ಪುತ್ತೂರು: ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಇದರ ಹತ್ತನೇ ವರ್ಷಾಚರಣೆ ಸಂಸ್ಥಾಪನಾ ದಿನಾಚರಣೆಯ ಪ್ರಯುಕ್ತ ಕ್ಯಾಂಪಸ್ ಫ್ರಂಟ್ ಬೆಳ್ಳಾರೆ ಏರಿಯಾ ವತಿಯಿಂದ ಬೆಳ್ಳಾರೆ ಜಂಕ್ಷನ್ ನಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು.
ಕ್ಯಾಂಪಸ್ ಫ್ರಂಟ್ ಬೆಳ್ಳಾರೆ ಏರಿಯಾ ಅಧ್ಯಕ್ಷರಾದ ನಿಝಾಮ್ ಬೆಳ್ಳಾರೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಧ್ವಜಾರೋಹಣ ನೆರವೇರಿಸಿದರು. ಕ್ಯಾಂಪಸ್ ಫ್ರಂಟ್ ಘನತೆಯಿಂದ ಫ್ಯಾಸಿಸ್ಟ್ ವರ್ಗದ ಮುಂದೆ ರಾಜಿ ರಹಿತ ಹೋರಾಟದೊಂದಿಗೆ, ಅವರ ಮುಂದೆ ತಲೆ ತಗ್ಗಿಸದೆ ಘನತೆಯೊಂದಿಗೆ ಹತ್ತು ವರ್ಷವನ್ನು ಕ್ಯಾಂಪಸ್ ಫ್ರಂಟ್ ನೆರವೇರಿಸಿದೆ ಎಂದು ಕ್ಯಾಂಪಸ್ ಫ್ರಂಟ್ ಪುತ್ತೂರು ತಾಲೂಕು ಸಮಿತಿ ಸದಸ್ಯರಾದ ಅನ್ಸಾರ್ ಬೆಳ್ಳಾರೆ ಸಂದರ್ಭೋಚಿತವಾಗಿ “ಘನತೆಯ ಹತ್ತು ವರ್ಷಗಳ” ಸಂದೇಶವನ್ನು ನೀಡಿದರು.
ಈ ಸಂದರ್ಭದಲ್ಲಿ ಕ್ಯಾಂಪಸ್ ಫ್ರಂಟ್ ಬೆಳ್ಳಾರೆ ಘಟಕ ಅದ್ಯಕ್ಷ ಹಫೀಝ್, ಕಾರ್ಯದರ್ಶಿ ಸುಹೈಲ್, ಬೆಳ್ಳಾರೆ ಕಾಲೇಜು ಕಾರ್ಯದರ್ಶಿ ರಮೀಝ್ ಅಲೆಕ್ಕಾಡಿ, ಫ್ರೌಢಶಾಲಾ ಘಟಕದ ಅಧ್ಯಕ್ಷ ಸುಹೈಲ್, ಪಾಪ್ಯುಲರ್ ಫ್ರಂಟ್ ಬೆಳ್ಳಾರೆ ಡಿವಿಜನ್ ಕಾರ್ಯದರ್ಶಿ ಸಿದ್ದೀಕ್, ಪಾಪ್ಯುಲರ್ ಫ್ರಂಟ್ ಏರಿಯಾ ಅಧ್ಯಕ್ಷರಾದ ಸಹೀದ್ ಉಪಸ್ಥಿತರಿದ್ದರು. ಕ್ಯಾಂಪಸ್ ಫ್ರಂಟ್ ಬೆಳ್ಳಾರೆ ಏರಿಯಾ ಕಾರ್ಯದರ್ಶಿ ಜಾಬಿರ್ ಬೆಳ್ಳಾರೆ ಸ್ವಾಗತಿಸಿ, ವಂದಿಸಿದರು.
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಹಲವೆಡೆ ಶನಿವಾರ ಸಂಜೆ ಅಕಾಲಿಕ ಮಳೆಯಾಗಿದ್ದು,…
ಕರ್ನಾಟಕದಲ್ಲಿ ಫೆಬ್ರುವರಿ 27ರವರೆಗೆ ಬಿಸಿಲಿನ ಜೊತೆಗೆ ತುಂತುರು ಮತ್ತು ಗುಡುಗು ಮಳೆಯ ಮುನ್ಸೂಚನೆ.…
ಮಲೆನಾಡಿನಲ್ಲಿ ಅಡಿಕೆ ರೈತರು ಮಿಶ್ರ ಕೃಷಿಯತ್ತ ಮುಖ ಮಾಡುತ್ತಿದ್ದಾರೆ. ಹವಾಮಾನ ಬದಲಾವಣೆ, ಬೆಲೆ…
ನಂದಿನಿ ಹಾಲು ಮತ್ತು ಉತ್ಪನ್ನಗಳು ಸೇವನೆಗೆ ಸಂಪೂರ್ಣ ಸುರಕ್ಷಿತವೆಂದು ಕೆಎಂಎಫ್ ಸ್ಪಷ್ಟನೆ ನೀಡಿದೆ.…
ರೈತರಿಗೆ ಗನ್ ಪರವಾನಗಿ ಹಾಗೂ ನವೀಕರಣ ಪ್ರಕ್ರಿಯೆಯನ್ನು ಸುಲಭಗೊಳಿಸಲು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ…
ಮಂಗಳೂರಿನ ಅಡಿಕೆ ಮಾರುಕಟ್ಟೆಯು ಪ್ರಸ್ತುತ ಕೇವಲ ಬೆಲೆ ಏರಿಳಿತದ ಕೇಂದ್ರವಾಗಿ ಉಳಿದಿಲ್ಲ; ಬದಲಾಗಿ…