ಗೋಕರ್ಣ: ದೇಶಕ್ಕೆ ಎದುರಾಗಿರುವ ಮಾರಕ ಕೊರೋನಾ ಸಾಂಕ್ರಾಮಿಕದಿಂದ ಮುಕ್ತಿ ನೀಡುವಂತೆ ಪ್ರಾರ್ಥಿಸಿ ಶ್ರೀರಾಘವೇಶ್ವರಭಾರತೀ ಮಹಾಸ್ವಾಮೀಜಿಯವರು ನೀಡಿದ ಮಾರ್ಗದರ್ಶನದಂತೆ ಗೋಕರ್ಣ ಮಹಾಬಲೇಶ್ವರನಿಗೆ ನಿರಂತರ ಗಂಗಾಜಲ ಧಾರಾ ಅಭಿಷೇಕ ಸಮರ್ಪಿಸಲಾಗುತ್ತಿದೆ.
ಕೊರೋನಾ ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಸರ್ಕಾರ ಗೋಕರ್ಣಕ್ಕೆ ಪ್ರವೇಶ ತಡೆಹಿಡಿದ ಹಿನ್ನೆಲೆಯಲ್ಲಿ ಭಕ್ತರು ದೇವಾಲಯಕ್ಕೆ ಭೇಟಿ ನೀಡಬಾರದು. ಶ್ರೀಕ್ಷೇತ್ರದಲ್ಲಿ ನೀಡುತ್ತಿರುವ ಅಮೃತಾನ್ನ ಭೋಜನವನ್ನೂ ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ ಎಂದು ದೇವಾಲಯದ ಆಡಳಿತಾಧಿಕಾರಿ ಜಿ.ಕೆ.ಭಟ್ ಪ್ರಕಟಣೆಯಲ್ಲಿ ಕೋರಿದ್ದಾರೆ.
ದೇಶದ ಹಿತದೃಷ್ಟಿಯಿಂದ ಭಕ್ತಾದಿಗಳು, ಮಾರಕ ವೈರಸ್ ಪ್ರಭಾವದಿಂದ ಭಾರತ ಮುಕ್ತವಾಗುವವರೆಗೂ ಗೋಕರ್ಣ ದರ್ಶನವನ್ನು ದೂಡಬೇಕು ಎಂದು ಮನವಿ ಮಾಡಿದ್ದಾರೆ. ಆದರೆ ಯಥಾಪ್ರಕಾರ ನಿತ್ಯದ ಮಹಾಪೂಜೆ, ಪರ್ವಕಾಲದ ಉತ್ಸವ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಹಿತವಾದ ಆಹಾರವನ್ನು ಮಿತ ಪ್ರಮಾಣದಲ್ಲಿ ಮತ್ತು ಸಕಾಲದಲ್ಲಿ ಸೇವಿಸುವುದು ಆರೋಗ್ಯಕರ ಜೀವನದ ಮೂಲಮಂತ್ರ…
ಭಾರಿ ಮಳೆಯ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಅಂಗನವಾಡಿ, ಶಾಲೆ, ಪಿಯು, ಐಟಿಐ…
ಕರಾವಳಿ ಹಾಗೂ ಮಲೆನಾಡಿನಲ್ಲಿ ಆಗಸ್ಟ್ 1ರವರೆಗೆ ಬಿಟ್ಟು ಬಿಟ್ಟು ಉತ್ತಮ ಮಳೆಯ ಮುನ್ಸೂಚನೆ…
ಸುಳ್ಯ ತಾಲೂಕಿನ ಬಾಳುಗೋಡು, ಹರಿಹರ, ಬಳ್ಪ, ಗುತ್ತಿಗಾರು, ಸುಬ್ರಹ್ಮಣ್ಯ ಸೇರಿದಂತೆ ಹಲವು ಗ್ರಾಮಗಳಲ್ಲಿ…
ಬಾಂಗ್ಲಾದೇಶದ ವಿಜ್ಞಾನಿಗಳು ಹಲಸಿನ ಬೀಜದಿಂದ ಖನಿಜಾಂಶ ಸಮೃದ್ಧ ಆಹಾರ ತಯಾರಿಸುವ ತಂತ್ರಜ್ಞಾನಕ್ಕೆ ಪೇಟೆಂಟ್…
ಭಾರತದ ಕೃಷಿ ರಫ್ತು ಉತ್ಪನ್ನಗಳ ಸಂಖ್ಯೆ 280ರಿಂದ ಸುಮಾರು 500ಕ್ಕೆ ಏರಿಕೆಯಾಗಿದೆ. ₹4.61…