Advertisement
Share
ಒಡೆದು ಹೋದ ಕನ್ನಡಿಗೆ
ಮನೆಯಲ್ಲಿ ಜಾಗವಿಲ್ಲ..
ಇದಕ್ಕೆ ಅವರದು ನೂರಾರು ಕಾರಣಗಳು…
ಅದೇಷ್ಟೋ ಸಲ ಒಡೆದ
ನನ್ನ ಮನಸ್ಸು ಕಂಡು ಅದು ದುಃಖಿಸಿತು….
ನನ್ನ ನಗುವಿಗೆ ಅದು ಜೊತೆಯಾಗಿತ್ತು
ನಲ್ಲನ ಸವಿನೆನಪಲ್ಲಿ ಮೈಮರೆತಾಗ
ಅದು ನಾಚುತ್ತಿತ್ತು……
ಆದರೆ ನಾನೇಕೆ ಹೀಗೆ…..?
ಸಣ್ಣ ಒಡಕು ಮೂಡಿತೆಂದು
ತಿಪ್ಪೆ ಗುಂಡಿಗೆ ಎಸೆದು ಬಿಟ್ಟೆ….
ನನ್ನ ಕಣ್ಣೀರ ಕಂಡು ಅದೆಂದೂ
ನಗಲಿಲ್ಲ..!
ಸೋತು ನಿಂತಾಗ ಹೀಯಾಳಿಸಲಿಲ್ಲ
ನಿಜ….!
ಅದು ನನ್ನ ಪಾಲಿಗೆ,
ವಾಸ್ತವತೆಯ ತಿಳಿಸುವ ಗುರು,
ಸಂಭ್ರಮಕ್ಕೆ ಜೊತೆಯಾಗುವ ಸ್ನೇಹ,
ಕಣ್ಣೀರ ಒರೆಸುವ ಜೊತೆಗಾರ
ಎಲ್ಲವೂ ಆಗಿತ್ತು…..
ಆದರೆ ಇಂದೇಕೆ ಹೀಗೆ..?
ಜೋಪಾನ ಮಾಡಿದ ಕೈಗಳೇ ಜಾರಿದೆ.
ಕನ್ನಡಿ ಚೂರಾಗಿದೆ ಒಡೆದ ನನ್ನ ಮನಸ್ಸಂತೆ !
ನನ್ನ ಮನಸ್ಸಿನ ಗಾಯಕ್ಕೆ
ಪ್ರೀತಿಯ ಮುಲಾಮು ಸಿಗಬಹುದು…
ಆದರೆ ಒಡೆದು ಚೂರಾದ ಕನ್ನಡಿಗೆ..?
ತಿಪ್ಪೆ ಗುಂಡಿಯೇ ಕೊನೆಯೇ..?
    ಅಪೂರ್ವ ಕೊಲ್ಯ
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಅಪೂರ್ವಚೇತನ್ ಪೆರಂದೋಡಿ

ಶಿಕ್ಷಕಿ

Published by
ಅಪೂರ್ವಚೇತನ್ ಪೆರಂದೋಡಿ

Recent Posts

ಸರಿಯಾದ ಆಹಾರ ಪದ್ಧತಿಯೇ ರೋಗಮುಕ್ತ ಜೀವನದ ಮೂಲ – ರಾಘವೇಶ್ವರ ಶ್ರೀ

ಗೋಕರ್ಣದಲ್ಲಿ ನಡೆದ ಅನ್ನಬ್ರಹ್ಮ ಚಾತುರ್ಮಾಸ್ಯ ಧರ್ಮಸಭೆಯಲ್ಲಿ ಜಗದ್ಗುರು ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು…

7 hours ago

ಹವಾಮಾನ ವರದಿ | 30-07-2026 | ಕರ್ನಾಟಕದಲ್ಲಿ ಇನ್ನೆರಡು ದಿನ ಉತ್ತಮ ಮಳೆ

ಮಧ್ಯಪ್ರದೇಶದಲ್ಲಿರುವ ವಾಯುಭಾರ ಕುಸಿತದ ಪರಿಣಾಮವಾಗಿ ಕರಾವಳಿ, ಮಲೆನಾಡು ಹಾಗೂ ಉತ್ತರ ಒಳನಾಡಿನ ಹಲವು…

11 hours ago

ಸಮಾಜಕ್ಕೆ ಸರಿದಾರಿಯನ್ನು ತೋರುವುದು ಗುರುವಿನ ಕಾರ್ಯ : ರಾಘವೇಶ್ವರ ಶ್ರೀ

ಗೋಕರ್ಣದ ಅಶೋಕೆಯ ಮೂಲಮಠದಲ್ಲಿ 'ಅನ್ನಬ್ರಹ್ಮ ಚಾತುರ್ಮಾಸ್ಯ' ಆರಂಭಗೊಂಡಿದ್ದು, ಸಮಾಜಕ್ಕೆ ಸರಿಯಾದ ದಾರಿ ತೋರಿಸುವುದು…

20 hours ago

ಅಪೊಲೊ ಫಾರ್ಮಸಿಯಲ್ಲಿ ಉದ್ಯೋಗಾವಕಾಶ : ಆಗಸ್ಟ್‌ 1ರಂದು ಪುತ್ತೂರಿನಲ್ಲಿ ನೇರ ಸಂದರ್ಶನ

ಅಪೊಲೊ ಫಾರ್ಮಸಿ ವತಿಯಿಂದ ವಿವಿಧ ಹುದ್ದೆಗಳ ಭರ್ತಿಗಾಗಿ ಆಗಸ್ಟ್‌ 1ರಂದು ಪುತ್ತೂರಿನಲ್ಲಿ ನೇರ…

20 hours ago

ಹವಾಮಾನ ವರದಿ | 29-07-2026 | ಆ.2 ರಿಂದ ಮಳೆಯ ಸ್ಥಿತಿ ಏನಾಗಬಹುದು..?

ಕರಾವಳಿ, ಮಲೆನಾಡು ಹಾಗೂ ಉತ್ತರ ಒಳನಾಡಿನಲ್ಲಿ ಇನ್ನೂ ಬಿಟ್ಟುಬಿಟ್ಟು ಮಳೆ ಮುಂದುವರಿಯಲಿದೆ. ಆದರೆ…

2 days ago

ಆಸ್ಪತ್ರೆಗಳಲ್ಲಿ ಬಳಕೆಯಾಗದ ಔಷಧ ಮರುಬಳಕೆ – ಹಣವೂ ಉಳಿಯುತ್ತದೆ, ಪರಿಸರವೂ ಕಾಪಾಡುತ್ತದೆ..!

ಆಸ್ಪತ್ರೆಗಳಲ್ಲಿ ಬಳಕೆಯಾಗದೆ ಉಳಿಯುವ ಔಷಧಗಳನ್ನು ಸುರಕ್ಷಿತವಾಗಿ ಮರುಬಳಕೆ ಮಾಡಿದರೆ ಆರೋಗ್ಯ ಕ್ಷೇತ್ರದ ವೆಚ್ಚ…

2 days ago