ಸುಬ್ರಹ್ಮಣ್ಯ: ಚಾರಣದ ವೇಳೆ ಕಾಲು ಮುರಿತಕ್ಕೊಳಗಾಗಿದ್ದ ಯುವತಿಯೋರ್ವಳನ್ನು ಸುಬ್ರಹ್ಮಣ್ಯದ ಯುವಕರ ತಂಡ 7 ಕಿಲೋ ಮೀಟರ್ ದೂರ ಹೊತ್ತು ತಂಡ ಘಟನೆ ನಡೆದಿದೆ.
(ವಿಡಿಯೋ ಇದೆ)
ಬೆಂಗಳೂರು ಮೂಲದ 23 ಜನರ ತಂಡದ ಚಾರಣಕ್ಕೆ ಸೋಮವಾರ ತೆರಳಿತ್ತು. ಈ ಸಂದರ್ಭ ಯುವತಿಯೋರ್ವಳು ಕಾಲು ಜಾರಿ ಬಿದ್ದು ಕಾಲುನೋವಿನಿಂದ ಬಳಲಿದರು. ಆಕೆಯನ್ನು ಸುಬ್ರಹ್ಮಣ್ಯಕ್ಕೆ ಕರೆತರುವ ಬಗ್ಗೆ ಯುವಕರಲ್ಲಿ ಗೊಂದಲ ಉಂಟಾಯಿತು. ಯುವಕರ ತಂಡ ಅರಣ್ಯ ಇಲಾಖಾ ಸಿಬಂದಿಗಳಿಗೆ ಮಾಹಿತಿ ನೀಡಿದ ಬಳಿಕ ಅರಣ್ಯ ಅಧಿಕಾರಿಗಳು ಸುಬ್ರಹ್ಮಣ್ಯದ ಯುವಕರಿಗೆ ಮಾಹಿತಿ ನೀಡಿದ್ದಾರೆ.
ಗಿರಿಗದ್ದೆ ಬಳಿಯಿಂದ ಸುಬ್ರಹ್ಮಣ್ಯದ ಚಾಲಕ ಮಾಲಕರ ಸಂಘದ ಅಧ್ಯಕ್ಷರಾದ ಕುಸುಮಾಧರ, ಧರ್ಮಪಾಲ , ಕೃಷ್ಣ ಕುಮಾರ್ ಶೆಟ್ಟಿ, ಜೀವನ್ , ಸುಂದರ ಗೌಡ ಚೇರು ಮೊದಲಾದ ಯುವಕರ ತಂಡ ಪರ್ವತಕ್ಕೆ ತೆರಳಿ ಯುವತಿಯನ್ನು ಅಟ್ಟೆ ಮೇಲೆ ಮಲಗಿಸಿ ಸುಮಾರು ಏಳು ಕಿಲೋಮೀಟರ್ ಹೆಗಲಮೇಲೆ ಹೊತ್ತುಕೊಂಡು ಬಂದು ರಕ್ಷಣೆ ಮಾಡಿದ್ದಾರೆ.
ವಿಡಿಯೋ ಇಲ್ಲಿದೆ…..
ರಾಜ್ಯದ ಕೆಲವು ಕಡೆ ಮಳೆ ಕಡಿಮೆ ಇದ್ದು, ಮುಂದಿನ 7 ದಿನಗಳ ಹವಾಮಾನ…
ಪ್ರೇಮ ಸಂಬಂಧವು ಭಾವನಾತ್ಮಕ ಸಾಮರಸ್ಯ, ಪರಸ್ಪರ ಗೌರವ ಮತ್ತು ವಿಶ್ವಾಸದ ಮೇಲೆ ನಿಂತಿದೆ.…
ದೇಶದ ಪ್ರತಿಷ್ಠಿತ ಮಹೇಂದ್ರ ಏಂಡ್ ಮಹೇಂದ್ರ ಕಂಪೆನಿಯು ನೂತನವಾಗಿ ತಯಾರಿಸಿದ ಹೊಸ ಮಾದರಿಯ…
ಶೇ.30-40 ರಷ್ಟು ಅಡಿಕೆ ಕೊಳೆರೋಗದಿಂದ ಹಾನಿಯಾಗಿರುವ ಹಾಗೂ ಶೇ.50 ಕ್ಕಿಂತ ಅಧಿಕ ಅಡಿಕೆ…
ಹಲಸಿನ ಬೇಳೆ ಸೂಪ್ ಗೆ ಬೇಕಾಗುವ ವಸ್ತುಗಳು : ಹಲಸಿನ ಬೇಳೆ, ಉಪ್ಪು…
ಮಗನಿಗೆ ತಂದೆ, ಮಗಳಿಗೆ ತಾಯಿ, ಸಿಬ್ಬಂದಿಗಳಿಗೆ ಸಂಸ್ಥೆಯು - ಕಾಮಧೇನು. ಕಾಮಿಸಿದ, ಇಚ್ಛಿಸಿದ…