ಕೊರೋನಾ ವೈರಸ್ ಇಡೀ ಪ್ರಪಂಚದಲ್ಲಿ ತಲೆ ಎತ್ತಿ ನಿಂತಿದೆ. ಕೊರೋನಾ ವೈರಸ್ ಇದೆ-ಇಲ್ಲ ಎಂಬ ಚರ್ಚೆ ಹೆಚ್ಚಾಗಿರುವ ನಡುವೆಯೇ ಚಳಿಗಾಲದಲ್ಲಿ ಮತ್ತೆ ಸಾಂಕ್ರಾಮಿಕ ರೋಗ ಬಾಧೆ ಕಾಡಲಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ವಿಜ್ಞಾನಿಗಳು ಈ ಪರಿಸ್ಥಿತಿಯನ್ನು ‘ಟ್ವೈನೆಡೆಮಿಕ್’ ಎಂದು ಹೆಸರಿಸಿದ್ದಾರೆ.
ಈಗಿನ ಮಾಹಿತಿ ಪ್ರಕಾರ ಋತುಮಾನಗಳು ಬದಲಾಗುವ ವೇಳೆ ಸಾಮಾನ್ಯವಾಗಿ ಶೀತ-ಜ್ವರ ಬಾಧೆ ಇರುತ್ತದೆ. ಇದು ಒಂದೆರಡು ದಿನಗಳ ಕಾಲ ಇದ್ದು ನಂತರ ವಾಸಿಯಾಗುತ್ತದೆ. ಇದು ಕೂಡಾ ವೈರಸ್ ಜ್ವರವಾಗಿದೆ. ಆದರೆ ಈಗಾಗಲೇ ಕೋವಿಡ್ ಇರುವ ಕಾರಣದಿಂದ ಋತುಮಾನ ಬದಲಾವಣೆಯ ಜ್ವರವೂ ಸಾಂಕ್ರಾಮಿಕವಾಗಬಹುದು. ಅಂತಹ ಪರಿಸ್ಥಿತಿಯಲ್ಲಿ, ರೋಗಿಗಳ ಸಂಖ್ಯೆ ಹೆಚ್ಚಾದರೆ, ಆಸ್ಪತ್ರೆಗಳ ಮುಂದೆ ದೊಡ್ಡ ಸಮಸ್ಯೆ ಉಂಟಾಗುತ್ತದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಜನರು ಭಯಗೊಂಡರೆ ಕೋವಿಡ್ ಪರಿಸ್ಥಿತಿಯೇ ಬರಲಿದೆ. ಹೀಗಾಗಿ ಭಯ ನಿವಾರಣೆ ಹಾಗೂ ಆಸ್ಪತ್ರೆಗಳಲ್ಲಿ ದಟ್ಟಣೆ ನಿವಾರಣೆಗೆ ಕ್ರಮ ಅನಿವಾರ್ಯ ಎಂದೂ ತಜ್ಞರು ಎಚ್ಚರಿಸಿದ್ದಾರೆ. ಈಗಾಗಲೇ ಕೊರೋನಾ ಭಯ ಜಗತ್ತನ್ನು ಆವರಿಸಿದೆ. ಈ ಭಯದ ನಡುವೆ ಮುಂದಿನ ಋತುಮಾನ ಬದಲಾವಣೆಯ ಸಮಯದ ಜ್ವರ ಬಗ್ಗೆ ಧೈರ್ಯ ತುಂಬುವ ಕೆಲಸವಾಗಬೇಕಿದೆ. ಗ್ರಾಮೀಣ ಭಾಗದಲ್ಲೂ ವೈದ್ಯರು, ತಜ್ಞ ವೈದ್ಯರು ಲಭ್ಯವಾಗುವಂತೆ, ಸೂಕ್ತ ಔಷಧಿ ಲಭ್ಯವಾಗುವಂತೆ, ತಮ್ಮ ಕುಟುಂಬ ವೈದ್ಯರೇ ಲಭ್ಯವಾಗುವಂತೆ ವ್ಯವಸ್ಥೆ ಆಗಬೇಕಾಗಿದೆ. ಇದಕ್ಕಾಗಿ ಈಗಲೇ ತಯಾರಿ ನಡೆಯಬೇಕು ಎಂದು ವಿಜ್ಞಾನಿಗಳು ಸಲಹೆ ನೀಡಿದ್ದಾರೆ.
ಹಿತವಾದ ಆಹಾರವನ್ನು ಮಿತ ಪ್ರಮಾಣದಲ್ಲಿ ಮತ್ತು ಸಕಾಲದಲ್ಲಿ ಸೇವಿಸುವುದು ಆರೋಗ್ಯಕರ ಜೀವನದ ಮೂಲಮಂತ್ರ…
ಭಾರಿ ಮಳೆಯ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಅಂಗನವಾಡಿ, ಶಾಲೆ, ಪಿಯು, ಐಟಿಐ…
ಕರಾವಳಿ ಹಾಗೂ ಮಲೆನಾಡಿನಲ್ಲಿ ಆಗಸ್ಟ್ 1ರವರೆಗೆ ಬಿಟ್ಟು ಬಿಟ್ಟು ಉತ್ತಮ ಮಳೆಯ ಮುನ್ಸೂಚನೆ…
ಸುಳ್ಯ ತಾಲೂಕಿನ ಬಾಳುಗೋಡು, ಹರಿಹರ, ಬಳ್ಪ, ಗುತ್ತಿಗಾರು, ಸುಬ್ರಹ್ಮಣ್ಯ ಸೇರಿದಂತೆ ಹಲವು ಗ್ರಾಮಗಳಲ್ಲಿ…
ಬಾಂಗ್ಲಾದೇಶದ ವಿಜ್ಞಾನಿಗಳು ಹಲಸಿನ ಬೀಜದಿಂದ ಖನಿಜಾಂಶ ಸಮೃದ್ಧ ಆಹಾರ ತಯಾರಿಸುವ ತಂತ್ರಜ್ಞಾನಕ್ಕೆ ಪೇಟೆಂಟ್…
ಭಾರತದ ಕೃಷಿ ರಫ್ತು ಉತ್ಪನ್ನಗಳ ಸಂಖ್ಯೆ 280ರಿಂದ ಸುಮಾರು 500ಕ್ಕೆ ಏರಿಕೆಯಾಗಿದೆ. ₹4.61…