Advertisement

ಚಿರತೆ ದಾಳಿಯಾದರೆ ಮಾಡುವುದೇನು…..?

Share

ಸುಳ್ಯ: ಕೆಲವು ವರ್ಷಗಳ ಹಿಂದೆ ಮೈಸೂರಿನಲ್ಲಿ  ಮದ ಏರಿದ ಆನೆ ಪೇಟೆಯಲ್ಲಿ  ಓಡಾಡಿ ಹಾನಿ ಮಾಡಿತ್ತು. ಅದೇ ಸಂದರ್ಭ ಪ್ರಶ್ನೆಯೊಂದು ಬಂತು… ಪುತ್ತೂರು, ಸುಳ್ಯ, ಮಂಗಳೂರು ನಗರಕ್ಕೆ ಆನೆ ಬಂದರೆ ತಕ್ಷಣದ ಪರಿಹಾರ ಏನು ? ಈ ಬಗ್ಗೆ ಅರಣ್ಯ ಇಲಾಖೆ ಸಹಿತ ವಿವಿಧ ಇಲಾಖೆಗಳ ಬಳಿ ಮಾತನಾಡಿಸಲಾಯಿತು. ತಕ್ಷಣದ ಪರಿಹಾರ ಏನೂ ಇರಲಿಲ್ಲ…!

ಬಳಿಕ ಈ ಸಂಗತಿ ಮರೆತೇ ಹೋಗಿತ್ತು. ಅದಾಗಿ ಕೆಲವೇ ಸಮಯದಲ್ಲಿ  ಪುತ್ತೂರು ನಗರದಲ್ಲಿ  ಲಾರಿಯಲ್ಲಿ  ಆನೆ ಸಾಗಾಟ ಮಾಡುತ್ತಿದ್ದಾಗ ಮದ ಏರಿದ ಆನೆ ಲಾರಿ ಚಾಲಕ ಹಾಗೂ ಮಾವುತ ಮೇಲೆ ಸಿಟ್ಟಾಯಿತು. ಎರಡು ದಿನಗಳ ಕಾಲ ಪುತ್ತೂರು ನಗರದಲ್ಲೇ ಆನೆ ಉಳಿಯಿತು. ವಾಹನ ಓಡಾಟಗಳಿಗೂ ಅಡ್ಡಿಯಾಯಿತು. ಆಗ ಇಲಾಖೆಗಳಿಗೂ ಮನವರಿಕೆಯಾಗಿತ್ತು.

ಈಗಲೂ ಅದೇ ಪ್ರಶ್ನೆ… ಸುಳ್ಯದ ಗ್ರಾಮೀಣ ಭಾಗ ಸೇರಿದಂತೆ ಪೇಟೆಗೆ ಚಿರತೆ ದಾಳಿ ಮಾಡಿದರೆ ತಕ್ಷಣದ ಕ್ರಮ ಏನು ? ಪರಿಹಾರ ಹೇಗೆ ? 

ಇದಕ್ಕೆ ಉತ್ತರ ಗುರುವಾರ ಬಳ್ಪದಲ್ಲಿ  ನಡೆದ ಚಿರತೆ ದಾಳಿ. ಯಾವುದೇ ಉರುಳಿಗೆ ಬಿದ್ದ ಚಿರತೆ ಯದ್ವಾತದ್ವ ಓಡಾಡಿತು, ದಾಳಿ ಮಾಡಿತು. ಸ್ಥಳೀಯರ ಮೇಲೆ ಮಾತ್ರವಲ್ಲ ಅರಣ್ಯ ಇಲಾಖೆಯ ಅಧಿಕಾರಿ, ಸಿಬಂದಿಗಳ ಮೇಲೂ ದಾಳಿ ಮಾಡಿತು.  ಆಗ ಮತ್ತಷ್ಟು ಅರಿವಾಯ್ತು, ಇಲಾಖೆಯ ಬಳಿ ಚಿರತೆ ಹಿಡಿಯುವ ಬಲೆ, ಜಿಲ್ಲೆಯಲ್ಲಿ ಚಿರತೆ ಹಿಡಿಯುವ ಕೌಶಲ್ಯ ಹೊಂದಿದ ಸಿಬಂದಿಗಳ ಕೊರತೆ, ಡ್ರೋನ್ ಕ್ಯಾಮರಾ ಸೇರಿದಂತೆ ಯಾವುದೇ ವ್ಯವಸ್ಥಿತ ಸಲಕರಣೆಗಳು ಇಲ್ಲ..!. ಈ ಹಿಂದೆ ಬೆಳ್ತಂಗಡಿ ತಾಲೂಕು ಸೇರಿದಂತೆ ವಿವಿದೆಡೆ ಚಿರತೆ ಪ್ರತ್ಯಕ್ಷವಾಗಿದೆ. ಬಳ್ಪ ಪರಿಸರದಲ್ಲೇ ಹಲವು ಬಾರಿ ಕಾಣಿಸಿಕೊಂಡಿದೆ. ಹಾಗಿದ್ದರೂ ಯಾವುದೇ ವ್ಯವಸ್ಥಿತ ಸಲಕರಣೆಗಳು, ಕೌಶಲ್ಯ ಭರಿತ ಸಿಬಂದಿಗಳು ಇಲ್ಲದೇ ಇರುವುದು  ಕಂಡುಬಂದಿದೆ. ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳು ಈ ಬಗ್ಗೆ ಯೋಚನೆ ಮಾಡಬೇಕಿದೆ. ಜನರನ್ನು ಭಯದಿಂದ ಮುಕ್ತ ಮಾಡಲು ತಕ್ಷಣದ ಪರಿಹಾರ ಹಾಗೂ ಚಿರತೆ ಹಿಡಿಯುವ ಉಪಾಯ, ಓಡಿಸುವ ಗುಟ್ಟು ಇತ್ಯಾದಿಗಳ ಕಡೆಗೆ ಗಮನಹರಿಸಬೇಕಿದೆ.  ಬಳ್ಪದಲ್ಲಿ  ಹಲವು ಬಾರಿ ಚಿರತೆ ಪ್ರತ್ಯಕ್ಷವಾಗಿದೆ. ಈಗ ಪೇಟೆ ಸಮೀಪವೇ ಚಿರತೆ ಕಂಡುಬರುತ್ತಿರುವ ಕಾರಣ ತಕ್ಷಣವೇ ಹಿಡಿಯುವ ಹಾಗೂ ಜನರಿಗೂ ಹೇಗೆ ರಕ್ಷಣೆ ಎಂಬುದರ ಬಗ್ಗೆಯೂ ಮಾಹಿತಿ ಅಗತ್ಯವಾಗಿದೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ವರದಿ | 05-03-2026 | ಕರ್ನಾಟಕದಲ್ಲಿ ಬಿಸಿಲಿನ ಅಬ್ಬರ ಶುರು..! ಇನ್ನು 10 ದಿನ ಮಳೆಯ ಲಕ್ಷಣ ಇಲ್ಲ

ಕರ್ನಾಟಕದಲ್ಲಿ ಮುಂದಿನ ಕೆಲವು ದಿನಗಳವರೆಗೆ ಒಣ ಹವಾಮಾನ ಮುಂದುವರಿಯುವ ಸಾಧ್ಯತೆ ಇದೆ. ಗುಜರಾತ್…

1 day ago

ಅಡಿಕೆ ಮಾರುಕಟ್ಟೆ | ಕೆಲವು ಮಾರುಕಟ್ಟೆಗಳಲ್ಲಿ ಏರಿಕೆ, ಕೆಲವು ಸ್ಥಿರ – ಸಿಂಗಲ್‌ ಚೋಲ್‌ ಗೆ ಬೇಡಿಕೆ..! | ರಬ್ಬರ್ ದರದಲ್ಲಿ ಸ್ವಲ್ಪ ಕುಸಿತ

ಇಂದಿನ ಅಡಿಕೆ ಮಾರುಕಟ್ಟೆಯಲ್ಲಿ ಪಿಂಗಾರ, ಮಾಸ್‌, ಟಿಎಸ್‌ಎಸ್‌, ತುಮ್ಕೋಸ್‌, ಮ್ಯಾಮ್ಕೋಸ್ ಹಾಗೂ ಕ್ಯಾಂಪ್ಕೊ…

1 day ago

ಕಾಡಾನೆ ನಿಯಂತ್ರಣಕ್ಕೆ ರಾಜ್ಯದ ಕ್ರಮ : ಎಲಿಫೆಂಟ್ ಟಾಸ್ಕ್ ಫೋರ್ಸ್ ರಚನೆ

ಕಾಡಾನೆ ಹಾವಳಿ ನಿಯಂತ್ರಣಕ್ಕಾಗಿ ಕರ್ನಾಟಕ ಸರ್ಕಾರ 28 ಸಿಬ್ಬಂದಿಯ ಎಲಿಫೆಂಟ್ ಟಾಸ್ಕ್ ಫೋರ್ಸ್…

1 day ago

ಕಾಡಾನೆ ಹಾವಳಿ ತಡೆಗೆ ಸರ್ಕಾರದ ಕ್ರಮ : ಕೊಪ್ಪ ಅರಣ್ಯ ವಿಭಾಗಕ್ಕೆ ₹12.77 ಕೋಟಿ, ರೈಲ್ವೆ ಬ್ಯಾರಿಕೇಡ್ ಅಳವಡಿಕೆ

ಕೊಪ್ಪ ಅರಣ್ಯ ವಿಭಾಗದಲ್ಲಿ ಕಾಡಾನೆಗಳು ನಾಡಿಗೆ ಪ್ರವೇಶಿಸದಂತೆ ತಡೆಯಲು ರೈಲ್ವೆ ಬ್ಯಾರಿಕೇಡ್ ಅಳವಡಿಕೆಗೆ…

1 day ago

ಭವಿಷ್ಯದ ಬಾಳೆ ಬೆಳೆ ಉಳಿಸುವ ಗುಟ್ಟು ಕಾಡು ಬಾಳೆ ಜಾತಿಯಲ್ಲಿ!

ಅರಣ್ಯದಲ್ಲಿ ಬೆಳೆಯುವ "ಸಿಕ್ಕಿಂ ಬಾಳೆ" ಜಾತಿಯಲ್ಲಿ ಹವಾಮಾನ ಬದಲಾವಣೆಯನ್ನು ತಾಳುವ ಜಿನೀಯ ಗುಣಗಳು…

2 days ago

ಕೃಷಿ ಮಾರುಕಟ್ಟೆ ವರದಿ | ಅಡಿಕೆ ಮಾರುಕಟ್ಟೆಯಲ್ಲಿ ಮಿಶ್ರ ಫಲ…!

ಕರ್ನಾಟಕದ ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ ಏರಿಳಿತ ಕಂಡುಬಂದಿದೆ. ಮಲೆನಾಡು ಮಾರುಕಟ್ಟೆಗಳಲ್ಲಿ ಸ್ವಲ್ಪ ಏರಿಕೆ…

2 days ago