ಸುಳ್ಯ: ಕೊರೊನಾ ವೈರಸ್ ಸೋಂಕಾದ ವ್ಯಕ್ತಿಗಳು ಹಾಗೂ ಕ್ವಾಂರೇಂಟೈನ್ ನಲ್ಲಿರುವ ಮಂದಿ ಹಾಗೂ ಅವರ ಕುಟುಂಬದ ಮಂದಿ ಸಹಜವಾಗಿಯೇ ಮಾನಸಿಕವಾಗಿ ನೊಂದಿರುತ್ತಾರೆ. ಇಂತಹವರಿಗೆ ಆನ್ ಲೈನ್ ಮೂಲಕ ನೆರವಾಗಲು, ಆಪ್ತಸಮಾಲೋಚನೆ ಮಾಡಲು ತಂಡ ಸಿದ್ಧವಾಗಿದೆ. ಬೆಂಗಳೂರಿನಲ್ಲಿ ಸೋಚರ ಸಂಸ್ಥೆಯ ಮೂಲಕ ರಚನೆಯಾಗಿರುವ ಕೌನ್ಸಿಲಿಂಗ್ ತಂಡವನ್ನು ಸುಳ್ಯದ ಅಕ್ಷರ ದಾಮ್ಲೆ ನಿರ್ವಹಿಸುತ್ತಿದ್ದು, ಸೋಚರ ಸಂಸ್ಥೆ ವ್ಯವಸ್ಥೆ ಮಾಡುತ್ತಿದೆ. ಎಲ್ಲಾ ವೈದ್ಯರು, ಆಪ್ತ ಸಮಾಲೋಚಕರು ಉಚಿತವಾಗಿ ಈಗ ಬಿಡುವು ಮಾಡಿಕೊಂಡು ಸಾರ್ವಜನಿಕ ಸೇವೆ ನಡೆಸುತ್ತಿದ್ದಾರೆ.
ಸೋಚರ ಎಂಬ ಸಂಸ್ಥೆ ಸುಮಾರು 30 ವರ್ಷಗಳಿಂದ ಸಾಮಾಜಿಕ ಸ್ವಾಸ್ಥ್ಯ ಹಾಗೂ ಸಾರ್ವಜನಿಕ ಆರೋಗ್ಯದ ಬಗ್ಗೆ ಕೆಲಸ ಮಾಡುತ್ತಿದೆ. ಇದೀಗ ಈ ಸಂಸ್ತೆ ಸಾರ್ವಜನಿಕ ಕಾಳಜಿಯಿಂದ ಕೊರೊನಾ ಭಯ ನಿವಾರಣೆ ಮಾಡಲು ಹಾಗೂ ಈ ವೈರಸ್ ಸೋಂಕಾಗಿರುವ ವ್ಯಕ್ತಿಗಳ, ಕುಟುಂಬದೊಂದಿಗೆ ಆಪ್ತ ಸಮನಾಲೋಚನೆ ನಡೆಸಿ ಧೈರ್ಯ ತುಂಬುವ ಕಾರ್ಯವನ್ನು ಅನ್ ಲೈನ್ ಮೂಲಕ ಮಾಡುತ್ತಿದೆ. ಇದಕ್ಕೆ ಸುಳ್ಯದ ಅಕ್ಷರ ದಾಮ್ಲೆ ಅವರನ್ನು ಸಂಪರ್ಕಿಸಿ ಅವರ ನೇತೃತ್ವದಲ್ಲಿ ಇದೀಗ ಸಮಾಲೋಚನಾ ಚಟುವಟಿಕೆ ಆರಂಭಿಸಲಾಗಿದೆ.
ಇದೀಗ 3 ವಿಭಾಗದಲ್ಲಿ ಕೆಲಸ ಮಾಡಲಾಗುತ್ತದೆ, ಕೋವಿಡ್-19 ಸೋಂಕಿಗೆ ಒಳಗಾದವರು , ಕೋವಿಡ್-19 ಕ್ವಾರಂಟೇನ್ ನಲ್ಲಿ ಇರುವವರು ಹಾಗೂ ಕುಟುಂಬದ ಸದಸ್ಯರಿಗೆ ಹಾಗೂ ಪ್ರತ್ಯೇಕವಾಗಿ ಹೀಗೆ 3 ವಿಭಾಗದಲ್ಲಿ ಆಪ್ತಸಮಾಲೋಚನೆ ನಡೆಸಲಾಗುತ್ತಿದೆ.
ಯಾವುದೇ ರೀತಿಯ ಸಹಾಯ ಬೇಕಿದ್ದರೆ, ಮಾಹಿತಿ ಬೇಕಿದ್ದರೆ ಈ ಕೆಳಗಿನ ಸಂಪರ್ಕದ ಸಂಖ್ಯೆಗೆ ಕರೆ ಮಾಡಬಹುದು.
ಗುಟ್ಕಾ–ಪಾನ್ಮಸಾಲಾ ನಿಷೇಧದ ಪರಿಣಾಮ ಅಡಿಕೆ ಮಾರುಕಟ್ಟೆಯ ಮೇಲೆ ಬಿದ್ದರೆ ಅದನ್ನು ಎದುರಿಸಲು ಸರ್ಕಾರ…
ಕರ್ನಾಟಕದ ಕರಾವಳಿ, ಮಲೆನಾಡು ಹಾಗೂ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲೂ ಮಳೆ…
ಎಲ್ ನಿನೊದ ಸಂಭಾವ್ಯ ಪರಿಣಾಮಗಳ ಹಿನ್ನೆಲೆಯಲ್ಲಿ ದೇಶದ ಹವಾಮಾನ, ಮುಂಗಾರು ಮತ್ತು ಕೃಷಿ…
ಇತರರ ಮನೆಯ ಸಮಸ್ಯೆ ನಮಗೆ ಕುತೂಹಲದ ಸುದ್ದಿಯಾಗಬಹುದು. ಆದರೆ ಆ ಮನೆಯವರಿಗೆ ಅದು…
ಕೈಗಾರಿಕಾ ಕೋಳಿ ಸಾಕಾಣಿಕೆ ಆಹಾರ ವಿಷಬಾಧೆಗೆ ಕಾರಣವಾಗುವ ಕ್ಯಾಂಪಿಲೋಬ್ಯಾಕ್ಟರ್ ಬ್ಯಾಕ್ಟೀರಿಯಾದ ಹರಡುವಿಕೆಯನ್ನು ವೇಗಗೊಳಿಸುತ್ತಿದೆ…
ದೇಶದ 651 ಕೃಷಿ ಜಿಲ್ಲೆಗಳ ಹವಾಮಾನ ಅಪಾಯ ಮೌಲ್ಯಮಾಪನದಲ್ಲಿ 310 ಜಿಲ್ಲೆಗಳು ದುರ್ಬಲವೆಂದು…