ನಾವು 2017 ರ ಜುಲೈ ತಿಂಗಳಲ್ಲಿ ಕಾಶ್ಮೀರದ ಶ್ರೀನಗರದಲ್ಲಿ ಒಂದು ವಾರ ಇದ್ದೆವು.ಅಲ್ಲಿನ ಜನಜೀವನದಲ್ಲಿ ಸ್ಥಳೀಯರು ಭಯದಿಂದ ವಾಸಿಸುತ್ತಿದ್ದರು ಮತ್ತು ಸದ್ಯ ನಡೆಯುತ್ತಿದ್ದ ಭಯೋತ್ಪಾದಕತೆಯ ಚಲನವಲನಗಳಿಂದ ಆಗಿರುವ ನಷ್ಟಗಳನ್ನು ಹೇಳಿಕೊಳ್ಳುತ್ತಿದ್ದರು.ಮುಖ್ಯವಾಗಿ ಕಾಶ್ಮೀರವನ್ನು ಭಾರತದ ಭಾಗವೆಂದು ಹೊರರಾಜ್ಯದವರು ಪರಿಗಣಿಸಿದ್ದರು.ಅಲ್ಲಿ ವಾಸಿಸುತ್ತಿದ್ದ ಯುವಕರಿಗೆ ಆ ಭಾವನೆಇರಲಿಲ್ಲ, ಆದರೆ, ಅಲ್ಲಿನ ಬಹುತೇಕ ಮಂದಿಗೆ ಇದರಿಂದ ಲಾಭವೇನು ಇರಲಿಲ್ಲ. ದೇಶ-ವಿದೇಶದಿಂದ ಬರುವ ಪ್ರವಾಸಿಗರ ಸಂಖ್ಯೆಕಡಿಮೆ ಆಗಿತ್ತು.ಅವರು ನಿರುದ್ಯೋಗದಿಂದ ಆರ್ಥಿಕ ಸಮಸ್ಯೆಯನ್ನು ಎದುರಿಸುತ್ತಿದ್ದರು.
ಇಂದು ಕೇಂದ್ರ ಸರ್ಕಾರದ ತೀರ್ಮಾನದಿಂದ ಅನಿಶ್ಚಿತತೆಯಿಂದಿರುವ ರಾಜ್ಯಕ್ಕೆ ಸ್ಪಷ್ಟ ನಿಲುವು ಸಿಕ್ಕಿದೆ. ಯಾವುದೇ ಕಾರಣಕ್ಕೂ ಕಾಶ್ಮೀರ ಭಾರತದ ಅಂಗವೆಂದು ಇದ್ದಧೋರಣೆಗೆ ಸಂವಿಧಾನತ್ಮಕವಾದ ನಿಲುವು ಮತ್ತು ದೃಢವಾದ ಮುದ್ರೆ ಬಿದ್ದಿದೆ.ಇನ್ನು ಮುಂದಾದರೂ ಕಣಿವೆ ರಾಜ್ಯಗಳಲ್ಲಿ ಭಾರತೀಯತೆ ಹೆಚ್ಚಲಿ ಮತ್ತು ಹಿಂಸೆ ನಿಲ್ಲಲಿ. ಇದುವರೆಗೆ ಬಲಿದಾನವಾದ ಭಾರತೀಯ ಸೈನಿಕರಆತ್ಮಕ್ಕೆ ಶಾಂತಿ ಸಿಗಲೆಂದು ಹಾರೈಸುತ್ತೇನೆ.
– ಡಾ.ಡಿ.ವೀರೇಂದ್ರ ಹೆಗ್ಗಡೆಯವರು
ಧರ್ಮಸ್ಥಳ
ಜೂನ್ನಲ್ಲಿ ಶೇ.29ರಷ್ಟು ಮಳೆ ಕೊರತೆ ಎದುರಿಸಿದ್ದ ಬೆಳಗಾವಿ ಜಿಲ್ಲೆಯಲ್ಲಿ ಜುಲೈನಲ್ಲಿ ಉತ್ತಮ ಮಳೆಯಾಗಿದ್ದು,…
ಕೇಂದ್ರ ಸರ್ಕಾರದಿಂದ ಉಚಿತ ಎಲೆಕ್ಟ್ರಿಕ್ ಸ್ಟೌ ವಿತರಣೆ ಎಂಬ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ…
ಸರ್ಕಾರಿ ಶಾಲೆಗಳಲ್ಲಿ ಬಾಕಿ ಇರುವ ಮಕ್ಕಳಿಗೆ ಆಗಸ್ಟ್ 28ರೊಳಗೆ ಶೂ ಮತ್ತು ಸಾಕ್ಸ್…
ರಾಜ್ಯಾದ್ಯಂತ ಪಿಜಿ, ಹಾಸ್ಟೆಲ್, ಕ್ಯಾಟರಿಂಗ್ ಹಾಗೂ ಹೋಟೆಲ್ಗಳಲ್ಲಿ ಆಹಾರ ಸುರಕ್ಷತಾ ತಪಾಸಣೆ ಮುಂದುವರಿಯಲಿದೆ…
ಉತ್ತರ ಪ್ರದೇಶದಲ್ಲಿ ಸುಮಾರು 10 ಸಾವಿರ ‘ಗೋ ಮಿತ್ರ’ರಿಗೆ ತರಬೇತಿ ನೀಡಿ ಗೋ…
ದಕ್ಷಿಣ ಕನ್ನಡದಲ್ಲಿ ಕಾಡಾನೆಗಳ ಹಾವಳಿ ಕೃಷಿಕರ ಜೀವ ಮತ್ತು ಕೃಷಿಭೂಮಿಗೆ ಗಂಭೀರ ಅಪಾಯವಾಗುತ್ತಿರುವ…