ಸುಳ್ಯ: ಆಲೆಟ್ಟಿ ಗ್ರಾಮದ ಕುಂಭಕ್ಕೋಡ್ ವಲಿಯತುಲ್ಲಾಹಿ ಮಣವಾಟಿ ಬೀವಿ(ರ.ಅ) ದರ್ಗಾ ಶರೀಫ್ ಮತ್ತು ಬದ್ರೀಯಾ ಜಮಾಅತ್ ಕಮಿಟಿ ಇದರ ಅನಿವಾಸಿ ಘಟಕವಾದ ಕುಂಭಕ್ಕೋಡ್ ಜಮಾಅತ್ ಯು.ಎ.ಇ.ಸಮೀತಿ ವಾರ್ಷಿಕ ಮಹಾಸಭೆ ಮತ್ತು ಈದ್ ಸ್ನೇಹ ಕೂಟ ಕಾರ್ಯ ಕ್ರಮವು ಈದ್ ನಮಾಝ್ ಬಳಿಕ ಶಾರ್ಜಾ ಅಲ್ ಖಾನ್ ನಲ್ಲಿರುವ ಹನೀಫ್ ಕುಂಭಕ್ಕೋಡ್ ರವರ ವಸತಿಯಲ್ಲಿ ಜರುಗಿತು.
ಇಸ್ಮಾಯೀಲ್ ಮದನಿ ಏಣಾವರ ಅಧ್ಯಕ್ಷತೆ ವಹಿಸಿದ್ದರು.ಖಾದರ್ ಸಅದಿ ಏಣಾವರ ದುಅ ನೆರೆವೆರಿಸಿ ಕಾರ್ಯ ಕ್ರಮ ಉದ್ಘಾಟಿಸಿದರು.ಕಾರ್ಯದರ್ಶಿ ಇಲ್ಯಾಸ್ ವಾರ್ಷಿಕ ವರದಿಯ ಮತ್ತು ಲೆಕ್ಕ ಪತ್ರ ಮಂಡಿಸಿದರು.ಹನೀಫ್, ರಫೀಕ್ ಕೆ.ಇ,ಆಸೀಫ್, ಆಸೀಫ್ ಎಲಿಮಲೆ, ಆಸೀಫ್ ಪುಲಿಯಡಿ, ಇರ್ಷಾದ್ ಎಸ್.ಎ, ಲತೀಫ್ ಕೆ.ಎಚ್, ಅಶ್ರಫ್ ಕೆ.ಎಚ್,ಸಾಬೀತ್ ಮುಂತಾದವರು ಉಪಸ್ಥಿತರಿದ್ದರು.ಇಲ್ಯಾಸ್ ಎಸ್.ಎ ಸ್ವಾಗತಿಸಿ ಲತೀಫ್ ಸಅದಿ ವಂದಿಸಿದರು.
29.04.2026ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆಯ ಪ್ರಕಾರ ರಾಜ್ಯದಲ್ಲಿ ತಾಪಮಾನ…
ಹೆಸರಘಟ್ಟದಲ್ಲಿ ಕಂಡುಬಂದ ಹಕ್ಕಿಜ್ವರವನ್ನು ಆರೋಗ್ಯ ಇಲಾಖೆ ಸಂಪೂರ್ಣ ನಿಯಂತ್ರಣಕ್ಕೆ ತಂದಿದೆ. ಮಾನವ ಸೋಂಕಿನ…
ಬೇಸಿಗೆಯಲ್ಲಿ ವನ್ಯಜೀವಿಗಳಿಗೆ ನೀರಿನ ಕೊರತೆಯನ್ನು ತಡೆಯಲು ಅರಣ್ಯ ಇಲಾಖೆ ಕೃತಕ ನೀರಿನ ತೊಟ್ಟಿಗಳನ್ನು…
ರಾಜ್ಯದಲ್ಲಿ ಭಾರಿ ಬಿಸಿಲು ಮುಂದುವರಿದಿದ್ದು, ಕೆಲವೆಡೆ ಗುಡುಗು ಸಹಿತ ಮಳೆಯ ಲಕ್ಷಣಗಳಿವೆ. ಏಪ್ರಿಲ್…
ಅಡಿಕೆ ಎಲೆಚುಕ್ಕೆ ರೋಗ ನಿಯಂತ್ರಣಕ್ಕೆ ಸಮೂಹ ಕ್ರಮಗಳು ಫಲ ನೀಡುತ್ತಿವೆ. ಗುತ್ತಿಗಾರಿನಲ್ಲಿ ಸಂವಾದ…
2026ರಲ್ಲಿ ಎಲ್ ನಿನೊ ಪರಿಣಾಮದಿಂದ ಭಾರತ ಸೇರಿ ಏಷ್ಯಾದಲ್ಲಿ ಕಡಿಮೆ ಮಳೆ ಮತ್ತು…