Advertisement
MIRROR FOCUS

ಕುಮಾರಪರ್ವತ ಟ್ರಕ್ಕಿಂಗ್ ಮಾಡುವವರಿಗೆ ಬೇಕು ಸರಿಯಾದ ಮಾಹಿತಿ….

Share

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಲವೇ ಕೆಲವು ಟ್ರಕ್ಕಿಂಗ್ ಜಾಗಗಳು ಇವೆ. ಇದರಲ್ಲಿ ಕುಮಾರಪರ್ವತವೂ ಒಂದು. ಆದರೆ ಕುಮಾರಪರ್ವತಕ್ಕೆ ಟ್ರಕ್ಕಿಂಗ್ ಮಾಡಲು ಮಳೆಗಾಲದ ಅವಧಿ ಸೂಕ್ತವಲ್ಲ. ಈಗಂತೂ ಭಾರೀ ಮಳೆ ಹಾಗೂ ಗುಡ್ಡ ಕುಸಿದತಂಹ ಸಂದರ್ಭಗಳು ಹೆಚ್ಚಾಗುತ್ತಿರುವ ಕಾರಣದಿಂದ ಚಾರಣಿಗರಿಗೆ ಸೂಕ್ತ ಮಾಹಿತಿ ಹಾಗೂ ಮುಂಜಾಗ್ರತಾ ಕ್ರಮಗಳ ಬಗ್ಗೆ ಹೇಳಬೇಕಿದೆ….


ಚಾರಣ, ಟ್ರಕ್ಕಿಂಗ್ ಎಂದರೆ ಯುವಕರಿಗೆ ಮಾತ್ರವಲ್ಲ ಹಲವಾರು ಮಂದಿಗೆ ಆಸಕ್ತಿ. ಯುವಕರು ಮುಂಚೂಣಿಯಲ್ಲಿದ್ದರೆ ವಯಸ್ಕರೂ ಆಸಕ್ತಿಯಿಂದ ಭಾಗವಹಿಸುತ್ತಾರೆ. ಏಕೆಂದರೆ ಚಾರಣ ನೀಡುವ ಖುಷಿ ಅಂತಹದ್ದು. ಪರಿಸರದ ನಡುವೆ ಓಡಾಡುತ್ತಾ ಸುಂದರ ದೃಶ್ಯಗಳು ಮನಸ್ಸಿಗೆ ಆಹ್ಲಾದ ನೀಡುತ್ತದೆ.  ರಾಜ್ಯದ ಹಲವು ಕಡೆ ಟ್ರಕ್ಕಿಂಗ್ ಸ್ಫಾಟ್ ಇದೆ. ಇಲ್ಲಿ ಹಸಿರಿನಿಂದ ಕೂಡಿದ ಕಾಡು-ಮೇಡು, ನದಿ, ಝರಿ, ಗುಡ್ಡ ,ಪರ್ವತ, ಕಣಿವೆ, ಶಿಖರಗಳು ಸೆಳೆಯುತ್ತವೆ.  ಕೆಲವು ಜನರು ಟ್ರಕ್ಕಿಂಗ್ ಅನ್ನು ಒಂದು ಹವ್ಯಾಸವಾಗಿ ರೂಢಿಸಿಕೊಂಡು ಆಗಾಗ್ಗೆ ಕಾಡು ಮೇಡು ಅಲೆಯುತ್ತಿರುತಾರೆ. ಹೀಗಾಗಿ ಚಾರಣ ಮಾಡುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಈ ಸಂದರ್ಭದಲ್ಲಿ ಸ್ಥಳೀಯವಾಗಿ ಮಾಹಿತಿ ಇಲ್ಲದೆ ಅಲೆದಾಟ ಮಾಡಬೇಕಾದ ಸ್ಥಿತಿ ಬರುತ್ತದೆ. ಇದಕ್ಕಾಗಿ ಸೂಕ್ತ ಮಾಹಿತಿ ಅಗತ್ಯವಾಗಿದೆ.

ಅನುಮತಿ ಪಡೆದೇ ಚಾರಣ ಮಾಡಬೇಕು. ಅದಕ್ಕೆ ಒಂದಷ್ಟು ಸಿದ್ದತೆ ಮುಖ್ಯ. ನಡೆಯುವ ಅಭ್ಯಾಸ ಇಲ್ಲದಿರುವವರು ಚಾರಣಕ್ಕೆ ಹೋಗುವ ಮುನ್ನ ನಡೆಯುವ ಅಭ್ಯಾಸ ಇಟ್ಟುಕೊಂಡರೆ ಚಾರಣ ಮಾಡುವುದಕ್ಕೆ ಅನುಕೂಲ. ಟ್ರಕ್ಕಿಂಗ್ ಬ್ಯಾಗ್, ಷೂ, ವಾಟರ್ ಬಾಟಲ್ ,ಟಾರ್ಚ್, ಟಿ ಷರ್ಟ್ ಬರ್ಮುಡ ಚಡ್ಡಿ , ಕ್ಯಾಪ್ ಬೇಕಾದ ಸಾಮಾಗ್ರಿಗಳು ರಾತ್ರಿ ಟೆಂಟ್ ವ್ಯವಸ್ಥೆ ಇದ್ದರೆ ಅದಕ್ಕೆ ಒಂದಷ್ಟು ವಸ್ತುಗಳು ಬೇಕು.ಟ್ರಕ್ಕಿಂಗ್ ಗೈಡ್ ಪೂರ್ವ ಸಿದ್ಧತೆ ಬಗ್ಗೆ ತಿಳಿಸುತ್ತಾರೆ. ಇದರ ಜೊತೆಗೆ ಅತೀ ಮುಖ್ಯವಾಗಿ ಟ್ರಕ್ಕಿಂಕ್ ವೇಳೆ ದಾರಿ ತಪ್ಪಿದರೆ ಹೇಗೆ ವಾಪಾಸ್ ನಗರಕ್ಕೆ ಬರಬೇಕು ಎಂಬುದೂ ಟ್ರಕ್ಕಿಂಗ್ ಮಾಡುವವರಿಗೆ ತಿಳಿದಿರಬೇಕಾದ್ದು ಅಗತ್ಯ.

( ಆನ್ ಲೈನ್ ಮಾಹಿತಿಗಳು )

ಕುಮಾರಪರ್ವತದ ಚಾರಣ ಮಾಡಿದ ಮಂದಿಗೂ ಆದದ್ದು ಇದೇ ಸಮಸ್ಯೆ. ಟ್ರಕ್ಕಿಂಗ್ ಮಾಡಿದ ಖುಷಿಗಿಂತಲೂ ಜೊತೆಗಾರ ನಾಪತ್ತೆಯಾದ್ದೇ ದೊಡ್ಡ ತಲೆನೋವಾಯಿತು. ಕೊನೆಗೆ ಸುರಕ್ಷಿತವಾಗಿ ನಾಡು ಸೇರಿದಾಗ ಖುಷಿಯೂ ಆಗಿತ್ತು. ಕುಮಾರಪರ್ವತ ಚಾರಣ ಈ ಸಮಯದಲ್ಲಿ  ಅಷ್ಟೊಂದು ಸೂಕ್ತವಲ್ಲ. ಮಳೆ ಜೋರಾದ ಸಂದರ್ಭ ಗಿರಿಗದ್ದೆ ನಂತರದ ಪ್ರದೇಶದಲ್ಲಿ ಸರಿಯಾದ ದಾರಿಗಳು ಸಿಗುವುದು ಕಷ್ಟ. ಕಾಡು ಬೆಳೆದಿರುತ್ತದೆ, ಹಾವುಗಳಿಂದ ತೊಡಗಿ ಕೀಟಗಳು ಹೆಚ್ಚಾಗಿ ಇರುತ್ತದೆ. ಇನ್ನೊಂದು ಪ್ರಮುಖವಾದ ಅಂಶವೆಂದರೆ ಈಗ ಭಾರೀ ಮಳೆಯ ಕಾರಣದಿಂದ ಗುಡ್ಡ ಕುಸಿತದಂತಹ ಘಟನೆಗಳು ನಡೆಯುತ್ತಿರುತ್ತದೆ. ಹೀಗಾಗಿ ಸುರಕ್ಷತೆಯ ಕಾರಣದಿಂದ ನವೆಂಬರ್ ನಂತರವೇ ಕುಮಾರಪರ್ವತ ಚಾರಣ ಸೂಕ್ತವಾಗಿದೆ. ಗಿರಿಗದ್ದೆಯವರೆಗೆ ಯಾವುದೇ ಸಮಸ್ಯೆ ಇಲ್ಲ. ಆ ನಂತರದ ದಾರಿ ಕ್ಲಿಷ್ಟವಾಗಿದೆ.

ಕೆಲವು ಸಂಸ್ಥೆಗಳೂ ಕುಮಾರಪರ್ವತ ಟ್ರಕ್ಕಿಂಗ್ ಆಯೋಜನೆ ಮಾಡುತ್ತವೆ. ಅವುಗಳು ಜೂನ್ ತಿಂಗಳಿನಿಂದ ಸೆಪ್ಟಂಬರ್ ವರೆಗೆ ಸೂಕ್ತ ಸಮಯ ಎಂದು ಹೇಳುತ್ತವೆ. ಹೀಗಾಗಿ ಇದನ್ನೇ ನಂಬಿ ಕೆಲವು ತಾವೇ ತಂಡ ಮಾಡಿಕೊಂಡು ಇದೇ ಸಮಯದಲ್ಲಿ ಬಂದು ಸಿಕ್ಕಿಹಾಕಿಕೊಳ್ಳುತ್ತಾರೆ. ಮೊನ್ನೆ ಕುಮಾರಪರ್ವತ ಚಾರಣ ಮಾಡಿರುವ ಮಂದಿ ಯಾವುದೇ ಅಡ್ಡಿ ಇಲ್ಲದೆ ಚಾರಣ ಮಾಡಿ ಬಂದಿದ್ದಾರೆ. ಆದರೆ ಗಿರಿಗದ್ದೆ ಬಳಿಕ ಬೆಟ್ಟ ಇಳಿಯುವ ಸಂದರ್ಭ ಭಾರೀ ಮಳೆ ಸುರಿಯಿತು. ಹೀಗಾಗಿ  ಜಾಕೆಟ್ ಬದಲಾವಣೆ ಮಾಡುವ ವೇಳೆ ಸ್ವಲ್ಪ ಹಿಂದೆಯಾದ ಯುವಕ ದಾರಿಯಲ್ಲಿ ಬರುವಾಗ ಎರಡು ದಾರಿ ಕಂಡಿತು. ಒಂದು ಚೆನ್ನಾದ ದಾರಿಯಾಗಿತ್ತು ಇನ್ನೊಂದು ಸವೆಯದ ದಾರಿ ಇತ್ತು. ಯುವಕ ಸವೆದ ದಾರಿಯಲ್ಲಿ ಬಂದಾಗ ಮರಬಿದ್ದಿತ್ತು ಎಂದು ಹಿಂದೆ ಹೋಗಿ ಮತ್ತೊಂದು ದಾರಿಯಲ್ಲಿ ಹೋದಾಗ ದಾರಿ ತಪ್ಪಿ ಬೇರೆ ಕಡೆಗೆ ಇಳಿಯಬೇಕಾಯಿತು. ಬಂಡೆಕಲ್ಲುಗಳ ಮೇಲೆ ರಾತ್ರಿ ಕಳೆದು ನೀರಿನ ಮೂಲ ಹಿಡಿದು ಅದೇ ದಾರಿಯಲ್ಲಿ ಬಂದು ಸುಬ್ರಹ್ಮಣ್ಯ ತಲಪಿದ. ಆಹಾರದ ಬದಲಿಗೆ ನೀರು ಕುಡಿಯಲು ಸಾಧ್ಯವಾಯಿತು. ಇಲ್ಲಿ ಮಳೆಯ ಕಾರಣದಿಂದ ದಾರಿ ತಪ್ಪಲು ಕಾರಣವಾಯಿತು. ಈ ಕಾರಣದಿಂದ ಮುಂದೆ ಚಾರಣಿಗರಿಗೆ ಕುಮಾರಪರ್ವತ ಏರಲು ಸೂಕ್ತ ಸಮಯ ಯಾವುದು ಎಂಬುದರ ಬಗ್ಗೆ ಮಾಹಿತಿ ನೀಡಿದರೆ ಉತ್ತಮವಾಗಿರುತ್ತದೆ. ಸಂಕಷ್ಟಗಳು, ಆತಂಕಗಗಳು ದೂರವಾಗುತ್ತವೆ.

 

 

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಬಿ.ಎಸ್‌ಸಿ. ಕೃಷಿ ನಂತರ ಏನು ? ಉದ್ಯೋಗ, ಉದ್ಯಮ ಮತ್ತು ಉನ್ನತ ಶಿಕ್ಷಣದ ಅತ್ಯುತ್ತಮ ಅವಕಾಶಗಳು ಇಲ್ಲಿವೆ

ಬಿ.ಎಸ್‌ಸಿ. ಕೃಷಿ ಪದವೀಧರರಿಗೆ ಸರ್ಕಾರಿ ಉದ್ಯೋಗ, ಖಾಸಗಿ ಕಂಪನಿಗಳು, ಬ್ಯಾಂಕಿಂಗ್, ಸಂಶೋಧನೆ ಮತ್ತು…

8 hours ago

ಅಡಿಕೆ–ಕಾಳುಮೆಣಸು ಬೆಳೆ ವಿಮೆ: ರೈತರ ನೋಂದಣಿಗೆ ಆ.17 ಅಂತಿಮ ದಿನ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2026-27ನೇ ಸಾಲಿನ ಹವಾಮಾನ ಆಧಾರಿತ ಬೆಳೆವಿಮೆ ಯೋಜನೆಯಡಿ ಅಡಿಕೆ…

8 hours ago

ಹವಾಮಾನ ವರದಿ | 10.08.2026 | ಕರ್ನಾಟಕದಲ್ಲಿ ಬಿಟ್ಟು ಬಿಟ್ಟು ಸಾಮಾನ್ಯ ಮಳೆ; ಆಗಸ್ಟ್‌ 12ರಂದು ಕರಾವಳಿಯಲ್ಲಿ ಮಳೆ ಹೆಚ್ಚಳ ಸಾಧ್ಯತೆ

ಮಧ್ಯಪ್ರದೇಶದಲ್ಲಿ ಹೊಸ ತಿರುವಿಕೆ ಪರಿಣಾಮ: ಕರಾವಳಿ, ಮಲೆನಾಡಿನಲ್ಲಿ ಮಳೆ ಚುರುಕು ಸಾಧ್ಯತೆ ಕರ್ನಾಟಕದ…

24 hours ago

ಕಡಿಮೆ ನೀರು, ಕಡಿಮೆ ಗೊಬ್ಬರ… ಹೆಚ್ಚು ಇಳುವರಿ – ಕೃಷಿಯಲ್ಲಿ ಹೊಸ ಕ್ರಾಂತಿ

ಕಡಿಮೆ ಸಂಪನ್ಮೂಲ ಬಳಸಿ ಹೆಚ್ಚು ಉತ್ಪಾದನೆ ಪಡೆಯಲು ಸ್ಮಾರ್ಟ್ ಸಂಪನ್ಮೂಲ ನಿರ್ವಹಣೆ ಅಗತ್ಯವಾಗಿದೆ.…

1 day ago

ಬರದತ್ತ ಇಂಗ್ಲೆಂಡ್‌ – ಆಹಾರ ಕೊರತೆ, ಕಾಡ್ಗಿಚ್ಚಿನ ಎಚ್ಚರಿಕೆ – ಕೃಷಿಗೆ ಭಾರಿ ಹೊಡೆತ – ರೈತರಿಗೆ ₹4,400 ಕೋಟಿ ನಷ್ಟದ ಅಂದಾಜು

ತೀವ್ರ ಬರ ಮತ್ತು ಉಷ್ಣಾಂಶದಿಂದ ಇಂಗ್ಲೆಂಡ್‌ನಲ್ಲಿ ಕೃಷಿ ಉತ್ಪಾದನೆ ಕುಸಿದಿದ್ದು, ಆಹಾರ ಕೊರತೆ…

1 day ago

ಹವಾಮಾನ ವರದಿ | 09.08.2026 | ಕರಾವಳಿಯಲ್ಲಿ ಭಾರಿ ಮಳೆ ಸಾಧ್ಯತೆ ಕ್ಷೀಣ; ಆಗಸ್ಟ್‌ 11ರಿಂದ ಮಲೆನಾಡಿನಲ್ಲೂ ಮಳೆ ಇಳಿಕೆ

ಕರಾವಳಿ ಜಿಲ್ಲೆಗಳಲ್ಲಿ ಸಣ್ಣ ಅವಧಿಯ ಸಾಮಾನ್ಯ ಮಳೆ ಮಾತ್ರ; ಮಲೆನಾಡಿನಲ್ಲಿ ಮಳೆ ಕಡಿಮೆಯಾಗುವ…

2 days ago