Advertisement
The Rural Mirror ಫಾಲೋಅಪ್

ಜಲಪ್ರಳಯದಲ್ಲಿ ಪರಿಹಾರವೆಂಬುದು ಮರೀಚಿಕೆಯಾಯ್ತು…!

Share

ಸಂಪಾಜೆ: ಕಳೆದ ವರ್ಷದ ಭೀಕರ ಮಳೆ ಹಾಗೂ ಜಲಪ್ರಳಯದಲ್ಲಿ ಸಂಪಾಜೆ ಭಾಗದ ಮೊಣ್ಣಂಗೇರಿ ಪ್ರದೇಶ ನುಚ್ಚುನೂರಾಯಿತು. ಅಲ್ಲಿದ್ದ ಜನರ ಕೃಷಿ ಸಹಿತ ಬದುಕು ಸರ್ವನಾಶವಾಯಿತು. ಸರಕಾರಗಳು ಪರಿಹಾರದ ಭರವಸೆ ನೀಡಿದವು. ಆದರೆ ಇದುವರೆಗೂ ಈ ಪರಿಹಾರ ಸಿಕ್ಕಿಲ್ಲ. ಈಗ ಮತ್ತೆ ಮಳೆಗಾಲ ಶುರುವಾಗಿದೆ.

ಪ್ರಳಯಕ್ಕೆ ಸಿಲುಕಿ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದ್ದರೂ ತಮಗೆ ಏನೂ ಪರಿಹಾರ ಸಿಕ್ಕಿಲ್ಲ ಎನ್ನುತ್ತಾರೆ ಜೋಡುಪಾಲ ಹಾಗೂ ಮೊಣ್ಣಂಗೇರಿಯ ಸಂತ್ರಸ್ತರು. ಬಹುತೇಕ ಮಂದಿಗೆ ನಿರಾಶ್ರಿತರ ಕೇಂದ್ರದಲ್ಲಿರುವ ಸಂದರ್ಭದಲ್ಲಿ ಸಿಕ್ಕಿದ 3800 ರೂ ರೂ ಮಾತ್ರ ಸಿಕ್ಕಿದೆ ಎನ್ನುತ್ತಾರೆ ಜೋಡುಪಾಲದ ಭಾಷಾ. ಮನೆ ನಾಶವಾದವರಿಗೆ ಮನೆ ನಿರ್ಮಿಸುವುದಾಗಿ ಘೋಷಿಸಿ ಕೊಡಗಿನಲ್ಲಿ ಮನೆ ನಿರ್ಮಾಣ ಆರಂಭಿಸಲಾಗಿದ್ದರೂ ಅದು ಪೂರ್ತಿಯಾಗಿಲ್ಲ. ಎಲ್ಲರಿಗೂ ಮನೆ ಯಾವಾಗ ಸಿಗುತ್ತದೆ ಎಂದು ಕಾದು ಜನರ ನಿರೀಕ್ಷೆ ಹುಸಿಯಾಗುತಿದೆ. ನಿರಾಶ್ರಿತರು ಬಾಡಿಗೆ ಮನೆಗೆ 10 ಸಾವಿರ ರೂ ನೀಡುವುದಾಗಿ ಸರಕಾರ ಹೇಳಿತ್ತು. ಕೆಲವರಿಗೆ ಒಂದೆರಡು ತಿಂಗಳಿದ್ದು ಮಾತ್ರ ಸಿಕ್ಕಿದ್ದು ಬಿಟ್ಟರೆ ಬಹುತೇಕರಿಗೆ ಸಿಕ್ಕಿಲ್ಲ ಎನ್ನುತ್ತಾರೆ.

ಮನೆ ಕಳೆದುಕೊಂಡ ಬಳಿಕ ಒಂದು ತಿಂಗಳ 5000 ರೂಪಾಯಿ ಅಂತ ಮನೆ ಬಾಡಿಗೆ ಬಂದಿದೆ, ನಂತರ ಅದೂ ಬಂದಿಲ್ಲ ಎನ್ನುತ್ತಾರೆ ಜೋಡುಪಾಲದ ಲಕ್ಷ್ಮಣ.

ಇಡೀ ಕೃಷಿ ನಾಶವಾದ ಬಳಿಕ ಕೆಲಸವೂ ಇಲ್ಲವಾಗಿದೆ. ಕೂಲಿ ಕೆಲಸ ಮಾಡಿ ಬದುಕು ಸಾಗಿಸಲೂ ಕಷ್ಟವಾಗಿದೆ. ತೋಟದ ಕೆಲಸ ಮಾಡುವ ಎಂದರೆ ತೋಟವೂ ಇಲ್ಲವಾಗಿದೆ .  ಜಲಪ್ರಳಯದ ಬಳಿಕ ಹೊಳೆ ಮೇಲೆ ಬಂದಿದೆ, ಮನೆ ಕೆಳಗೆ ಆಗಿದೆ. ಹೀಗಾಗಿ ಉಳಿದ ಕೃಷಿಗೆ ಈಗ ನೀರೂ ಇಲ್ಲ ಎಂದು ಅಳಲು ತೋಡುತ್ತಾರೆ ಜೋಡುಪಾಲದ ಭಾಷಾ.

ಹಿಂದೆ 1 ಲಕ್ಷ ಆದಾಯ ಇತ್ತು ಕೃಷಿಯಲ್ಲಿ ಈಗ 8 ಸಾವಿರವೂ ಇಲ್ಲ. ಈ ಹಣದಲ್ಲಿ ಬಾಡಿಗೆ ಮನೆ ಮಾಡುವುದು  ಹೇಗೆ . ಕೃಷಿ ಮಾಡಲಾಗುತ್ತಿಲ್ಲ, ಕೂಲಿ ಕೆಲಸ ಇಲ್ಲ, ಭಿಕ್ಷೆ ಬೇಡಲೂ ಆಗುತ್ತಿಲ್ಲ ಎಂದು ಪ್ರಶ್ನೆ ಹೇಳುತ್ತಾರೆ  ಜೋಡುಪಾಲದ ಸುಂದರ ಪೂಜಾರಿ.

 

ಮನೆ ನಾಶ, ಕೃಷಿ ನಾಶವಾದ ಕೆಲವರು ಸಂಪಾಜೆ ಘಾಟಿ ರಸ್ತೆಯ ಪಕ್ಕದಲ್ಲಿ ಟೀ ಸ್ಟಾಲ್, ಸಣ್ಣ ಅಂಗಡಿ, ಜ್ಯೂಸ್ ಅಂಗಡಿ ಇತ್ಯಾದಿ ಮಾಡಿ ಬದುಕು ಸಾಗಿಸುತ್ತಿದ್ದಾರೆ. ಸರಕಾರದ ಪರಿಹಾರ, ಮನೆ ನಂಬಿ ಕೂತರೆ ಆಗದು ಎನ್ನುತ್ತಾರೆ.

 

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

Published by
ಮಹೇಶ್ ಪುಚ್ಚಪ್ಪಾಡಿ

Recent Posts

ಶಿರಾಡಿ ಘಾಟ್‌ನಲ್ಲಿ ಸೋಮವಾರ ಟ್ರಾಫಿಕ್‌ ಸಂಕಷ್ಟದ ಸಾಧ್ಯತೆ – ಮುಂಜಾಗ್ರತಾ ಕ್ರಮ ಅಗತ್ಯ

ಮೂರು ದಿನಗಳ ರಜೆ ಮುಗಿಯುತ್ತಿರುವ ಹಿನ್ನೆಲೆಯಲ್ಲಿ ಸೋಮವಾರ ಮಧ್ಯಾಹ್ನದ ಬಳಿಕ ಶಿರಾಡಿ ಘಾಟ್‌ನಲ್ಲಿ…

48 minutes ago

ಹವಾಮಾನ ವರದಿ |13-09-2026 | ಕರ್ನಾಟಕದಲ್ಲಿ ಮಳೆ ಮತ್ತೆ ಹಂತ ಹಂತವಾಗಿ ಚುರುಕಾಗಬಹುದೇ?

ಕರ್ನಾಟಕದಲ್ಲಿ ಸದ್ಯ ಮಳೆ ಕಡಿಮೆಯಾಗಿದ್ದು, ಬಿಸಿಲು ಹೆಚ್ಚಾಗಿರುವ ನಡುವೆಯೇ ಸೆ.14ರಿಂದ ದಕ್ಷಿಣ ಒಳನಾಡಿನಲ್ಲಿ…

10 hours ago

ರೈತರ ಆದಾಯ ಹೆಚ್ಚಿಸಲು ಬಹುಬೆಳೆ, ಪಶುಸಂಗೋಪನೆ, ಮೀನುಗಾರಿಕೆಗೆ ಒತ್ತು

ನೀರಿನ ಕೊರತೆ ಮತ್ತು ಹವಾಮಾನ ಬದಲಾವಣೆಯ ನಡುವೆ ಭತ್ತ–ಗೋಧಿಯಂತಹ ಹೆಚ್ಚಿನ ನೀರು ಮತ್ತು…

14 hours ago

ಹವಾಮಾನ ವರದಿ | 12.09.2026 | ಸೆ.15ರಿಂದ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮಳೆ ಚುರುಕು? ಕರಾವಳಿ–ಮಲೆನಾಡಿನಲ್ಲಿ ಸದ್ಯ ಬಿಸಿಲಿನ ವಾತಾವರಣ

ಕರ್ನಾಟಕದ ಬಹುತೇಕ ಭಾಗಗಳಲ್ಲಿ ಸದ್ಯ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣ ಮುಂದುವರಿಯುವ…

1 day ago

ಹಸುವಿನ ಹಾಲಿಗೆ ಬದಲಾಗಿ ‘ಲ್ಯಾಬ್‌ ಹಾಲು’ – ಇನ್ನು ಕೇವಲ ವಿಜ್ಞಾನಕಲ್ಪನೆ ಅಲ್ಲ..! ಹೊಸ ಅಧ್ಯಯನದ ಲೆಕ್ಕಾಚಾರ

ಇಂಪೀರಿಯಲ್ ಕಾಲೇಜ್ ಲಂಡನ್‌ನ ಅಧ್ಯಯನದ ಪ್ರಕಾರ, precision fermentation ಮೂಲಕ ತಯಾರಿಸುವ ಹಾಲಿಗೆ…

2 days ago

ಅಡಿಕೆಗೆ ಉತ್ತಮ ಬೆಲೆ , ಆದರೂ ಬೆಳೆಗಾರರ ಚಿಂತೆ ಮುಂದುವರಿದಿದೆ – ಕಾರಣವೇನು?

ಅಡಿಕೆ ಧಾರಣೆ ಏರಿಳಿತ ಅಡಿಕೆ ಬೆಳೆಗಾರರನ್ನು ಚಿಂತೆಗೀಡು ಮಾಡುತ್ತಿದೆ. ಇದಕ್ಕೆ ಭಾರತ ಮಾತ್ರವಲ್ಲ…

2 days ago