಾಗು ಕಿರುಕುಳ ವಿರೋಧಿಸಿ.

ಉಪವಾಸ ಸತ್ಯಾಗ್ರಹದ ಬಗ್ಗೆ ಮಾತನಾಡಿದ ಯಶೋಚಂದ್ರ ಅವರು, ಏನೆಕಲ್ ಸೇವಾ ಸಹಕಾರಿ ಸಂಘದ ಸ್ಥಾಪಕರು ನನ್ನ ತಂದೆಯವರಾದ  ಪಿ ಎಸ್ ರಾಮಣ್ಣ ಮಾಸ್ಟರ್ ರವರು. ಆರಂಭದಲ್ಲಿ ಸ್ವಂತ ಕಟ್ಟಡ ಇಲ್ಲದ ಕಾರಣ ನಮ್ಮ ಮನೆಯಲ್ಲೇ ಅವಕಾಶ ಕೊಟ್ಟು ಸಂಘ ಕೆಲಸ ಮಾಡಲು ಅನುವು ಮಾಡಿ ಕೊಟ್ಟಿದ್ದರು.ಆ ಬಳಿಕ 1955 ರಲ್ಲಿ 23 ಸೆಂಟ್ಸ್ ಜಾಗ ದಾನ ಮಾಡಿ ಈಗ ಗೋದಾಮು ಆಗಿರುವ ಮೂಲ ಕಟ್ಟಡ ನಿರ್ಮಿಸಿದರು. ಬಡತನವೇ ‘ಬಂಡವಾಳ’ವಾಗಿದ್ದ ಆ ಕಾಲದಲ್ಲಿ ಅತಿ ಕಷ್ಟದಿಂದ ಸಂಘದ ನಿರ್ವಹಣೆ ಮಾಡಿದ್ದರು.ಸಂಘಕ್ಕೆ ಭೇಟಿಕೊಡುವ ಅಧಿಕಾರಿಗಳಿಗೆ ಸಿಬ್ಬಂದಿಗಳಿಗೆ ಊಟೋಪಚಾರವೂ ನಮ್ಮ ಮನೆಯಲ್ಲೇ ಉಚಿತವಾಗಿತ್ತು. ದಿ ಕುಕ್ಕಪ್ಪನ ಮನೆ ಮುತ್ತಪ್ಪ ಮಾಸ್ತರ್ ಬೇಂಕಿನ ಲೆಕ್ಕಪತ್ರ ಬರೆಯುವ ಕೆಲಸ ಉಚಿತವಾಗಿ ಮಾಡಿದ್ದರು.ನಂತರ ಬಂದ ಆಡಳಿತ ಮಂಡಳಿ ರಾಜಕೀಯ ದ್ವೇಷದಿಂದ ನಮ್ಮ ತಂದೆಯವರಿಗೆ ಕಿರುಕುಳ ಕೊಟ್ಟಿದ್ದರು. ಸಂಘಕ್ಕೆ ನಮ್ಮ ಮನೆಯ ತ್ಯಾಗದ ಹಿನ್ನೆಲೆ ಲವಲೇಶವೂ ಅರಿಯದ ಈಗಿನ ಆಡಳಿತ ಮಂಡಳಿಯೂ ಸ್ವ ಪ್ರತಿಷ್ಠೆ ಮತ್ತು ಉಡಾಪೆಯಿಂದ ವರ್ತಿಸುತ್ತಿದ್ದು ನನ್ನ ಒಪ್ಪಿಗೆಯಿಲ್ಲದೆ ಮೂಲ 23 ಸೆಂಟ್ಸ್ ಜಾಗವನ್ನು ವಿಸ್ತರಿಸಿ ಪಟ್ಟಾ ಮತ್ತು ಕುಮ್ಕಿ ಸೇರಿ ಅರ್ಧ ಎಕರೆಯಷ್ಟು ಜಾಗ ಅತಿಕ್ರಮಿಸಿದೆ. ಹಾಗಿದ್ದರೂ  ದರ್ಪ ಮತ್ತು ಗೌರವ ರಹಿತವಾಗಿ ವರ್ತಿಸಿದೆ. ಇದನ್ನು ಪ್ರತಿಭಟಿಸಿ ಡಿ.31 ರಿಂದು ಆರಂಭಿಸಿದ ಉಪವಾಸ ಸತ್ಯಾಗ್ರಹ ಆರಂಭಿಸಿದ್ದೇನೆ ಎಂದು ತಿಳಿಸಿದ್ದಾರೆ. ಸದ್ಯ ಕೆಲವು ಮುಖಂಡರು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ, ಅದರ ಜೊತೆಗೆ ಉಪವಾಸ ಸತ್ಯಾಗ್ರಹದ ಬಗ್ಗೆ ಇಲಾಖೆಗಳಿಗೆ ಪೂರ್ವ ಮಾಹಿತಿ ನೀಡಿರಲಿಲ್ಲ. ಇದೀಗ ಸಹಕಾರಿ ಸಂಘದ ಚುನಾವಣೆಯೂ ಇರುವುದರಿಂದ  ಚುನಾವಣೆ ನಂತರ ಮುಂದಿನ ಹೋರಾಟ ನಡೆಸಲಿದ್ದೇನೆ ಎಂದು ಮಾಹಿತಿ ನೀಡಿದ್ದಾರೆ.

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಒಡಿಶಾದಲ್ಲಿ ಭಾರಿ ಮಳೆ, ಹಲವು ಜಿಲ್ಲೆಗಳಲ್ಲಿ ರೆಡ್ ಅಲರ್ಟ್

ಬಂಗಾಳ ಕೊಲ್ಲಿಯ ವಾಯುಭಾರ ಕುಸಿತದ ಪರಿಣಾಮ ಒಡಿಶಾದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ…

8 hours ago

ಭರ್ತಿಯಾಗುವ ಹಂತಕ್ಕೆ ಆಲಮಟ್ಟಿ ಜಲಾಶಯ – 114.896 ಟಿಎಂಸಿ ನೀರು ಸಂಗ್ರಹ, 73 ಸಾವಿರ ಕ್ಯೂಸೆಕ್ ಒಳಹರಿವು

ಆಲಮಟ್ಟಿ ಕೃಷ್ಣಾ ಜಲಾಶಯದಲ್ಲಿ 114.896 ಟಿಎಂಸಿ ನೀರು ಸಂಗ್ರಹವಾಗಿದ್ದು, ಜಲಾಶಯ ಭರ್ತಿಯಾಗಲು ಕೆಲವೇ…

8 hours ago

ಹವಾಮಾನ ವರದಿ | 28-07-2026 | ಕರಾವಳಿ, ಮಲೆನಾಡಿನಲ್ಲಿ ಸಾಮಾನ್ಯ ಮಳೆ ಮುಂದುವರಿಕೆ

ಕರಾವಳಿ, ಮಲೆನಾಡು ಹಾಗೂ ಉತ್ತರ ಒಳನಾಡಿನ ಕೆಲ ಜಿಲ್ಲೆಗಳಲ್ಲಿ ಬಿಟ್ಟುಬಿಟ್ಟು ಮಳೆ ಮುಂದುವರಿಯುವ…

8 hours ago

ಮಳೆ ಕೊರತೆ ತೀವ್ರ – ಬೆಂಗಳೂರು ಗ್ರಾಮಾಂತರದಲ್ಲಿ ಕೇವಲ ಶೇ. 3 ಬಿತ್ತನೆ; ನೀರಿನ ಬಳಕೆಗೆ ಕಟ್ಟುನಿಟ್ಟಿನ ಕ್ರಮ

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಶೇಕಡಾ 66 ರಷ್ಟು ಮಳೆ ಕೊರತೆಯಿಂದ ಕೇವಲ ಶೇ.…

13 hours ago

ಹವಾಮಾನ ವರದಿ | 28-07-2026 | ಮುಂದಿನ 10 ದಿನ ಸಾಮಾನ್ಯ ಮಳೆ – ಆಗಸ್ಟ್ ಆರಂಭದಲ್ಲಿ ದಕ್ಷಿಣ ಒಳನಾಡಿನಲ್ಲಿ ಮಳೆ ಚುರುಕು ಸಾಧ್ಯತೆ

ಕರಾವಳಿ ಮತ್ತು ಮಲೆನಾಡಿನಲ್ಲಿ ಮುಂದಿನ 10 ದಿನಗಳವರೆಗೆ ಸಾಮಾನ್ಯ ಮಳೆ ಮುಂದುವರಿಯುವ ನಿರೀಕ್ಷೆಯಿದ್ದು,…

1 day ago

200 ಹಸುಗಳಿಂದ ₹2 ಕೋಟಿ ವಾರ್ಷಿಕ ಆದಾಯ…! ಗಮನ ಸೆಳೆದ ಉತ್ತರ ಪ್ರದೇಶದ ಮಾದರಿ

ಉತ್ತರ ಪ್ರದೇಶದಲ್ಲಿ 200 ಹಸುಗಳನ್ನು ಆಧರಿಸಿದ ಸಮಗ್ರ ಗೋ ಆರ್ಥಿಕತೆ ಮಾದರಿಯಲ್ಲಿ ಗೋಮಯದಿಂದ…

1 day ago