ಪುತ್ತೂರು: “ಉಣ್ಣುವ ಆಹಾರಗಳು ಅನ್ಯಾನ್ಯ ಕಾರಣಗಳಿಂದಾಗಿ ವಿಷಮಯವಾಗುತ್ತಿದ್ದು ಅದರಿಂದ ಹೊರಗೆ ಬರಲು ಸಾವಯವ ಆಹಾರದ ಸೇವನೆ ಒಂದೇ ಹಾದಿ. ಈ ಹಿನ್ನೆಲೆಯಲ್ಲಿ ಸಾವಯವ ಹಬ್ಬವು ಜನರಲ್ಲಿ ಅರಿವನ್ನು ಮೂಡಿಸಲು ನೆರವಾಗಬೇಕು.” ಎಂದು ಸುದಾನ ಶಿಕ್ಷಣ ಸಂಸ್ಥೆಯ ಸಂಚಾಲಕ ರೆ.ವಿಜಯ ಹಾರ್ವಿನ್ ಅಭಿಪ್ರಾಯಪಟ್ಟರು.
ಅವರು ಸುದಾನ ಶಾಲೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ 2020ರ ಜನವರಿ 4 ಮತ್ತು 5ರಂದು ಪುತ್ತೂರಿನ ‘ಶ್ರೀ ಮಹಾಲಿಂಗೇಶ್ವರ ಸಭಾಭವನ’ದಲ್ಲಿ ನಡೆಯಲಿರುವ ಸಾವಯವ ಹಬ್ಬದ ಆಮಂತ್ರಣ ಪತ್ರವನ್ನು ಬಿಡುಗಡೆಗೊಳಿಸಿ ಮಾತನಾಡಿದರು. ವಿಜಯ ಹಾರ್ವಿನ್ ಅವರು ಹಬ್ಬದ ಕ್ರಿಯಾ ಸಮಿತಿಯ ಗೌರವಾಧ್ಯಕ್ಷರಾಗಿದ್ದು, ಈ ವರೆಗೆ ಆದಂತಹ ಹಬ್ಬದ ಪೂರ್ವಸಿದ್ಧತೆಗಳನ್ನು ಪರಿಶೀಲಿಸಿದರು.
ನವಚೇತನ ಸ್ನೇಹ ಸಂಗಮ ಮತ್ತು ಜೆ.ಸಿ.ಐ.ಪುತ್ತೂರು ಇವರು ಆಯೋಜಿಸುವ ಸಾವಯವ ಹಬ್ಬದ ಕುರಿತು ಮತ್ತು ಅಂದು ನಡೆಯುವ ಕಲಾಪಗಳ ಕುರಿತು ಸಂಗಮದ ಕಾರ್ಯದರ್ಶಿ ಸುಹಾಸ್ ಮರಿಕೆ ವಿವರ ನೀಡಿದರು. ಅಧ್ಯಕ್ಷ ಅನಂತಕೃಷ್ಣ ನೈತ್ತಡ್ಕ ಅಂದು ಪ್ರದರ್ಶಿತವಾಗಲಿರುವ ಉದ್ದೇಶಿತ ಮೌಲ್ಯವರ್ಧಿತ ಉತ್ಪನ್ನಗಳ ವಿವರಗಳನ್ನು ನೀಡಿದರು.
ಸಭೆಯಲ್ಲಿ ಜೆಸಿಐ ಅಧ್ಯಕ್ಷ ಜೇಸಿ ಎಸ್.ಜೆ.ವೇಣುಗೋಪಾಲ್, ಕಾರ್ಯದರ್ಶಿ ಜೇಸಿ ಪ್ರಮಿತ ಸಿ.ಹಾಸ್, ಜೇಸಿ ರಘು ಶೆಟ್ಟಿ, ಜೇಸಿ ಶಶಿರಾಜ್, ಜೇಸಿ ಗೌತಮ್ ರೈ, ಪಾಂಡುರಂಗ ಭಟ್, ಪ್ರಕಾಶ್ ಕುಮಾರ್ ಕೊಡೆಂಕಿರಿ, ಆದಿತ್ಯ ಕೊಡೆಂಕಿರಿ, ಗಣರಾಜ್ ಭಟ್, ಶಂಕರಿ ಶರ್ಮ ಮೊದಲಾದವರು ಭಾಗವಹಿಸಿದರು.
ಸುಹಾಸ್ ಸ್ವಾಗತಿಸಿದರು. ಪ್ರಮಿತ ಸಿ. ಹಾಸ್ ವಂದಿಸಿದರು.
ಮಿತಾಹಾರ, ಯಜ್ಞಸ್ವರೂಪ ಭೋಜನ ಹಾಗೂ ಆಹಾರದ ಶಾಸ್ತ್ರೋಕ್ತ ಮಹತ್ವವನ್ನು ಶ್ರೀ ರಾಘವೇಶ್ವರ ಭಾರತೀ…
ಎಥೆನಾಲ್ ನೀತಿಯಿಂದ ರೈತರಿಗೆ ಉತ್ತಮ ಬೆಲೆ ದೊರೆಯಲಿದ್ದು, ದೇಶದ ಇಂಧನ ಭದ್ರತೆಯೂ ಬಲಗೊಳ್ಳಲಿದೆ…
ಮಾನವ–ವನ್ಯಜೀವಿ ಸಂಘರ್ಷ ತಡೆ ಕುರಿತು ನಡೆದ ಸಂಸದೀಯ ಸಭೆಯಲ್ಲಿ ಕರ್ನಾಟಕದ AI ಆಧಾರಿತ…
ಅಕ್ರಮ ಅಡಿಕೆ ಆಮದು, ಜಿಎಸ್ಟಿ ತಾರತಮ್ಯ ಹಾಗೂ ಸಹಕಾರ ಸಂಘಗಳ ಸಮಸ್ಯೆಗಳ ಕುರಿತು…
ಆಗಸ್ಟ್ 8ರಿಂದ ಕರಾವಳಿ ಹಾಗೂ ಮಲೆನಾಡಿನಲ್ಲಿ ಮಳೆಯ ಪ್ರಮಾಣ ಇಳಿಕೆಯಾಗುವ ಲಕ್ಷಣಗಳಿವೆ. ಆಗಸ್ಟ್…
ಮ್ಯಾನ್ಮಾರ್ನಿಂದ ಭಾರತಕ್ಕೆ ಅಕ್ರಮವಾಗಿ ಅಡಿಕೆ ಸಾಗಿಸುತ್ತಿದ್ದ ಮೂರು ಹಂತದ ಜಾಲವನ್ನು ಇಡಿ ತನಿಖೆಯಲ್ಲಿ…