ಚಂದನ ಸಾಹಿತ್ಯ ವೇದಿಕೆಯಿಂದ ಸಾಹಿತಿ ದಿ. ಯುಸುಗೌ ರವರಿಗೆ ನುಡಿನಮನ

November 28, 2019
10:32 PM

ಸುಳ್ಯ: ಸುಳ್ಯದ ಚಂದನ ಸಾಹಿತ್ಯ ವೇದಿಕೆ ವತಿಯಿಂದ ಇತ್ತೀಚಿಗೆ ನಿಧನರಾದ ಸುಳ್ಯದ ಸಾಹಿತಿ ದಿ.ಯು.ಸುಬ್ರಾಯಗೌಡರವರಿಗೆ ನುಡಿನಮನ ಕಾರ್ಯಕ್ರಮ ಶಿರ್ಡಿ ಶ್ರೀ ಸಾಯಿಬಾಬಾ ಜ್ಯೋತಿಷ್ಯಾಲಯದಲ್ಲಿ ನೆರವೇರಿತು.

Advertisement

ಯುಸುಗೌ ಒಂದು ನೆನಪು ಮತ್ತು ನುಡಿನಮನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಳ್ಯದ ಚಂದನ ಸಾಹಿತ್ಯ ವೇದಿಕೆಯ ಅಧ್ಯಕ್ಷ ಎಚ್ .ಭೀಮರಾವ್ ವಾಷ್ಠರ್ ವಹಿಸಿ ಮಾತನಾಡಿ, ಅಂತಾರಾಷ್ಟ್ರೀಯ ಸಂಸ್ಥೆಯಾದ ಜೇಸಿಐ ಸಂಸ್ಥೆಯ ವಲಯ ತರಬೇತುದಾರರಲ್ಲದೆ ಅತ್ಯುತ್ತಮ ಸಾಹಿತಿಯಾಗಿದ್ದ ಯುಸುಗೌ ಪ್ರಬುದ್ಧ ವ್ಯಕ್ತಿಯಾಗಿದ್ದರು . ಸರ್ವರನ್ನು ಆದರದಿಂದ ಕಾಣುವ ಅವರ ಹೃದಯ ವೈಶಾಲ್ಯತೆ ಅನುಕರಣೀಯ ಎಂದರು. ಹಿರಿಯ ಸಾಹಿತಿ ನೀನಾಸು ಮಾತನಾಡಿ ‘ಯುಸುಗೌ ಮರೆಯದ ಮಾಣಿಕ್ಯ. ಸಾಹಿತ್ಯ ಕ್ಷೇತ್ರದಲ್ಲಿ ಒಳ್ಳೆಯ ಛಾಪನ್ನು ಮೂಡಿಸಿದವರು. ಉತ್ತಮ ಗೆಳೆಯರಾಗಿದ್ದ ಅವರು ಎಂದೂ ಕೋಪತಾಪ ಮಾಡಿದವರಲ್ಲ. ಒಬ್ಬ ಒಳ್ಳೆಯ ಸಾಹಿತಿಯನ್ನು ಕಳೆದುಕೊಂಡೆವು ಎಂದರು.

ಶ್ರೀ ಯೋಗೇಶ್ವರಾನಂದ ಸ್ವಾಮೀಜಿ ಮಾತನಾಡಿ ಒಡನಾಡಿಯಾಗಿದ್ದ ಸುಬ್ರಾಯಗೌಡರು ತುಂಬಿದ ಕೊಡ. ವಿಶೇಷ ಶೈಲಿಯ ಅವರ ಬರಹಗಳು ಜನಮಾನಸ ಮುಟ್ಟಿದ್ದವು. ಅವರ ಅರೆಭಾಷೆ ಲೇಖನಗಳು ಹಲವು ಪತ್ರಿಕೆಗಳಲ್ಲಿ ಓದಿದ್ದೆ ಎಂದು ಸ್ಮರಿಸಿದರು. ಚಂದನ ಸಾಹಿತ್ಯ ವೇದಿಕೆ ಕಾರ್ಯದರ್ಶಿ ಸುಮಂಗಲಾ ಲಕ್ಷ್ಮಣ ಕೋಳಿವಾಡ, ವಿಷ್ಣುವರ್ಧನ್ ಅಭಿಮಾನಿ ಬಳಗದ ಅಧ್ಯಕ್ಷ ಹರೀಶ್ಚಂದ್ರ ಪಂಡಿತ್ ಹಾಗೂ ಗಾಯಕ ಗಣೇಶ್ ಬಿ ಎಸ್ ನುಡಿನಮನ ಸಲ್ಲಿಸಿದರು. ಒಂದು ನಿಮಿಷ ಮೌನ ಪ್ರಾರ್ಥನೆ ಮಾಡಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವದರ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು. ಇದೇ ಸಂದರ್ಭ ಸ್ವಾಮೀಜಿಯವರ 163 ನೇ ಪುಸ್ತಕವಾದ ಜೀವದ ಪಯಣ ಸಾಹಿತ್ಯ ಕೃತಿ ಬಿಡುಗಡೆ ಮಾಡಲಾಯಿತು.

Advertisement

Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಅಕ್ರಮ ಅಡಿಕೆ ಸಾಗಾಟ ಪತ್ತೆ | 466 ಚೀಲ ಅಡಿಕೆ ವಶಕ್ಕೆ ಪಡೆದ ಅಸ್ಸಾಂ ರೈಫಲ್ಸ್‌
August 13, 2025
11:03 PM
by: ದ ರೂರಲ್ ಮಿರರ್.ಕಾಂ
ಆ.15 ರಿಂದ ದೇವಸ್ಥಾನಗಳಲ್ಲಿ ಪ್ಲಾಸ್ಟಿಕ್ ನಿಷೇಧಿಸಿ ಸರ್ಕಾರ ಆದೇಶ
August 13, 2025
9:13 PM
by: The Rural Mirror ಸುದ್ದಿಜಾಲ
15 ದಿನಗಳಿಗೊಮ್ಮೆ ಶಾಲೆ, ಅಂಗನವಾಡಿಗಳ ನೀರಿನ ತಪಾಸಣೆ – ಜಿ. ಪಂ ಸಿಇಒ ಸೂಚನೆ 
August 13, 2025
8:04 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 13-08-2025 | ಆ.21 ರವರೆಗೆ ಮಳೆ ವಿಸ್ತರಣೆ ಎಲ್ಲಿ ? ವಾಯುಭಾರ ಕುಸಿತದ ಕಾರಣದಿಂದ ಮಳೆ ಎಲ್ಲೆಲ್ಲಾ ಇದೆ..?
August 13, 2025
2:02 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror

Join Our Group