ಅಡಿಕೆ ಇಳುವರಿ ಕುರಿತು “ದ ರೂರಲ್ ಮಿರರ್.ಕಾಂ” ಸಮೀಕ್ಷೆ | ಬಹುತೇಕ ತೋಟಗಳಲ್ಲಿಅಡಿಕೆ ಇಳುವರಿ ಕುಸಿತ

March 10, 2026
10:42 PM
ಅಡಿಕೆ ಬೆಳೆಗಾರರ ವಾಸ್ತವ ಪರಿಸ್ಥಿತಿಯನ್ನು ಅರಿಯಲು ದ ರೂರಲ್ ಮಿರರ್.ಕಾಂ ನಡೆಸಿದ ಸಮೀಕ್ಷೆಯಲ್ಲಿ ಬಹುತೇಕ ತೋಟಗಳಲ್ಲಿ ಇಳುವರಿ ಕುಸಿತ ಕಂಡುಬಂದಿರುವ ಆತಂಕಕಾರಿ ಮಾಹಿತಿ ಹೊರಬಿದ್ದಿದೆ. ಸಮೀಕ್ಷೆಯಲ್ಲಿ ಭಾಗವಹಿಸಿದ ರೈತರ ಬಹುಪಾಲು ಈ ವರ್ಷ ಗಣನೀಯ ಪ್ರಮಾಣದ ಬೆಳೆ ನಷ್ಟವನ್ನು ಅನುಭವಿಸುತ್ತಿರುವುದಾಗಿ ತಿಳಿಸಿದ್ದಾರೆ.

ಈ ಬಾರಿಯ ಅಡಿಕೆ ಇಳುವರಿಯ ಕುರಿತು ದ ರೂರಲ್ ಮಿರರ್.ಕಾಂ ವತಿಯಿಂದ ಸಮೀಕ್ಷೆ ನಡೆಸಲಾಗಿತ್ತು. ಈ ಸಮೀಕ್ಷೆಗೆ ಒಟ್ಟು 123 ಮಂದಿ ಅಡಿಕೆ ಕೃಷಿಕರು ಸ್ಪಂದಿಸಿ ತಮ್ಮ ಅಭಿಪ್ರಾಯ ಮತ್ತು ಅನುಭವಗಳನ್ನು ಹಂಚಿಕೊಂಡಿದ್ದಾರೆ.

ಈ ಪ್ರತಿಕ್ರಿಯೆಗಳ ಆಧಾರದಲ್ಲಿ ಈ ವರ್ಷದ ಅಡಿಕೆ ಇಳುವರಿ ಸ್ಥಿತಿ ಹಾಗೂ ಅದರ ಕುರಿತ ವಿಶ್ಲೇಷಣೆಯನ್ನು ಇಲ್ಲಿ ನೀಡಲಾಗಿದೆ.

Advertisement

ಸಮೀಕ್ಷೆಯಲ್ಲಿ ಕೇಳಲಾದ ಪ್ರಶ್ನೆಗಳು ಕೃಷಿಕರಿಂದ ನೇರವಾಗಿ ಮಾಹಿತಿ ಪಡೆಯುವ ಉದ್ದೇಶದಿಂದ ರೂಪಿಸಲಾಗಿದ್ದವು. ತಪ್ಪು ಅಥವಾ ಅಸ್ಪಷ್ಟ ಮಾಹಿತಿ ಹರಡದಂತೆ ಕೆಲವು ಪ್ರಶ್ನೆಗಳಲ್ಲಿ ತುಲನಾತ್ಮಕ ಅಂಶಗಳನ್ನು (ಉದಾಹರಣೆಗೆ ಈ ವರ್ಷದ ಇಳುವರಿ ಮತ್ತು ಏಕೆ ಇಳುವರಿ ಕಡಿಮೆ ಹಾಗೂ ಏಕೆ ಹೆಚ್ಚು) ಕೇಳಲಾಗಿತ್ತು. ಇಂತಹ ಪ್ರಶ್ನೆಗಳಲ್ಲಿನ ಉತ್ತರಗಳು ಎರಡೂ ಕಡೆ ಬಹುತೇಕ ಒಂದೇ ಇದ್ದವು.

ಇದರ ಫಲವಾಗಿ ಕೃಷಿಕರು ನೀಡಿದ ಉತ್ತರಗಳು ಪರಸ್ಪರ ಪರಿಶೀಲನೆಗೊಳಗಾಗುವಂತಾಗಿದ್ದು, ಸಮೀಕ್ಷೆಯಿಂದ ದೊರೆತ ಮಾಹಿತಿಗಳು ಸರಾಸರಿಯಾಗಿ ಹೆಚ್ಚು ನಿಖರವಾಗಿವೆ ಎಂದು ಹೇಳಬಹುದು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

Advertisement

ಪ್ರಸಕ್ತ ಸಾಲಿನಲ್ಲಿ ಅಡಿಕೆ ಬೆಳೆಗಾರರ ವಾಸ್ತವ ಸ್ಥಿತಿಯನ್ನು ಅರಿಯಲು 123 ರೈತರನ್ನು ಒಳಗೊಂಡ ಸಮೀಕ್ಷೆ ನಡೆಸಲಾಗಿದ್ದು, ಅದರ ಫಲಿತಾಂಶಗಳು ಅತ್ಯಂತ ಆತಂಕಕಾರಿಯಾಗಿವೆ.

Advertisement

ಇಳುವರಿ ಕುಸಿತ : ಬಹುತೇಕ ರೈತರ ಅನುಭವ : ಸಮೀಕ್ಷೆಯಲ್ಲಿ ಭಾಗವಹಿಸಿದ ಒಟ್ಟು ಬೆಳೆಗಾರರಲ್ಲಿ

  • ಶೇ. 71.5 ರಷ್ಟು ರೈತರು ಇಳುವರಿ ಕುಸಿತವನ್ನು ಅನುಭವಿಸುತ್ತಿರುವುದಾಗಿ ತಿಳಿಸಿದ್ದಾರೆ.

    Advertisement
  • ಶೇ. 14.6 ರಷ್ಟು ರೈತರಲ್ಲಿ ಇಳುವರಿ ಸ್ಥಿರವಾಗಿದೆ.

  • ಕೇವಲ ಶೇ. 13.8 ರಷ್ಟು ಬೆಳೆಗಾರರಲ್ಲಿ ಮಾತ್ರ ಇಳುವರಿ ಏರಿಕೆಯಾಗಿದೆ.

    Advertisement

ಈ ಅಂಕಿಅಂಶಗಳು ಅಡಿಕೆ ತೋಟಗಳಲ್ಲಿ ಈ ವರ್ಷ ವ್ಯಾಪಕ ಮಟ್ಟದಲ್ಲಿ ಇಳುವರಿ ಹಿನ್ನಡೆ ಸಂಭವಿಸಿರುವುದನ್ನು ಸೂಚಿಸುತ್ತಿವೆ.

ಕುಸಿತದ ತೀವ್ರತೆ ಮತ್ತು ಆರ್ಥಿಕ ಪರಿಣಾಮ: ಇಳುವರಿ ಕುಸಿದಿದೆ ಎಂದು ತಿಳಿಸಿದ ರೈತರ ಸ್ಥಿತಿಯನ್ನು ಆಳವಾಗಿ ವಿಶ್ಲೇಷಿಸಿದಾಗ, ನಷ್ಟದ ಪ್ರಮಾಣವೂ ಗಂಭೀರವಾಗಿದೆ.

Advertisement
  • ಸುಮಾರು ಶೇ. 43 ರಷ್ಟು ರೈತರು ಶೇ. 25 ರಿಂದ 50 ರಷ್ಟು ಬೆಳೆ ನಷ್ಟವನ್ನು ಅನುಭವಿಸಿದ್ದಾರೆ.

  • ಇನ್ನೂ ಶೇ. 28 ರಷ್ಟು ರೈತರು ಶೇ. 50 ರಿಂದ 75 ರಷ್ಟು ತೀವ್ರ ನಷ್ಟಕ್ಕೆ ತುತ್ತಾಗಿದ್ದಾರೆ.

    Advertisement

ಒಟ್ಟಾರೆ ಲೆಕ್ಕಾಚಾರ ಪ್ರಕಾರ, ಇಳುವರಿ ಕುಸಿದ ತೋಟಗಳಲ್ಲಿ ಸರಾಸರಿ ಶೇ. 44.5 ರಷ್ಟು ಬೆಳೆ ಕಡಿಮೆಯಾಗಿದೆ. ಅಂದರೆ, ಕಳೆದ ವರ್ಷ 100 ಕ್ವಿಂಟಾಲ್ ಅಡಿಕೆ ಪಡೆದ ರೈತರಿಗೆ ಈ ಬಾರಿ ಸುಮಾರು 55 ಕ್ವಿಂಟಾಲ್ ಮಾತ್ರ ದೊರೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ರೈತರ ವಾರ್ಷಿಕ ಆದಾಯ ಹಾಗೂ ಸಾಲ ಮರುಪಾವತಿ ಸಾಮರ್ಥ್ಯಕ್ಕೂ ನೇರವಾದ ಹೊಡೆತ ಬೀಳುವ ಸಾಧ್ಯತೆ ಇದೆ.

Advertisement

ಇಳುವರಿ ಹೆಚ್ಚಳ ಕಂಡ ತೋಟಗಳು ಕಡಿಮೆ : ಇಳುವರಿಯಲ್ಲಿ ಏರಿಕೆ ಕಂಡುಬಂದವರು ತೀರಾ ಕಡಿಮೆ.  ಗುಂಪಿನ (35 ಜನರು) ಪರಿಸ್ಥಿತಿಯೂ ಬಹು ದೊಡ್ಡ ಮಟ್ಟದ ಸುಧಾರಣೆಯನ್ನು ಸೂಚಿಸುವಂತಿಲ್ಲ.

Advertisement
  • ಇವರಲ್ಲಿ ಶೇ. 62.9 ರಷ್ಟು ರೈತರಿಗೆ ಕೇವಲ ಶೇ. 5 ರಿಂದ 25 ರಷ್ಟು ಮಾತ್ರ ಅಲ್ಪ ಪ್ರಮಾಣದ ಏರಿಕೆ ಕಂಡುಬಂದಿದೆ.

  • ಗಮನಾರ್ಹ ಮಟ್ಟದ, ಅಂದರೆ ಶೇ. 50 ಕ್ಕಿಂತ ಹೆಚ್ಚು ಏರಿಕೆ ಕಂಡವರು ಕೇವಲ ಶೇ. 11.4 ರಷ್ಟು ಮಾತ್ರ.

    Advertisement

ಅಂದರೆ, ಇಳುವರಿ ಏರಿಕೆಯ ಪ್ರಮಾಣವು ಕುಸಿತದ ಪ್ರಮಾಣಕ್ಕಿಂತ ಐದು ಪಟ್ಟು ಕಡಿಮೆಯಾಗಿದೆ. ಇದು ಮುಂದಿನ ದಿನಗಳಲ್ಲಿ ಅಡಿಕೆಯ ಒಟ್ಟಾರೆ ಪೂರೈಕೆ ಮತ್ತು ಮಾರುಕಟ್ಟೆ ಸ್ಥಿತಿಗತಿಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ.

A survey conducted by The Rural Mirror among 123 arecanut farmers reveals a significant decline in arecanut yield this season. Around 71.5% of farmers reported yield loss, with an average decline of about 44.5% in affected plantations. The findings indicate a serious production setback that could impact farmers’ income and market supply in the coming months.

Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹಲಸು ಈಗ ಕೇವಲ ಹಣ್ಣು ಅಲ್ಲ… ಸೂಪರ್ ಫುಡ್..!‌ ಹಲಸಿನ ಹಣ್ಣಿನ ಔಷಧೀಯ ಗುಣಗಳಿಗೆ ಕೇರಳದಲ್ಲಿ ಪ್ರಚಾರ ಅಭಿಯಾನ
June 26, 2026
1:15 PM
by: ದ ರೂರಲ್ ಮಿರರ್.ಕಾಂ
ಧರ್ಮಸ್ಥಳದಲ್ಲಿ ವಿಜಯೇಂದ್ರ ಪ್ರಾರ್ಥನೆ: “ರೈತರಿಗೆ ಉತ್ತಮ ಬೆಲೆ, ಬಿಜೆಪಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲಿ”
June 26, 2026
12:52 PM
by: ದ ರೂರಲ್ ಮಿರರ್.ಕಾಂ
ಅಡಿಕೆ ಕನಿಷ್ಠ ಆಮದು ಬೆಲೆ (MIP) ಪರಿಷ್ಕರಣೆ – ರೈತರ ಹಿತಾಸಕ್ತಿಗೆ ಕೇಂದ್ರ ಸರ್ಕಾರದ ತ್ವರಿತ ನೀತಿ ನಿರ್ಧಾರ ಅನಿವಾರ್ಯ
June 25, 2026
8:41 PM
by: ಅರುಣ್‌ ಕುಮಾರ್ ಕಾಂಚೋಡು
ಮುಂಗಾರು ಬೆಳೆ ವಿಮೆ ನೋಂದಣಿಗೆ ಆಗಸ್ಟ್‌ 14 ಕೊನೆಯ ದಿನ – ಭತ್ತ ಬೆಳೆಗಾರರು ತಪ್ಪದೇ ಹೆಸರು ನೋಂದಾಯಿಸಿ
June 25, 2026
8:17 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror