ಸುಳ್ಯ: ಕೊರೊನಾ ವೈರಸ್ ಸೋಂಕಾದ ವ್ಯಕ್ತಿಗಳು ಹಾಗೂ ಕ್ವಾಂರೇಂಟೈನ್ ನಲ್ಲಿರುವ ಮಂದಿ ಹಾಗೂ ಅವರ ಕುಟುಂಬದ ಮಂದಿ ಸಹಜವಾಗಿಯೇ ಮಾನಸಿಕವಾಗಿ ನೊಂದಿರುತ್ತಾರೆ. ಇಂತಹವರಿಗೆ ಆನ್ ಲೈನ್ ಮೂಲಕ ನೆರವಾಗಲು, ಆಪ್ತಸಮಾಲೋಚನೆ ಮಾಡಲು ತಂಡ ಸಿದ್ಧವಾಗಿದೆ. ಬೆಂಗಳೂರಿನಲ್ಲಿ ಸೋಚರ ಸಂಸ್ಥೆಯ ಮೂಲಕ ರಚನೆಯಾಗಿರುವ ಕೌನ್ಸಿಲಿಂಗ್ ತಂಡವನ್ನು ಸುಳ್ಯದ ಅಕ್ಷರ ದಾಮ್ಲೆ ನಿರ್ವಹಿಸುತ್ತಿದ್ದು, ಸೋಚರ ಸಂಸ್ಥೆ ವ್ಯವಸ್ಥೆ ಮಾಡುತ್ತಿದೆ. ಎಲ್ಲಾ ವೈದ್ಯರು, ಆಪ್ತ ಸಮಾಲೋಚಕರು ಉಚಿತವಾಗಿ ಈಗ ಬಿಡುವು ಮಾಡಿಕೊಂಡು ಸಾರ್ವಜನಿಕ ಸೇವೆ ನಡೆಸುತ್ತಿದ್ದಾರೆ.
ಸೋಚರ ಎಂಬ ಸಂಸ್ಥೆ ಸುಮಾರು 30 ವರ್ಷಗಳಿಂದ ಸಾಮಾಜಿಕ ಸ್ವಾಸ್ಥ್ಯ ಹಾಗೂ ಸಾರ್ವಜನಿಕ ಆರೋಗ್ಯದ ಬಗ್ಗೆ ಕೆಲಸ ಮಾಡುತ್ತಿದೆ. ಇದೀಗ ಈ ಸಂಸ್ತೆ ಸಾರ್ವಜನಿಕ ಕಾಳಜಿಯಿಂದ ಕೊರೊನಾ ಭಯ ನಿವಾರಣೆ ಮಾಡಲು ಹಾಗೂ ಈ ವೈರಸ್ ಸೋಂಕಾಗಿರುವ ವ್ಯಕ್ತಿಗಳ, ಕುಟುಂಬದೊಂದಿಗೆ ಆಪ್ತ ಸಮನಾಲೋಚನೆ ನಡೆಸಿ ಧೈರ್ಯ ತುಂಬುವ ಕಾರ್ಯವನ್ನು ಅನ್ ಲೈನ್ ಮೂಲಕ ಮಾಡುತ್ತಿದೆ. ಇದಕ್ಕೆ ಸುಳ್ಯದ ಅಕ್ಷರ ದಾಮ್ಲೆ ಅವರನ್ನು ಸಂಪರ್ಕಿಸಿ ಅವರ ನೇತೃತ್ವದಲ್ಲಿ ಇದೀಗ ಸಮಾಲೋಚನಾ ಚಟುವಟಿಕೆ ಆರಂಭಿಸಲಾಗಿದೆ.
ಇದೀಗ 3 ವಿಭಾಗದಲ್ಲಿ ಕೆಲಸ ಮಾಡಲಾಗುತ್ತದೆ, ಕೋವಿಡ್-19 ಸೋಂಕಿಗೆ ಒಳಗಾದವರು , ಕೋವಿಡ್-19 ಕ್ವಾರಂಟೇನ್ ನಲ್ಲಿ ಇರುವವರು ಹಾಗೂ ಕುಟುಂಬದ ಸದಸ್ಯರಿಗೆ ಹಾಗೂ ಪ್ರತ್ಯೇಕವಾಗಿ ಹೀಗೆ 3 ವಿಭಾಗದಲ್ಲಿ ಆಪ್ತಸಮಾಲೋಚನೆ ನಡೆಸಲಾಗುತ್ತಿದೆ.
ಯಾವುದೇ ರೀತಿಯ ಸಹಾಯ ಬೇಕಿದ್ದರೆ, ಮಾಹಿತಿ ಬೇಕಿದ್ದರೆ ಈ ಕೆಳಗಿನ ಸಂಪರ್ಕದ ಸಂಖ್ಯೆಗೆ ಕರೆ ಮಾಡಬಹುದು.
ಮುಂಗಾರು ಮಳೆ ಕೊರತೆ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ₹28.52 ಕೋಟಿ ವೆಚ್ಚದ 60 ದಿನಗಳ…
ಬಿಹಾರದ ಯುರೆನ್ನಲ್ಲಿ ಪತ್ತೆಯಾದ 5 ಲಕ್ಷಕ್ಕೂ ಹೆಚ್ಚು ಸುಟ್ಟ ಬೀಜಗಳ ಅಧ್ಯಯನವು ಭಾರತದ…
ಶ್ರೀಕೃಷ್ಣನನ್ನು ಕೇವಲ ದೇವರ ಅವತಾರವಾಗಿ ನೋಡುವುದಕ್ಕಿಂತ, ಮನುಷ್ಯರ ನಡುವೆ ನಿಂತು ಉಪದೇಶಿಸಿದ ಮಾನವಶಿಕ್ಷಕನಾಗಿಯೂ…
ಮುಂಗಾರು ದುರ್ಬಲಗೊಂಡಿದ್ದರೂ ಸ್ಥಳೀಯ ಮೋಡಗಳ ಬೆಳವಣಿಗೆಯಿಂದ ಮಲೆನಾಡು ಹಾಗೂ ಒಳನಾಡಿನಲ್ಲಿ ಗುಡುಗು ಸಹಿತ…
2024ರಲ್ಲಿ ಭಾರತದಲ್ಲಿ ರೈತರು ಮತ್ತು ಕೃಷಿ ಕಾರ್ಮಿಕರು ಸೇರಿ 10,546 ಮಂದಿ ಆತ್ಮಹತ್ಯೆಯಿಂದ…
ಕರ್ನಾಟಕದಲ್ಲಿ ಈಗಾಗಲೇ 13,500 ಶಿಕ್ಷಕರ ನೇಮಕಾತಿ ನಡೆದಿದ್ದು, ಶಿಕ್ಷಣ ಇಲಾಖೆಯಲ್ಲಿ ಇನ್ನೂ 16…