ಸುಳ್ಯ: ಸುಳ್ಯದಲ್ಲಿ ಕಂಕಣ ಸೂರ್ಯಗ್ರಹಣ ನೋಡಲು ಸಾಧ್ಯವಾಗುತ್ತದೆ ಎಂಬ ನೆಲೆಯಲ್ಲಿ ಹಲವರು ಹೊರಗಿನಿಂದಲೂ ಬಂದು ಗ್ರಹಣ ವೀಕ್ಷಣೆ ಮಾಡಿದರು.
ತಿಪಟೂರು ಕಲ್ಪತರು ಕಾಲೇಜಿನ ನಿವೃತ್ತ ಗಣಿತ ಉಪನ್ಯಾಸಕರಾದ ಪ್ರೊ.ಟಿ.ಬಿ.ಜಯಾನಂದಯ್ಯ, ನಿವೃತ್ತ ಜಿಯೋಗ್ರಫಿ ಉಪನ್ಯಾಸಕ ಡಾ.ಜಗದೀಶ್ ಇವರ ಮನೆಯವರಾದ
ನಂದಾಮಣಿ, ವಿಜಯಾ ಸುಳ್ಯಕ್ಕೆ ಬಂದು ಸೂರ್ಯಗ್ರಹಣ ವೀಕ್ಷಿಸಿದರು. ಸುಳ್ಯ ಬಸ್ ನಿಲ್ದಾಣದ ಬಳಿಯಲ್ಲಿ ಇವರು ಗ್ರಹಣ ವೀಕ್ಷಿಸಿದರು. ಮೋಡ ಅಥವಾ ಇನ್ಯಾವುದೇ ಅಡೆ ತಡೆ ಇಲ್ಲದೆ ಪೂರ್ತಿಯಾಗಿ ಗ್ರಹಣ ವೀಕ್ಷಿಸಲು ಸಾಧ್ಯವಾಗಿರುವುದಿ ಖುಷಿ ಕೊಟ್ಟಿದೆ ಎಂದು ಇವರು ಹೇಳಿದ್ದಾರೆ. ಮೂರು ಗಂಟೆಗಳ ಕಾಲ ಇವರು ಸೂರ್ಯಗ್ರಹಣ ವೀಕ್ಷಿಸಿರುವುದರ ಜೊತೆಗೆ ತಾವು ತಂದಿದ್ದ ಕನ್ನಡಕದ ಮೂಲಕ ಹಲವರಿಗೆ ಗ್ರಹಣ ತೋರಿಸಿದ್ದಾರೆ.
ಅಲ್ಲದೆ ಹಲವು ಮಂದಿ ಅಲ್ಲಲ್ಲಿ ವಾಹನಗಳನ್ನು ನಿಲ್ಲಿಸಿ ಸೂರ್ಯಗ್ರಹಣ ನೋಡುತ್ತಿದ್ದರು. ಮೊಬೈಲ್ ಮೂಲಕ ಪೋಟೋ ತೆಗೆಯಲು ಪ್ರಯತ್ನಿಸುವುದು ಕಂಡು ಬಂದಿತ್ತು.
ಚಂಡಮಾರುತದ ಗಾಳಿಗೆ ಮುರಿಯದೆ ಬಾಗಿಕೊಂಡು ಉಳಿಯುವ ಮೊಹಿತ್ನಗರ ಅಡಿಕೆ ತಳಿಗೆ ಒಡಿಶಾ ಸೇರಿದಂತೆ…
ಭಾರೀ ಮಳೆಯ ಹಿನ್ನೆಲೆಯಲ್ಲಿ ಪುತ್ತೂರು, ಬೆಳ್ತಂಗಡಿ, ಸುಳ್ಯ ಹಾಗೂ ಕಡಬ ತಾಲೂಕುಗಳ ಶಾಲಾ-ಕಾಲೇಜುಗಳಿಗೆ…
ಸ್ವಾತಂತ್ರ್ಯ ದಿನಾಚರಣೆ ಸೇರಿದಂತೆ ಪ್ರಮುಖ ರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಪ್ಲಾಸ್ಟಿಕ್ನಿಂದ ತಯಾರಿಸಿದ ರಾಷ್ಟ್ರಧ್ವಜಗಳನ್ನು ಬಳಸದಂತೆ…
ಮಂಗಳೂರು, ಉಡುಪಿ ಹಾಗೂ ಪುತ್ತೂರಿನಲ್ಲಿ ವಿವಿಧ ಹುದ್ದೆಗಳಿಗೆ ಒಟ್ಟು 22 ಉದ್ಯೋಗಾವಕಾಶಗಳಿದ್ದು, ಆಗಸ್ಟ್…
ಮಿತಾಹಾರ, ಯಜ್ಞಸ್ವರೂಪ ಭೋಜನ ಹಾಗೂ ಆಹಾರದ ಶಾಸ್ತ್ರೋಕ್ತ ಮಹತ್ವವನ್ನು ಶ್ರೀ ರಾಘವೇಶ್ವರ ಭಾರತೀ…
ಎಥೆನಾಲ್ ನೀತಿಯಿಂದ ರೈತರಿಗೆ ಉತ್ತಮ ಬೆಲೆ ದೊರೆಯಲಿದ್ದು, ದೇಶದ ಇಂಧನ ಭದ್ರತೆಯೂ ಬಲಗೊಳ್ಳಲಿದೆ…