ಕ್ಯಾಂಪ್ಕೋ ಚಾಕಲೇಟು ಕಾರ್ಖಾನೆಯಲ್ಲಿ ಉದ್ಘಾಟನೆಗೊಂಡಿತು ಅಂತರಾಷ್ಟ್ರೀಯ ಗುಣಮಟ್ಟದ ಲ್ಯಾಬ್ : ಸಿದ್ಧವಾಗುತ್ತಿದೆ ತೋಟದ ಮಣ್ಣು ಪರೀಕ್ಷೆಗೆ ವ್ಯವಸ್ಥೆ

November 20, 2019
8:32 PM

ಪುತ್ತೂರು: ಕ್ಯಾಂಪ್ಕೋ ಚಾಕಲೇಟು ಕಾರ್ಖಾನೆಯಲ್ಲಿ ನವೀಕರಣಗೊಂಡ ಎನಲೆಟಿಕಲ್ ಲ್ಯಾಬ್ (National Accreditation Board for Testing and Calibration Laboratories – NABL)  ಉದ್ಘಾಟನೆ ಬುಧವಾರ ನಡೆಯಿತು. ಪುತ್ತೂರು ಶಾಸಕ ಸಂಜೀವ ಮಟಂದೂರು ನೂತನ ಲ್ಯಾಬ್ ಉದ್ಘಾಟಿಸಿ ಶುಭ ಹಾರೈಸಿದರು.

Advertisement
Advertisement

ಕ್ಯಾಂಪ್ಕೋ ಅಧ್ಯಕ್ಷ  ಎಸ್.ಆರ್. ಸತೀಶ್ಚಂದ್ರ ಸಭಾಧ್ಯಕ್ಷತೆ ವಹಿಸಿದರು. ಈ ಸಂದರ್ಭ ಕ್ಯಾಂಪ್ಕೋ ವ್ಯವಸ್ಥಾಪಕ ನಿರ್ದೇಶಕ ಸುರೇಶ್ ಭಂಡಾರಿ , ಕ್ಯಾಂಪ್ಕೋ ಉಪಾಧ್ಯಕ್ಷ   ಶಂ.ನ.ಖಂಡಿಗೆ , ಸಾಮಾಜಿಕ ಕಾರ್ಯಕರ್ತ ಆರ್ ಸಿ ನಾರಾಯಣ ರೆಂಜ, ಪತ್ರಕರ್ತ ಮಹೇಶ್ , ಹಿರಿಯ ಅಧಿಕಾರಿ  ರಾಮಚಂದ್ರ ಕಾಮತ್,  ಕ್ಯಾಂಪ್ಕೋ ಎ.ಜಿ.ಎಂ ಇಂಜಿನಿಯರಿಂಗ್ ಅವಿನಾಶ್ ರೈ, ಎ.ಜಿ.ಎಂ ಟೆಕ್ನಿಕಲ್ ,ಶ್ಯಾಮ್ ಪ್ರಸಾದ್ ಎಚ್, ಎ.ಜಿ.ಎಂ ಪ್ರೊಡಕ್ಷನ್ ಅನೂಪ್ ಮೊದಲಾದವರು  ಉಪಸ್ಥಿತರಿದ್ದರು.

ಈ ನೂತನ ಲ್ಯಾಬ್ ನಲ್ಲಿ ಮೈಕ್ರೋಬಯೋಲಜಿ ಲ್ಯಾಬ್, ಕೆಮೆಸ್ಟ್ರಿ ಲ್ಯಾಬ್, ಕೋಕೋ ಬೀನ್ಸ್ ಹಾಗೂ ಇತರ ಕೃಷಿ ಉತ್ಪನ್ನಗಳ ಲ್ಯಾಬ್ ಎಂಬ ಮೂರು ವಿಭಾಗಗಳಿದೆ. ಲ್ಯಾಬಿನಲ್ಲಿ ಕ್ಯಾಂಪ್ಕೋ ಚಾಕಲೇಟು ಕಾರ್ಖಾನೆಯಲ್ಲಿ ಉತ್ಪಾದಿಸಿದ ಎಲ್ಲಾ ಉತ್ಪನ್ನಗಳನ್ನು ಹಾಗೂ ಉತ್ಪಾದನೆಗೆ ಬಳಕೆಯಾಗುವ ಕಚ್ಚಾ ವಸ್ತುಗಳನ್ನು ಹಾಗೂ ಉತ್ಪಾದನಾ ವಾತಾವರಣದಲ್ಲಿ ಈ ಲ್ಯಾಬ್ ನಲ್ಲಿ ಪರೀಕ್ಷೆಗೊಳಪಡಿಸಿ ಗುಣಮಟ್ಟವನ್ನು ಖಾತರಿಗೊಳಿಸಲಾಗುತ್ತದೆ.

ಮುಂದಿನ ದಿನದಲ್ಲಿ ಕ್ಯಾಂಪ್ಕೋ ಸದಸ್ಯ ಬೆಳೆಗಾರರ ತೋಟದ ಮಣ್ಣು ಪರೀಕ್ಷೆಯನ್ನು ಈ ಲ್ಯಾಬ್ ನಲ್ಲಿ ಅಳವಡಿಸಲಾಗುವುದು ಎಂದು ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ  ಹೇಳಿದರು.

Advertisement
Advertisement

Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಸಂಪಾಜೆ ಗ್ರಾಮದಲ್ಲಿ ವಿಕಸಿತ ಕೃಷಿ ಸಂಕಲ್ಪ ಅಭಿಯಾನ
June 11, 2025
10:20 PM
by: The Rural Mirror ಸುದ್ದಿಜಾಲ
ಭಾರೀ ಮಳೆ ಸಾಧ್ಯತೆ | ಕೊಡಗು-ಉಡುಪಿ ಜಿಲ್ಲೆಯಲ್ಲಿ ಎಚ್ಚರಿಕೆ | ಕೊಡಗಿನಲ್ಲಿ ಅಂಗನವಾಡಿ ಕೇಂದ್ರಗಳಿಗೆ ರಜೆ | ಉಡುಪಿಯಲ್ಲಿ ಶಾಲೆಗಳಿಗೆ ರಜೆ |
June 11, 2025
9:14 PM
by: ದ ರೂರಲ್ ಮಿರರ್.ಕಾಂ
ನಿಮ್ಮಲ್ಲಿ ಎಳೆ ಅಡಿಕೆ ಬೀಳ್ತಾ ಇದೆಯಾ…? ಕೇಳಲು ಶುರು ಮಾಡಿದ್ದಾರೆ ಅಡಿಕೆ ಬೆಳೆಗಾರರು..!
June 11, 2025
3:30 PM
by: ವಿಶೇಷ ಪ್ರತಿನಿಧಿ
ಹವಾಮಾನ ವರದಿ | 11-06-2025 | ಮುಂದಿನ 2 ದಿವಸಗಳ ಕಾಲ ಮಲೆನಾಡು ಭಾಗಗಳಲ್ಲಿ ಉತ್ತಮ ಮಳೆ | ಮುನ್ಸೂಚನೆಯಂತೆ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಇಲ್ಲ |
June 11, 2025
2:14 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror

Join Our Group