Advertisement
MIRROR FOCUS

ಅಡಿಕೆ ಇಳುವರಿ ಕುರಿತು “ದ ರೂರಲ್ ಮಿರರ್.ಕಾಂ” ಸಮೀಕ್ಷೆ | ಬಹುತೇಕ ತೋಟಗಳಲ್ಲಿಅಡಿಕೆ ಇಳುವರಿ ಕುಸಿತ

Share

ಈ ಬಾರಿಯ ಅಡಿಕೆ ಇಳುವರಿಯ ಕುರಿತು ದ ರೂರಲ್ ಮಿರರ್.ಕಾಂ ವತಿಯಿಂದ ಸಮೀಕ್ಷೆ ನಡೆಸಲಾಗಿತ್ತು. ಈ ಸಮೀಕ್ಷೆಗೆ ಒಟ್ಟು 123 ಮಂದಿ ಅಡಿಕೆ ಕೃಷಿಕರು ಸ್ಪಂದಿಸಿ ತಮ್ಮ ಅಭಿಪ್ರಾಯ ಮತ್ತು ಅನುಭವಗಳನ್ನು ಹಂಚಿಕೊಂಡಿದ್ದಾರೆ.

ಈ ಪ್ರತಿಕ್ರಿಯೆಗಳ ಆಧಾರದಲ್ಲಿ ಈ ವರ್ಷದ ಅಡಿಕೆ ಇಳುವರಿ ಸ್ಥಿತಿ ಹಾಗೂ ಅದರ ಕುರಿತ ವಿಶ್ಲೇಷಣೆಯನ್ನು ಇಲ್ಲಿ ನೀಡಲಾಗಿದೆ.

ಸಮೀಕ್ಷೆಯಲ್ಲಿ ಕೇಳಲಾದ ಪ್ರಶ್ನೆಗಳು ಕೃಷಿಕರಿಂದ ನೇರವಾಗಿ ಮಾಹಿತಿ ಪಡೆಯುವ ಉದ್ದೇಶದಿಂದ ರೂಪಿಸಲಾಗಿದ್ದವು. ತಪ್ಪು ಅಥವಾ ಅಸ್ಪಷ್ಟ ಮಾಹಿತಿ ಹರಡದಂತೆ ಕೆಲವು ಪ್ರಶ್ನೆಗಳಲ್ಲಿ ತುಲನಾತ್ಮಕ ಅಂಶಗಳನ್ನು (ಉದಾಹರಣೆಗೆ ಈ ವರ್ಷದ ಇಳುವರಿ ಮತ್ತು ಏಕೆ ಇಳುವರಿ ಕಡಿಮೆ ಹಾಗೂ ಏಕೆ ಹೆಚ್ಚು) ಕೇಳಲಾಗಿತ್ತು. ಇಂತಹ ಪ್ರಶ್ನೆಗಳಲ್ಲಿನ ಉತ್ತರಗಳು ಎರಡೂ ಕಡೆ ಬಹುತೇಕ ಒಂದೇ ಇದ್ದವು.

ಇದರ ಫಲವಾಗಿ ಕೃಷಿಕರು ನೀಡಿದ ಉತ್ತರಗಳು ಪರಸ್ಪರ ಪರಿಶೀಲನೆಗೊಳಗಾಗುವಂತಾಗಿದ್ದು, ಸಮೀಕ್ಷೆಯಿಂದ ದೊರೆತ ಮಾಹಿತಿಗಳು ಸರಾಸರಿಯಾಗಿ ಹೆಚ್ಚು ನಿಖರವಾಗಿವೆ ಎಂದು ಹೇಳಬಹುದು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

ಪ್ರಸಕ್ತ ಸಾಲಿನಲ್ಲಿ ಅಡಿಕೆ ಬೆಳೆಗಾರರ ವಾಸ್ತವ ಸ್ಥಿತಿಯನ್ನು ಅರಿಯಲು 123 ರೈತರನ್ನು ಒಳಗೊಂಡ ಸಮೀಕ್ಷೆ ನಡೆಸಲಾಗಿದ್ದು, ಅದರ ಫಲಿತಾಂಶಗಳು ಅತ್ಯಂತ ಆತಂಕಕಾರಿಯಾಗಿವೆ.

ಇಳುವರಿ ಕುಸಿತ : ಬಹುತೇಕ ರೈತರ ಅನುಭವ : ಸಮೀಕ್ಷೆಯಲ್ಲಿ ಭಾಗವಹಿಸಿದ ಒಟ್ಟು ಬೆಳೆಗಾರರಲ್ಲಿ

  • ಶೇ. 71.5 ರಷ್ಟು ರೈತರು ಇಳುವರಿ ಕುಸಿತವನ್ನು ಅನುಭವಿಸುತ್ತಿರುವುದಾಗಿ ತಿಳಿಸಿದ್ದಾರೆ.

  • ಶೇ. 14.6 ರಷ್ಟು ರೈತರಲ್ಲಿ ಇಳುವರಿ ಸ್ಥಿರವಾಗಿದೆ.

  • ಕೇವಲ ಶೇ. 13.8 ರಷ್ಟು ಬೆಳೆಗಾರರಲ್ಲಿ ಮಾತ್ರ ಇಳುವರಿ ಏರಿಕೆಯಾಗಿದೆ.

ಈ ಅಂಕಿಅಂಶಗಳು ಅಡಿಕೆ ತೋಟಗಳಲ್ಲಿ ಈ ವರ್ಷ ವ್ಯಾಪಕ ಮಟ್ಟದಲ್ಲಿ ಇಳುವರಿ ಹಿನ್ನಡೆ ಸಂಭವಿಸಿರುವುದನ್ನು ಸೂಚಿಸುತ್ತಿವೆ.

ಕುಸಿತದ ತೀವ್ರತೆ ಮತ್ತು ಆರ್ಥಿಕ ಪರಿಣಾಮ: ಇಳುವರಿ ಕುಸಿದಿದೆ ಎಂದು ತಿಳಿಸಿದ ರೈತರ ಸ್ಥಿತಿಯನ್ನು ಆಳವಾಗಿ ವಿಶ್ಲೇಷಿಸಿದಾಗ, ನಷ್ಟದ ಪ್ರಮಾಣವೂ ಗಂಭೀರವಾಗಿದೆ.

  • ಸುಮಾರು ಶೇ. 43 ರಷ್ಟು ರೈತರು ಶೇ. 25 ರಿಂದ 50 ರಷ್ಟು ಬೆಳೆ ನಷ್ಟವನ್ನು ಅನುಭವಿಸಿದ್ದಾರೆ.

  • ಇನ್ನೂ ಶೇ. 28 ರಷ್ಟು ರೈತರು ಶೇ. 50 ರಿಂದ 75 ರಷ್ಟು ತೀವ್ರ ನಷ್ಟಕ್ಕೆ ತುತ್ತಾಗಿದ್ದಾರೆ.

ಒಟ್ಟಾರೆ ಲೆಕ್ಕಾಚಾರ ಪ್ರಕಾರ, ಇಳುವರಿ ಕುಸಿದ ತೋಟಗಳಲ್ಲಿ ಸರಾಸರಿ ಶೇ. 44.5 ರಷ್ಟು ಬೆಳೆ ಕಡಿಮೆಯಾಗಿದೆ. ಅಂದರೆ, ಕಳೆದ ವರ್ಷ 100 ಕ್ವಿಂಟಾಲ್ ಅಡಿಕೆ ಪಡೆದ ರೈತರಿಗೆ ಈ ಬಾರಿ ಸುಮಾರು 55 ಕ್ವಿಂಟಾಲ್ ಮಾತ್ರ ದೊರೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ರೈತರ ವಾರ್ಷಿಕ ಆದಾಯ ಹಾಗೂ ಸಾಲ ಮರುಪಾವತಿ ಸಾಮರ್ಥ್ಯಕ್ಕೂ ನೇರವಾದ ಹೊಡೆತ ಬೀಳುವ ಸಾಧ್ಯತೆ ಇದೆ.

ಇಳುವರಿ ಹೆಚ್ಚಳ ಕಂಡ ತೋಟಗಳು ಕಡಿಮೆ : ಇಳುವರಿಯಲ್ಲಿ ಏರಿಕೆ ಕಂಡುಬಂದವರು ತೀರಾ ಕಡಿಮೆ.  ಗುಂಪಿನ (35 ಜನರು) ಪರಿಸ್ಥಿತಿಯೂ ಬಹು ದೊಡ್ಡ ಮಟ್ಟದ ಸುಧಾರಣೆಯನ್ನು ಸೂಚಿಸುವಂತಿಲ್ಲ.

  • ಇವರಲ್ಲಿ ಶೇ. 62.9 ರಷ್ಟು ರೈತರಿಗೆ ಕೇವಲ ಶೇ. 5 ರಿಂದ 25 ರಷ್ಟು ಮಾತ್ರ ಅಲ್ಪ ಪ್ರಮಾಣದ ಏರಿಕೆ ಕಂಡುಬಂದಿದೆ.

  • ಗಮನಾರ್ಹ ಮಟ್ಟದ, ಅಂದರೆ ಶೇ. 50 ಕ್ಕಿಂತ ಹೆಚ್ಚು ಏರಿಕೆ ಕಂಡವರು ಕೇವಲ ಶೇ. 11.4 ರಷ್ಟು ಮಾತ್ರ.

ಅಂದರೆ, ಇಳುವರಿ ಏರಿಕೆಯ ಪ್ರಮಾಣವು ಕುಸಿತದ ಪ್ರಮಾಣಕ್ಕಿಂತ ಐದು ಪಟ್ಟು ಕಡಿಮೆಯಾಗಿದೆ. ಇದು ಮುಂದಿನ ದಿನಗಳಲ್ಲಿ ಅಡಿಕೆಯ ಒಟ್ಟಾರೆ ಪೂರೈಕೆ ಮತ್ತು ಮಾರುಕಟ್ಟೆ ಸ್ಥಿತಿಗತಿಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ.

A survey conducted by The Rural Mirror among 123 arecanut farmers reveals a significant decline in arecanut yield this season. Around 71.5% of farmers reported yield loss, with an average decline of about 44.5% in affected plantations. The findings indicate a serious production setback that could impact farmers’ income and market supply in the coming months.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಇಂಡೋನೇಷ್ಯಾದ ಸ್ಟಾರ್ಟ್‌ಅಪ್‌ನಿಂದ ಬಾಂಗ್ಲಾದೇಶ, ಮಾಲ್ಡೀವ್ಸ್‌ಗೆ ಅಡಿಕೆ ರಫ್ತು – ಜಾಗತಿಕ ಮಾರುಕಟ್ಟೆಯಲ್ಲಿ ಅಡಿಕೆಗೆ ಬೇಡಿಕೆ ಹೆಚ್ಚಳ

ಇಂಡೋನೇಷ್ಯಾದ ಸ್ಟಾರ್ಟ್‌ಅಪ್ ಸಂಸ್ಥೆ ಬಾಂಗ್ಲಾದೇಶ ಹಾಗೂ ಮಾಲ್ಡೀವ್ಸ್‌ಗೆ ಅಡಿಕೆ ರಫ್ತು ಮಾಡಿದೆ. ಜಾಗತಿಕ…

8 hours ago

ಬಿಡದಿ ಟೌನ್‌ಶಿಪ್‌ಗೆ 2 ಲಕ್ಷಕ್ಕೂ ಹೆಚ್ಚು ಮರಗಳ ಕತ್ತರಿ…? – ಯೋಜನೆಗೆ ಪರಿಸರವಾದಿಗಳು, ರೈತರಿಂದ ತೀವ್ರ ವಿರೋಧ

ಬಿದದಿ ಎಐ ಟೌನ್‌ಶಿಪ್ ಯೋಜನೆಗಾಗಿ ಸುಮಾರು 2 ಲಕ್ಷ ಮರಗಳನ್ನು ಕಡಿಯಬೇಕಾಗುವ ಸಾಧ್ಯತೆ…

9 hours ago

ಹವಾಮಾನ ವರದಿ | 16-06-2026 | ರಾಜ್ಯದಲ್ಲಿ ಇನ್ನೂ ದುರ್ಬಲ ಮಳೆ ಚಟುವಟಿಕೆ – ಜೂ.22 ರಿಂದ ಕರಾವಳಿಯಲ್ಲಿ ಮುಂಗಾರು ಚೇತರಿಕೆ ಸಾಧ್ಯತೆ

ರಾಜ್ಯದಲ್ಲಿ ಮುಂಗಾರು ಅತಿ ದುರ್ಬಲವಾಗಿದ್ದು, ಜೂನ್ 22 ರಿಂದ ಕರಾವಳಿ ಭಾಗದಲ್ಲಿ ಅಲ್ಪ…

14 hours ago

ಅಡಿಕೆ ಒಡೆದು ಉದುರುತ್ತಿದೆಯೇ..? ಕಾರಣ ಕೇವಲ ಬೋರಾನ್ ಕೊರತೆ ಅಷ್ಟೇ ಅಲ್ಲ- ಕೀಟವೂ ಇರಬಹುದು ಎನ್ನುತ್ತಾರೆ ವಿಜ್ಞಾನಿಗಳು

ಅಡಿಕೆ ಒಡೆದು ಬೀಳುವ ಸಮಸ್ಯೆಗೆ ಬೋರಾನ್ ಕೊರತೆ ಮಾತ್ರವಲ್ಲ, ಪೆರಿಯಾಂತ್ ಮೈಟ್ ಕೀಟದ…

1 day ago

ಎಲ್ ನಿನೋ ಅಧಿಕೃತವಾಗಿ ಆರಂಭ – ಕರಾವಳಿ ಕರ್ನಾಟಕದ ಮಳೆ ಮೇಲೆ ಪರಿಣಾಮ ಬೀಳುತ್ತಾ? ಹವಾಮಾನ ಇಲಾಖೆ ನಿಗಾ

ಭಾರತೀಯ ಹವಾಮಾನ ಇಲಾಖೆ ಎಲ್ ನಿನೋ ಆರಂಭಗೊಂಡಿರುವುದನ್ನು ಅಧಿಕೃತವಾಗಿ ದೃಢಪಡಿಸಿದೆ. ಕರಾವಳಿ ಕರ್ನಾಟಕದಲ್ಲಿ…

1 day ago

ಬರಗಾಲದಿಂದ ಹೆಚ್ಚಾಗಬಹುದು ಆ್ಯಂಟಿಬಯೋಟಿಕ್ ಪ್ರತಿರೋಧ..! ಹೊಸ ಸಂಶೋಧನೆಯ ಎಚ್ಚರಿಕೆ

ಬರಗಾಲದ ಪರಿಸ್ಥಿತಿಗಳು ಮಣ್ಣಿನಲ್ಲಿನ ಬ್ಯಾಕ್ಟೀರಿಯಾಗಳಲ್ಲಿ ಆ್ಯಂಟಿಬಯೋಟಿಕ್ ಪ್ರತಿರೋಧ ಹೆಚ್ಚಿಸಲು ಕಾರಣವಾಗಬಹುದು ಎಂದು ಹೊಸ…

2 days ago