Advertisement
ಅನುಕ್ರಮ

ಹಸಿರಿನ ಪಾಠ…..

Share
ಒಂದು ಪರಿಸರಕ್ಕೆ ಸಂಬಂದಿಸಿದ ಕಾರ್ಯಕ್ರಮ. ಅಲ್ಲಿ ಎರಡು ವಿಭಾಗಗಳನ್ನು ರಚಿಸಿದ್ದರು. ಸಮಾಜದ ವಿವಿಧ ಸ್ತರಗಳಿಂದ ಆಯ್ದ ವ್ಯಕ್ತಿಗಳು ಅಲ್ಲಿ ದ್ದರು. ಎಲ್ಲರನ್ನೂ ಒಂದು ಕೋಣೆಗೆ ಸ್ವಾಗತಿಸಿ, ಮುಂದಿನ ಕಾರ್ಯಕ್ರಮಗಳನ್ನು ವಿವರಿಸಿದರು. ನಾವೊಂದು ಆಟ ಆಡೋಣ. ನಿಮ್ಮ ಮುಂದೆ ಡ್ರಾಯಿಂಗ್ ಶೀಟ್ ಇದೆ, ಹಾಗೂ  ಬಾಕ್ಸ್ ನಲ್ಲಿ ವಿವಿಧ ಬಣ್ಣದ ಪೆನ್ಸಿಲ್ ಗಳಿವೆ. ಡ್ರಾಯಿಂಗ್ ಶೀಟ್ ನ ಒಂದು ಬದಿಯಲ್ಲಿ ಪರಿಸರದ ಕುರಿತು ಚಿತ್ರ ಬರೆದು ಬಣ್ಣ ಹಾಕಿ. ಬಣ್ಣಗಳನ್ನು ಬಳಸುವಾಗ ಎಚ್ಚರಿಕೆಯಿಂದ ಬಳಸಿ , ಮುಂದಿನ ಬ್ಯಾಚ್ ಗೆ ಕೂಡ ಬಣ್ಣದ ಅಗತ್ಯವಿದೆ  . ಹಿರಿಯರು ಚಿತ್ರ ಬರೆದದ್ದೇ ಬರೆದದ್ದು. ಅವರವರ ದೃಷ್ಟಿಯಿಂದ ಸುಂದರವಾದ ಚಿತ್ರಗಳನ್ನು ರಚಿಸಿದರು. ರಚಿಸಿದ ಚಿತ್ರಗಳನ್ನು ಆಯಾ ಜಾಗದಲ್ಲೇ ಇಡುವಂತೆ  ಸೂಚಿಸಿ ಇನ್ನೊಂದು ಕೋಣೆಗೆ ಅವರನ್ನು ಕಳುಹಿಸಲಾಯಿತು.
ಮುಂದಿನ ಬ್ಯಾಚ್ ನ್ನು ಕರೆಯಲಾಯಿತು. ಪುಟ್ಟ ಪುಟ್ಟ ಮಕ್ಕಳು ಉತ್ಸಾಹದಿಂದ ‌ಬಂದರು. ಎಲ್ಲಾ ಮಕ್ಕಳಿಗೂ ಅದೇ ಡ್ರಾಯಿಂಗ್ ಶೀಟ್ ನ ಇನ್ನೊಂದು ಬದಿಯಲ್ಲಿ ಚಿತ್ರಗಳನ್ನು ರಚಿಸಲು ಹೇಳಲಾಯಿತು. ಆಮೇಲೆ ‌ಬಾಕ್ಸ್ ನಿಂದ ಬಣ್ಣಗಳನ್ನು ಬಳಸುವಂತೆ ಸೂಚಿಸಿದರು. ‌ಮಕ್ಕಳು ತಮ್ಮ ಕಲ್ಪನೆಗೆ ಬಣ್ಣ ಹಚ್ಚಿದವು. ಆದರೆ ಅಲ್ಲಿ ಉಳಿದಿದ್ದ‌ಬಣ್ಣಗಳನ್ನಷ್ಟೇ ಬಳಸುವ ಅವಕಾಶ!
ಆಮೇಲೆ ಎರಡೂ ಬ್ಯಾಚ್ ಗಳನ್ನು ಕರೆದು ಚಿತ್ರಗಳನ್ನು  ಎಲ್ಲರಿಗೂ ತೋರಿಸಲಾಯಿತು. ಮೊದಲ ಬ್ಯಾಚ್ ನ ಚಿತ್ರಗಳು ಹಸಿರಿನಿಂದ ತುಂಬಿದ್ದವು. ಕಣ್ಣು ಕುಕ್ಕುವಷ್ಟು ಹಸಿರೇ ತುಂಬಿತ್ತು. ಎರಡನೇ ಬ್ಯಾಚ್ ನ  ಚಿತ್ರಗಳನ್ನು ತೋರಿಸ ಲಾಯಿತು , ಅದರಲ್ಲೇನಿದೆ? ಮರಗಿಡಗಳೆಲ್ಲ ಕಪ್ಪು, ಕಂದು ನೆರಳೆ ಬಣ್ಣಗಳೇ ತುಂಬಿದ್ದವು. ಆ ಚಿತ್ರ ಗಳನ್ನು ನೋಡಿ ಹಿರಿಯರು ಹೀಯಾಳಿಸಿ ನಗಲಾರಂಭಿಸಿದರು. ಯಾಕೆ ನಗುತ್ತಿದ್ದೀರಾ ಎಂದು ಸಂಘಟಕರು ಕೇಳಿದಾಗ, “ಇದೂ ಒಂದು ಚಿತ್ರವಾ ?  ಪ್ರಕೃತಿ ಹೇಗಿದೆಯೆಂಬ ಕಲ್ಪನೆಯೂ ಇವರಿಗಿಲ್ಲ  ” ಎಂಬ ಉತ್ತರ ದೊರೆಯಿತು. ಹೌದು ನೀವು ಉಳಿಸಿದರಲ್ಲವೇ ಅವರು ಬಳಸುವುದು .!!!?
ಏನು ಹೇಳುತ್ತಿದ್ದಾರೆ ಎಂದು ಅರ್ಥವಾಗ ಬೇಕಾದರೆ ಸ್ವಲ್ಪ ಸಮಯ ಹಿಡಿಯಿತು. ಒಂದೇ ಡ್ರಾಯಿಂಗ್ ಶೀಟ್ ನ ಎರಡೂ ಬದಿಗಳಲ್ಲಿ ಚಿತ್ರಗಳನ್ನು ಬಿಡಿಸಲಾಗಿತ್ತು. ಒಂದೆಡೆ ಹಿರಿಯರು ಮತ್ತೊಂದು ಬದಿಯಲ್ಲಿ ಕಿರಿಯರು. ವ್ಯತ್ಯಾಸ ಒಂದೇ. ಹಸಿರಿನ ಬಣ್ಣವನ್ನು   ಹಿರಿಯರು ಜಾಸ್ತಿ ಬಳಸಿದ್ದರಿಂದ ಪೆನ್ಸಿಲ್ ನ ಸಣ್ಣ ತುಂಡುಗಳು ಉಳಿದಿತ್ತು. ಅದನ್ನಷ್ಟೇ ಬಳಸಿಕೊಳ್ಳುವ ಅವಕಾಶವಿತ್ತು. ಹಾಗಾಗಿ ಚಿತ್ರ ಗಳು  ಈ ಬಣ್ಣಗಳಲ್ಲಿವೆ.
ಈ ಸಣ್ಣ ಕಿರುಚಿತ್ರ ಪದೇ ಪದೇ ಫೇಸ್ ಬುಕ್ ನಲ್ಲಿ ಬಂದು ನನ್ನ ತಲೆ ಕೆಡಿಸುತ್ತಿತ್ತು. ಯಾರಲ್ಲಾದರು ಹಂಚಿಕೊಳ್ಳ ಬೇಕೆನಿಸಿತು.ಅಗತ್ಯಕ್ಕಿಂತ  ಹೆಚ್ಚಾಗಿ ನಾವು ಪರಿಸರದ ಉಪಯೋಗ ಮಾಡುತ್ತಿದ್ದೇವೆ. ಮುಂದಿನ ಜನಾಂಗಕ್ಕೇನೂ ಉಳಿಸದಂತೆ ಬಳಸುತ್ತಿದ್ದೇವೆ. ಹೀಗೆಯೇ ಆದರೆ  ನಾವೇನು ಉತ್ತರ ಕೊಡಲು ಸಾಧ್ಯ?
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

Published by
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

Recent Posts

ತೋಟಗಾರಿಕಾ ಬೆಳೆಗಾರರ ಪರ ಲೋಕಸಭೆಯಲ್ಲಿ ಧ್ವನಿ – ಹವಾಮಾನ ಆಧಾರಿತ ಬೆಳೆ ವಿಮೆ ಮರುಪರಿಷ್ಕರಣೆಗೆ ಕ್ಯಾ. ಚೌಟ ಒತ್ತಾಯ

ಅಡಿಕೆ, ತೆಂಗು, ಕೋಕೋ ಮತ್ತು ಸಾಂಬಾರು ಬೆಳೆಗಳಿಗೆ ಸ್ಥಳೀಯ ಹವಾಮಾನದಿಂದ ಉಂಟಾಗುವ ನೈಜ…

10 hours ago

ಅಡಿಕೆ ಅಕ್ರಮ ಆಮದು ಕಡಿವಾಣ – ರೋಸ್ಟೆಡ್ ಅಡಿಕೆಗೆ ₹351 ಕನಿಷ್ಠ ದರ – ಕಸ್ಟಮ್ಸ್‌ ನಿಗಾ ಎಂದ ಕೇಂದ್ರ

ರೋಸ್ಟೆಡ್ ಅಡಿಕೆಯ ಆಮದು ನೀತಿಯನ್ನು 2025ರ ಏಪ್ರಿಲ್‌ನಲ್ಲಿ ಬದಲಾಯಿಸಲಾಗಿದ್ದು, ಕೆ.ಜಿಗೆ ₹351 ಅಥವಾ…

19 hours ago

ತೆಂಗು ಬೆಳೆಗೆ ವಿಮೆ : ಕೇಂದ್ರದ ಮಹತ್ವದ ಉತ್ತರ

ತೆಂಗು ಬೆಳೆಯನ್ನು PMFBY ಅಥವಾ RWBCIS ಅಡಿಯಲ್ಲಿ ವಿಮಾ ವ್ಯಾಪ್ತಿಗೆ ತರುವ ಅಧಿಕಾರ…

19 hours ago

ಹವಾಮಾನ ವರದಿ | 11-08-2026 | ಕರ್ನಾಟಕದ ಹವಾಮಾನದಲ್ಲಿ ಮುಂದಿನ ದಿನಗಳಲ್ಲಿ ಏನು ಬದಲಾವಣೆ ?

ಕರಾವಳಿ ಜಿಲ್ಲೆಗಳಲ್ಲಿ ಮಳೆಯ ನಡುವೆ ಹೆಚ್ಚಿನ ಬಿಡುವಿನ ಅವಧಿಯೊಂದಿಗೆ ಬಿಸಿಲು–ಮೋಡದ ವಾತಾವರಣ ಮುಂದುವರಿಯಲಿದ್ದು,…

20 hours ago

ಬಿ.ಎಸ್‌ಸಿ. ಕೃಷಿ ನಂತರ ಏನು ? ಉದ್ಯೋಗ, ಉದ್ಯಮ ಮತ್ತು ಉನ್ನತ ಶಿಕ್ಷಣದ ಅತ್ಯುತ್ತಮ ಅವಕಾಶಗಳು ಇಲ್ಲಿವೆ

ಬಿ.ಎಸ್‌ಸಿ. ಕೃಷಿ ಪದವೀಧರರಿಗೆ ಸರ್ಕಾರಿ ಉದ್ಯೋಗ, ಖಾಸಗಿ ಕಂಪನಿಗಳು, ಬ್ಯಾಂಕಿಂಗ್, ಸಂಶೋಧನೆ ಮತ್ತು…

1 day ago

ಅಡಿಕೆ–ಕಾಳುಮೆಣಸು ಬೆಳೆ ವಿಮೆ: ರೈತರ ನೋಂದಣಿಗೆ ಆ.17 ಅಂತಿಮ ದಿನ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2026-27ನೇ ಸಾಲಿನ ಹವಾಮಾನ ಆಧಾರಿತ ಬೆಳೆವಿಮೆ ಯೋಜನೆಯಡಿ ಅಡಿಕೆ…

1 day ago