ಅನುಕ್ರಮ

ಕೈಬರಹವೆಂದರೆ ಬರಿಯ ಅಕ್ಷರವಲ್ಲ…..!

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail
ಮಕ್ಕಳು ಬರೆಯಲು ಸುರು ಮಾಡಿದರೆ  ನಮಗೇನೋ ಖುಷಿ. ಆರಂಭದಲ್ಲೇ ಸುಂದರವಾಗಿ ಬರೆಯ ಬೇಕೆಂದು ಎಲ್ಲರೂ ಬಯಸುತ್ತಾರೆ. ಶಾಲೆ ಶುರುವಾಗಿ ಒಂದೆರಡು ತರಗತಿಗಳು ಪ್ರಾರಂಭವಾಗುತ್ತಿದ್ದಂತೆ ಪುಟಗಟ್ಟಲೆ ಹೋಮ್ ವರ್ಕ್ ಗಳು.  ಇನ್ನೂ ಪೆನ್ಸಿಲ್ ಸರಿಯಾಗಿ ಹಿಡಿಯಲು ಬಾರದ ಕೈಯಲ್ಲಿ ಏನು ತಾನೇ ಬರೆದೀತು? ಮಗುವಿಗೆ ಪೆಟ್ಟು ಸಿಕ್ಕಬಾರದಲ್ಲಾ ಎಂದು ಅಪ್ಪ ಅಮ್ಮ ನೇ ಎಷ್ಟೋ ಬಾರಿ ಮಗುವಿನ ಹೋಮ್ ವರ್ಕ್ಸ್‌ಗಳನ್ನು ಮುಗಿಸಿ ಬಿಟ್ಟು ನಿಟ್ಟುಸಿರು ಬಿಡುತ್ತಾರೆ.  ಮಕ್ಕಳು ಸುಲಭವಾಗಿ ಬರೆದು ಬಿಡುತ್ತಾರಲ್ಲ ಅಂತ ಟೀಚರ್ ಮತ್ತೂ ಜಾಸ್ತಿ ಕೊಡುತ್ತಾರೆ!!!!!
ಕೈ ಬರಹಗಳು ಸುಂದರವಾಗಿಲ್ಲವಾದರೆ ಹಿರಿಯರು ನಗುವುದುಂಟು ಕೋಪಿ ಸರಿಯಾಗಿ ಬರೆಸಲಿಲ್ಲ ಅನ್ನಿಸ್ತದೆ   ಯಾರು ಕನ್ನಡ ಪಾಠ  ಮಾಡಿದ್ದು‌ ನಿನಗೆ  , ಈಗಲೂ ಕಾಲ ಮಿಂಚಿಲ್ಲ , ಕೋಪಿ ಬರಿ ಅಕ್ಷರ ಚೆನ್ನಾಗಿ ಆಗುತ್ತದೆ ಎಂದು ಕಿವಿ ಹಿಂಡಿಸಿಕೊಂಡ ಅನುಭವ ನನಗಿದೆ!
ಸುಂದರವಾದ  ಕೈ ಬರಹ ಒಂದು ಅಮೂಲ್ಯವಾದ ಆಸ್ತಿಯೇ ಸರಿ. ಬರವಣಿಗೆ  ನಮ್ಮಲ್ಲಿ ಒಂದು ರೀತಿಯ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಯಾವುದೇ ಕೆಲಸಕ್ಕೂ ಮುನ್ನುಗ್ಗಲು ಧೈರ್ಯವಿರುತ್ತದೆ. ಅದರಲ್ಲೂ ಕೈಬರಹ ಸುಂದರವಾಗಿದ್ದರಂತೂ ಸ್ವಲ್ಪ ಹೆಚ್ಚೇ ಮಹತ್ವ. ಇದರ  ಪ್ರಾಮುಖ್ಯತೆ ಪರೀಕ್ಷಾ ಸಂದರ್ಭಗಳಲ್ಲಿ ಮಾತ್ರವಲ್ಲದೆ ಅಟೋಗ್ರಾಫ್  ಪ್ಲೀಸ್ ಎನ್ನುವಲ್ಲಿಗೂ ಅನ್ವಯಿಸುತ್ತದೆ. ಆಕರ್ಷಕ ವಾಗಿ ಬರೆಯುವವರ ಬಳಿ ಎಲ್ಲರೂ ಪುಸ್ತಕಗಳನ್ನು ರಾಶಿ ಹಾಕುವವರೇ.  ಸ್ವಲ್ಪ ‌ಚೆನ್ನಾಗಿ ಚಿತ್ರವನ್ನೂ ‌ಬರೆಯ ಬಲ್ಲರಾದರೆ ಕೇಳುವುದೇ ಬೇಡ.  ಪರೀಕ್ಷೆಗೆ  ತಯಾರಾಗುವುದೋ ಅಟೋಗ್ರಾಪ್ ಬರೆಯಲೋ ಎಂದು ತಲೆ ಕೆರೆದು ಕೊಳ್ಳುವ ಪರಿಸ್ಥಿತಿ. ಯಾರೋ ತಲೆಹರಟೆ ಮಾಡಿದರು ಅಂತ ನಮ್ಮ ಇಡಿ ತರಗತಿಯ ಮಕ್ಕಳ ಅಟೋಗ್ರಾಪ್ ಹೆಡ್ ಮಾಸ್ತರ ಟೇಬಲ್ ನಲ್ಲಿ ಪರೀಕ್ಷೆಗಳು ಮುಗಿಯುವವರೆ  ಪ್ರತಿಷ್ಠಿತ ವಾಗಿತ್ತು.  ರಿಸಲ್ಟ್ ಬಂದ ಮೇಲೆ ನಮ್ಮ ನಮ್ಮ ಕೈ ಸೇರಿದ್ದು. ಈಗ  ಎಲ್ಲರೂ ಹತ್ತಿರವೇ  ಅಂದಿನ ನೆನೆಪಿನ ಹೊತ್ತಗೆಗಳ ಜಾಗದಲ್ಲಿ ಮುಖವಾಣಿ ಬಂದು ಕುಳಿತಿದೆ. ಬೇಕೊ ಬೇಡವೋ ಎಲ್ಲರೂ ಲಭ್ಯರು.
ಯಾವುದೇ ವಿಷಯವನ್ನು ಸ್ಪಷ್ಟವಾಗಿ ಇನ್ನೊಬ್ಬರಿಗೆ ಅರ್ಥವಾಗುವಂತೆ ಬರೆಯು ವುದೂ ಒಂದು ಕಲೆ.  ಅಕ್ಷರ ಕೆಲವೊಂದು ಬಾರಿ ಚೆನ್ನಾಗಿ ಇರದಿದ್ದರೂ ಓದುಗರಿಗೆ ತಿಳಿಯುವಂತೆ ಬರೆಯಬಲ್ಲರು. ಶಬ್ದಗಳ ನಡುವೆ ಅಗತ್ಯವಾದ ಅಂತರವನ್ನು ನಿಭಾಯಿಸಲು ಸಮರ್ಥರಾದರೆ , ಬರಹಗಳು ಸುಂದರವಾಗಿಲ್ಲವಾದರೂ ಓದುವಂತಿರುತ್ತದೆ.
ಕೈಬರಹಗಳು ನಮ್ಮ ಮನಸ್ಥಿತಿ ಗೆ ಹಿಡಿದ ಕನ್ನಡಿಯಂತೆ. ಬರೆಯುವ ಶೈಲಿಯಿಂದಲೇ ಜನರ ಮನೋಧರ್ಮವನ್ನು ಅರಿಯುವ ಸಾಮರ್ಥ್ಯ ಹೊಂದಿರುವವರಿರುತ್ತಾರೆ. ಇಂದು  ಅಧ್ಯಯನ ಕ್ಷೇತ್ರದಲ್ಲಿ ಬೇಡಿಕೆಯಲ್ಲಿರುವ ಶಾಖೆಯಾಗಿದೆ. ಬರಹ ಬರಹಕ್ಕೇ ಸೀಮಿತ ವಾಗಿರದೆ ಮನಸನು ಪ್ರತಿಬಿಂಬಿಸುವ ಕನ್ನಡಿಯಾಗಿದೆ.
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

Published by
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

Recent Posts

ಹೊಸರುಚಿ | ಹಲಸಿನ ಹಣ್ಣಿನ ಬಜ್ಜಿ

ಹಲಸಿನ ಹಣ್ಣಿನ ಬಜ್ಜಿಗೆ ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನ :  ಹಲಸಿನ…

2 hours ago

ಎತ್ತಿನಹೊಳೆ ಯೋಜನೆಯಡಿ ವಿವಿಧ ಜಿಲ್ಲೆಗಳಿಗೆ ನೀರು ತುಂಬಿಸುವ ಚಿಂತನೆ

ಎತ್ತಿನಹೊಳೆ ಯೋಜನೆಯಡಿ ಮೊದಲು ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಕೆರೆಗಳನ್ನು…

2 hours ago

ದೇಶದ ಉತ್ಪನ್ನಗಳನ್ನು ಬಳಸಲು ರೈತರ ಸಂಕಲ್ಪ

ದೇಶದ ರೈತರ ಹಿತಕ್ಕೆ ಧಕ್ಕೆಯಾಗುವ ಯಾವುದೇ ಒಪ್ಪಂದಗಳನ್ನು ಭಾರತ ಮಾಡಿಕೊಳ್ಳುವುದಿಲ್ಲ ಎಂದು ಕೃಷಿ…

2 hours ago

ಹವಾಮಾನ ವರದಿ | 15-08-2025 | ಸದ್ಯ ಸಾಮಾನ್ಯ ಮಳೆ, ಆ.20 ರ ನಂತರ ಮಳೆ ಕಡಿಮೆ

ಬಂಗಾಳಕೊಲ್ಲಿಯ ಆಂದ್ರಾ, ಒಡಿಶಾ ಕರಾವಳಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತವು ಆಗಸ್ಟ್ 18,19 ರಂದು…

23 hours ago

ಗ್ರಾಮೀಣ ಆರ್ಥಿಕತೆಯ “ಸಹಕಾರಿ” ಸಂಘದ “ಮಾದರಿ” ಗುಟ್ಟು…!

ಗ್ರಾಮೀಣ ಮಟ್ಟದ ಆರ್ಥಿಕ‌ ಸಹಕಾರ ಸಂಘಗಳ ಪ್ರಮುಖ ಚಟುವಟಿಕೆ ಎಂದರೆ ಸದಸ್ಯರಿಂದ ಠೇವಣಾತಿ…

1 day ago

ಶೀಘ್ರದಲ್ಲೇ ಜಿಲ್ಲಾ, ತಾಲೂಕು ಪಂಚಾಯತಿಗಳಿಗೆ ಚುನಾವಣೆ

ಶೀಘ್ರದಲ್ಲೇ ಜಿಲ್ಲಾ ಪಂಚಾಯತ್ ಹಾಗೂ ತಾಲ್ಲೂಕು ಪಂಚಾಯತಿಗಳಿಗೆ ಚುನಾವಣೆ ನಡೆಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ…

1 day ago