Advertisement

ಚಿರತೆ ದಾಳಿಯಾದರೆ ಮಾಡುವುದೇನು…..?

Share

ಸುಳ್ಯ: ಕೆಲವು ವರ್ಷಗಳ ಹಿಂದೆ ಮೈಸೂರಿನಲ್ಲಿ  ಮದ ಏರಿದ ಆನೆ ಪೇಟೆಯಲ್ಲಿ  ಓಡಾಡಿ ಹಾನಿ ಮಾಡಿತ್ತು. ಅದೇ ಸಂದರ್ಭ ಪ್ರಶ್ನೆಯೊಂದು ಬಂತು… ಪುತ್ತೂರು, ಸುಳ್ಯ, ಮಂಗಳೂರು ನಗರಕ್ಕೆ ಆನೆ ಬಂದರೆ ತಕ್ಷಣದ ಪರಿಹಾರ ಏನು ? ಈ ಬಗ್ಗೆ ಅರಣ್ಯ ಇಲಾಖೆ ಸಹಿತ ವಿವಿಧ ಇಲಾಖೆಗಳ ಬಳಿ ಮಾತನಾಡಿಸಲಾಯಿತು. ತಕ್ಷಣದ ಪರಿಹಾರ ಏನೂ ಇರಲಿಲ್ಲ…!

Advertisement
Advertisement

ಬಳಿಕ ಈ ಸಂಗತಿ ಮರೆತೇ ಹೋಗಿತ್ತು. ಅದಾಗಿ ಕೆಲವೇ ಸಮಯದಲ್ಲಿ  ಪುತ್ತೂರು ನಗರದಲ್ಲಿ  ಲಾರಿಯಲ್ಲಿ  ಆನೆ ಸಾಗಾಟ ಮಾಡುತ್ತಿದ್ದಾಗ ಮದ ಏರಿದ ಆನೆ ಲಾರಿ ಚಾಲಕ ಹಾಗೂ ಮಾವುತ ಮೇಲೆ ಸಿಟ್ಟಾಯಿತು. ಎರಡು ದಿನಗಳ ಕಾಲ ಪುತ್ತೂರು ನಗರದಲ್ಲೇ ಆನೆ ಉಳಿಯಿತು. ವಾಹನ ಓಡಾಟಗಳಿಗೂ ಅಡ್ಡಿಯಾಯಿತು. ಆಗ ಇಲಾಖೆಗಳಿಗೂ ಮನವರಿಕೆಯಾಗಿತ್ತು.

Advertisement

ಈಗಲೂ ಅದೇ ಪ್ರಶ್ನೆ… ಸುಳ್ಯದ ಗ್ರಾಮೀಣ ಭಾಗ ಸೇರಿದಂತೆ ಪೇಟೆಗೆ ಚಿರತೆ ದಾಳಿ ಮಾಡಿದರೆ ತಕ್ಷಣದ ಕ್ರಮ ಏನು ? ಪರಿಹಾರ ಹೇಗೆ ? 

ಇದಕ್ಕೆ ಉತ್ತರ ಗುರುವಾರ ಬಳ್ಪದಲ್ಲಿ  ನಡೆದ ಚಿರತೆ ದಾಳಿ. ಯಾವುದೇ ಉರುಳಿಗೆ ಬಿದ್ದ ಚಿರತೆ ಯದ್ವಾತದ್ವ ಓಡಾಡಿತು, ದಾಳಿ ಮಾಡಿತು. ಸ್ಥಳೀಯರ ಮೇಲೆ ಮಾತ್ರವಲ್ಲ ಅರಣ್ಯ ಇಲಾಖೆಯ ಅಧಿಕಾರಿ, ಸಿಬಂದಿಗಳ ಮೇಲೂ ದಾಳಿ ಮಾಡಿತು.  ಆಗ ಮತ್ತಷ್ಟು ಅರಿವಾಯ್ತು, ಇಲಾಖೆಯ ಬಳಿ ಚಿರತೆ ಹಿಡಿಯುವ ಬಲೆ, ಜಿಲ್ಲೆಯಲ್ಲಿ ಚಿರತೆ ಹಿಡಿಯುವ ಕೌಶಲ್ಯ ಹೊಂದಿದ ಸಿಬಂದಿಗಳ ಕೊರತೆ, ಡ್ರೋನ್ ಕ್ಯಾಮರಾ ಸೇರಿದಂತೆ ಯಾವುದೇ ವ್ಯವಸ್ಥಿತ ಸಲಕರಣೆಗಳು ಇಲ್ಲ..!. ಈ ಹಿಂದೆ ಬೆಳ್ತಂಗಡಿ ತಾಲೂಕು ಸೇರಿದಂತೆ ವಿವಿದೆಡೆ ಚಿರತೆ ಪ್ರತ್ಯಕ್ಷವಾಗಿದೆ. ಬಳ್ಪ ಪರಿಸರದಲ್ಲೇ ಹಲವು ಬಾರಿ ಕಾಣಿಸಿಕೊಂಡಿದೆ. ಹಾಗಿದ್ದರೂ ಯಾವುದೇ ವ್ಯವಸ್ಥಿತ ಸಲಕರಣೆಗಳು, ಕೌಶಲ್ಯ ಭರಿತ ಸಿಬಂದಿಗಳು ಇಲ್ಲದೇ ಇರುವುದು  ಕಂಡುಬಂದಿದೆ. ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳು ಈ ಬಗ್ಗೆ ಯೋಚನೆ ಮಾಡಬೇಕಿದೆ. ಜನರನ್ನು ಭಯದಿಂದ ಮುಕ್ತ ಮಾಡಲು ತಕ್ಷಣದ ಪರಿಹಾರ ಹಾಗೂ ಚಿರತೆ ಹಿಡಿಯುವ ಉಪಾಯ, ಓಡಿಸುವ ಗುಟ್ಟು ಇತ್ಯಾದಿಗಳ ಕಡೆಗೆ ಗಮನಹರಿಸಬೇಕಿದೆ.  ಬಳ್ಪದಲ್ಲಿ  ಹಲವು ಬಾರಿ ಚಿರತೆ ಪ್ರತ್ಯಕ್ಷವಾಗಿದೆ. ಈಗ ಪೇಟೆ ಸಮೀಪವೇ ಚಿರತೆ ಕಂಡುಬರುತ್ತಿರುವ ಕಾರಣ ತಕ್ಷಣವೇ ಹಿಡಿಯುವ ಹಾಗೂ ಜನರಿಗೂ ಹೇಗೆ ರಕ್ಷಣೆ ಎಂಬುದರ ಬಗ್ಗೆಯೂ ಮಾಹಿತಿ ಅಗತ್ಯವಾಗಿದೆ.

Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಮಳೆ ಇಲ್ಲ, ನೀರಿಲ್ಲ, ಬರಗಾಲ ಎಂದು ಬೊಬ್ಬೆ ಹೊಡೆಯದಿರಿ : ಮಳೆ ನೀರನ್ನು ಹಿಡಿದಿಡುವ ಕಾರ್ಯ ಅಗತ್ಯ :

ಬರಗಾಲ(Drought) ಬಂದಾಗ ಬಾಯಿ ಬಡಿಕೊಳ್ಳುವವರೇ ಹೆಚ್ಚು. ನೀರಿಲ್ಲ, ಸೆಕೆ, ಮಳೆ ಇಲ್ಲ, ಬೆಳೆಗಳಿಗೆ…

3 hours ago

ಮಾನವರಾದ ನಮಗೆ ಪರಿಸರ ಎಷ್ಟು ಮುಖ್ಯ..? ಪರಿಸರಿದಿಂದ ನಮಗಾಗುವ ಪ್ರಯೋಜನವೇನು..?

ಪರಿಸರ(Environment) ಸ್ವಾಸ್ಥ್ಯದಿಂದರೇ ಮಾತ್ರ ಅದರ ಭಾಗವಾದ ಮಾನವರಾದ(Human) ನಾವು ಸ್ವಾಸ್ಥ್ಯದಿಂದಿರಬಹುದು. ನಮ್ಮ ಆರೋಗ್ಯಕ್ಕೆ(Health)…

4 hours ago

ಸಮುದ್ರದ ಉಪ್ಪು, ಅಯೋಡಿಕರಿಸಿದ ಟೇಬಲ್ ಉಪ್ಪು, ಸೈಂಧವ ಉಪ್ಪು, ಕಪ್ಪು ಉಪ್ಪು : ಯಾವ ಉಪ್ಪು ಆರೋಗ್ಯಕ್ಕೆ ಒಳ್ಳೆಯದು?

ಭಾರತೀಯ(Indian) ಆಹಾರ ಪದ್ಧತಿಯಲ್ಲಿ(Food Style).... ಸಮುದ್ರದ ಉಪ್ಪು(Sea salt), ಅಯೋಡಿಕರಿಸಿದ ಟೇಬಲ್ ಉಪ್ಪು(Iodized…

4 hours ago

ಕೆಲ ಜಿಲ್ಲೆಯ ರೈತರಿಗೆ ಬರ ಪರಿಹಾರ ಹಣ ಬಿಡುಗಡೆ : ಬಳ್ಳಾರಿಯ 36,944 ರೈತರ ಖಾತೆಗೆ 41.40 ಕೋಟಿ ರೂ. ಜಮೆ

ಪ್ರಕೃತಿ ವಿಕೋಪಕ್ಕೆ(Natural disaster) ರೈತ(Farmer) ಬೆಳೆದ ಬೆಳೆಗಳು(Crop) ನಾಶವಾಗುವುದು ಸಾಮಾನ್ಯ. ಮಳೆ(Rain) ಜಾಸ್ತಿಯಾಗಿ…

4 hours ago

ವರುಣ ಕೃಪೆ ತೋರದಿದ್ರೆ ಭಾರಿ ಸಂಕಷ್ಟ : ಡೆಡ್ ಸ್ಟೋರೇಜ್ ತಲುಪಿದ ತುಂಗಭದ್ರಾ ಜಲಾಶಯ!

ಬರಗಾಲದಿಂದ(Drought) ತತ್ತರಿಸಿದ್ದ ರಾಜ್ಯದ ಜನತೆಗೆ ಕೆಲವೆಡೆ ವರುಣರಾಯ(Rain) ಕೃಪೆ ತೋರಿ ತಕ್ಕಮಟ್ಟಿಗೆ ತಂಪೆರೆದಿದ್ದಾನೆ.…

7 hours ago

Karnataka Weather | 19-05-2024 | ಇಂದೂ ಮಳೆ ಇದೆ ಅಲ್ಲಲ್ಲಿ | ಮೇ.22 ನಂತರ ಚಂಡಮಾರುತ ಸಾಧ್ಯತೆ |

ಮೇ 22ರ ನಂತರ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗುವ ಲಕ್ಷಣಗಳಿದ್ದು, ಚಂಡಮಾರುತವಾಗಿ ಪರಿವರ್ತನೆಗೊಳ್ಳವ…

9 hours ago