‘ಕ್ಯಾಶ್ಯೂ ಇಂಡಿಯಾ ಆಪ್ ‘| ಬೆಳೆ ಸಂಬಂಧೀ ಆಪ್ಸ್ ತಯಾರಿಕೆಯಲ್ಲಿ ವಿನೂತನ ಹೆಜ್ಜೆ | ಗೇರುಕೃಷಿಕರಿಗೆ ಇದು ಪ್ರಯೋಜನ

August 3, 2020
10:04 AM

ರಾಷ್ಟ್ರೀಯ ಗೇರು ಸಂಶೋಧನಾ ಕೇಂದ್ರ, ಪುತ್ತೂರಿನಿಂದ “ಕ್ಯಾಶ್ಯೂ ಇಂಡಿಯಾ” (Cashew India)  ಆಪ್ ನ್ನು ಗೇರು ಕೃಷಿಕರು ಹಾಗೂ ಗೇರಿಗೆ ಸಂಬಂಧಿಸಿದ ಎಲ್ಲರಿಗಾಗಿ ಅಭಿವೃದ್ಧಿಗೊಳಿಸಲಾಗಿದೆ.

Advertisement

ಗೂಗಲ್ ಪ್ಲೇಸ್ಟೋರಿನಲ್ಲಿ ಲಭ್ಯವಿರುವ ಇದು ಕೃಷಿ ಆಸಕ್ತರೆಲ್ಲರೂ ನೋಡಲೇಬೇಕಾದ  ಆಪ್. ಬೆಳೆ ಸಂಬಂಧೀ ಆಪ್ಸ್ ತಯಾರಿಕೆಯಲ್ಲಿ ಇದೊಂದು ಮಾದರಿಯಾಗಬಲ್ಲ ವಿನೂತನ ಹೆಜ್ಜೆ. ‘ಕೃಷಿಕಸ್ನೇಹಿ’, ‘ಸಮಗ್ರ ಮಾಹಿತಿ’, ‘ಸುಲಭ ಬಳಕೆ’ ‘ದೇಶವ್ಯಾಪಿ‘ ಮಾನದಂಡಗಳನ್ನಿಟ್ಟುಕೊಂಡು ರೂಪಿಸಿದ ಈ ‘ಕ್ಯಾಶ್ಯೂ ಇಂಡಿಯಾ’ ಆಪ್ ವೈಶಿಷ್ಟ್ಯಗಳಿಲ್ಲಿವೆ.

ಏನಿದೆ ವಿಶೇಷತೆಗಳು ?:

  •  ಗೇರು ಕಸಿಗಿಡಗಳು, ನರ್ಸರಿ, ಕೃಷಿ, ಕೀಟ ಮತ್ತು ರೋಗ ನಿರ್ವಹಣೆ, ಕೊಯ್ಲೋತ್ತರ ಸಂಸ್ಕರಣೆ, ಮಾರುಕಟ್ಟೆ ಮಾಹಿತಿ, ಇ-ಮಾರುಕಟ್ಟೆ, ಗೇರಿಗೆ ಸಂಬಂಧಪಟ್ಟ ಕೃಷಿಕರು, ಸಂಶೋಧಕರು, ಅಭಿವೃದ್ಧಿ ಇಲಾಖೆಗಳು, ಸಂಸ್ಕರಣಾ ಘಟಕಗಳು ಇವೆಲ್ಲದರ ಮಾಹಿತಿ ಒಂದೆಡೆ ಸಿಗುತ್ತದೆ.
  •  ಕೃಷಿಕ/ಬಳಕೆದಾರ ತನ್ನ ಗೇರು ತೋಟದ ಛಾಯಾಚಿತ್ರ ಹಾಗೂ ವೀಡಿಯೋಗಳನ್ನು ‘ಕೃಷಿ’ ವಿಭಾಗದಲ್ಲಿರುವ ಉಪವಿಭಾಗ ‘ನನ್ನ ಗೇರು ಬೆಳೆ’ ಯಡಿಯಲ್ಲಿ ಸಂಗ್ರಹಿಸಿಡಬಹುದು. ಆಯಾ ತೋಟದ ಖರ್ಚು-ವೆಚ್ಚ ಹಾಗೂ ತನ್ನ ಅನುಭವಗಳನ್ನು ಇಲ್ಲಿ ಸುಲಭವಾಗಿ ದಾಖಲಿಸಲು ಸಾಧ್ಯ.
  •  ಈ ಆಪ್ ಮೂಲಕ ಆಯಾ ರಾಜ್ಯದಲ್ಲಿರುವ ಸಂಶೋಧನಾ ಕೇಂದ್ರಗಳಲ್ಲಿ ನಿಮಗೆ ಬೇಕಾದ ಗೇರು ಕಸಿಗಿಡಗಳನ್ನು ಬುಕ್ ಮಾಡಬಹುದು.
  • ಇಲ್ಲಿರುವ ‘ಮಾರುಕಟ್ಟೆ ಮಾಹಿತಿ’ ವಿಭಾಗದಲ್ಲಿ ನೀವು ಗೇರು ಉತ್ಪನ್ನಗಳನ್ನು ಕೊಡು/ಕೊಳ್ಳುವುದು ಸಾಧ್ಯ.
  •  ಈ ಆಪ್ ನ್ನು ಗೇರು ಬೆಳೆಯುವ 10 ರಾಜ್ಯಗಳಿಗೆ – ಗುಜರಾತ್, ಮಹಾರಾಷ್ಟ್ರ, ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಛತ್ತೀಸ್ ಘಡ, ಒರಿಸ್ಸ, ಪಶ್ಚಿಮ ಬಂಗಾಳ ಹಾಗೂ ಮೇಘಾಲಯ- ಅನುಕೂಲವಾಗುವಂತೆ ರೂಪಿಸಲಾಗಿದೆ.
  •  ಹಿಂದಿ, ಆಂಗ್ಲ, ಕನ್ನಡ, ಮರಾಠಿ, ಗುಜರಾತಿ, ಮಲಯಾಳಂ, ತಮಿಳು, ತೆಲುಗು, ಒಡಿಯಾ, ಗಾರೋ ಹಾಗೂ ಬೆಂಗಾಲಿ – ಹೀಗೆ 11 ಭಾಷೆಗಳಲ್ಲಿ ಪ್ರತ್ಯೇಕವಾಗಿ ಮಾಹಿತಿ ಲಭ್ಯ. ಒಂದು ರಾಜ್ಯಕ್ಕೆ ಎರಡು ಭಾಷೆ – ಇಂಗ್ಲೀಷ್ ಮತ್ತು ಅಲ್ಲಿನ ಸ್ಥಳೀಯ ಭಾಷೆ.
  •  ಕೃಷಿಕ/ಬಳಕೆದಾರ ‘ತಜ್ಜರನ್ನು ಕೇಳಿ’ ವಿಭಾಗದ ಮೂಲಕ ಬೇಕಾದ ಸಂಪನ್ಮೂಲ ವ್ಯಕ್ತಿಗಳನ್ನು ಸಂಪರ್ಕಿಸಲು ಸಾಧ್ಯ.
  • ‘ಚರ್ಚಾ ಕೋಣೆ’ ಯ ಮೂಲಕ ಆಯಾ ಸಮಯದಲ್ಲಿ ಆಪ್ ಬಳಸುತ್ತಿರುವ ಬಳಕೆದಾರರೊಡನೆ ಸಂವಹನ ನಡೆಸಬಹುದು.
  •  ಅಲ್ಲಲ್ಲಿ ಲಭ್ಯವಿರುವ ಇ-ಸ್ಪೀಕ್ ಗುಂಡಿಯನ್ನು ಒತ್ತಿದರೆ, ಅಲ್ಲಿರುವ ಬರಹಗಳ ಧ್ವನಿರೂಪವನ್ನು ಆಪ್ ಓದುತ್ತದೆ
  •  ಈ ಕಿರುತಂತ್ರಾಂಶ ಬಳಸಲು ಅಂತರ್ಜಾಲ ಸಂಪರ್ಕ ಅತೀ ಅಗತ್ಯ

ಈ ಆಪ್ ನ ಪರಿಕಲ್ಪನೆ, ವಿನ್ಯಾಸ, ಅಭಿವೃದ್ಧಿಯನ್ನು ರಾಷ್ಟ್ರೀಯ ಗೇರು ಸಂಶೋಧನಾ ಕೇಂದ್ರ, ಪುತ್ತೂರಿನ ಹಿರಿಯ ವಿಜ್ಞಾನಿ ಡಾ. ಮೋಹನ್ ತಲಕಾಲುಕೊಪ್ಪ ಮತ್ತು ಅವರ ತಂಡ ಮಾಡಿದೆ. ಇದಕ್ಕೆ ತಾಂತ್ರಿಕ ಮಾಹಿತಿಯನ್ನು ರಾಷ್ಟ್ರೀಯ ಗೇರು ಸಂಶೋಧನಾ ಕೇಂದ್ರ, ಪುತ್ತೂರು ಹಾಗೂ ಅಖಿಲ ಭಾರತ ಸಮನ್ವಿತ ಗೇರು ಸಂಶೋಧನಾ ಪ್ರಾಯೋಜನೆಯ ಕೇಂದ್ರಗಳು ಒದಗಿಸಿವೆ. ಇದಕ್ಕೆ ಆರ್ಥಿಕ ನೆರವನ್ನು ತೋಟಗಾರಿಕೆಯ ಸಮಗ್ರ ಅಭಿವೃದ್ಧಿ ಮಿಷನ್, ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯ, ನವದೆಹಲಿ ಮತ್ತು ಗೇರು ಮತ್ತು ಕೊಕೊ ಅಭಿವೃದ್ಧಿ ನಿರ್ದೇಶನಾಲಯ, ಕೊಚ್ಚಿನ್ ನೀಡಿವೆ.

ಸಂಪರ್ಕ: ಡಾ. ಮೋಹನ್ ತಲಕಾಲುಕೊಪ್ಪ , 9902273468 , mohangs2007@gmail.com

ಆಪಿನ ಲಿಂಕ್ ಇಲ್ಲಿದೆ:    https://play.google.com/store/apps/details?id=com.cashew.icar&hl=en_IN

 

 

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಜೇನು ಹುಳಗಳ ಸಂಖ್ಯೆ ಗಣನೀಯ ಇಳಿಕೆ | ಜೇನು ಕುಟುಂಬ ಉಳಿಸುವ ಅಭಿಯಾನ |
April 7, 2025
12:27 PM
by: ವಿಶೇಷ ಪ್ರತಿನಿಧಿ
ಪಶು ಸಖಿಯರ ಮಾಸಿಕ ಗೌರವಧನ ಹೆಚ್ಚಳ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ
April 6, 2025
7:00 AM
by: ದ ರೂರಲ್ ಮಿರರ್.ಕಾಂ
ಹುರಿದ ಅಡಿಕೆ ಆಮದು ತಡೆಗೆ ಕ್ರಮ – ಕ್ಯಾಂಪ್ಕೋ ಶ್ಲಾಘನೆ
April 5, 2025
9:17 PM
by: ದ ರೂರಲ್ ಮಿರರ್.ಕಾಂ
ಹಬ್ಬದ ದಿನ 2 ಲಕ್ಷ ಸಸಿ ವಿತರಿಸಿದ ಅರಣ್ಯ ಇಲಾಖೆ
April 5, 2025
8:06 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group