ಸುಬ್ರಹ್ಮಣ್ಯ: ಚಾರಣದ ವೇಳೆ ಕಾಲು ಮುರಿತಕ್ಕೊಳಗಾಗಿದ್ದ ಯುವತಿಯೋರ್ವಳನ್ನು ಸುಬ್ರಹ್ಮಣ್ಯದ ಯುವಕರ ತಂಡ 7 ಕಿಲೋ ಮೀಟರ್ ದೂರ ಹೊತ್ತು ತಂಡ ಘಟನೆ ನಡೆದಿದೆ.
(ವಿಡಿಯೋ ಇದೆ)
ಬೆಂಗಳೂರು ಮೂಲದ 23 ಜನರ ತಂಡದ ಚಾರಣಕ್ಕೆ ಸೋಮವಾರ ತೆರಳಿತ್ತು. ಈ ಸಂದರ್ಭ ಯುವತಿಯೋರ್ವಳು ಕಾಲು ಜಾರಿ ಬಿದ್ದು ಕಾಲುನೋವಿನಿಂದ ಬಳಲಿದರು. ಆಕೆಯನ್ನು ಸುಬ್ರಹ್ಮಣ್ಯಕ್ಕೆ ಕರೆತರುವ ಬಗ್ಗೆ ಯುವಕರಲ್ಲಿ ಗೊಂದಲ ಉಂಟಾಯಿತು. ಯುವಕರ ತಂಡ ಅರಣ್ಯ ಇಲಾಖಾ ಸಿಬಂದಿಗಳಿಗೆ ಮಾಹಿತಿ ನೀಡಿದ ಬಳಿಕ ಅರಣ್ಯ ಅಧಿಕಾರಿಗಳು ಸುಬ್ರಹ್ಮಣ್ಯದ ಯುವಕರಿಗೆ ಮಾಹಿತಿ ನೀಡಿದ್ದಾರೆ.
ಗಿರಿಗದ್ದೆ ಬಳಿಯಿಂದ ಸುಬ್ರಹ್ಮಣ್ಯದ ಚಾಲಕ ಮಾಲಕರ ಸಂಘದ ಅಧ್ಯಕ್ಷರಾದ ಕುಸುಮಾಧರ, ಧರ್ಮಪಾಲ , ಕೃಷ್ಣ ಕುಮಾರ್ ಶೆಟ್ಟಿ, ಜೀವನ್ , ಸುಂದರ ಗೌಡ ಚೇರು ಮೊದಲಾದ ಯುವಕರ ತಂಡ ಪರ್ವತಕ್ಕೆ ತೆರಳಿ ಯುವತಿಯನ್ನು ಅಟ್ಟೆ ಮೇಲೆ ಮಲಗಿಸಿ ಸುಮಾರು ಏಳು ಕಿಲೋಮೀಟರ್ ಹೆಗಲಮೇಲೆ ಹೊತ್ತುಕೊಂಡು ಬಂದು ರಕ್ಷಣೆ ಮಾಡಿದ್ದಾರೆ.
ವಿಡಿಯೋ ಇಲ್ಲಿದೆ…..
ಜೂನ್ 12ರಿಂದ ರಾಜ್ಯದ ಬಹುತೇಕ ಭಾಗಗಳಲ್ಲಿ ಉತ್ತಮ ಹಾಗೂ ಕೆಲವು ಭಾಗಗಳಲ್ಲಿ ಭಾರಿ…
ಜೂನ್ 12 ರಿಂದ 15 ರವರೆಗೆ ಕರ್ನಾಟಕದಲ್ಲಿ ಮತ್ತು ಜೂನ್ 13 ರಿಂದ…
ಗದಗ ಜಿಲ್ಲೆಯಲ್ಲಿ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭಿಮಾ ಯೋಜನೆಯಡಿ ತೋಟಗಾರಿಕೆ ಬೆಳೆಗಳಾದ…
ಕಳೆದ 11 ವರ್ಷಗಳಲ್ಲಿ ಭಾರತದ ಕಡು ಬಡವರ ಸಂಖ್ಯೆ ಶೇಕಡ 21.1 ರಿಂದ…
ಬಂದರು ಸಂಪರ್ಕಕ್ಕಾಗಿ ಮತ್ತು ಧಾರ್ಮಿಕ ಪ್ರವಾಸೋದ್ಯಮಕ್ಕಾಗಿ 3 ಸಾವಿರ ಕಿಲೋ ಮೀಟರ್ಗಿಂತ ಹೆಚ್ಚಿನ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490