Advertisement
ಸುದ್ದಿಗಳು

ಕೇರಳದ ಪ್ರಸಿದ್ಧ ಕಣ್ ಸನ್ನೆ ನಟಿ ಪ್ರಿಯಾ ವಾರಿಯರ್ ಕೊಡಗಿನ ನಿಸರ್ಗಧಾಮಕ್ಕೆ ಭೇಟಿ

Share

ಮಡಿಕೇರಿ : ಕಣ್ ಸನ್ನೆಯ ವೀಡಿಯೋ ವೈರಲ್ ಆಗಿ ದೇಶದ ಎಲ್ಲೆಡೆ ಪ್ರಸಿದ್ಧವಾದ ಕೇರಳದ ಯುವನಟಿ ಪ್ರಿಯಾ ವಾರಿಯರ್ ಕೊಡಗಿನ ನಿಸರ್ಗಧಾಮಕ್ಕೆ ಭೇಟಿ ನೀಡಿದರು.

ನೆರೆಪ್ರವಾಹದ ಗುಂಗಿನಿಂದ ಪ್ರವಾಸಿಗರನ್ನು ಹೊರತರಲು ಕುಶಾಲನಗರದ ನಿಸರ್ಗಧಾಮ ಟೂರಿಸ್ಟ್ ಸೆಂಟರ್ ನವರು ಎನ್.ಟಿ.ಸಿ ಗೆ ಭೇಟಿ ನೀಡಲೆಂದು ಆಹ್ವಾನಿಸಿದ ಹಿನ್ನಲೆ ನಿಸರ್ಗಧಾಮ ಟೂರಿಸ್ಟ್ ಸೆಂಟರ್ ಗೆ ಭೇಟಿ ಕೊಟ್ಟ ಪ್ರಿಯಾ ವಾರಿಯರ್, ಕೊಡಗಿನ ಜನತೆ ಒಗ್ಗಟ್ಟಿನಿಂದ ಇರಬೇಕು. ಕೊಡಗಿನ ಜನತೆ ಸತತ ಎರಡನೇ ಭಾರಿ ಪ್ರವಾಹವನ್ನು ಎದಿರಿಸುತ್ತಿದ್ದು, ಒಬ್ಬರನ್ನೊಬ್ಬರು ಅರ್ಥೈಸಿಕೊಂಡು ಸಹಾಯ ಮಾಡುವುದರ ಮೂಲಕ ಒಗ್ಗಟ್ಟಿನಿಂದಿರಬೇಕು ಎಂದರು.

ಕೊಡಗಿಗೆ ಮೂರನೇ ಭಾರಿ ಭೇಟಿ ಮಾಡುತ್ತಿರುವ ಅವರು, ಕೊಡಗಿನಲ್ಲಿ ರಮಣೀಯವಾದ ಹಾಗೂ ಅದ್ಭುತವಾದ ಪ್ರವಾಸಿ ತಾಣಗಳಿವೆ. ಪ್ರವಾಹದ ಗುಂಗಿನಲ್ಲಿರುವ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಕೊಡಗಿಗೆ ಆಗಮಿಸಿ ಇಲ್ಲಿನ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಎಂದರು. ಕೊಡಗಿನ ಜನತೆ ಪ್ರವಾಸಿಗರೊಂದಿಗೆ ಸೌಜನ್ಯದಿಂದ ವರ್ತಿಸುತ್ತಿರುವುದು ತುಂಬಾ ಸಂತೋಷವಾಗುತ್ತಿದೆ. “ವಿಸಿಟ್ ಟು ಸೇಫ್ ಆಂಡ್ ಪೀಸ್ ಕೂರ್ಗ್” ಎಂದು ಪ್ರಿಯಾ ವಾರಿಯರ್ ಪ್ರವಾಸಿಗರಿಗೆ ಕರೆ ನೀಡಿದರು.

ಮುಂದೆ ಬಿಡುಗಡೆಯಾಗಲಿರುವ ಚಿತ್ರದ ಬಗ್ಗೆ ಮಾತನಾಡಿದ ಅವರು, ಹಿಂದಿ, ತೆಲುಗು, ಹಾಗು ಕನ್ನಡ ಚಿತ್ರರಂಗದಲ್ಲಿ ಸಿನಿಮಾ ಮಾಡುತ್ತಲಿದ್ದೇನೆ. ‘ಅಡಾರ್ ಲವ್’ ಮಲಯಾಳಂ ಚಿತ್ರಕ್ಕೆ ನೀಡಿದ ಬೆಂಬಲವನ್ನು ನನ್ನ ಮುಂದಿನ ಸಿನಿಮಾಗಳಿಗೂ ನೀಡುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದೇನೆ ಎಂದರು.
ಈ ಸಂದರ್ಭ ಪ್ರಿಯಾ ವಾರಿಯರ್ ಅಭಿಮಾನಿಗಳು ನಟಿಯೊಡನೆ ಸೆಲ್ಫಿ ತೆಗೆದುಕೊಂಡು ಆನಂದಿಸಿದರು. ಅಭಿಮಾನಿಗಳ ಒತ್ತಾಯದ ಮೇರೆಗೆ ಮತ್ತೊಮ್ಮೆ ಕಣ್ ಸನ್ನೆಯನ್ನು ಮಾಡಿ ಸಾರ್ವಜನಿಕರಿಗೆ ಮನೋರಂಜನೆ ನೀಡಿದರು.
ನಿಸರ್ಗಧಾಮ ಟೂರಿಸ್ಟ್ ಸೆಂಟರ್ ನ ಸ್ಪೈಸಸ್ ಮಳಿಗೆ, ಬಟ್ಟೆ ಮಳಿಗೆ, ಹಾಗೂ ಫ್ಯಾನ್ಸಿ ಮಳಿಗೆಗಳಿಗೆ ಭೇಟಿ ಶಾಪಿಂಗ್ ಮಾಡಿದರು.ಈ ಸಂದರ್ಭ ಪ್ರಿಯಾ ವಾರಿಯರ್ ಸ್ನೇಹಿತರು ಇದ್ದರು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ತಾಳೆ ಎಣ್ಣೆ ಕಾರ್ಖಾನೆಗಳ ತ್ಯಾಜ್ಯವೇ ದೊಡ್ಡ ಶಕ್ತಿಮೂಲ

ಇಂಡೋನೇಷ್ಯಾದ ತಾಳೆ ಎಣ್ಣೆ ಕಾರ್ಖಾನೆಗಳ ತ್ಯಾಜ್ಯದಿಂದ ವರ್ಷಕ್ಕೆ 3.6 ಬಿಲಿಯನ್ ಘನ ಮೀಟರ್…

15 hours ago

ಎಲ್ ನಿನೋ ಆತಂಕದ ನಡುವೆಯೂ ಖಾರಿಫ್ ಬಿತ್ತನೆ 1,000 ಲಕ್ಷ ಹೆಕ್ಟೇರ್ ದಾಟಿದೆ

ಎಲ್ ನಿನೋ ಆತಂಕದ ನಡುವೆಯೂ ಭಾರತದಲ್ಲಿ 2026ರ ಖಾರಿಫ್ ಬಿತ್ತನೆ 1,000 ಲಕ್ಷ…

17 hours ago

ಹವಾಮಾನ ವರದಿ | 19-08-2026 | ಕರ್ನಾಟಕದಲ್ಲಿ ಮಳೆ ಎಲ್ಲೆಲ್ಲಿ? ಮುಂಗಾರು ಏಕೆ ದುರ್ಬಲವಾಗಿದೆ?

ಕರಾವಳಿ ಕರ್ನಾಟಕದಲ್ಲಿ ಮುಂದಿನ 10 ದಿನಗಳವರೆಗೆ ಬಿಸಿಲು–ಮೋಡದೊಂದಿಗೆ ಅಲ್ಲಲ್ಲಿ ಮಳೆ ಮುಂದುವರಿಯುವ ಸಾಧ್ಯತೆ…

22 hours ago

ತುಮಕೂರಿನಲ್ಲಿ ಭರ್ಜರಿ ಕೈಗಾರಿಕಾ ಹಬ್ – ₹7,000 ಕೋಟಿ ಹೂಡಿಕೆ, 88 ಸಾವಿರ ಉದ್ಯೋಗದ ಗುರಿ

ತುಮಕೂರು ಕೈಗಾರಿಕಾ ನೋಡ್‌ಗೆ 1,736 ಎಕರೆ ಮೀಸಲು. ₹7,000 ಕೋಟಿ ಹೂಡಿಕೆ, 88…

1 day ago

ಮಂಗಳೂರಿನಲ್ಲಿ ಉದ್ಯೋಗಾವಕಾಶ : ಆ.20 ಮತ್ತು 21ರಂದು ವಿವಿಧ ಹುದ್ದೆಗಳಿಗೆ ನೇರ ಸಂದರ್ಶನ

ಮಂಗಳೂರು ಮತ್ತು ಬೆಂಗಳೂರಿನಲ್ಲಿ ವಿವಿಧ ಕಂಪೆನಿಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗಾಗಿ ಆ.20…

1 day ago

ಹವಾಮಾನ ವರದಿ | 18-08-2026 | ಕರಾವಳಿಯಲ್ಲಿ ಮುಂದಿನ 10 ದಿನ ಮಳೆ ಸಾಧ್ಯತೆ – ಮಲೆನಾಡಿನಲ್ಲಿ ಆಗಸ್ಟ್ 21 ರಿಂದ ಇಳಿಕೆ

ಕರಾವಳಿ ಕರ್ನಾಟಕದಲ್ಲಿ ಮುಂದಿನ 10 ದಿನಗಳವರೆಗೂ ಮೋಡ–ಮಳೆಯ ವಾತಾವರಣ ಮುಂದುವರಿಯುವ ಸಾಧ್ಯತೆ ಇದೆ.…

2 days ago