ಗುತ್ತಿಗಾರು: ಶ್ರೀಕೃಷ್ಣ ಭಜನಾ ಮಂದಿರ ಹಾಗೂ ಯುವಕ ಮಂಡಲ ಗುತ್ತಿಗಾರು ಇದರ ಜಂಟಿ ಆಶ್ರಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆಯ ಶ್ರೀಕೃಷ್ಣ ಭಜನಾ ಮಂದಿರ ವಠಾರದಲ್ಲಿ ನಡೆಯಿತು ಈ ಸಂದರ್ಭ ನಡೆದ ಪುಟಾಣಿಗಳ ಶ್ರೀಕೃಷ್ಣ ವೇಷ ಗಮನ ಸೆಳೆಯಿತು.
ಪುಟಾಣಿಗಳು ಅಂದವಾದ ವೇಷಭೂಷಣ ತೊಟ್ಟು ವೇದಿಕೆಗೆ ಬಂದು ತಮ್ಮ ಹಾವ ಭಾವ ಪ್ರದರ್ಶಿಸಿದರು. ಪುಟಾಣಿಗಳೆಲ್ಲರ ಹೆಜ್ಜೆ, ವೇಷಗಳು ಮುದ್ದು ಮುದ್ದಾಗಿ ಕಂಡಿತು. ಮುಗ್ದ ಮಕ್ಕಳಲ್ಲಿ ಶ್ರೀಕೃಷ್ಣನನ್ನು ಎಲ್ಲರೂ ಕಾಣುವಂತಾಯಿತು. ಮನೆ ಮನೆಯಲ್ಲೂ ಕೃಷ್ಣ ಪರಮಾತ್ಮರು ಇದ್ದಾರೆ. ನೋಡುವ ದೃಷ್ಟಿ ಬದಲಾಯಿಸಿಕೊಳ್ಳಬೇಕು ಎನ್ನುವ ಸಂದೇಶ ನೀಡಿತು.
ಸಮಾರಂಭದಲ್ಲಿ ಶ್ರೀಕೃಷ್ಣ ಭಜನಾ ಮಂದಿರದ ಅಧ್ಯಕ್ ಕಿಶೋರ್ ಕುಮಾರ್ ಪೈಕ , ಮಾಜಿ ಅಧ್ಯಕ್ಷ ಬಿ ಕೆ ಶ್ರೀಧರ್, ಯುವಕ ಮಂಡಲದ ಅಧ್ಯಕ್ಷ ಲೋಹಿತ್ ಚೈಪೆ ಮೊದಲಾದವರು ಇದ್ದರು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel