ಕಲ್ಮಡ್ಕ: ಸುಳ್ಯ ತಾಲೂಕಿನ ಕಲ್ಮಡ್ಕದ ಕೈಲಾರು ಈಶ್ವರ ಭಟ್ ಅವರ ತೋಟದಲ್ಲಿ ಒಂದೇ ಸಮನೆ ನಾಯಿ ಬೊಗಳುತ್ತಿತ್ತು. ಹೋಗಿ ನೋಡಿದಾಗ ಅವರ ಸಾಕು ನಾಯಿಯೊಂದನ್ನು ಹೆಬ್ಬಾವು ಹಿಡಿದು ತಿನ್ನುವ ಸ್ಥಿತಿಯಲ್ಲಿತ್ತು, ನಾಯಿ ಬದುಕಿಗಾಗಿ ಹೋರಾಟ ಮಾಡುತ್ತಿತ್ತು. ಇತರ ನಾಯಿಗಳು ಬೊಗಳುತ್ತಾ ರಕ್ಷಣೆಗೆ ಮುಂದಾಗುತ್ತಾ ಸಹಾಯಕ್ಕಾಗಿ ಯಜಮಾನನ್ನು ಕರೆಯುತ್ತಿತ್ತು.
ಏನಿದು ನಾಯಿ ವಿಪರೀತ ಬೊಗಳುತ್ತದೆ ಎಂದು ಈಶ್ವರ ಭಟ್ಟರು ತೋಟಕ್ಕೆ ಹೋದಾಗ ಹೆಬ್ಬಾವು ನಾಯಿಯನ್ನು ಕಾಡುತ್ತಿತ್ತು, ಹೋರಾಟ ನಡೆಯುತ್ತಿತ್ತು. ಈಶ್ವರ ಭಟ್ ಸ್ಥಳಕ್ಕೆ ಬಂದಾಗ ಹೆಬ್ಬಾವು ನಾಯಿಯನ್ನು ಬಿಟ್ಟು ತೆಂಗಿನ ಮರದ ಬುಡದ ಕಸದೆಡೆಯಲ್ಲಿ ಅವಿತು ಕುಳಿತಿತ್ತು. ಇದನ್ನು ಅರಿತ ಈಶ್ವರ ಭಟ್ ಹೆಬ್ಬಾವನ್ನು ಕಾರ್ಮಿಕರೊಂದಿಗೆ ಸೇರಿ ಹಿಡಿದು ಗೋಣಿ ಚೀಲದಲ್ಲಿ ತುಂಬಿ ಕಲ್ಮಡ್ಕದ ಬಂಟಮಲೆ ತಪ್ಪಲಿನ ಕಾಡಿಗೆ ಸುರಕ್ಷಿತವಾಗಿ ಬಿಟ್ಟು ತನ್ನ ಪರಿಸರ ಪ್ರೇಮವನ್ನು ಮತ್ತು ಪ್ರಾಣಿ ದಯೆಯನ್ನು ಮೆರೆದರು. ಈಗ ಎರಡೂ ಪ್ರಾಣಿಗಳು ಸೇಫ್ ಮೋಡ್ ನಲ್ಲಿ…!. ಈಶ್ವರ ಭಟ್ಟದ ಪರಿಸರ ಪ್ರೇಮ, ಹಾವು ಹಿಡಿಯುವ ಧೈರ್ಯ ಮೆಚ್ಚುಗೆಗೆ ಕಾರಣವಾಯಿತು.
(Photo : ಸುರೇಶ್ಚಂದ್ರ ಕಲ್ಮಡ್ಕ)
ಬೇಸಿಗೆಯಲ್ಲಿ ದೇಹದಲ್ಲಿ ನೀರಿನಾಂಶ ಕಡಿಮೆಯಾಗುವುದರಿಂದ ಕಿಡ್ನಿ ಸ್ಟೋನ್ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಇದೆ.…
ಮಂಗಳೂರು ನಗರದಲ್ಲಿ ಮಳೆಗಾಲದ ಹಿನ್ನೆಲೆ ಜೂನ್ 1ರಿಂದ ಸೆಪ್ಟೆಂಬರ್ 30ರವರೆಗೆ ರಸ್ತೆ, ಗುಡ್ಡ…
ಈಶಾನ್ಯ ಭಾರತದಲ್ಲಿ ಡಿಆರ್ಐ ನಡೆಸಿದ ದಾಳಿಯಲ್ಲಿ ಸುಮಾರು 60 ಸಾವಿರ ಕೆಜಿ ಅಕ್ರಮ…
ರಾಜ್ಯದ ಹಲವು ಜಿಲ್ಲೆಗಳಲ್ಲಿ ಇನ್ನೂ ಎರಡು ದಿನ ಸಂಜೆ ಹಾಗೂ ರಾತ್ರಿ ಮಳೆಯ…
ಅಡಿಕೆ ಮಾರುಕಟ್ಟೆಗೆ ದೊಡ್ಡ ಕಾರ್ಪೊರೇಟ್ ಸಂಸ್ಥೆಗಳು ಬಂದರೆ ರೈತರಿಗೆ ಆರಂಭದಲ್ಲಿ ಲಾಭದ ಅನುಭವ…
“ಕಾಕ್ರೋಚ್ ಜನತಾ ಪಾರ್ಟಿ” ಬಳಿಕ ಇದೀಗ “ನ್ಯಾಷನಲ್ ಪ್ಯಾರಾಸಿಟಿಕ್ ಫ್ರಂಟ್” ಎಂಬ ಹೊಸ…