Advertisement
ವೈರಲ್ ಸುದ್ದಿ

ಗುಡ್ಡದ ಮೇಲೆ ನೀರು ಹಿಡಿದಿಡುವುದು – ತುಂಬುವುದರ ಬಗ್ಗೆ ಒಂದು ಸಂದೇಹ…..

Share
ಗುಡ್ಡದ ಮೇಲೆ ನೀರು ಹಿಡಿದಿಡುವುದು  ಹಾಗೂ ತುಂಬುವುದರ ಬಗ್ಗೆ ಸುಳ್ಯ ತಾಲೂಕಿನ ಕಲ್ಮಡ್ಕದ ಕೃಷಿಕ ಸುರೇಶ್ಚಂದ್ರ  ಸಂದೇಹವೊಂದನ್ನು ಮುಂದಿಟ್ಟಿದ್ದಾರೆ. ಅವರ ಸಂದೇಹ ಹಲವರ ಸಂದೇಹ, ಪ್ರಶ್ನೆಯೂ ಆಗಿದೆ. ಹೀಗಾಗಿ ಸುರೇಶ್ಚಂದ್ರ ಅವರ ಬರಹ ಯಥಾವತ್ತಾಗಿ ಇಲ್ಲಿದೆ….

ಹಾಗೇ ಸುಮ್ಮನೆ,  ಮನಸಿನಲ್ಲೊಂದು ಹಾದು ಹೋದ ಯೋಚನೆ ,ಹಂಚಿಕೊಳ್ಳೋಣವೆಂದು ಕಂಡಾಗ ಬರಹ ಮೂಲಕ ಪ್ರಸ್ತಾವನೆ ಅಷ್ಟೇ. ನಮ್ಮ ದ.ಕ ದ ಪರಿಸ್ಥಿತಿಯಲ್ಲಿ ಮಳೆಗಾಲದ ಮಳೆ ನೀರನ್ನು ಇಂಗಿಸಲು ಹೊರಟರೆ ಅನಾಹುತಗಳಾಗಬಹುದೋ ಎಂದು ಮನಸ್ಸಿನಲ್ಲಿ ಮೂಡಿದ ಬಾವ. ಖಂಡಿತಾ ಋಣಾತ್ಮಕ ವಿಚಾರವಲ್ಲ. ಅರಿತವರು ಈ ಬಗ್ಗೆ ತಿದ್ದುವ ಸದಾವಕಾಶ ಇದ್ದೇ ಇದೆ.
   ಕಳೆದ ವರ್ಷ ಮಡಿಕೇರಿ, ವಯನಾಡ್, ಈಗ ಬೆಳ್ತಂಗಡಿಯ ಘಟ್ಟದ ತಪ್ಪಲಿನ ಗುಡ್ಡಗಳು,ಚಿಕ್ಕಮಗಳೂರು ಪರ್ವತ ಶ್ರೇಣಿಗಳು ಕುಸಿಯುವುದು.. …. ಜಾರುತ್ತಿರುವುದು ತುಂಬಾ ಆಲೋಚಿಸಬೇಕಾದ ವಿಚಾರವಲ್ಲವೇ.
ಈ ಹಿನ್ನೆಲೆಯಲ್ಲಿ ಮನಸ್ಸೋಡಿದಾಗ,ನಮ್ಮ ಊರುಗಳಲ್ಲಿ ನಾವು ಗುಡ್ಡಗಳಲ್ಲಿ,ಇಳಿಜಾರುಗಳಲ್ಲಿ ನೀರು ಇಂಗಿಸುವ ಪ್ರಕ್ರಿಯೆ ನಮಗೂ ಮುಂದೊಂದು ದಿನ ಈ ಪರಿಸ್ಥಿತಿ ತಂದಿಡಬಹುದೇ ಎಂದು ಸಣ್ಣ ಹೆದರಿಕೆ ಮೂಡುತ್ತಿದೆ.
 ಪ್ರಾಕೃತಿಕ ವ್ಯವಸ್ಥೆಯಂತೆ ಭುವಿಯೊಳಗೆ ನೀರಿಂಗುವುದು,ಒರತೆಗಳಾಗುವುದು…ಮುಂತಾದ ಪ್ರಕೃತಿಗೆ ಅದರದ್ದೇ ಆದ ಲೆಕ್ಕಾಚಾರಗಳಿರಬಹುದು. ನಾವು ಗುಡ್ಡದ ಮೇಲೆಲ್ಲಾ ನೀರನ್ನು ಹಿಡಿದಿಟ್ಟಾಗ  ಅದು ಆ ಪ್ರಾಕೃತಿಕ ಲೆಕ್ಕಾಚಾರಕ್ಕೆ ವಿರುದ್ದವಾಗದೇ ?  ಉದಾಹರಣೆಗೆ ನಾವು ಬಾಯಾರಿದಾಗ ಒಂದು ತಪ್ಪಿದರೆ ಎರಡು ಲೋಟ ನೀರು ಕುಡಿಯಬಹುದು,ಅದೇ ಏಳೆಂಟು ಲೋಟ ಕುಡಿದರೆ ಹೊಟ್ಟೆಯೊಳಗೆ ಅಲ್ಲೋಲ ಕಲ್ಲೋಲವಾಗುತ್ತದಲ್ಲವೇ….ಅದೇ ರೀತಿ ಭೂಮಿಗೂ ಆಗದೇ. ಭೂಮಿಯ ಮಣ್ಣಿನ ರಚನೆ ಪದರು ಪದರಾಗಿ ಕೊನೆಗೆ ಕಲ್ಲಿನ ಮೇಲೆ ನಿಂತಿರುವುದಂತೆ, ಈ ನೀರು ತುಂಬಿ ಮೆತ್ತಗಾದ,ಉಬ್ಬಿದ ಮಣ್ಣು ಈ ಕಲ್ಲಿನ ಪದರದಿಂದ ಜಾರಿಬಿಡಬಹುದೇ…ಯಾಕೆಂದರೆ…. ನಮ್ಮೂರು ಕಲ್ಮಡ್ಕದಲ್ಲಿ ಮಣ್ಣಿನ ಪದರ ಎಪ್ಪತ್ತೈದರಿಂದ ನೂರಿಪ್ಪತ್ತು ಫೀಟ್ ತನಕವಿದೆ….ಇಂತಲ್ಲಿ ಅಷ್ಟು ಸಮಸ್ಯೆ ಆಗದೋ ಏನೋ…ಅದೇ ಕೆಲವು ಪ್ರದೇಶಗಳಲ್ಲಿ ಇಪ್ಪತೈದು ಫೀಟ್ ಗಿಂತ ಕಡಿಮೆ ಮಣ್ಣಿನ ಪದರವಿರುವಲ್ಲಿ ಜಾರುವ ಸಂಭವ ಹೆಚ್ಚಾಗಬಹುದೇ ಎಂದು ಮನಸ್ಸಿಗೆ ಬರುವ ಪ್ರಶ್ನೆ. ಎಲ್ಲೋ ಹಾರಂಗಿ ಅಣೆಕಟ್ಟೆಯ ನೀರೊತ್ತಡ,ಎತ್ತಿನಹೊಳೆಗಾಗಿ ಕಡಿದ ಭೂಭಾಗಗಳಲ್ಲಿ ಒಳ ಸೇರಿದ ನೀರು ಎಲ್ಲೆಲ್ಲೋ ಹೋಗಿ ಇಡೀ ಭೂಪದರ ಕುಸಿಯಲು ಕಾರಣವಾಗುತ್ತಿದೆ ಎಂದಾದರೆ ಇದೂ ಆಲೋಚಿಸಬೇಕಾದ ವಿಚಾರವಲ್ಲವೇ.
 ಹಾಗಾದರೆ ಬೇಸಿಗೆಯ ನೀರ ಕೊರತೆಗೆ ಏನು ಮಾಡಬಹುದು ಎಂದರೆ ಉತ್ತರ ನನ್ನಲ್ಲಿಲ್ಲ.ಒಟ್ಟಾರೆ ಪ್ರಕೃತಿಯ ಅತಿ ಶೋಷಣೆ ಇಂತಹ ದುರಂತಗಳಿಗೆ ಈ ಹಿಂದೆಯೂ ಮುಂದೆಯೂ ಕಾರಣವೇನೋ ಅನಿಸುತ್ತಿದೆ…ಹಿಂದೆ ಹುಲಿ ಮುಂದೆ ಝರಿ ಎಂಬ ಅಂಚಿಗೆ ನಾವೆಲ್ಲರೂ ಬಂದು ನಿಂತಿದ್ದೇವೇನೋ ಎಂದೆನಿಸುತ್ತಿದೆ..
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಅಸ್ಸಾಂನಲ್ಲಿ ವಶಪಡಿಸಿಕೊಂಡ 60,000 ಕೆಜಿಗೂ ಹೆಚ್ಚು ಅಡಿಕೆಯ ಒಡೆಯರು ಯಾರು…? | ಅಧಿಕಾರಿಗಳಿಗೆ ತಲೆನೋವಾದ ಅಡಿಕೆ…! |

ಅಸ್ಸಾಂನ ಕ್ಯಾಚರ್ ಜಿಲ್ಲೆಯ ಲಖಿಪುರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ವಶಪಡಿಸಿಕೊಂಡ ಸುಮಾರು…

2 hours ago

ಹೊಸರುಚಿ | ಗುಜ್ಜೆ ಕಟ್ಲೇಟ್

ಗುಜ್ಜೆ ಕಟ್ಲೇಟ್ ಮಾಡುವ ವಿಧಾನದ ಬಗ್ಗೆ ಗೃಹಿಣಿ ದಿವ್ಯಮಹೇಶ್‌ ಅವರು ಇಲ್ಲಿ ವಿವರ…

3 hours ago

ಕುಂಭಮೇಳ | ಪ್ರಯಾಗ ತಲಪುವಾಗ ಸಂತಸವೇ ಸಂತಸ…

ಪ್ರಯಾಗ್‌ ರಾಜ್‌ ತಲಪುವ ವೇಳೆ ಆಗುತ್ತಿರುವ ಸಂತಸದ ಬಗ್ಗೆ ಸುರೇಶ್ಚಂದ್ರ ಅವರು ಬರೆದಿದ್ದಾರೆ…

4 hours ago

ಮನೆಯಲ್ಲಿ ಮಕ್ಕಳಿಗೆ ಸ್ಟ್ರಾಂಗ್ ಫಾದರ್ ಮತ್ತು ಕಲ್ಚರ್ಡ್ ಮದರ್ ಇರಬೇಕು

ಶಿಕ್ಷಣವೆಂದರೆ ಅದು ಹಣ ಕೊಟ್ಟು ಪಡೆಯುವ ವಸ್ತುವಿನಂತೆ ಬಿಕರಿಯಾಗುತ್ತಿದೆ. ಈ ದೃಷ್ಠಿಯಿಂದ ಶಿಕ್ಷಣ…

4 hours ago

ಮಾರ್ಚ್ ಆರಂಭದಲ್ಲೇ ರಾಜ್ಯದ ತಾಪಮಾನ ಭಾರೀ ಪ್ರಮಾಣದಲ್ಲಿ ಹೆಚ್ಚಳ

ಕರಾವಳಿ ಕರ್ನಾಟಕದ ಮೂರು ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರಕನ್ನಡ ಜಿಲ್ಲೆಗಳಲ್ಲಿ…

2 days ago