Advertisement
ವೈರಲ್ ಸುದ್ದಿ

ಗುಡ್ಡದ ಮೇಲೆ ನೀರು ಹಿಡಿದಿಡುವುದು – ತುಂಬುವುದರ ಬಗ್ಗೆ ಒಂದು ಸಂದೇಹ…..

Share
ಗುಡ್ಡದ ಮೇಲೆ ನೀರು ಹಿಡಿದಿಡುವುದು  ಹಾಗೂ ತುಂಬುವುದರ ಬಗ್ಗೆ ಸುಳ್ಯ ತಾಲೂಕಿನ ಕಲ್ಮಡ್ಕದ ಕೃಷಿಕ ಸುರೇಶ್ಚಂದ್ರ  ಸಂದೇಹವೊಂದನ್ನು ಮುಂದಿಟ್ಟಿದ್ದಾರೆ. ಅವರ ಸಂದೇಹ ಹಲವರ ಸಂದೇಹ, ಪ್ರಶ್ನೆಯೂ ಆಗಿದೆ. ಹೀಗಾಗಿ ಸುರೇಶ್ಚಂದ್ರ ಅವರ ಬರಹ ಯಥಾವತ್ತಾಗಿ ಇಲ್ಲಿದೆ….

ಹಾಗೇ ಸುಮ್ಮನೆ,  ಮನಸಿನಲ್ಲೊಂದು ಹಾದು ಹೋದ ಯೋಚನೆ ,ಹಂಚಿಕೊಳ್ಳೋಣವೆಂದು ಕಂಡಾಗ ಬರಹ ಮೂಲಕ ಪ್ರಸ್ತಾವನೆ ಅಷ್ಟೇ. ನಮ್ಮ ದ.ಕ ದ ಪರಿಸ್ಥಿತಿಯಲ್ಲಿ ಮಳೆಗಾಲದ ಮಳೆ ನೀರನ್ನು ಇಂಗಿಸಲು ಹೊರಟರೆ ಅನಾಹುತಗಳಾಗಬಹುದೋ ಎಂದು ಮನಸ್ಸಿನಲ್ಲಿ ಮೂಡಿದ ಬಾವ. ಖಂಡಿತಾ ಋಣಾತ್ಮಕ ವಿಚಾರವಲ್ಲ. ಅರಿತವರು ಈ ಬಗ್ಗೆ ತಿದ್ದುವ ಸದಾವಕಾಶ ಇದ್ದೇ ಇದೆ.
   ಕಳೆದ ವರ್ಷ ಮಡಿಕೇರಿ, ವಯನಾಡ್, ಈಗ ಬೆಳ್ತಂಗಡಿಯ ಘಟ್ಟದ ತಪ್ಪಲಿನ ಗುಡ್ಡಗಳು,ಚಿಕ್ಕಮಗಳೂರು ಪರ್ವತ ಶ್ರೇಣಿಗಳು ಕುಸಿಯುವುದು.. …. ಜಾರುತ್ತಿರುವುದು ತುಂಬಾ ಆಲೋಚಿಸಬೇಕಾದ ವಿಚಾರವಲ್ಲವೇ.
ಈ ಹಿನ್ನೆಲೆಯಲ್ಲಿ ಮನಸ್ಸೋಡಿದಾಗ,ನಮ್ಮ ಊರುಗಳಲ್ಲಿ ನಾವು ಗುಡ್ಡಗಳಲ್ಲಿ,ಇಳಿಜಾರುಗಳಲ್ಲಿ ನೀರು ಇಂಗಿಸುವ ಪ್ರಕ್ರಿಯೆ ನಮಗೂ ಮುಂದೊಂದು ದಿನ ಈ ಪರಿಸ್ಥಿತಿ ತಂದಿಡಬಹುದೇ ಎಂದು ಸಣ್ಣ ಹೆದರಿಕೆ ಮೂಡುತ್ತಿದೆ.
 ಪ್ರಾಕೃತಿಕ ವ್ಯವಸ್ಥೆಯಂತೆ ಭುವಿಯೊಳಗೆ ನೀರಿಂಗುವುದು,ಒರತೆಗಳಾಗುವುದು…ಮುಂತಾದ ಪ್ರಕೃತಿಗೆ ಅದರದ್ದೇ ಆದ ಲೆಕ್ಕಾಚಾರಗಳಿರಬಹುದು. ನಾವು ಗುಡ್ಡದ ಮೇಲೆಲ್ಲಾ ನೀರನ್ನು ಹಿಡಿದಿಟ್ಟಾಗ  ಅದು ಆ ಪ್ರಾಕೃತಿಕ ಲೆಕ್ಕಾಚಾರಕ್ಕೆ ವಿರುದ್ದವಾಗದೇ ?  ಉದಾಹರಣೆಗೆ ನಾವು ಬಾಯಾರಿದಾಗ ಒಂದು ತಪ್ಪಿದರೆ ಎರಡು ಲೋಟ ನೀರು ಕುಡಿಯಬಹುದು,ಅದೇ ಏಳೆಂಟು ಲೋಟ ಕುಡಿದರೆ ಹೊಟ್ಟೆಯೊಳಗೆ ಅಲ್ಲೋಲ ಕಲ್ಲೋಲವಾಗುತ್ತದಲ್ಲವೇ….ಅದೇ ರೀತಿ ಭೂಮಿಗೂ ಆಗದೇ. ಭೂಮಿಯ ಮಣ್ಣಿನ ರಚನೆ ಪದರು ಪದರಾಗಿ ಕೊನೆಗೆ ಕಲ್ಲಿನ ಮೇಲೆ ನಿಂತಿರುವುದಂತೆ, ಈ ನೀರು ತುಂಬಿ ಮೆತ್ತಗಾದ,ಉಬ್ಬಿದ ಮಣ್ಣು ಈ ಕಲ್ಲಿನ ಪದರದಿಂದ ಜಾರಿಬಿಡಬಹುದೇ…ಯಾಕೆಂದರೆ…. ನಮ್ಮೂರು ಕಲ್ಮಡ್ಕದಲ್ಲಿ ಮಣ್ಣಿನ ಪದರ ಎಪ್ಪತ್ತೈದರಿಂದ ನೂರಿಪ್ಪತ್ತು ಫೀಟ್ ತನಕವಿದೆ….ಇಂತಲ್ಲಿ ಅಷ್ಟು ಸಮಸ್ಯೆ ಆಗದೋ ಏನೋ…ಅದೇ ಕೆಲವು ಪ್ರದೇಶಗಳಲ್ಲಿ ಇಪ್ಪತೈದು ಫೀಟ್ ಗಿಂತ ಕಡಿಮೆ ಮಣ್ಣಿನ ಪದರವಿರುವಲ್ಲಿ ಜಾರುವ ಸಂಭವ ಹೆಚ್ಚಾಗಬಹುದೇ ಎಂದು ಮನಸ್ಸಿಗೆ ಬರುವ ಪ್ರಶ್ನೆ. ಎಲ್ಲೋ ಹಾರಂಗಿ ಅಣೆಕಟ್ಟೆಯ ನೀರೊತ್ತಡ,ಎತ್ತಿನಹೊಳೆಗಾಗಿ ಕಡಿದ ಭೂಭಾಗಗಳಲ್ಲಿ ಒಳ ಸೇರಿದ ನೀರು ಎಲ್ಲೆಲ್ಲೋ ಹೋಗಿ ಇಡೀ ಭೂಪದರ ಕುಸಿಯಲು ಕಾರಣವಾಗುತ್ತಿದೆ ಎಂದಾದರೆ ಇದೂ ಆಲೋಚಿಸಬೇಕಾದ ವಿಚಾರವಲ್ಲವೇ.
 ಹಾಗಾದರೆ ಬೇಸಿಗೆಯ ನೀರ ಕೊರತೆಗೆ ಏನು ಮಾಡಬಹುದು ಎಂದರೆ ಉತ್ತರ ನನ್ನಲ್ಲಿಲ್ಲ.ಒಟ್ಟಾರೆ ಪ್ರಕೃತಿಯ ಅತಿ ಶೋಷಣೆ ಇಂತಹ ದುರಂತಗಳಿಗೆ ಈ ಹಿಂದೆಯೂ ಮುಂದೆಯೂ ಕಾರಣವೇನೋ ಅನಿಸುತ್ತಿದೆ…ಹಿಂದೆ ಹುಲಿ ಮುಂದೆ ಝರಿ ಎಂಬ ಅಂಚಿಗೆ ನಾವೆಲ್ಲರೂ ಬಂದು ನಿಂತಿದ್ದೇವೇನೋ ಎಂದೆನಿಸುತ್ತಿದೆ..
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ತುಮಕೂರಿನಲ್ಲಿ ಭರ್ಜರಿ ಕೈಗಾರಿಕಾ ಹಬ್ – ₹7,000 ಕೋಟಿ ಹೂಡಿಕೆ, 88 ಸಾವಿರ ಉದ್ಯೋಗದ ಗುರಿ

ತುಮಕೂರು ಕೈಗಾರಿಕಾ ನೋಡ್‌ಗೆ 1,736 ಎಕರೆ ಮೀಸಲು. ₹7,000 ಕೋಟಿ ಹೂಡಿಕೆ, 88…

2 minutes ago

ಮಂಗಳೂರಿನಲ್ಲಿ ಉದ್ಯೋಗಾವಕಾಶ : ಆ.20 ಮತ್ತು 21ರಂದು ವಿವಿಧ ಹುದ್ದೆಗಳಿಗೆ ನೇರ ಸಂದರ್ಶನ

ಮಂಗಳೂರು ಮತ್ತು ಬೆಂಗಳೂರಿನಲ್ಲಿ ವಿವಿಧ ಕಂಪೆನಿಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗಾಗಿ ಆ.20…

17 minutes ago

ಹವಾಮಾನ ವರದಿ | 18-08-2026 | ಕರಾವಳಿಯಲ್ಲಿ ಮುಂದಿನ 10 ದಿನ ಮಳೆ ಸಾಧ್ಯತೆ – ಮಲೆನಾಡಿನಲ್ಲಿ ಆಗಸ್ಟ್ 21 ರಿಂದ ಇಳಿಕೆ

ಕರಾವಳಿ ಕರ್ನಾಟಕದಲ್ಲಿ ಮುಂದಿನ 10 ದಿನಗಳವರೆಗೂ ಮೋಡ–ಮಳೆಯ ವಾತಾವರಣ ಮುಂದುವರಿಯುವ ಸಾಧ್ಯತೆ ಇದೆ.…

16 hours ago

ಬೆಳಗಾವಿಯಲ್ಲಿ ಮಳೆ ಕೊರತೆಯ ಆತಂಕ ದೂರ ; ಜುಲೈ ಮಳೆಯಿಂದ ಕೃಷಿ ಚಟುವಟಿಕೆಗೆ ಚುರುಕು

ಜೂನ್‌ನಲ್ಲಿ ಶೇ.29ರಷ್ಟು ಮಳೆ ಕೊರತೆ ಎದುರಿಸಿದ್ದ ಬೆಳಗಾವಿ ಜಿಲ್ಲೆಯಲ್ಲಿ ಜುಲೈನಲ್ಲಿ ಉತ್ತಮ ಮಳೆಯಾಗಿದ್ದು,…

1 day ago

‘ಉಚಿತ ಎಲೆಕ್ಟ್ರಿಕ್ ಸ್ಟೌ ವಿತರಣೆ’ ನಕಲಿ ಸುದ್ದಿ : ಸಾರ್ವಜನಿಕರಿಗೆ ಕೇಂದ್ರ ಸಚಿವರಿಂದ ಮಾಹಿತಿ

ಕೇಂದ್ರ ಸರ್ಕಾರದಿಂದ ಉಚಿತ ಎಲೆಕ್ಟ್ರಿಕ್ ಸ್ಟೌ ವಿತರಣೆ ಎಂಬ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ…

1 day ago

ಆಗಸ್ಟ್ 28 ರೊಳಗೆ ಸರ್ಕಾರಿ ಶಾಲಾ ಮಕ್ಕಳಿಗೆ ಶೂ, ಸಾಕ್ಸ್ ವಿತರಣೆ: ಸಚಿವ ಮಧು ಬಂಗಾರಪ್ಪ

ಸರ್ಕಾರಿ ಶಾಲೆಗಳಲ್ಲಿ ಬಾಕಿ ಇರುವ ಮಕ್ಕಳಿಗೆ ಆಗಸ್ಟ್ 28ರೊಳಗೆ ಶೂ ಮತ್ತು ಸಾಕ್ಸ್…

1 day ago