Advertisement
ಸುದ್ದಿಗಳು

ಕೊರೊನಾ ಲಾಕ್ಡೌನ್ | ಹೇರ್ ಕಟ್ಟಿಂಗ್ ಮಾಡಿಸಲಾಗದೆ ತಡಕಾಡುವ ಜನ | ಈಗ ಫೇಮಸ್ಸಾಗುತ್ತಿದೆ ಕೊರೊನಾ ಕಟ್ಟಿಂಗ್ |

Share

ಸುಳ್ಯ: ಕೊರೊನಾ ಲಾಕ್ಡೌನ್ ಇನ್ನೂ ಮುಂದುವರಿದಿದೆ. ಮೇ.3 ರವೆರೆಗೆ ಕೊರೊನಾ ಲಾಕ್ಡೌನ್ ಕಾರಣದಿಂದ ಅಗತ್ಯ ವಸ್ತುಗಳ ಸೇವೆ ಹೊರತುಪಡಿಸಿ ಇತರ ಅಂಗಡಿಗಳು ತೆರೆಯುವಂತಿಲ್ಲ. ಹೀಗಾಗಿ ಸೆಲೂನ್ ಅಂಗಡಿಗಳೂ ಬಂದ್. ಈ ಕಾರಣದಿಂದ ಜನರು ಹೇರ್ ಕಟ್ಟಿಂಗ್ ಮಾಡಿಸಲಾಗದೆ ತಡಕಾಡುತ್ತಿದ್ದಾರೆ. ಅನೇಕರು ತಾವೇ ಸ್ವತ: ಹೇರ್ ಕಟ್ಟಿಂಗ್ ಮಾಡಿಸಿ ಕೊರೊನಾ ಕಟ್ಟಿಂಗ್ ಎಂದು ಹೇಳಿಕೊಳ್ಳುತ್ತಿದ್ದಾರೆ. ಈ ನಡುವೆಯೂ ಸುಳ್ಯ ಸೇರಿದಂತೆ ಕೆಲವು ಕಡೆ ಬೆಳ್ಳಂಬೆಳಗ್ಗೆ ಕೆಲವು ಪ್ರಮುಖ ಅಂಗಡಿಗಳು ಅರ್ಧ ಬಾಗಿಲು ತೆರೆದು ಕೆಲವೇ ವ್ಯಕ್ತಿಗಳ ಹೇರ್ ಕಟ್ಟಿಂಗ್ ಗೆ ಅವಕಾಶ  ನೀಡುತ್ತಿದೆ ಎಂಬ ಮಾಹಿತಿ  ಇದೆ. ಇಂತಹ ಅವಕಾಶಗಳು ಗ್ರಾಮೀಣ ಭಾಗದವರೆಗೂ ಸಿಗಲಿ ಎಂದೂ ಒತ್ತಾಯ ಕೇಳಿಬಂದಿದೆ.

ಕೊರೊನಾ ವೈರಸ್ ಹರಡುವುದನ್ನು  ತಡೆಯಲು ಬ್ಯೂಟಿ ಪಾರ್ಲರ್, ಮೆನ್ಸ್ ಪಾರ್ಲರ್ ಸೇರಿದಂತೆ ಸೆಲೂನ್ ಗಳು ಬಂದ್ ಆಗಿದ್ದವು. ಇದ್ದಕ್ಕಿದ್ದಂತೆ ಬಂದ್ ಆದ ಪರಿಣಾಮ ಹೇರ್ ಕಟ್ಟಿಂಗ್ ಮಾಡಿಸಲಾಗದೇ ಉಳಿದವರು  ತಲೆ ಕೆಡಿಸಿಕೊಂಡಿದ್ದಾರೆ. ಇದೇ ಕಾರಣದಿಂದ ಹಲವರಿಗೆ ಶೀತ-ತಲೆನೋವು ಕಂಡುಬಂದು ಸ್ವತ: ಹೇರ್ ಕಟ್ಟಿಂಗ್ ಗೆ ಮುಂದಾದರು. ಇದಕ್ಕೆ ಕೊರೊನಾ ಕಟ್ಟಿಂಗ್ ಎಂದೂ ಹೆಸರಿಟ್ಟಿದ್ದಾರೆ. ಅಗತ್ಯ ಸೇವೆ ಇದು ಎಂದು ಮುಂಜಾಗ್ರತಾ ಕ್ರಮಗಳೊಂದಿಗೆ ಅವಕಾಶ ನೀಡಬೇಕು ಎಂಬ ಒತ್ತಾಯ ಜನರು ಮಾಡಿದರೆ,  ವೃತ್ತಿಯವರಿಗೆ ಮುಂದಿನ ರಶ್ ಕಡಿಮೆ ಮಾಡಲು ಈಗಲೂ ಮುಂಜಾಗ್ರತಾ ಕ್ರಮಗಳೊಂದಿಗೆ ಅವಕಾಶ ನೀಡಬೇಕು ಎಂಬ ಒತ್ತಾಯ ಇದೆ. ಈ ನಡುವೆ ಕೆಲವು ಕಡೆ ಬೆಳಗ್ಗೆ ಅಂಗಡಿಗಳು ಅರ್ಧ ಬಾಗಿಲಿನಿಂದ ಕೆಲಸ ಮಾಡುತ್ತವೆ ಎಂದೂ ಹೇಳಲಾಗುತ್ತದೆ. ಹೀಗಾಗಿ ಅವಕಾಶ ಇದ್ದರೆ ಎಲ್ಲಾ ಕಡೆಯೂ ಅವಕಾಶ ಸಿಗಬೇಕು ಎಂಬುದು ಇನ್ನೊಂದು ಒತ್ತಾಯ.

ಒಟ್ಟಿನಲ್ಲಿ ಕೊರೊನಾ ವೈರಸ್ ಈಗ ಹೇರ್ ಕಟ್ಟಿಂಗ್ ಗೂ ಸಂಕಷ್ಟ ತಂದಿಟ್ಟಿದೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಸೌದೆ ಬೇಡಿಕೆ ಏರಿಕೆ ಹಿನ್ನೆಲೆ | ಅಕ್ರಮ ಮರ ಕಡಿತಲೆ ತಡೆಯಲು ಸಚಿವ ಈಶ್ವರ ಖಂಡ್ರೆ ಕಟ್ಟುನಿಟ್ಟಿನ ಸೂಚನೆ

ಸೌದೆ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆ ಅಕ್ರಮ ಮರ ಕಡಿತಲೆ ತಡೆಯಲು ಸಚಿವ ಈಶ್ವರ…

8 hours ago

ಕೃಷಿ ಗುರಿ ಕೇವಲ ‘ಆಹಾರ ಭದ್ರತೆ’ ಅಲ್ಲ, ಅದನ್ನೂ ಮೀರಿದ ಕೃಷಿ ಚಿಂತನೆ ಅಗತ್ಯ

ಕೃಷಿಯ ಮೂಲಕ ಕೇವಲ ಆಹಾರ ಉತ್ಪಾದನೆ ಹೆಚ್ಚಿಸುವುದಕ್ಕಿಂತ ಸಮಾನ ವಿತರಣೆ, ಪರಿಸರ ಸಂರಕ್ಷಣೆ…

8 hours ago

ಪಶ್ಚಿಮ ಏಷ್ಯಾ ಯುದ್ಧದ ಪರಿಣಾಮ | ಭಾರತೀಯ ಟಯರ್ ಉದ್ಯಮಕ್ಕೆ ತುರ್ತು ನೆರವಿನ ಬೇಡಿಕೆ

ಪಶ್ಚಿಮ ಏಷ್ಯಾ ಯುದ್ಧದ ಪರಿಣಾಮದಿಂದ ಭಾರತೀಯ ಟೈರ್ ಉದ್ಯಮಕ್ಕೆ ರಫ್ತು ಮತ್ತು ವೆಚ್ಚದ…

9 hours ago

ಗೃಹ ಬಳಕೆ ಗ್ಯಾಸ್ ಕೊರತೆ ಇಲ್ಲ : ವದಂತಿಗಳಿಗೆ ಕಿವಿಗೊಡಬೇಡಿ — ಸಮಸ್ಯೆ ಇದ್ದರೆ ಈ ಸಹಾಯವಾಣಿ ಸಂಪರ್ಕಿಸಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗೃಹ ಬಳಕೆ ಗ್ಯಾಸ್ ಸಿಲಿಂಡರ್ ಕೊರತೆ ಇಲ್ಲ ಎಂದು…

10 hours ago

ಪಿಎಂ ಕಿಸಾನ್‌ 22ನೇ ಕಂತು ಬಿಡುಗಡೆಗೆ ಸಿದ್ಧತೆ | 9.32 ಕೋಟಿ ರೈತರಿಗೆ ₹18,640 ಕೋಟಿ ನೇರ ನಗದು

ಪಿಎಂ ಕಿಸಾನ್ ಯೋಜನೆಯ 22ನೇ ಕಂತಿನ ಹಣವನ್ನು ಪ್ರಧಾನಿ ಮೋದಿ ಬಿಡುಗಡೆ ಮಾಡಲಿದ್ದಾರೆ.…

23 hours ago