Advertisement
ನಮ್ಮೂರ ಸುದ್ದಿ

ಏನೆಕಲ್ಲಿನಲ್ಲಿ ಬಾವಿ ತೆಗೆಯುವಾಗ ಸಿಕ್ಕಿತು ಹಳೆಕಾಲದ ಹಾರೆ

Share

ಏನೆಕಲ್ಲು: ಏನೆಕಲ್ಲು ಗ್ರಾಮದ ಕುಕ್ಕಪ್ಪನಮನೆ ತರವಾಡು ಮನೆಯಲ್ಲಿ ಲಕ್ಷ್ಮಣ ಗೌಡ ಎಂಬವರು ಶನಿವಾರ ಬಾವಿ ತೋಡುತ್ತಿರುವ ಸಂದರ್ಭದಲ್ಲಿ ಸುಮಾರು 150 ವರ್ಷಕ್ಕೂ ಹಿಂದಿನ ಹಾರೆ ಪತ್ತೆಯಾಗಿದೆ.
ಕುಕ್ಕಪ್ಪನಮನೆಯ ದಯಾನಂದ ಗೌಡರ ಅಜ್ಜ ದಿ.ಅಣ್ಣಪ್ಪ ಗೌಡರು 150 ವರ್ಷಗಳ ಹಿಂದೆ ಬಾವಿ ಅಗೆಯುತ್ತಿದ್ದರು.ಬಾವಿಯ ಕಾಮಗಾರಿ ನಡೆಯುತ್ತಿದ್ದಾಗ ಅದನ್ನು ನಿಲ್ಲಿಸಿ ಊಟಕ್ಕೆಂದು ಮನೆಗೆ ಬಂದರು.ಆದರೆ ಹಿಂದುರುಗಿ ಹೋಗುವಾಗ ನೀರಿನ ಒಸರು ಹಾಗೂ ಜೇಡಿ ಮಣ್ಣಿನ ಕಾರಣದಿಂದ ಬಾವಿ ಸಂಪೂರ್ಣ ಕುಸಿದಿತ್ತು. ಹಾರೆ ಮತ್ತು ಬಿದಿರಿನ ಏಣಿ ಮಣ್ಣಿನ ಅಡಿಗೆ ಸಿಲುಕಿಕೊಂಡಿತು ಎಂದು ಲಕ್ಷ್ಮಣ ಗೌಡರಿಗೆ ಹಿರಿಯರಿಂದ ತಿಳಿದು ಬಂದಿತ್ತು. ಬಳಿಕ ತರವಾಡು ಮನೆಯಲ್ಲಿ ನಡೆದ ಅಷ್ಟಮಂಗಲ ಚಿಂತನೆಯಲ್ಲಿ ಇದೇ ಜಾಗವನ್ನು ತೋರಿಸಿ ಇಲ್ಲಿ ಬಾವಿ ತೆಗೆದರೆ ನೀರು ದೊರಕುತ್ತದೆ ಎಂದು ಕಂಡು ಬಂದಿತ್ತು.ಆ ಪ್ರಕಾರವಾಗಿ ಲಕ್ಷ್ಮಣ ಗೌಡರು ಬಾವಿಯನ್ನು ತೋಡಿಸತೊಡಗಿದ್ದರು.ಸುಮಾರು 35 ಅಡಿ ಕೊರೆದಾಗ ಮಣ್ಣಿನೊಳಗೆ ಹಳೆಯ ಹಾರೆ(ಗುದ್ದಲಿ) ಕಂಡು ಬಂತು.

Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

Karnataka Weather | 04-05-2024 | ರಾಜ್ಯದಲ್ಲಿ ಬಿಸಿಲು-ಮೋಡದ ವಾತಾವರಣ | ಮೇ 6 ರಿಂದ ಮುಂಗಾರು ಪೂರ್ವ ಮಳೆ ಆರಂಭ

ಮೇ 6 ರಿಂದ ಕೊಡಗು ಹಾಗೂ ದಕ್ಷಿಣ ಕರಾವಳಿ, ಚಿಕ್ಕಮಗಳೂರು ಭಾಗಗಳಲ್ಲಿ ಮತ್ತೆ…

4 hours ago

ಕೊಕೋ ಧಾರಣೆ ಇಳಿಕೆ | ಒಮ್ಮೆಲೇ ಕುಸಿತ ಕಂಡ ಕೊಕೋ ಧಾರಣೆ |

ಕೊಕೋ ಧಾರಣೆಯಲ್ಲಿ ಸ್ವಲ್ಪ ಇಳಿಕೆ ಕಂಡುಬಂದಿದೆ.

6 hours ago

ಮಳೆಯ ಜೊತೆಗೆ ಮಲೆನಾಡಲ್ಲಿ ಸಿಡಿಲಬ್ಬರ | ಸುಬ್ರಹ್ಮಣ್ಯದಲ್ಲಿ ಯುವಕ ಬಲಿ | ಮಡಿಕೇರಿಯಲ್ಲಿ ಕಾರ್ಮಿಕ ಗಂಭೀರ |

ಕುಕ್ಕೆ ಸುಬ್ರಹ್ಮಣ್ಯ ಸೇರಿದಂತೆ ಸುಳ್ಯ,ಕಡಬ ತಾಲೂಕಿನ  ಘಟ್ಟದ ತಪ್ಪಲಿನ ಪ್ರದೇಶದಲ್ಲಿ ಗುಡುಗು ಸಿಡಿಲು…

18 hours ago

ವೆದರ್‌ ಮಿರರ್‌ | 03.05.2024 |ಮೇ. 4ರಿಂದ ಮೋಡ| ಮೇ.6 ರಿಂದ ಅಲ್ಲಲ್ಲಿ ಮಳೆ ನಿರೀಕ್ಷೆ

04.05.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು, ದಕ್ಷಿಣ…

1 day ago

ವೆದರ್‌ ಮಿರರ್‌ | 2.05.2024 | ಮೋಡದ ವಾತಾವರಣ | ಮತ್ತೆ ದೂರವಾದ ಮಳೆ…!| ಮತ್ತೆ ಹೆಚ್ಚಳವಾಗುತ್ತಿರುವ ತಾಪಮಾನ |

03.05.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…

2 days ago

ಬಿದಿರು ಕೃಷಿ | ತರಕಾರಿ ಕೃಷಿಯಾಗಿ ಬಿದಿರು

ಬಿದಿರು ಕೃಷಿಯ ಬಗ್ಗೆ ಈಗ ಸಾಕಷ್ಟು ಅಧ್ಯಯನ ನಡೆಯುತ್ತಿದೆ. ಈ ನಡುವೆ ಪುತ್ತೂರು…

2 days ago