ಸುಳ್ಯ: ಕರ್ನಾಟಕ ಸರಕಾರದ 2019 -2020ನೇ ಸಾಲಿನ 5054 ಗ್ರಾಮೀಣ ರಸ್ತೆ ಅಭಿವೃದ್ದಿ ಯೋಜನೆಯಡಿ ಮಂಜೂರಾದ ರೂ.50 ಲಕ್ಷ ಅನುವಾದದಲ್ಲಿ ಬಾಳಿಲ – ಕಾಂಚೋಡು ರಸ್ತೆ ಕಾಂಕ್ರಿಟೀಕರಣಕ್ಕಾಗಿ ಶಾಸಕ ಎಸ್. ಅಂಗಾರ ಗುದ್ದಲಿ ಪೂಜೆ ನೆರವೇರಿಸಿದರು.
ತಾ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷೆ ಜಾಹ್ನವಿ ಕಾಂಚೋಡು, ಗ್ರಾಮ ಪಂಚಾಯಿತಿ ಅಧ್ಯಕ್ಷ ಕೃಷ್ಣಪ್ಪ ಪೂಜಾರಿ, ಮಾಜಿ ಅಧ್ಯಕ್ಷೆ ಮಾಲಿನಿ ಪ್ರಸಾದ್, ಕಳಂಜ ಬಾಳಿಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸುಧಾಕರ ರೈ ಎ.ಎಂ. ಬಾಳಿಲ, ಪಿ.ಜಿ.ಎಸ್ ಎನ್ ಪ್ರಸಾದ್, ಕಾಂಚೋಡು ಪರಮೇಶ್ವರಯ್ಯ ಅತಿಥಿಗಳಾಗಿದ್ದರು. ರಾಮಪ್ರಸಾದ್ ಕಾಂಚೋಡು ಸ್ವಾಗತಿಸಿ, ಬಾಳಿಲ ಪಂಚಾಯಿತಿ ಸದಸ್ಯ ರಾಧಾಕೃಷ್ಣ ರಾವ್ ವಂದಿಸಿದರು. ಶ್ರೀನಾಥ್ ರೈ ದೋಳ್ತೋಡಿ, ಸತ್ಯಮೂರ್ತಿ ಬಾಳಿಲ, ಕಿರಣ್ ರೈ ಅಗಲ್ಪಾಡಿ, ಗಂಗಾಧರ ಕಾಯಾರ, ಮಾಧವ ಗೌಡ ಅಯ್ಯನಕಟ್ಟೆ, ರಾಮಚಂದ್ರ ಕಾಯಾರ, ಈಶ್ವರ ಚಂದ್ರ ಮುಂಡುಗಾರು, ರವಿಶಂಕರ್ ಕಾಂಚೋಡು ಉಪಸ್ಥಿತರಿದ್ದರು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel