ಮಂಗಳೂರು: ಕ್ಯಾಂಪ್ಕೊ ಸಂಸ್ಥೆ ಸದಸ್ಯರಿಗೆ ತಂದ ವಿನೂತನ ಯೋಜನೆ ಅಪಘಾತವಾದ ಕೃಷಿಕ, ಕೃಷಿ ಕಾರ್ಮಿಕ ಮೃತಪಟ್ಟರೆ ನೀಡುವ ಸಹಾಯಧನದ ಯೋಜನೆಯ ಮೊದಲ ನೆರವು ಈಚೆಗೆ ನೀಡಲಾಯಿತು.
ಕ್ಯಾಂಪ್ಕೋ ಅಧ್ಯಕ್ಷ ಎಸ್. ಆರ್. ಸತೀಶ್ಚಂದ್ರ ಅವರು ಇತ್ತೀಚೆಗೆ ಅವಘಡದಲ್ಲಿ ಮರಣ ಹೊಂದಿದ ಕ್ಯಾಂಪ್ಕೋದ ಸಕ್ರಿಯ ಸದಸ್ಯರಾದ ವಾಮದಪದವು ಬಾರೆಕಿನಡೆ ಮನೆಯ ಗೋಪಾಲ ಶೆಟ್ಟಿ ಅವರ ಮನೆಗೆ ಭೇಟಿ ನೀಡಿ ಕ್ಯಾಂಪ್ಕೋ ಸಂಸ್ಥೆಯಿಂದ ನೀಡಲಾಗುವ ಸಹಾಯ ಧನ ರೂಪಾಯಿ 50000/- ದ ಚೆಕ್ಕನ್ನು ಗೋಪಾಲ ಶೆಟ್ಟಿಯವರ ಪತ್ನಿ ಗಿರಿಜಾ ಶೆಟ್ಟಿ ಇವರಿಗೆ ನೀಡಿದರು.
ಈ ಸಂದರ್ಭದಲ್ಲಿ ಕ್ಯಾಂಪ್ಕೋ ನಿರ್ದೇಶಕರಾದ ಬಿ. ತಿಮ್ಮಪ್ಪ ಶೆಟ್ಟಿ, ಪುತ್ತೂರು ಪ್ರಾದೇಶಿಕ ಕಚೇರಿಯ ಹಿರಿಯ ಪ್ರಬಂಧಕರಾದ ಗೋವಿಂದ ಭಟ್, ವಾಮದಪದವು ಶಾಖೆಯ ಪುರುಷೋತ್ತಮ.ಕೆ, ವಾಮದ ಪದವು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಯಶೋಧರ ಶೆಟ್ಟಿ, ಉಪಾಧ್ಯಕ್ಷರಾದ ಗಣನಾಥ ಶೆಟ್ಟಿ, ಕಾರ್ಯದರ್ಶಿಗಳಾದ ಅಲ್ಬರ್ಟ್ ಡಿಸೋಜಾ, ಸಹಕಾರಿ ಸಂಘದ ನಿರ್ದೇಶಕರುಗಳಾದ ಕಮಲ್ ಶೆಟ್ಟಿ, ಹಿರಿಯ ಸದಸ್ಯ ಬೆಳೆಗಾರರಾದ ಸುಬ್ಬಣ್ಣ ಶಾಸ್ತ್ರೀ, ಗೋಪಾಲಕೃಷ್ಣ ಚೌಟ,
ಲಕ್ಷ್ಮೀನಾರಾಯಣ ಪರಾಡ್ಕರ್, ಪುರುಷೋತ್ತಮ ಶೆಟ್ಟಿ ಬಾರಕ್ಕಿನಡೆ, ವೆಂಕಟೇಶ್ ಭಟ್, ವಿಜಯ ರೈ, ಸುಧಿರ್ ಶೆಟ್ಟಿ ಕುಂಡೋಳಿ, ದಿನೇಶ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಈಗಿನಂತೆ ಎಪ್ರಿಲ್ 29 ಹಾಗೂ 30ರಂದು ಉತ್ತರ ಒಳನಾಡು, ದಕ್ಷಿಣ ಕರಾವಳಿ ಹಾಗೂ…
ಚುನಾವಣಾ ಸಮಯದಲ್ಲಿ ಪರವಾನಿಗೆ ಹೊಂದಿದ ಶಸ್ತ್ರಾಸ್ತ್ರ ಠೇವಣಿ ವಿನಾಯಿತಿ ಕೋರಿ ಸಲ್ಲಿಸಿದ ಅರ್ಜಿಯನ್ನು…
ದೇಸೀ ಗೋವು ಅದರಲ್ಲೂ ಮಲೆನಾಡು ಗಿಡ್ಡ ತಳಿಯ ಹಸು ಉಳಿಯಬೇಕು, ಅದರ ಉಳಿವು…
ದಿನದಿಂದ ದಿನಕ್ಕೆ ತಾಪಮಾನ(Temperature) ಏರುತ್ತಿದೆ. ಬಿಸಿ ಗಾಳಿ(Heat wave) ಬೀಸುತ್ತಿದೆ. ನೀರಿಗೆ ಅಭಾವ(Water…
ವಿಶ್ವ ವಿದ್ಯಾಲಯ ಕಾಲೇಜು, ನೆಲ್ಯಾಡಿಯ ಶಿಕ್ಷಕ-ರಕ್ಷಕ ಸಂಘದ ವಾರ್ಷಿಕ ಮಹಾಸಭೆ ಮತ್ತು ನೂತನ…
ಹೆಚ್ಚಿನ ಪಾಲಕರು(Parents) ಮಕ್ಕಳನ್ನು(Children) ಹೆತ್ತ ನಂತರ ಅವರನ್ನು ಶಿಕ್ಷಣದ ವ್ಯವಸ್ಥೆ(Education system) ಮಾಡುವುದು…