Advertisement
ಕಾರ್ಯಕ್ರಮಗಳು

ಚಂದ್ರಶೇಖರ ಪೇರಾಲಿಗೆ ಯೆನೆಪೊಯ ಶಿಕ್ಷಕ ಪ್ರಶಸ್ತಿ

Share

ಮಂಗಳೂರು: ಯೆನೆಪೊಯ ಸಮೂಹ ಸಂಸ್ಥೆಗಳ ಸಂಸ್ಥಾಪಕ ದಿವಂಗತ ಯೆನೆಪೊಯ ಮೊಹಿಯುದ್ದೀನ್ ಕುಂಞಿ ಸ್ಮರಣಾರ್ಥ ಸಂಸ್ಥೆಯ ಸಂಸ್ಥಾಪಕರ ದಿನವಾದ ನ.14ರಂದು ನೀಡಲಾಗುವ ಪ್ರಸಕ್ತ ಸಾಲಿನ ಯೆನೆಪೊಯ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭ ನಗರದ ಯೆನೆಪೊಯ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ನಡೆಯಿತು.

ಶಿಕ್ಷಣ ಕ್ಷೇತ್ರದಲ್ಲಿ ಸರಕಾರಿ ಶಾಲೆಗಳ ಮೂಲಕ ಉನ್ನತ ಸಾಧನೆಗೈದ ಶಿಕ್ಷಕರಿಗೆ ನೀಡಲಾಗುವ ಈ ಪ್ರಶಸ್ತಿಯನ್ನು ಪ್ರೌಢಶಾಲಾ ವಿಭಾಗದಲ್ಲಿ ಸುಳ್ಯ ತಾಲೂಕಿನ ಎಲಿಮಲೆ ಸರಕಾರಿ ಪ್ರೌಢಶಾಲೆಯ ಶಿಕ್ಷಕ ಚಂದ್ರಶೇಖರ ಪೇರಾಲು ಹಾಗೂ ಪ್ರಾಥಮಿಕ ವಿಭಾಗದಲ್ಲಿ ಬೈಲು ಪ್ರಾಥಮಿಕ ಶಾಲಾ ಶಿಕ್ಷಕ ಎಡ್ವರ್ಡ್ ಡಿಸೋಜರಿಗೆ ಅವರಿಗೆ ಪ್ರದಾನ ಮಾಡಲಾಯಿತು. ನಗದು ಹಾಗು ಫಲಕ ಒಳಗೊಂಡ ಪ್ರಶಸ್ತಿಯನ್ನು ಯೆನೆಪೊಯ (ಪರಿಗಣಿತ) ವಿವಿ ಕುಲಾಧಿಪತಿ ವೈ.ಅಬ್ದುಲ್ಲಾ ಕುಂಞಿ ಪ್ರದಾನ ಮಾಡಿದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಚಂದ್ರಶೇಖರ ಪೇರಾಲು, ನಾನು ಬಾಲ್ಯದಲ್ಲಿ 10 ಕಿ.ಮೀ. ದೂರ ಕಾಲ್ನಡಿಗೆಯಲ್ಲಿ ಹೋಗಿ ಸುಳ್ಯದ ಕುಗ್ರಾಮ ವೊಂದರಲ್ಲಿರುವ ಶಾಲೆಯಲ್ಲಿ ಶಿಕ್ಷಣ ಪಡೆದಿದ್ದೇನೆ. ಗ್ರಾಮೀಣ ಶಾಲೆಗಳ ಮಕ್ಕಳ ಬಡತನ ಕಂಡು ಅವರಿಗೆ ಏನಾದರೂ ಸಹಾಯ ಮಾಡಬೇಕೆಂದು ನಿರ್ಧರಿಸಿ ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸತೊಡಗಿದ್ದೇನೆಶಾಲೆಯಲ್ಲಿ, ಸರಕಾರಿ ಕಚೇರಿಯಲ್ಲಿ ಉತ್ತಮ ವಾತಾವರಣವನ್ನು, ಆಕರ್ಷಕ ಗೊಳಿಸುವ ಕೆಲಸವನ್ನು ಮಾಡಿದ್ದೇನೆ. ವಿದ್ಯಾರ್ಥಿಗಳಿಗೆ ಶಿಕ್ಷಕರು ಉತ್ತಮ ಪ್ರೇರಕರು, ಮಾರ್ಗದರ್ಶಿಗಳು ಆಗಿರಬೇಕು ಎಂದರು.

ಎಡ್ವರ್ಡ್ ಡಿಸೋಜ ಮಾತನಾಡಿ, ಬೆಳ್ತಂಗಡಿಯ ಶಾಲೆಯಲ್ಲಿ ಕಾಣಿಕೆ ಡಬ್ಬಿ ಇಟ್ಟು ಸಂಗ್ರಹವಾದ ಹಣದಿಂದ ಶಾಲೆಯ ಅಭಿವೃದ್ಧಿ ಮಾಡಿದ ತೃಪ್ತಿ ಇದೆ ಎಂದರು. ವೈಎಂಕೆ ಸ್ಮಾರಕ ಉಪನ್ಯಾಸ ನೀಡಿದ ಮಂಗಳೂರು ಮೀನುಗಾರಿಕಾ ಕಾಲೇಜಿನ ಮಾಜಿ ಡೀನ್ ಎಸ್.ಎಂ.ಶಿವಪ್ರಕಾಶ್, ವಿದ್ಯಾರ್ಥಿಗಳು ನಿರಂತರ ಕ್ರಿಯಾಶೀಲತೆಯೊಂದಿಗೆ ನಿರಂತರ ಕಲಿಕೆಯೊಂದು ಸ್ವಯಂಸ್ಫೂರ್ತಿ ಪಡೆದುಕೊಳ್ಳಬೇಕು ಎಂದರು.

ಸಮಾರಂಭದಲ್ಲಿ ಯೆನೆಪೊಯ ವಿವಿ ಸಹ ಕುಲಪತಿ ಫರ್ಹಾದ್ ಯೆನೆಪೊಯ, ಯೆನೆಪೊಯ ಪಪೂ ಕಾಲೇಜಿನ ಪ್ರಾಂಶುಪಾಲ ಜೋಸೆಫ್ ಮಚಿರಾತ್, ಶಾಲಾ ಕ್ಯಾಂಪಸ್ ನಿರ್ದೇಶಕಿ ಮಿಶ್ರಿಯಾ ಜಾವೆದ್, ಶಾಲಾ ಉಪ ಪ್ರಾಂಶುಪಾಲ ರೇಶ್ಮಾ ನಾಯಕ್, ಯೆನೆಪೊಯ ಸಂಸ್ಥೆಗಳ ಆಡಳಿತ ಮಂಡಳಿಯ ಸದಸ್ಯೆ ನಸ್ರೀನಾ ಅಬ್ದುಲ್ಲಾ ಮತ್ತಿತರರು ಉಪಸ್ಥಿತರಿದ್ದರು.
ಅನಿಲ್ ಕಾರ್ಯಕ್ರಮ ನಿರೂಪಿಸಿದರು.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ರಬ್ಬರ್ ಕ್ಷೇತ್ರಕ್ಕೆ ಹೊಸ ಅವಕಾಶ – ಈಗ ಅಸ್ಸಾಂ ದೇಶದ ಮೂರನೇ ಅತಿದೊಡ್ಡ ರಬ್ಬರ್ ಉತ್ಪಾದಕ ರಾಜ್ಯ

ಕೇರಳ ಮತ್ತು ತ್ರಿಪುರ ನಂತರ ಅಸ್ಸಾಂ ದೇಶದ ಮೂರನೇ ಅತಿದೊಡ್ಡ ರಬ್ಬರ್ ಉತ್ಪಾದಕ…

1 hour ago

ನಕಲಿ ಹೆಲಿಕಾಪ್ಟರ್ ಬುಕ್ಕಿಂಗ್ ಜಾಲ ಭೇದಿಸಿದ ದೆಹಲಿ ಪೊಲೀಸರು, ಮೂವರು ಬಂಧನ

ಹೆಲಿಕಾಪ್ಟರ್ ಟಿಕೆಟ್ ಬುಕ್ಕಿಂಗ್ ಹೆಸರಿನಲ್ಲಿ ಲಕ್ಷಾಂತರ ವಂಚನೆ ನಡೆಸಿದ ಜಾಲವನ್ನು ದೆಹಲಿ ಪೊಲೀಸರು…

1 hour ago

ಮಳೆಗಾಲದ ಎಚ್ಚರಿಕೆ: ರಸ್ತೆ ಡಿವೈಡರ್‌ಗಳ ಮೇಲಿನ ಫ್ಲೆಕ್ಸ್‌, ಬ್ಯಾನರ್‌ ತೆರವುಗೊಳಿಸಲು ಜಿಲ್ಲಾಧಿಕಾರಿ ಸೂಚನೆ

ಮುಂಗಾರು ಮಳೆಯಿಂದ ಅಪಘಾತ ಸಂಭವಿಸುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ…

2 hours ago

ಕೇರಳದಲ್ಲಿ ಜೂನ್ 12-13 ರಂದು ಭಾರೀ ಮಳೆ ಎಚ್ಚರಿಕೆ – ಬೆಂಗಳೂರು ಸೇರಿ ಕರ್ನಾಟಕದ ಹಲವು ಭಾಗಗಳಲ್ಲಿ ಉತ್ತಮ ಮಳೆ ಸಾಧ್ಯತೆ

ಕರ್ನಾಟಕದಲ್ಲಿ ಮುಂದಿನ ನಾಲ್ಕು ದಿನ ವ್ಯಾಪಕ ಮಳೆಯಾಗುವ ಸಾಧ್ಯತೆ ಇದ್ದು, ಬೆಂಗಳೂರಿನಲ್ಲಿ 30-40…

4 hours ago

ತೆಂಗು-ಕೊಬ್ಬರಿ ಮಾರುಕಟ್ಟೆಗೆ ಭಾರೀ ಹೊಡೆತ – ಬೆಲೆ ಕುಸಿತ ತಾತ್ಕಾಲಿಕವೇ ಅಥವಾ ದೀರ್ಘಾವಧಿ ಸಂಕಷ್ಟವೇ?

ದಕ್ಷಿಣ ಭಾರತದ ತೆಂಗು ಹಾಗೂ ಕೊಬ್ಬರಿ ಮಾರುಕಟ್ಟೆಯಲ್ಲಿ ಬೆಲೆಗಳು ಭಾರೀ ಕುಸಿತ ಕಂಡಿದ್ದು,…

6 hours ago

ಭಾರತೀಯ ಮಾವಿನ ಹಣ್ಣಿಗೆ ನೇಪಾಳ ನಿಷೇಧವಿಲ್ಲ – ಸುಳ್ಳು ವರದಿಗಳಿಗೆ ಭಾರತ-ನೇಪಾಳ ಸರ್ಕಾರಗಳ ಸ್ಪಷ್ಟನೆ

ಭಾರತೀಯ ಮಾವಿನ ಹಣ್ಣಿನ ಆಮದಿಗೆ ನೇಪಾಳ ಯಾವುದೇ ನಿಷೇಧ ಹೇರಿಲ್ಲ ಎಂದು ಭಾರತ…

11 hours ago