ಸುದ್ದಿಗಳು

ಕೊರೊನಾ ಲಾಕ್ಡೌನ್ | ಹೇರ್ ಕಟ್ಟಿಂಗ್ ಮಾಡಿಸಲಾಗದೆ ತಡಕಾಡುವ ಜನ | ಈಗ ಫೇಮಸ್ಸಾಗುತ್ತಿದೆ ಕೊರೊನಾ ಕಟ್ಟಿಂಗ್ |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಸುಳ್ಯ: ಕೊರೊನಾ ಲಾಕ್ಡೌನ್ ಇನ್ನೂ ಮುಂದುವರಿದಿದೆ. ಮೇ.3 ರವೆರೆಗೆ ಕೊರೊನಾ ಲಾಕ್ಡೌನ್ ಕಾರಣದಿಂದ ಅಗತ್ಯ ವಸ್ತುಗಳ ಸೇವೆ ಹೊರತುಪಡಿಸಿ ಇತರ ಅಂಗಡಿಗಳು ತೆರೆಯುವಂತಿಲ್ಲ. ಹೀಗಾಗಿ ಸೆಲೂನ್ ಅಂಗಡಿಗಳೂ ಬಂದ್. ಈ ಕಾರಣದಿಂದ ಜನರು ಹೇರ್ ಕಟ್ಟಿಂಗ್ ಮಾಡಿಸಲಾಗದೆ ತಡಕಾಡುತ್ತಿದ್ದಾರೆ. ಅನೇಕರು ತಾವೇ ಸ್ವತ: ಹೇರ್ ಕಟ್ಟಿಂಗ್ ಮಾಡಿಸಿ ಕೊರೊನಾ ಕಟ್ಟಿಂಗ್ ಎಂದು ಹೇಳಿಕೊಳ್ಳುತ್ತಿದ್ದಾರೆ. ಈ ನಡುವೆಯೂ ಸುಳ್ಯ ಸೇರಿದಂತೆ ಕೆಲವು ಕಡೆ ಬೆಳ್ಳಂಬೆಳಗ್ಗೆ ಕೆಲವು ಪ್ರಮುಖ ಅಂಗಡಿಗಳು ಅರ್ಧ ಬಾಗಿಲು ತೆರೆದು ಕೆಲವೇ ವ್ಯಕ್ತಿಗಳ ಹೇರ್ ಕಟ್ಟಿಂಗ್ ಗೆ ಅವಕಾಶ  ನೀಡುತ್ತಿದೆ ಎಂಬ ಮಾಹಿತಿ  ಇದೆ. ಇಂತಹ ಅವಕಾಶಗಳು ಗ್ರಾಮೀಣ ಭಾಗದವರೆಗೂ ಸಿಗಲಿ ಎಂದೂ ಒತ್ತಾಯ ಕೇಳಿಬಂದಿದೆ.

Advertisement
Advertisement

ಕೊರೊನಾ ವೈರಸ್ ಹರಡುವುದನ್ನು  ತಡೆಯಲು ಬ್ಯೂಟಿ ಪಾರ್ಲರ್, ಮೆನ್ಸ್ ಪಾರ್ಲರ್ ಸೇರಿದಂತೆ ಸೆಲೂನ್ ಗಳು ಬಂದ್ ಆಗಿದ್ದವು. ಇದ್ದಕ್ಕಿದ್ದಂತೆ ಬಂದ್ ಆದ ಪರಿಣಾಮ ಹೇರ್ ಕಟ್ಟಿಂಗ್ ಮಾಡಿಸಲಾಗದೇ ಉಳಿದವರು  ತಲೆ ಕೆಡಿಸಿಕೊಂಡಿದ್ದಾರೆ. ಇದೇ ಕಾರಣದಿಂದ ಹಲವರಿಗೆ ಶೀತ-ತಲೆನೋವು ಕಂಡುಬಂದು ಸ್ವತ: ಹೇರ್ ಕಟ್ಟಿಂಗ್ ಗೆ ಮುಂದಾದರು. ಇದಕ್ಕೆ ಕೊರೊನಾ ಕಟ್ಟಿಂಗ್ ಎಂದೂ ಹೆಸರಿಟ್ಟಿದ್ದಾರೆ. ಅಗತ್ಯ ಸೇವೆ ಇದು ಎಂದು ಮುಂಜಾಗ್ರತಾ ಕ್ರಮಗಳೊಂದಿಗೆ ಅವಕಾಶ ನೀಡಬೇಕು ಎಂಬ ಒತ್ತಾಯ ಜನರು ಮಾಡಿದರೆ,  ವೃತ್ತಿಯವರಿಗೆ ಮುಂದಿನ ರಶ್ ಕಡಿಮೆ ಮಾಡಲು ಈಗಲೂ ಮುಂಜಾಗ್ರತಾ ಕ್ರಮಗಳೊಂದಿಗೆ ಅವಕಾಶ ನೀಡಬೇಕು ಎಂಬ ಒತ್ತಾಯ ಇದೆ. ಈ ನಡುವೆ ಕೆಲವು ಕಡೆ ಬೆಳಗ್ಗೆ ಅಂಗಡಿಗಳು ಅರ್ಧ ಬಾಗಿಲಿನಿಂದ ಕೆಲಸ ಮಾಡುತ್ತವೆ ಎಂದೂ ಹೇಳಲಾಗುತ್ತದೆ. ಹೀಗಾಗಿ ಅವಕಾಶ ಇದ್ದರೆ ಎಲ್ಲಾ ಕಡೆಯೂ ಅವಕಾಶ ಸಿಗಬೇಕು ಎಂಬುದು ಇನ್ನೊಂದು ಒತ್ತಾಯ.

ಒಟ್ಟಿನಲ್ಲಿ ಕೊರೊನಾ ವೈರಸ್ ಈಗ ಹೇರ್ ಕಟ್ಟಿಂಗ್ ಗೂ ಸಂಕಷ್ಟ ತಂದಿಟ್ಟಿದೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಸುಲಭವಾಗಿ ಉದ್ಧಾರವಾಗಬೇಕಾದರೆ ಇವುಗಳನ್ನು ಬಿಡಬೇಕು ಎಂದಿದೆ ಭಗವದ್ಗೀತೆ…!

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

2 hours ago

ಬೆಳೆ ವಿಮೆಗೆ ನೋಂದಾಯಿಸಲು ರೈತರಿಗೆ ಕೃಷಿ ಇಲಾಖೆ ಸೂಚನೆ | ಭತ್ತ ಬೆಳೆಯುವವರಿಗೆ ವಿಶೇಷ ಗಮನ |

2025-26ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ…

10 hours ago

ದೇಸೀ ಗೋವು ಸಾಕಾಣಿಕೆಗೆ ಹಳ್ಳಿಯಷ್ಟೇ ಅಲ್ಲ, ನಗರದಲ್ಲೂ ಸಾಧ್ಯ

ದೇಸೀ ಗೋತಳಿ ಸಂರಕ್ಷಣೆಗೆ ಗ್ರಾಮೀಣ ಪ್ರದೇಶ, ಹಳ್ಳಿಯಷ್ಟೇ ಅಲ್ಲ, ನಗರದಲ್ಲೂ ಸಾಧ್ಯವಿದೆ. ದನ…

20 hours ago

ದುಡಿಯುವ ವರ್ಗದಲ್ಲಿ ಮಹಿಳೆಯರ ಸಹಭಾಗಿತ್ವಕ್ಕೆ ಆದ್ಯತೆ | ಮಹಿಳಾ ನೇತೃತ್ವದ ಅಭಿವೃದ್ಧಿಗೆ ಮುನ್ನುಡಿ

ದುಡಿಯುವ ವರ್ಗದಲ್ಲಿ ಮಹಿಳೆಯರ ಸಹಭಾಗಿತ್ವ ಹೆಚ್ಚಿಸುವುದು ಕೇಂದ್ರ ಸರ್ಕಾರದ ಆದ್ಯತೆಯಾಗಿದ್ದು, ಮಹಿಳಾ ನೇತೃತ್ವದ…

21 hours ago

ಹಾವೇರಿ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗೆ ಅಗತ್ಯವಿರುವ ರಸಗೊಬ್ಬರಕ್ಕೆ ಬೇಡಿಕೆ ಹೆಚ್ಚಳ

ಹಾವೇರಿ ಜಿಲ್ಲೆಯಲ್ಲಿ ಮುಂಗಾರು ಪೂರ್ವ ಹಾಗೂ ಮುಂಗಾರು ಮಳೆ ಉತ್ತಮ ರೀತಿಯಲ್ಲಿ ಸುರಿಯುತ್ತಿದ್ದು,…

21 hours ago