ಬಾಂಗ್ಲಾದೇಶದ ಗಾಜಿಪುರ ಕೃಷಿ ವಿಶ್ವವಿದ್ಯಾಲಯದ (Gazipur Agricultural University – GAU) ಸಂಶೋಧಕರು ತ್ಯಾಜ್ಯವಾಗಿ ಎಸೆಯಲಾಗುವ ಹಲಸಿನ ಬೀಜಗಳನ್ನು ಬಳಸಿ ಖನಿಜಾಂಶ ಸಮೃದ್ಧ ಆಹಾರ (Mineral-rich Food Ingredient) ತಯಾರಿಸುವ ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದು, ಇದಕ್ಕೆ ಪೇಟೆಂಟ್ ಪಡೆದಿದ್ದಾರೆ.
ಈ ತಂತ್ರಜ್ಞಾನವನ್ನು ಆಹಾರ ಎಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಡಾ. ಎಂ.ಡಿ. ಅಮ್ದಾದುಲ್ ಹಕ್ ಹಾಗೂ ಸ್ನಾತಕೋತ್ತರ ಸಂಶೋಧಕ ಎಂ.ಡಿ. ಅಕ್ರಮ್ ಹೊಸೈನ್ ಅವರು ಮೂರು ವರ್ಷಗಳ ಸಂಶೋಧನೆಯ ಮೂಲಕ ಅಭಿವೃದ್ಧಿಪಡಿಸಿದ್ದಾರೆ. ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ಡಾ. ಜಿ.ಕೆ.ಎಂ. ಮುಸ್ತಫಿಜುರ್ ರಹ್ಮಾನ್ ಅವರ ಮಾರ್ಗದರ್ಶನ ಮತ್ತು ಬೆಂಬಲವೂ ಸಂಶೋಧನೆಗೆ ದೊರೆತಿದೆ.
ತ್ಯಾಜ್ಯದಿಂದ ಪೌಷ್ಟಿಕ ಆಹಾರ : ಬಾಂಗ್ಲಾದೇಶವು ವಿಶ್ವದ ಪ್ರಮುಖ ಹಲಸು ಉತ್ಪಾದಕ ರಾಷ್ಟ್ರಗಳಲ್ಲಿ ಒಂದಾಗಿದೆ. ಆದರೆ ಪ್ರತಿ ವರ್ಷ ಲಕ್ಷಾಂತರ ಟನ್ ಹಲಸಿನ ಬೀಜಗಳು ಹಾಗೂ ಇತರೆ ಉಪ ಉತ್ಪನ್ನಗಳು ತ್ಯಾಜ್ಯವಾಗಿ ವಿಲೇವಾರಿಯಾಗುತ್ತವೆ. ಈ ಅಪಾರ ಸಂಪನ್ಮೂಲವನ್ನು ಸಮರ್ಪಕವಾಗಿ ಬಳಸುವ ಉದ್ದೇಶದಿಂದ ಸಂಶೋಧಕರು ಹಲಸಿನ ಬೀಜದಲ್ಲಿರುವ ನೈಸರ್ಗಿಕ ಖನಿಜಾಂಶಗಳನ್ನು ಪ್ರತ್ಯೇಕಿಸಿ ಸಾಂದ್ರಗೊಳಿಸುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದಾರೆ.
ಈ ಖನಿಜಾಂಶಯುಕ್ತ ಘಟಕವನ್ನು ವಿವಿಧ ಆಹಾರ ಉತ್ಪನ್ನಗಳಲ್ಲಿ ಬಳಸುವ ಮೂಲಕ ಪೌಷ್ಟಿಕಾಂಶವನ್ನು ಹೆಚ್ಚಿಸುವುದರ ಜೊತೆಗೆ ಆಹಾರ ತ್ಯಾಜ್ಯವನ್ನೂ ಕಡಿಮೆ ಮಾಡಬಹುದಾಗಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಫಾಲೋಮಾಡಲು ಇಲ್ಲಿ ಕ್ಲಿಕ್ ಮಾಡಿ
ಭಾರತದಲ್ಲೂ ಸಂಶೋಧನೆ ಅವಕಾಶ : ಭಾರತ, ವಿಶೇಷವಾಗಿ ಕರ್ನಾಟಕ, ಕೇರಳ ಮತ್ತು ಈಶಾನ್ಯ ರಾಜ್ಯಗಳಲ್ಲಿ ಹಲಸು ವ್ಯಾಪಕವಾಗಿ ಬೆಳೆಯಲಾಗುತ್ತದೆ. ಆದರೂ ಹಲಸಿನ ಬೀಜಗಳ ಬಹುಪಾಲು ಇನ್ನೂ ಸಮರ್ಪಕ ಮೌಲ್ಯವರ್ಧನೆ ಪಡೆಯುತ್ತಿಲ್ಲ. ಈ ರೀತಿಯ ತಂತ್ರಜ್ಞಾನಗಳು ಭಾರತದಲ್ಲಿಯೂ ಅಳವಡಿಕೆಯಾಗಿದರೆ ಹಲಸಿನ ಬೀಜ ಆಧಾರಿತ ಆಹಾರ ಸಂಸ್ಕರಣಾ ಉದ್ಯಮಕ್ಕೆ ಹೊಸ ಅವಕಾಶಗಳು ಸೃಷ್ಟಿಯಾಗಲಿದ್ದು, ರೈತರಿಗೆ ಹೆಚ್ಚುವರಿ ಆದಾಯದ ಮೂಲವಾಗುವ ಸಾಧ್ಯತೆಯಿದೆ.
Researchers at Gazipur Agricultural University in Bangladesh have patented a technology that converts discarded jackfruit seeds into a concentrated mineral-rich food ingredient. The innovation aims to improve nutrition, reduce food waste, and create value-added products from agricultural by-products, offering a model that could also benefit jackfruit-producing regions such as Karnataka.
ಭಾರತದ ಕೃಷಿ ರಫ್ತು ಉತ್ಪನ್ನಗಳ ಸಂಖ್ಯೆ 280ರಿಂದ ಸುಮಾರು 500ಕ್ಕೆ ಏರಿಕೆಯಾಗಿದೆ. ₹4.61…
ದೊಡ್ಡಬಳ್ಳಾಪುರ ಭಾಗದಲ್ಲಿ ಅಡಿಕೆ ಹೊಂಬಾಳೆಗಳನ್ನು ಕಳ್ಳರು ಕದ್ದೊಯ್ಯುತ್ತಿರುವ ಘಟನೆಗಳು ಹೆಚ್ಚಾಗಿವೆ. ಇದರಿಂದ ರೈತರು…
ಕೊಡಗು ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು, ಕಾವೇರಿ ನೀರಿನ ಮಟ್ಟ…
ಗೋಕರ್ಣದಲ್ಲಿ ನಡೆದ ಅನ್ನಬ್ರಹ್ಮ ಚಾತುರ್ಮಾಸ್ಯ ಧರ್ಮಸಭೆಯಲ್ಲಿ ಜಗದ್ಗುರು ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು…
ಮಧ್ಯಪ್ರದೇಶದಲ್ಲಿರುವ ವಾಯುಭಾರ ಕುಸಿತದ ಪರಿಣಾಮವಾಗಿ ಕರಾವಳಿ, ಮಲೆನಾಡು ಹಾಗೂ ಉತ್ತರ ಒಳನಾಡಿನ ಹಲವು…
ಗೋಕರ್ಣದ ಅಶೋಕೆಯ ಮೂಲಮಠದಲ್ಲಿ 'ಅನ್ನಬ್ರಹ್ಮ ಚಾತುರ್ಮಾಸ್ಯ' ಆರಂಭಗೊಂಡಿದ್ದು, ಸಮಾಜಕ್ಕೆ ಸರಿಯಾದ ದಾರಿ ತೋರಿಸುವುದು…