The Rural Mirror ಫಾಲೋಅಪ್

ಜಲಪ್ರಳಯದಲ್ಲಿ ಪರಿಹಾರವೆಂಬುದು ಮರೀಚಿಕೆಯಾಯ್ತು…!

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಸಂಪಾಜೆ: ಕಳೆದ ವರ್ಷದ ಭೀಕರ ಮಳೆ ಹಾಗೂ ಜಲಪ್ರಳಯದಲ್ಲಿ ಸಂಪಾಜೆ ಭಾಗದ ಮೊಣ್ಣಂಗೇರಿ ಪ್ರದೇಶ ನುಚ್ಚುನೂರಾಯಿತು. ಅಲ್ಲಿದ್ದ ಜನರ ಕೃಷಿ ಸಹಿತ ಬದುಕು ಸರ್ವನಾಶವಾಯಿತು. ಸರಕಾರಗಳು ಪರಿಹಾರದ ಭರವಸೆ ನೀಡಿದವು. ಆದರೆ ಇದುವರೆಗೂ ಈ ಪರಿಹಾರ ಸಿಕ್ಕಿಲ್ಲ. ಈಗ ಮತ್ತೆ ಮಳೆಗಾಲ ಶುರುವಾಗಿದೆ.

Advertisement
Advertisement

ಪ್ರಳಯಕ್ಕೆ ಸಿಲುಕಿ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದ್ದರೂ ತಮಗೆ ಏನೂ ಪರಿಹಾರ ಸಿಕ್ಕಿಲ್ಲ ಎನ್ನುತ್ತಾರೆ ಜೋಡುಪಾಲ ಹಾಗೂ ಮೊಣ್ಣಂಗೇರಿಯ ಸಂತ್ರಸ್ತರು. ಬಹುತೇಕ ಮಂದಿಗೆ ನಿರಾಶ್ರಿತರ ಕೇಂದ್ರದಲ್ಲಿರುವ ಸಂದರ್ಭದಲ್ಲಿ ಸಿಕ್ಕಿದ 3800 ರೂ ರೂ ಮಾತ್ರ ಸಿಕ್ಕಿದೆ ಎನ್ನುತ್ತಾರೆ ಜೋಡುಪಾಲದ ಭಾಷಾ. ಮನೆ ನಾಶವಾದವರಿಗೆ ಮನೆ ನಿರ್ಮಿಸುವುದಾಗಿ ಘೋಷಿಸಿ ಕೊಡಗಿನಲ್ಲಿ ಮನೆ ನಿರ್ಮಾಣ ಆರಂಭಿಸಲಾಗಿದ್ದರೂ ಅದು ಪೂರ್ತಿಯಾಗಿಲ್ಲ. ಎಲ್ಲರಿಗೂ ಮನೆ ಯಾವಾಗ ಸಿಗುತ್ತದೆ ಎಂದು ಕಾದು ಜನರ ನಿರೀಕ್ಷೆ ಹುಸಿಯಾಗುತಿದೆ. ನಿರಾಶ್ರಿತರು ಬಾಡಿಗೆ ಮನೆಗೆ 10 ಸಾವಿರ ರೂ ನೀಡುವುದಾಗಿ ಸರಕಾರ ಹೇಳಿತ್ತು. ಕೆಲವರಿಗೆ ಒಂದೆರಡು ತಿಂಗಳಿದ್ದು ಮಾತ್ರ ಸಿಕ್ಕಿದ್ದು ಬಿಟ್ಟರೆ ಬಹುತೇಕರಿಗೆ ಸಿಕ್ಕಿಲ್ಲ ಎನ್ನುತ್ತಾರೆ.

ಮನೆ ಕಳೆದುಕೊಂಡ ಬಳಿಕ ಒಂದು ತಿಂಗಳ 5000 ರೂಪಾಯಿ ಅಂತ ಮನೆ ಬಾಡಿಗೆ ಬಂದಿದೆ, ನಂತರ ಅದೂ ಬಂದಿಲ್ಲ ಎನ್ನುತ್ತಾರೆ ಜೋಡುಪಾಲದ ಲಕ್ಷ್ಮಣ.

ಇಡೀ ಕೃಷಿ ನಾಶವಾದ ಬಳಿಕ ಕೆಲಸವೂ ಇಲ್ಲವಾಗಿದೆ. ಕೂಲಿ ಕೆಲಸ ಮಾಡಿ ಬದುಕು ಸಾಗಿಸಲೂ ಕಷ್ಟವಾಗಿದೆ. ತೋಟದ ಕೆಲಸ ಮಾಡುವ ಎಂದರೆ ತೋಟವೂ ಇಲ್ಲವಾಗಿದೆ .  ಜಲಪ್ರಳಯದ ಬಳಿಕ ಹೊಳೆ ಮೇಲೆ ಬಂದಿದೆ, ಮನೆ ಕೆಳಗೆ ಆಗಿದೆ. ಹೀಗಾಗಿ ಉಳಿದ ಕೃಷಿಗೆ ಈಗ ನೀರೂ ಇಲ್ಲ ಎಂದು ಅಳಲು ತೋಡುತ್ತಾರೆ ಜೋಡುಪಾಲದ ಭಾಷಾ.

ಹಿಂದೆ 1 ಲಕ್ಷ ಆದಾಯ ಇತ್ತು ಕೃಷಿಯಲ್ಲಿ ಈಗ 8 ಸಾವಿರವೂ ಇಲ್ಲ. ಈ ಹಣದಲ್ಲಿ ಬಾಡಿಗೆ ಮನೆ ಮಾಡುವುದು  ಹೇಗೆ . ಕೃಷಿ ಮಾಡಲಾಗುತ್ತಿಲ್ಲ, ಕೂಲಿ ಕೆಲಸ ಇಲ್ಲ, ಭಿಕ್ಷೆ ಬೇಡಲೂ ಆಗುತ್ತಿಲ್ಲ ಎಂದು ಪ್ರಶ್ನೆ ಹೇಳುತ್ತಾರೆ  ಜೋಡುಪಾಲದ ಸುಂದರ ಪೂಜಾರಿ.

Advertisement

 

ಮನೆ ನಾಶ, ಕೃಷಿ ನಾಶವಾದ ಕೆಲವರು ಸಂಪಾಜೆ ಘಾಟಿ ರಸ್ತೆಯ ಪಕ್ಕದಲ್ಲಿ ಟೀ ಸ್ಟಾಲ್, ಸಣ್ಣ ಅಂಗಡಿ, ಜ್ಯೂಸ್ ಅಂಗಡಿ ಇತ್ಯಾದಿ ಮಾಡಿ ಬದುಕು ಸಾಗಿಸುತ್ತಿದ್ದಾರೆ. ಸರಕಾರದ ಪರಿಹಾರ, ಮನೆ ನಂಬಿ ಕೂತರೆ ಆಗದು ಎನ್ನುತ್ತಾರೆ.

 

 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

Published by
ಮಹೇಶ್ ಪುಚ್ಚಪ್ಪಾಡಿ

Recent Posts

ಮೀನುಗಾರಿಕೆ ವಲಯದ ಪ್ರಗತಿ ಕುರಿತು ಪರಿಶೀಲನಾ ಸಭೆ | ಸಾಗರ ಆಹಾರೋತ್ಪನ್ನಗಳ ರಫ್ತು ಪ್ರಮಾಣ  ಹೆಚ್ಚಳಕ್ಕೆ ಸೂಚನೆ

ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ದೆಹಲಿಯಲ್ಲಿ ಮೀನುಗಾರಿಕೆ ವಲಯದ ಪ್ರಗತಿ ಹಾಗೂ ಭವಿಷ್ಯದ…

33 minutes ago

ಕೃಷಿಕ್ಷೇತ್ರದಲ್ಲಿ ತಾಂತ್ರಿಕ ಆವಿಷ್ಕಾರಗಳನ್ನು ಅಳವಡಿಸಿಕೊಳ್ಳುವಲ್ಲಿ ಭಾರತ ಮುಂಚೂಣಿಯಲ್ಲಿದೆ | ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ |

ಕೃಷಿ ಕ್ಷೇತ್ರದಲ್ಲಿ ತಾಂತ್ರಿಕ ಆವಿಷ್ಕಾರಗಳನ್ನು ಅಳವಡಿಸಿಕೊಳ್ಳುವಲ್ಲಿ ಭಾರತವು ಮುಂಚೂಣಿಯಲ್ಲಿದೆ. ಪ್ರಸ್ತುತ ಕೃಷಿ ಉತ್ಪಾದನೆಯ…

40 minutes ago

ಮೇ 18 ರ ನಂತರ ರಾಹು ಕಾಟದಿಂದ ಈ 5 ರಾಶಿಯವರಿಗೆ ಕಷ್ಟಗಳು

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

45 minutes ago

ಅಡಿಕೆ ಹಾಳೆಯ ಸಂಬಂಧಿತ ಉತ್ಪನ್ನಗಳ ರಫ್ತು ನಿಷೇಧ | ಅಡಿಕೆ ಉದ್ಯಮದ ಮೇಲೆ ಆಗಬಹುದಾದ ಪರಿಣಾಮಗಳೇನು..?

ಅಡಿಕೆ ನಿಷೇಧದ ತೂಗುಗತ್ತಿಯ ಮೇಲೆಯೇ ಉದ್ಯಮವನ್ನು ಮುನ್ನಡೆಸಬೇಕಾಗುತ್ತದೆ.ಇನ್ನಾದರೂ ಕಠಿಣ ಪರಿಶ್ರಮದೊಂದಿಗೆ ಅಂತಾರಾಷ್ಟ್ರೀಯ ಮಾನ್ಯತೆಯುಳ್ಳ…

10 hours ago

ಮುಂದಿನ ಒಂದು ವರ್ಷ ಕೆಲವು ರಾಶಿಗಳಿಗೆ ಗುರು ಪ್ರವೇಶದಿಂದ ಆಗುವ ತೊಂದರೆಗಳು ಏನು..?

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

1 day ago

ಅಡಿಕೆ ಹಾಳೆ ತಟ್ಟೆ ಅಮೆರಿಕದಲ್ಲಿ ಬ್ಯಾನ್ …

ಅಡಿಕೆ ಹಾಳೆತಟ್ಟೆ ಅಮೇರಿಕಾದಲ್ಲಿ ನಿಷೇಧ ಹೇರಲಾಗುತ್ತಿದೆ. ಹೀಗಾಗಿ ಭಾರತದಿಂದ ಸದ್ಯ ಅಮೇರಿಕಾಕ್ಕೆ ಹಾಳೆತಟ್ಟೆ…

1 day ago