ಏನೆಕಲ್ಲು: ಏನೆಕಲ್ಲು ಗ್ರಾಮದ ಕುಕ್ಕಪ್ಪನಮನೆ ತರವಾಡು ಮನೆಯಲ್ಲಿ ಲಕ್ಷ್ಮಣ ಗೌಡ ಎಂಬವರು ಶನಿವಾರ ಬಾವಿ ತೋಡುತ್ತಿರುವ ಸಂದರ್ಭದಲ್ಲಿ ಸುಮಾರು 150 ವರ್ಷಕ್ಕೂ ಹಿಂದಿನ ಹಾರೆ ಪತ್ತೆಯಾಗಿದೆ.
ಕುಕ್ಕಪ್ಪನಮನೆಯ ದಯಾನಂದ ಗೌಡರ ಅಜ್ಜ ದಿ.ಅಣ್ಣಪ್ಪ ಗೌಡರು 150 ವರ್ಷಗಳ ಹಿಂದೆ ಬಾವಿ ಅಗೆಯುತ್ತಿದ್ದರು.ಬಾವಿಯ ಕಾಮಗಾರಿ ನಡೆಯುತ್ತಿದ್ದಾಗ ಅದನ್ನು ನಿಲ್ಲಿಸಿ ಊಟಕ್ಕೆಂದು ಮನೆಗೆ ಬಂದರು.ಆದರೆ ಹಿಂದುರುಗಿ ಹೋಗುವಾಗ ನೀರಿನ ಒಸರು ಹಾಗೂ ಜೇಡಿ ಮಣ್ಣಿನ ಕಾರಣದಿಂದ ಬಾವಿ ಸಂಪೂರ್ಣ ಕುಸಿದಿತ್ತು. ಹಾರೆ ಮತ್ತು ಬಿದಿರಿನ ಏಣಿ ಮಣ್ಣಿನ ಅಡಿಗೆ ಸಿಲುಕಿಕೊಂಡಿತು ಎಂದು ಲಕ್ಷ್ಮಣ ಗೌಡರಿಗೆ ಹಿರಿಯರಿಂದ ತಿಳಿದು ಬಂದಿತ್ತು. ಬಳಿಕ ತರವಾಡು ಮನೆಯಲ್ಲಿ ನಡೆದ ಅಷ್ಟಮಂಗಲ ಚಿಂತನೆಯಲ್ಲಿ ಇದೇ ಜಾಗವನ್ನು ತೋರಿಸಿ ಇಲ್ಲಿ ಬಾವಿ ತೆಗೆದರೆ ನೀರು ದೊರಕುತ್ತದೆ ಎಂದು ಕಂಡು ಬಂದಿತ್ತು.ಆ ಪ್ರಕಾರವಾಗಿ ಲಕ್ಷ್ಮಣ ಗೌಡರು ಬಾವಿಯನ್ನು ತೋಡಿಸತೊಡಗಿದ್ದರು.ಸುಮಾರು 35 ಅಡಿ ಕೊರೆದಾಗ ಮಣ್ಣಿನೊಳಗೆ ಹಳೆಯ ಹಾರೆ(ಗುದ್ದಲಿ) ಕಂಡು ಬಂತು.
ಮೇ 6 ರಿಂದ ಕೊಡಗು ಹಾಗೂ ದಕ್ಷಿಣ ಕರಾವಳಿ, ಚಿಕ್ಕಮಗಳೂರು ಭಾಗಗಳಲ್ಲಿ ಮತ್ತೆ…
ಕೊಕೋ ಧಾರಣೆಯಲ್ಲಿ ಸ್ವಲ್ಪ ಇಳಿಕೆ ಕಂಡುಬಂದಿದೆ.
ಕುಕ್ಕೆ ಸುಬ್ರಹ್ಮಣ್ಯ ಸೇರಿದಂತೆ ಸುಳ್ಯ,ಕಡಬ ತಾಲೂಕಿನ ಘಟ್ಟದ ತಪ್ಪಲಿನ ಪ್ರದೇಶದಲ್ಲಿ ಗುಡುಗು ಸಿಡಿಲು…
04.05.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು, ದಕ್ಷಿಣ…
03.05.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…
ಬಿದಿರು ಕೃಷಿಯ ಬಗ್ಗೆ ಈಗ ಸಾಕಷ್ಟು ಅಧ್ಯಯನ ನಡೆಯುತ್ತಿದೆ. ಈ ನಡುವೆ ಪುತ್ತೂರು…