Advertisement
Share
ಒಡೆದು ಹೋದ ಕನ್ನಡಿಗೆ
ಮನೆಯಲ್ಲಿ ಜಾಗವಿಲ್ಲ..
ಇದಕ್ಕೆ ಅವರದು ನೂರಾರು ಕಾರಣಗಳು…
ಅದೇಷ್ಟೋ ಸಲ ಒಡೆದ
ನನ್ನ ಮನಸ್ಸು ಕಂಡು ಅದು ದುಃಖಿಸಿತು….
ನನ್ನ ನಗುವಿಗೆ ಅದು ಜೊತೆಯಾಗಿತ್ತು
ನಲ್ಲನ ಸವಿನೆನಪಲ್ಲಿ ಮೈಮರೆತಾಗ
ಅದು ನಾಚುತ್ತಿತ್ತು……
ಆದರೆ ನಾನೇಕೆ ಹೀಗೆ…..?
ಸಣ್ಣ ಒಡಕು ಮೂಡಿತೆಂದು
ತಿಪ್ಪೆ ಗುಂಡಿಗೆ ಎಸೆದು ಬಿಟ್ಟೆ….
ನನ್ನ ಕಣ್ಣೀರ ಕಂಡು ಅದೆಂದೂ
ನಗಲಿಲ್ಲ..!
ಸೋತು ನಿಂತಾಗ ಹೀಯಾಳಿಸಲಿಲ್ಲ
ನಿಜ….!
ಅದು ನನ್ನ ಪಾಲಿಗೆ,
ವಾಸ್ತವತೆಯ ತಿಳಿಸುವ ಗುರು,
ಸಂಭ್ರಮಕ್ಕೆ ಜೊತೆಯಾಗುವ ಸ್ನೇಹ,
ಕಣ್ಣೀರ ಒರೆಸುವ ಜೊತೆಗಾರ
ಎಲ್ಲವೂ ಆಗಿತ್ತು…..
ಆದರೆ ಇಂದೇಕೆ ಹೀಗೆ..?
ಜೋಪಾನ ಮಾಡಿದ ಕೈಗಳೇ ಜಾರಿದೆ.
ಕನ್ನಡಿ ಚೂರಾಗಿದೆ ಒಡೆದ ನನ್ನ ಮನಸ್ಸಂತೆ !
ನನ್ನ ಮನಸ್ಸಿನ ಗಾಯಕ್ಕೆ
ಪ್ರೀತಿಯ ಮುಲಾಮು ಸಿಗಬಹುದು…
ಆದರೆ ಒಡೆದು ಚೂರಾದ ಕನ್ನಡಿಗೆ..?
ತಿಪ್ಪೆ ಗುಂಡಿಯೇ ಕೊನೆಯೇ..?
    ಅಪೂರ್ವ ಕೊಲ್ಯ
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಅಪೂರ್ವಚೇತನ್ ಪೆರಂದೋಡಿ

ಶಿಕ್ಷಕಿ

Published by
ಅಪೂರ್ವಚೇತನ್ ಪೆರಂದೋಡಿ

Recent Posts

ಆಂಧ್ರಪ್ರದೇಶದ ಹೊಸ ಪ್ರಯೋಗ : ರೈತನ ತೋಟದಿಂದ ನೇರವಾಗಿ ಮನೆ ಬಾಗಿಲಿಗೆ ಕೃಷಿ ಉತ್ಪನ್ನ

ಆಂಧ್ರಪ್ರದೇಶ ಸರ್ಕಾರ ರೈತರಿಂದ ನೇರವಾಗಿ ಕೃಷಿ ಉತ್ಪನ್ನಗಳನ್ನು ಮನೆ ಬಾಗಿಲಿಗೆ ತಲುಪಿಸುವ “Farm-to-Home”…

4 hours ago

ಭಾರತ ಕೃಷಿಯಲ್ಲಿ ಭರ್ಜರಿ ದಾಖಲೆ : ಆಹಾರ ಉತ್ಪಾದನೆ 3765 ಮಿಲಿಯನ್ ಟನ್!

2025-26ರಲ್ಲಿ ಭಾರತದಲ್ಲಿ 3765.63 ಲಕ್ಷ ಟನ್ ಆಹಾರ ಉತ್ಪಾದನೆ ಸಾಧ್ಯತೆ ಇದ್ದು, ಇದು…

14 hours ago

ಮಂಗಳೂರಿನಲ್ಲಿ ಉದ್ಯೋಗಾವಕಾಶ : ಮೇ 30ರಂದು ಕಸ್ಟಮರ್ ಸಪೋರ್ಟ್ ಹಾಗೂ ಟೆಲಿಕಾಲರ್ ಹುದ್ದೆಗಳಿಗೆ ನೇರ ಸಂದರ್ಶನ

ವಿ.ಆರ್.ಎನ್ ಇನ್ಪೋಟೆಕ್ ಕಂಪೆನಿಯ ಕಸ್ಟಮರ್ ಸಪೋರ್ಟ್ ಎಕ್ಸಿಕ್ಯೂಟಿವ್ ಹಾಗೂ ಟೆಲಿಕಾಲರ್ ಹುದ್ದೆಗಳಿಗೆ ಮೇ…

15 hours ago

ಬ್ಲಿಂಕಿಟ್‌ನಲ್ಲಿ ಉದ್ಯೋಗಾವಕಾಶ : ಜೂನ್ 1ರಂದು ಮಂಗಳೂರಿನಲ್ಲಿ ನೇರ ಸಂದರ್ಶನ

ಬ್ಲಿಂಕಿಟ್ ಕಂಪೆನಿಯ ಪಿಕ್ಕರ್ ಹಾಗೂ ಪ್ಯಾಕರ್ ಹುದ್ದೆಗಳಿಗೆ ಜೂನ್ 1ರಂದು ಮಂಗಳೂರಿನಲ್ಲಿ ನೇರ…

15 hours ago

ಬಕ್ರೀದ್‌ಗೂ ಮುನ್ನ ದೇಶದಲ್ಲಿ ಹೊಸ ಚರ್ಚೆ | “ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಿ” — ಮುಸ್ಲಿಂ ಸಂಘಟನೆಗಳ ಬೇಡಿಕೆ

ಬಕ್ರೀದ್‌ಗೂ ಮುನ್ನ ಗೋಹತ್ಯೆ ಮತ್ತು ಗೋ ರಕ್ಷಣೆಯ ವಿಚಾರ ಮತ್ತೆ ದೇಶದಲ್ಲಿ ಚರ್ಚೆಗೆ…

21 hours ago

ಹವಾಮಾನ ಬದಲಾವಣೆ ಈಗ ಭವಿಷ್ಯದ ಸಮಸ್ಯೆಯಲ್ಲ- ಸ್ಥಳೀಯ ಮಟ್ಟದಲ್ಲೇ ಆರಂಭವಾಗುತ್ತಿದೆ ಕ್ರಿಯಾ ಯೋಜನೆ

ಹವಾಮಾನ ಬದಲಾವಣೆಯ ಪರಿಣಾಮಗಳನ್ನು ಎದುರಿಸಲು ದಕ್ಷಿಣ ಕನ್ನಡದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ…

23 hours ago