Advertisement
MIRROR FOCUS

ಕೋವಿ ಠೇವಣಾತಿ ಪ್ರಕರಣ | ಬೆಳ್ಳಾರೆ ಜಯಪ್ರಸಾದ್ ಜೋಶಿ ಹಾಗೂ ಇತರ 4 ರಿಟ್ ಅರ್ಜಿದಾರರ ಪರ ಹೈಕೋರ್ಟ್ ಆದೇಶ‌ |

Share

ಚುನಾವಣಾ ಸಮಯದಲ್ಲಿ ಪರವಾನಿಗೆ ಹೊಂದಿದ ಶಸ್ತ್ರಾಸ್ತ್ರ ಠೇವಣಿ ವಿನಾಯಿತಿ ಕೋರಿ ಸಲ್ಲಿಸಿದ ಅರ್ಜಿಯನ್ನು
ಜಿಲ್ಲಾಡಳಿತ ತಿರಸ್ಕರಿಸಿದ್ದನ್ನು ಪ್ರಶ್ನಿಸಿ ರಿಟ್ ಅರ್ಜಿ ಸಲ್ಲಿಸಿದ್ದನ್ನು ಪುರಸ್ಕರಿಸಿ ಮಾನ್ಯ ಕರ್ನಾಟಕ  ಉಚ್ಚ ನ್ಯಾಯಾಲಯವು ಅರ್ಜಿದಾರರ ಪರ ಆದೇಶ ಮಾಡಿರುತ್ತದೆ.

ಕಳೆದ ಕೆಲವು ವರ್ಷಗಳಿಂದ  ಚುನಾವಣಾ ಸಮಯದಲ್ಲಿ ಕೃಷಿಕರು ಪರವಾನಿಗೆ ಹೊಂದಿದ ಶಸ್ತ್ರಾಸ್ತ್ರ ಠೇವಣಿ ಕಡ್ಡಾಯವಾಗಿ ಠೇವಣಾತಿ ಇಡುವ ಬಗ್ಗೆ ಚರ್ಚೆ ನಡೆಯುತ್ತಲೇ ಇತ್ತು. ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಪರವಾನಿಗೆ ಹೊಂದಿರುವ ಶಸ್ತ್ರಾಸ್ತ್ರಗಳನ್ನು ಠೇವಣಿ ಇಡಲು ಈ ಬಾರಿಯ ಚುನಾವಣೆಯ ವೇಳೆಯೂ ಜಿಲ್ಲಾ ದಂಡಾಧಿಕಾರಿಗಳಿಂದ ಆದೇಶವಾಗಿತ್ತು. ಅನಿವಾರ್ಯ ಇರುವ ಪರವಾನಿಗೆದಾರರು ವಿನಾಯಿತಿ ಕೋರಿ ಅರ್ಜಿ ಸಲ್ಲಿಸಬಹುದೆಂದು ಘೋಷಿಸಲ್ಪಟ್ಟಿತ್ತು. ಆ ಪ್ರಕಾರ ದಕ್ಷಿಣ ಕನ್ನಡ ಜಿಲ್ಲೆಯ ಹಲವಾರು ಪರವಾನಿಗೆದಾರರು ಅರ್ಜಿ ಸಲ್ಲಿಸಿದ್ದರು. ಅದರಲ್ಲಿ ಬಹುತೇಕ ಅರ್ಜಿಗಳು ತಿರಸ್ಕರಿಸಲ್ಪಟ್ಟಿತ್ತು. ಈ
ನಿರಾಕರಣ ಆದೇಶ ಮತ್ತು ಪ್ರತಿ ಚುನಾವಣೆಗೆ ಠೇವಣಿ ಇಡುವ ವಿಚಾರ ಪರವಾನಿಗೆದಾರರ ಆಕ್ರೋಶಕ್ಕೆ ಗುರಿಯಾಗಿದೆ.

ಈ ನಡುವೆ ಜಿಲ್ಲಾಡಳಿತದ ಈ ನಿಲುವನ್ನು ಪ್ರಶ್ನಿಸಿ ಮೊದಲ ಹಂತದಲ್ಲಿ ರ್ನಾಟಕ  ಉಚ್ಚ ನ್ಯಾಯಾಲಯಲ್ಲಿ ಬೆಳ್ಳಾರೆಯ ಜಯಪ್ರಸಾದ್ ಜೋಶಿ, ಎಂ. ಗೋವಿಂದ ಭಟ್ ಮಾಣಿಮೂಲೆ, ಪುರುಷೋತ್ತಮ ಗೌಡ ಮಲ್ಕಜೆ, ಎಂ. ಸುದರ್ಶನ ಕುಮಾರ್, ಗಿರಿಜಾ ಶಂಕರ್ ಕೆ ಅವರ ರಿಟ್‌  ಅರ್ಜಿಗಳು ಸಲ್ಲಿಕೆಯಾಗಿತ್ತು.

ಪ್ರಥಮ ಹಂತದಲ್ಲಿ ಸಲ್ಲಿಕೆಯಾದ 5 ರಿಟ್ ಅರ್ಜಿಗಳು ನ್ಯಾಯಾಧೀಶ ಸಚಿನ್ ಶಂಕರ್ ಮುಗದಮ್
ಅವರ ನ್ಯಾಯ ಪೀಠದ ಮುಂದೆ ಬಂದಿದ್ದು ಅವುಗಳನ್ನು ಜಂಟಿಯಾಗಿ ತನಿಖೆ ನಡೆಸಿದ್ದರು. ಆಗ ಜಿಲ್ಲಾಡಳಿತ ಈ 5
ರಿಟ್ ಅರ್ಜಿಗಳ 9 ಅರ್ಜಿದಾರರುಗಳಿಗೆ ವಿನಾಯಿತಿ ನೀಡಿದ್ದಲ್ಲದೆ ಠೇವಣಿ ಇಟ್ಟ ಆಯುಧಗಳನ್ನು ಹಿಂದೆ ಕೊಡುವರೇ
ನ್ಯಾಯಾಲಯದ ಮುಂದೆ ಒಪ್ಪಿಕೊಂಡಿತ್ತು. ಸರಕಾರಿ ವಕೀಲರು ಪ್ರಕರಣದಲ್ಲಿ ಅರ್ಜಿ ಸಲ್ಲಿಸಿದವರಿಗೆ ವಿನಾಯಿತಿ ಆದೇಶ
ನೀಡಿದ ಕಾರಣ ಪ್ರಕರಣವನ್ನು ಅಷ್ಟಕ್ಕೇ ವಿಲೆವಾರಿ ಆದೇಶವಾಗುವಂತೆ ಕೋರಿದ್ದರೂ ಅರ್ಜಿದಾರರುಗಳ ವಕೀಲರುಗಳು
ಹಲವಾರು ಕಾನೂನಿನ ಅಂಶಗಳನ್ನು ಉಲ್ಲೇಖಿಸಿ ವಿನಾಯಿತಿ ನೀಡಿದ ಮಾತ್ರಕ್ಕೆ ಪ್ರಕರಣವನ್ನು ಅಂತಿಮಗೊಳಿಸಬಾರದು
ಎಂದು ವಾದ ಮಂಡಿಸಿದ್ದರು. ಇದನ್ನು ಮಾನ್ಯ ಮಾಡಿದ ನ್ಯಾಯಾಧೀಶರು ಆದೇಶಕ್ಕೆ ಕಾದಿರಿಸಿದ್ದರು.

ಆ ಪ್ರಕಾರ ಎ.25 ರಂದು ಗೌರವಾನ್ವಿತ ನ್ಯಾಯಾಧೀಶ ಸಚಿನ್ ಶಂಕರ್ ಮುಗದಮ್ ಅವರ ನ್ಯಾಯ
ಪೀಠ ಪ್ರಥಮ 5 ರಿಟ್ ಅರ್ಜಿದಾರರ ವಾದವನ್ನು ಪುರಸ್ಕರಿಸಿ ವಿಸ್ತ್ರತ ಆದೇಶ ಮಾಡಿದೆ. ಅಲ್ಲದೆ ಈ ಕುರಿತಾಗಿ
ಅನುಸರಿಸಲು ಸರಕಾರಕ್ಕೆ ನಿರ್ದಿಷ್ಟ ನಿರ್ದೇಶನಗಳನ್ನು ನೀಡಿರುತ್ತದೆ.

ಇದೇ ವೇಳೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ, ಕಡಬ, ಬಂಟ್ವಾಳ, ಬೆಳ್ತಂಗಡಿ ತಾಲೂಕುಗಳಿಂದ ನೂರಾರು ಪರವಾನಿಗೆದಾರರು ವಿವಿಧ ವಕೀಲರುಗಳ ಮೂಲಕ ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಗಳು  ನ್ಯಾಯಾಧೀಶ ನಾಗಪ್ರಸನ್ನ ಅವರ ನ್ಯಾಯ ಪೀಠದ ಮುಂದೆ ಬಂದಿದ್ದು ಹಲವು ರಿಟ್ ಅರ್ಜಿಗಳನ್ನು ಎ. 24 ರಂದು ವಿನಾಯಿತಿ ಆದೇಶದ ಹಿನ್ನಲೆಯಲ್ಲಿ ವಿಲೇವಾರಿ ಮಾಡಿದ್ದು ಇನ್ನು ಕೆಲವು ರಿಟ್ ಪಿಟಿಷನ್‍ಗಳು ಮುಂದಿನ ವಾಯಿದೆ ಮೇ 27
ಮುಂದೂಡಲ್ಪಟ್ಟಿದೆ. ಈ ಎಲ್ಲಾ ರಿಟ್ ಅರ್ಜಿಗಳ ಅಂತಿಮ ಆದೇಶದ ನಂತರ ಮುಂದಿನ ಚುನಾವಣೆಗೆ ಬಂದೂಕು ಠೇವಣಿ ಇಡಬೇಕಾದ ಬಗ್ಗೆ ಒಂದು ಚಿತ್ರಣ ಲಭಿಸಬಹುದಾಗಿದೆ.

ಜಯಪ್ರಸಾದ್ ಜೋಶಿ ಪರವಾಗಿ ಶ್ರೀಹರಿ. ಕೆ ಲೆಕ್ಸ್ ಜಸ್ಟಿಸಿಯಾ, ಪುರುಷೋತ್ತಮ ಗೌಡ ಮಲ್ಕಜೆ ಪರ  ಕೆ. ರವಿಶಂಕರ್, ಎಂ. ಸುದರ್ಶನ ಕುಮಾರ್ ಪರ ರವಿಶಂಕರ್ ಶಾಸ್ತ್ರಿ, ಎಂ. ಗೋವಿಂದ ಭಟ್ ಮಾಣಿಮೂಲೆ ಪರ  ಸುಬ್ರಹ್ಮಣ್ಯ ಭಟ್,   ಗಿರಿಜಾ ಶಂಕರ್ ಕೆ ಪರ  ಶ್ರೀಹರಿ. ಕೆ ನ್ಯಾಯವಾದಿಗಳಾಗಿ ವಾದಿಸಿದ್ದರು.

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ವರದಿ | 09.08.2026 | ಕರಾವಳಿಯಲ್ಲಿ ಭಾರಿ ಮಳೆ ಸಾಧ್ಯತೆ ಕ್ಷೀಣ; ಆಗಸ್ಟ್‌ 11ರಿಂದ ಮಲೆನಾಡಿನಲ್ಲೂ ಮಳೆ ಇಳಿಕೆ

ಕರಾವಳಿ ಜಿಲ್ಲೆಗಳಲ್ಲಿ ಸಣ್ಣ ಅವಧಿಯ ಸಾಮಾನ್ಯ ಮಳೆ ಮಾತ್ರ; ಮಲೆನಾಡಿನಲ್ಲಿ ಮಳೆ ಕಡಿಮೆಯಾಗುವ…

14 hours ago

ಕೃಷಿ ಉತ್ಪನ್ನಕ್ಕೆ ಮೌಲ್ಯವರ್ಧನೆ – ಒಡಿಶಾದಲ್ಲಿ ₹43,437 ಕೋಟಿ ಹೂಡಿಕೆ ಪ್ರಸ್ತಾವನೆ

ಆಹಾರ ಸಂಸ್ಕರಣಾ ವಲಯದಲ್ಲಿ ಒಡಿಶಾ ₹43,437 ಕೋಟಿ ಮೌಲ್ಯದ ಹೂಡಿಕೆ ಪ್ರಸ್ತಾವನೆಗಳನ್ನು ಆಕರ್ಷಿಸಿದ್ದು,…

20 hours ago

ಕರ್ನಾಟಕದ 69.60 ಲಕ್ಷ ಹೆಕ್ಟೇರ್ ಭೂಮಿ ಹಾನಿ – ಕೃಷಿ ಉತ್ಪಾದಕತೆಗೆ ದೊಡ್ಡ ಸವಾಲು

ಕರ್ನಾಟಕದಲ್ಲಿ 69.60 ಲಕ್ಷ ಹೆಕ್ಟೇರ್ ಭೂಮಿ ಭೂಸವಕಳಿ ವ್ಯಾಪ್ತಿಯಲ್ಲಿದೆ ಎಂದು ಕೇಂದ್ರ ಸರ್ಕಾರದ…

20 hours ago

ಮಂಗಳೂರಿನಲ್ಲಿ ರಾಷ್ಟ್ರೀಯ ಕಿರಿಯರ ಚೆಸ್ ಚಾಂಪಿಯನ್‌ಶಿಪ್‌ಗೆ ತೆರೆ – ಮಣಿ ಸರ್ಬರ್‌ತೋ ಚಾಂಪಿಯನ್

ಮಂಗಳೂರಿನಲ್ಲಿ ನಡೆದ ರಾಷ್ಟ್ರೀಯ 11 ವರ್ಷದೊಳಗಿನ ಮುಕ್ತ ಹಾಗೂ ಬಾಲಕಿಯರ ಚೆಸ್ ಚಾಂಪಿಯನ್‌ಶಿಪ್–2026ಕ್ಕೆ…

1 day ago

ಮ್ಯಾನ್ಮಾರ್‌ನಿಂದ ರೈಲಿನಲ್ಲಿ ಸಾಗಿಸುತ್ತಿದ್ದ 10 ಟನ್ ಅಡಿಕೆ ವಶ

ಮ್ಯಾನ್ಮಾರ್‌ನಿಂದ ಕಳ್ಳಸಾಗಣೆ ಮಾಡಲಾಗಿದ್ದ ಸುಮಾರು 10 ಟನ್ ವಿದೇಶಿ ಅಡಿಕೆಯನ್ನು ಅಸ್ಸಾಂನ ರಂಗಿಯಾ…

1 day ago

ಹವಾಮಾನ ವರದಿ | 08-08-2026 | ಕರಾವಳಿಯಲ್ಲಿ ಮಳೆ ಇಳಿಕೆ – ರಾಜ್ಯದಲ್ಲಿ ಹೇಗೆ..?

ಆಗಸ್ಟ್‌ 8ರಿಂದ ಕರಾವಳಿ ಹಾಗೂ ಮಲೆನಾಡಿನಲ್ಲಿ ಮಳೆಯ ಪ್ರಮಾಣ ಇಳಿಕೆಯಾಗುವ ಸಾಧ್ಯತೆ ಇದ್ದು,…

2 days ago