ವಿಶೇಷ ವರದಿಗಳು

ಕರೆಂಟು ಇಲ್ಲ – ನೆಟ್ವರ್ಕ್ ಇಲ್ಲ – ಇಂಟರ್ನೆಟ್ ಇಲ್ಲ…!

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಸುಳ್ಯ: ತಾಲೂಕಿನ ಗ್ರಾಮೀಣ ಭಾಗಗಳ ಸಮಸ್ಯೆ ಈಗ ಹೆಚ್ಚಾಗಿದೆ. ಕರೆಂಟ್ ಒಂದು ಮಳೆಗೇ ಕಣ್ಣಾಮುಚ್ಚಾಲೆಯಾಡುತ್ತದೆ. ಅದರ ಬೆನ್ನಿಗೇ ಬಿ ಎಸ್ ಎನ್ ಎಲ್ ನೆಟ್ವರ್ಕ್ ಹೋಗುತ್ತದೆ, ಜೊತೆಗೆ ಇಂಟರ್ನೆಟ್ಟೂ ಕೈಕೊಡುತ್ತದೆ..!. ಈ ಸಮಸ್ಯೆ ಹೇಳೋದು ಯಾರಲ್ಲಿ ಅಂತ ಜನ ಆ ಕಡೆ ಈ ಕಡೆ ನೋಡುತ್ತಿದ್ದಾರೆ.

Advertisement

ಇಂದಿಗೂ ಗ್ರಾಮೀಣ ಭಾಗಗಳಲ್ಲಿ  ವಿದ್ಯುತ್ ಸಮಸ್ಯೆ ಸರಿಯಾಗಿಲ್ಲ. ರಾತ್ರಿ ವೇಳೆ ಕತ್ತಲ್ಲಲ್ಲೇ ಇರಬೇಕಾದ ಸ್ಥಿತಿ ಬಂದಿದೆ. ಒಂದು ಮಳೆ ಬಂದರೆ ಸಾಕು ವಿದ್ಯುತ್ ಕೈಕೊಡುತ್ತದೆ, ಕೇಳಿದರೆ ಮಾಮೂಲು ಉತ್ತರ,  “ಟ್ರಿಪ್ ಆಗಿದೆ”. ಯಾಕೆ ಟ್ರಿಪ್ ಆಗುತ್ತದೆ ಎಂದರೆ ಮರದ ಗೆಲ್ಲುಗಳು ತಾಗುತ್ತವೆ. ಯಾಕೆ ಮರದ ಗೆಲ್ಲುಗಳು ತಾಗುತ್ತವೆ ಎಂದರೆ ಟ್ರೀ ಕಟ್ಟಿಂಗ್ ಆಗಿಲ್ಲ. ಆದರೆ ವಾರದಲ್ಲೊಂದು ದಿನ ಇದಕ್ಕೆಂದೇ ಪವರ್ ಕಟ್ ಮಾಡುವ ಬಗ್ಗೆ ಪತ್ರಿಕಾ ಹೇಳಿಕೆಗಳು ಬರುತ್ತದೆ. ಹಾಗಿದ್ದರೂ ಯಾಕೆ ವಿದ್ಯುತ್ ಕೈಕೊಡುತ್ತದೆ…!.

ಉಳಿದೆಲ್ಲಾ ತಾಲೂಕುಗಳಲ್ಲಿ  ಮಳೆಗಾಲಕ್ಕೆ ಮುನ್ನ ಮುಂಜಾಗ್ರತಾ ಸಭೆಯಾಗುತ್ತದೆ. ಕೊಡಗು ಜಿಲ್ಲೆಯಲ್ಲಿ  500 ಮಂದಿ ಹೆಚ್ಚುವರಿ ಸಿಬ್ಬಂದಿಗಳನ್ನು  ಮಳೆಗಾಲದ ಅವಧಿಗೆಂದು ಸರ್ವ ಸನ್ನದ್ಧ ರೀತಿಯಲ್ಲಿ  ನಿಯೋಜನೆ ಮಾಡುತ್ತಾರೆ. ವಿದ್ಯುತ್ ಕೈಕೊಡದಂತೆ ಎಚ್ಚರಿಕೆ ವಹಿಸುತ್ತಾರೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ  ಅದರಲ್ಲೂ ಸುಳ್ಯದಲ್ಲಿ ಮಾತ್ರಾ ಇದೇಕೆ ಇಂತಹ ಸಮಸ್ಯೆ..!. ಮಳೆಗಾಲದ ಮುನ್ನ ಪ್ರಕೃತಿ ವಿಕೋಪದ ಸಭೆಯಲ್ಲಿ  ಏಕೆ ಈ ಬಗ್ಗೆ ಚರ್ಚೆಯಾಗುವುದಿಲ್ಲ ಎಂಬುದಕ್ಕೂ  ಉತ್ತರವಿಲ್ಲ..!. ಉದಾಹರಣೆಗೆ ಸುಳ್ಯದಿಂದ ಗುತ್ತಿಗಾರು ಸುಬ್ರಹ್ಮಣ್ಯದ ಕಡೆಗೆ ಬರುವ ವಿದ್ಯುತ್ ಲೈನ್ ನಲ್ಲಿ  ಉಬರಡ್ಕದ ಬಳಿ ಕಳೆದ ಹಲವಾರು ವರ್ಷಗಳಿಂದ ವಿದ್ಯುತ್ ತಂತಿಗೆ ಬಿದಿರುತಾಗುತ್ತದೆ, ಕಂಬ ವಾಲಿದೆ, ಇದರ ದುರಸ್ತಿಯಾಗಿಲ್ಲ. ಹೀಗಾಗಿ ಈ ಲೈನ್ ಪದೇ ಪದೇ ಟ್ರಿಪ್ ಆಗುತ್ತದೆ..!.

ವಿದ್ಯುತ್ ಕೈಕೊಡುವ ಜೊತೆಗೇ ಬಿ ಎಸ್ ಎನ್ ಎಲ್ ಮೊಬೈಲ್ ಕೂಡಾ ಮಾಯವಾಗುತ್ತದೆ. ವಿದ್ಯುತ್ ಹೊಂದಿಕೊಂಡು ಇರುವ ಮೊಬೈಲ್ ಟವರ್ ಆಫ್ ಆಗುತ್ತದೆ. ಇಂದಿಗೂ ಗ್ರಾಮೀಣ ಭಾಗದಲ್ಲಿ ಬಿ ಎಸ್ ಎನ್ ಎಲ್ ಮೊಬೈಲ್ ಬಳಕೆ ಹೆಚ್ಚಿದೆ. ವಿದ್ಯುತ್ ಕೈಕೊಡುವ ಕಾರಣದಿಂದ ಮೊಬೈಲ್ ಕೂಡಾ ಇಲ್ಲವಾಗುತ್ತದೆ ಸಂಪರ್ಕ ಮರೆಯಾಗುತ್ತದೆ. ಬಿ ಎಸ್ ಎನ್ ಎಲ್ ಡೀಸೆಲ್ ಸರಬರಾಜು ಮಾಡದೇ ಇರುವ ಕಾರಣ ಟವರ್ ಆಫ್. ಅಲ್ಲೂ ಕಾರಣ ಕೇಳಿದರೆ ಕರೆಂಟ್ ಇಲ್ಲ…!. ಇತ್ತೀಚೆಗೆ ಅನಾರೋಗ್ಯದ ಸಂದರ್ಭದಲ್ಲೂ ತುರ್ತಾಗಿ ಸಂಪರ್ಕ ಮಾಡಬೇಕಾದರೆ ಸಂಕಷ್ಟ ಪಡಬೇಕಾದ ಸ್ಥಿತಿ ಗ್ರಾಮೀಣ ಭಾರತದ್ದು..! ನೂತನ ಸರಕಾರ ಬಂದ ಬಳಿಕ ಇದೆಲ್ಲಾ ಸರಿಯಾಗುತ್ತದೆ ಎನ್ನಲಾಗಿತ್ತು , ಈಗ ಅದಕ್ಕೂ ಚಾಲನೆ ಸಿಕ್ಕಿಲ್ಲ.

ಮೊಬೈಲ್ ನೆಟ್ವರ್ಕ್ ಅನ್ನೇ ಹೊಂದಿಕೊಂಡಿರುವ ಡಿಜಿಟಲ್ ಇಂಡಿಯಾದ ಭಾಗವಾಗಿರುವ ಇಂಟರ್ನೆಟ್ ಕೂಡಾ ಇಲ್ಲವಾಗುತ್ತದೆ. ಯುವಕರಿಂದ ತೊಡಗಿ ಎಲ್ಲರೂ ಇಂದು ಡಿಜಿಟಲ್ ಯುಗದತ್ತ ಹೊರಳಿರುವಾಗ,  ಇದ್ಯಾವುದೂ ಇಲ್ಲದೆ ಮೇಲೆ ಕೆಳಗೆ ನೋಡಬೇಕಾದ ಸ್ಥಿತಿ ಗ್ರಾಮೀಣ ಭಾರತದಲ್ಲಿದೆ.

Advertisement

ಇದೆಲ್ಲಾ ನಿವಾರಣೆಯಾಗದ ಸಮಸ್ಯೆಯಲ್ಲ. ಜನಪ್ರತಿನಿಧಿಗಳು ಈ ಬಗ್ಗೆ ಖಡಕ್ ಆಗಿ ಮಾತನಾಡಿದರೆ ಎಲ್ಲವೂ ಒಂದೇ ವಾರದಲ್ಲಿ ಸರಿಯಾಗಲು ಸಾಧ್ಯವಿದೆ. ರಚನಾತ್ಮಕವಾಗಿ ನೋಡಿದರೆ ಗ್ರಾಮೀಣ ಭಾರತದ  ಸುಧಾರಣೆಗೆ ಇಂದು ಕರೆಂಟು  – ನೆಟ್ವರ್ಕ್  – ಇಂಟರ್ನೆಟ್  ಅಗತ್ಯವಾಗಿದೆ. ಹೀಗಾಗಿ ಅಭಿವೃದ್ಧಿಪರವಾಗಿ ಯೋಚಿಸಿದರೆ ಈ ಸಮಸ್ಯೆಗಳು ಪರಿಹಾರವಾಗಲು ಸಾಧ್ಯವಿದೆ.

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಕೊಂಕಣ ರೈಲ್ವೆ ಮಾರ್ಗದ ರೈಲುಗಳಿಗೆ ನಿರ್ಮಿಸಲಾದ ವಿದ್ಯುತ್ ಗ್ರಿಡ್ ಉದ್ಘಾಟನೆ

ಕೊಂಕಣ ರೈಲ್ವೆ ಮಾರ್ಗದ ರೈಲುಗಳಿಗೆ ಕೆಪಿಸಿಯಿಂದ ನೇರವಾಗಿ ವಿದ್ಯುತ್ ಒದಗಿಸಲು ನಿರ್ಮಿಸಲಾದ ವಿದ್ಯುತ್…

4 hours ago

ಮೈಸೂರು ಮೃಗಾಲಯದ ಪ್ರವೇಶ ದರ ಹೆಚ್ಚಳ | ಶೇಕಡ 20 ರಷ್ಟು ಹೆಚ್ಚಳ

ಮೈಸೂರು ಮೃಗಾಲಯದ ಪ್ರವೇಶ ದರ ಶೇಕಡ 20ರಷ್ಟು ಹೆಚ್ಚಳ ಮಾಡಲಾಗಿದೆ ಎಂದು ಮೃಗಾಲಯ…

4 hours ago

ಹಸಿರು ಹೈಡ್ರೋಜನ್ ಘಟಕ ಕಾರ್ಯಾಚರಣೆ | ಹಸಿರು ಇಂಧನ ಉತ್ಪಾದನೆಗೆ ಒತ್ತು

ಕೇಂದ್ರ  ಬಂದರು , ಹಡಗು ಹಾಗೂ ಜಲಮಾರ್ಗಗಳ ಸಚಿವ ಸರ್ಬಾನಂದ ಸೋನೋವಾಲ್ ,…

5 hours ago

NCDCಗೆ 2 ಸಾವಿರ ಕೋ.ರೂ. ಅನುದಾನ | ಮಹಿಳೆಯರಿಗೆ, ಯವಕರಿಗೆ ಉದ್ಯೋಗಾವಕಾಶ

ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮ- NCDCಗೆ ಮುಂದಿನ ನಾಲ್ಕು ವರ್ಷಗಳಿಗಾಗಿ ಸಚಿವ ಸಂಪುಟ…

5 hours ago

ರಾಜ್ಯದ 5 ಜಿಲ್ಲೆಗಳಲ್ಲಿ ಖಾದಿ ಚಟುವಟಿಕೆ ಉತ್ತೇಜಿಸಲು ಖಾದಿ ಮಂಡಳಿ ಸ್ಥಾಪನೆಗೆ ನಿರ್ಧಾರ

ರಾಜ್ಯದಲ್ಲಿ ಖಾದಿ ಚಟುವಟಿಕೆ ಇಲ್ಲದಿರುವ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು…

5 hours ago

ಹವಾಮಾನ ಆಧಾರಿತ ಬೆಳೆ ವಿಮೆ | ಉತ್ತರ ಕನ್ನಡ ಜಿಲ್ಲೆಯಲ್ಲಿ ರೈತರ ನೋಂದಣಿಗೆ ಆಗಸ್ಟ್ 11 ಅಂತಿಮ ದಿನ

2025 ರ ಮುಂಗಾರು ಋತುವಿನ ಮರುವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ…

5 hours ago