ಸುದ್ದಿಗಳು

ಕಾಣಿಯೂರು ಅಂಚೆ ಪಾಲಕ ಅಶ್ವತ್ ರವರಿಗೆ ಬೀಳ್ಕೊಡುಗೆ

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಕಾಣಿಯೂರು:  ಕಾಣಿಯೂರು ಉಪ ಅಂಚೆ ಕಚೇರಿಯಲ್ಲಿ ಅಂಚೆ ಪಾಲಕರಾಗಿ ಸೇವೆ ಸಲ್ಲಿಸಿ ಇದೀಗ ಪುತ್ತೂರು ಅಂಚೆ ಕಚೇರಿಗೆ ವರ್ಗಾವಣೆಗೊಂಡಿರುವ ಅಶ್ವತ್. ಎ ಅವರಿಗೆ ಬೀಳ್ಕೊಡುವ ಕಾರ್ಯಕ್ರಮವು ಕಾಣಿಯೂರು ಹಾಗೂ ಬ್ರಾಂಚ್ ಆಫೀಸಿನ ಸಹಕಾರದೊಂದಿಗೆ ಕಾಣಿಯೂರು ಉಪ ಅಂಚೆ ಕಚೇರಿಯಲ್ಲಿ ನಡೆಯಿತು. ಕಡಬದಿಂದ ವರ್ಗಾವಣೆಗೊಂಡು ಕಾಣಿಯೂರು ಅಂಚೆ ಪಾಲಕರಾಗಿ ಕಾರ್ಯನಿರ್ವಹಿಸುತ್ತಿರುವ ಅಣ್ಣು ಇವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುರುಳ್ಯ ಬ್ರಾಂಚ್‌ನ ಪೋಸ್ಟ್ ಮಾಸ್ಟರ್ ಬಾಲಕೃಷ್ಣ ಗೌಡ ಎ ಇವರು ಅಶ್ವತ್‌ರವರಿಗೆ ಶಾಲು ಹೊದಿಸಿ ಫಲ ಪುಷ್ಪದೊಂದಿಗೆ ಕಿರುಕಾಣಿಕೆಯನ್ನು ನೀಡಿ ಗೌರವಿಸಿ ಶುಭಹಾರೈಸಿದರು.

Advertisement
Advertisement

ಇದೆ ವೇಳೆ  ಅಶ್ವತ್‌ರವರು ಸಹಕರಿಸಿದ ಎಲ್ಲರಿಗೂ ಕೃತಜ್ಞತೆಯನ್ನು ಸಲ್ಲಿಸಿದರು. ಬ್ರಾಂಚ್ ಆಫೀಸಿನ ಯಶೋಧ, ನಾರಾಯಣ ಗೌಡ, ಯೋಗಿಶ, ಜಯ ಇವರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿ ಸಹಕಾರ ನೀಡಿದ ಅಂಚೆಪಾಲಕರಿಗೆ ಕೃತಜ್ಞತೆಯನ್ನು ಸಲ್ಲಿಸಿದರು. ನೂತನ ಅಂಚೆ ಪಾಲಕ ಅಣ್ಣುರವರು ಮಾತನಾಡಿ ಬ್ರಾಂಚ್ ಆಫೀಸಿನವರು ಎಲ್ಲರೂ ಮುಂದೆಯೂ ಉತ್ತಮ ರೀತಿಯಲ್ಲಿ ಸಹಕಾರ ನೀಡಬೇಕು. ನಾವೆಲ್ಲರೂ ಯಾವುದೇ ತಾರತಮ್ಯವಿಲ್ಲದೆ ಒಗ್ಗಟ್ಟಿನಿಂದ ಕೆಲಸವನ್ನು ಮಾಡೋಣ ಎಂದು ಹೇಳಿ ವರ್ಗಾವಣೆಗೊಂಡ ಅಶ್ವತ್‌ರಿಗೆ ಶುಭ ಹಾರೈಸಿದರು.

ಕಾಣಿಯೂರಿನ ಪೋಸ್ಟ್ ಮ್ಯಾನ್ ಉಮೇಶ್ ಪ್ರಾಸ್ತಾವಿಕದೊಂದಿಗೆ, ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಜಯ ಕಾಣಿಯೂರು ವಂದಿಸಿದರು. ಈ ಸಂದರ್ಭದಲ್ಲಿ ಬ್ರಾಂಚ್ ಆಫೀಸಿನ ಬಾಲಕೃಷ್ಣ ಗೌಡ, ವೆಂಕಪ್ಪ ಗೌಡ ಮುರುಳ್ಯ, ಯಶೋಧ, ರಮೇಶ್ ಬೊಬ್ಬೆಕೇರಿ, ನಾರಾಯಣ ಗೌಡ, ತಾರಿಕಾ ಚಾರ್ವಾಕ, ಯೋಗಿಶ್ ದೋಳ್ಪಾಡಿ ಹಾಗೂ ಕಾಣಿಯೂರು ಶಿವ ಸ್ಟುಡಿಯೋ ಮಾಲಕರಾದ ವಸಂತ ಕೋಡಂದೂರು, ಬೆಳಂದೂರು ಗ್ರಾ.ಪಂ ಸದಸ್ಯ ಜಯಂತ ಅಬೀರ, ಕರಿಯಪ್ಪ, ಮೋಹಿನಿ ಮತ್ತಿರರು ಉಪಸ್ಥಿತರಿದ್ದರು.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಬೆಳಗಾವಿಯಲ್ಲಿ ಧಾರಾಕಾರ ಮಳೆ | ವ್ಯಾಪಕವಾಗಿ ಕೃಷಿಗೆ ಹಾನಿ

ಬೆಳಗಾವಿ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆ ಹಾಗೂ ಮಹಾರಾಷ್ಟ್ರದ…

10 hours ago

ಪುತ್ತೂರಿನಲ್ಲಿ ಜೂನ್ 30 ರಿಂದ ಜುಲೈ 6 ರ ತನಕ ಯಕ್ಷಗಾನ ತಾಳಮದ್ದಳೆ ಸಪ್ತಾಹ | ‘ಕುರಿಯ ಪ್ರಶಸ್ತಿ’ ಪ್ರದಾನ

ಪುತ್ತೂರಿನ ಶ್ರೀ ಲಕ್ಷ್ಮೀವೆಂಕಟ್ರಮಣ ದೇವಸ್ಥಾನ ಹಾಗೂ ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ …

11 hours ago

ಅಡಿಕೆ ಮಾರಾಟದ ದಾರಿಗಳು ಯಾವುದೆಲ್ಲಾ…?

ಬೆಳೆಗಾರರು ಸಹಕಾರಿ ಸಂಸ್ಥೆಗಳು ಮತ್ತು ಬೆಳೆಗಾರದ್ದೇ ಆದ ಇತರ ಸಂಸ್ಥೆಗಳ ಮೂಲಕ ವ್ಯವಹಾರ…

11 hours ago

ಹವಾಮಾನ ಆಧರಿತ ಬೆಳೆ ವಿಮಾ ಯೋಜನೆ | ಕೃಷಿಕರಿಗೆ ಹೇಗೆ ಪ್ರಯೋಜನವಾಗುತ್ತಿದೆ…?

ಹವಾಮಾನ ಆಧರಿತ ಬೆಳೆ ವಿಮಾ ಯೋಜನೆ ಜಾರಿಯಾಗಿ ವರ್ಷಗಳು ಕೆಲವು ಉರುಳಿದವು. ಇಂದಿಗೂ…

11 hours ago

ಸಕಲ ಸಂಕಷ್ಟಗಳನ್ನು ಮಾಯ ಮಾಡ್ತಾಳೆ ಈ ಉಕ್ಕಡ ಮಾರಮ್ಮ | ಆಷಾಡ ಶುಕ್ರವಾರ ಈ ದೇವಿಯನ್ನು ಈ ರೀತಿ ಪೂಜಿಸಿ

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

11 hours ago

ಬೆಳೆವಿಮೆ ಯೋಜನೆ | ರೈತರಿಗೆ ತೋಟಗಾರಿಕಾ ಇಲಾಖೆ ಸೂಚನೆ

ತೋಟಗಾರಿಕೆ ಬೆಳೆ ಬೆಳೆದ ರೈತರು ಹವಾಮಾನ ವೈಪರೀತ್ಯದಿಂದ ಬೆಳೆ ನಷ್ಟ ಸಂಭವಿಸಿದಲ್ಲಿ ನಷ್ಟ…

19 hours ago