Advertisement
Opinion

ದಿಢೀರಾಗಿ ಬೆಳೆಯುವುದು , ಫಸಲು ನೀಡುವುದು ಅವಸರವೇ ಅಪಘಾತಕ್ಕೆ ಕಾರಣ | ಬೇಗ ಫಸಲು ಬಂದ ಸಸ್ಯ ಬೇಗನೇ ಸಾಯುತ್ತದೆ |

Share

ದಶಕಗಳ ಹಿಂದೆ ವಿಮಾ ಸಂಸ್ಥೆಯೊಂದು ಸಾಗವಾನಿ ಬೆಳೆಯಲು ರೈತರ ಷೇರು ಪಡೆದುಕೊಂಡು ಹತ್ತೊ ಹದಿನೈದೋ ವರ್ಷದ ನಂತರ ಹಾಕಿದ ಬಂಡವಾಳಕ್ಕೆ ಲಕ್ಷ ಲಕ್ಷ ಹಣ ವಾಪಸು ಕೊಡುವ ಬರವಸೆ ನೀಡಿತ್ತು‌. ಆದರೆ ಹತ್ತು ಹದಿನೈದು ವರ್ಷಗಳಿಗೆ ಅದೆಂಥದೇ ಸ್ವರ್ಗ ಸದೃಶ ಭೂಮಿಯಲ್ಲಿ ಅದೆಷ್ಟೇ ಗೊಬ್ಬರ ನೀರು ಆರೈಕೆ ಮಾಡಿದರೂ ನೆಟ್ಟ ಸಾಗವಾನಿ ಮೂರಿಂಚಿಗಿಂತ ಹೆಚ್ಚಿನ ವ್ಯಾಸ ಕ್ಕೆ ಬೆಳೆಯೋಲ್ಲ.

Advertisement
Advertisement

ಮಹಾಗನಿ, ಶ್ರೀಗಂಧ ಮುಂತಾದ ಮರ ಆಗುವ ಜಾತಿಯ ಸಸ್ಯಗಳು ತಮ್ಮ ಒಳಗಿನ ಕೆಂಪು ತೆರಳು ಬೆಳೆಯದೇ ಗಟ್ಟಿ ಯಾಗಿ ಸುಗಂಧ ಭರಿತವೋ, ನಾಟದ ಉಪಯೋಗಕ್ಕೋ ಬರದು. ಕೆಲವೊಮ್ಮೆ ಹೊರಗಿನಿಂದ ಮರ ಬೆಳೆದರೂ ಒಳಗಿನ ತಿರಳು ಬೆಳೆದಿರದು. ಸುಗಂಧ ಉಪಯೋಗಕ್ಕೆ ಬಳಸುವ ಶ್ರೀಗಂಧ, ಚಂದನ, ನಾಟದ ಉಪಯೋಗಕ್ಕೆ ಬಳಸುವ ತೇಗ ಮಹಾಗನಿ ಹೆಬ್ಬೇವು ಕನಿಷ್ಠ ನಲವತ್ತು ಐವತ್ತು ವರ್ಷಗಳ ಕಾಲ ನೈಸರ್ಗಿಕವಾಗಿ ಬೆಳೆಯಲೇ ಬೇಕು.ಸಸಿ ಮರ ನೈಸರ್ಗಿಕವಾಗಿ ಹಂತ ಹಂತವಾಗಿ ಬೆಳೆಯಲೇ ಬೇಕು…. ದಿಡೀರಾಗಿ ಬೆಳೆಯುವುದು , ಫಸಲು ನೀಡುವುದು ಅವಸರವೇ ಅಪಘಾತಕ್ಕೆ ಕಾರಣವಾಗುತ್ತವೆ.

Advertisement

ಮಲೆನಾಡಿನಲ್ಲಿ ಕೃಷಿಕರೊಬ್ಬರು ಅತ್ಯಂತ ವ್ಯವಸ್ಥಿತವಾಗಿ ಬೆಳೆದ ಸಾಗುವಾನಿ‌ ತೋಟದ ದೃಶ್ಯಾವಳಿಯಿದೆ. ಎಷ್ಟೇ ಆರೈಕೆ ಮಾಡಿದರೆ ನಮ್ಮ ‌ಮಲೆನಾಡಿನಲ್ಲಿ “ಹತ್ತು ” ವರ್ಷಗಳಿಗೆ ಇಷ್ಟೇ ಬೆಳೆಯಲು ಸಾಧ್ಯ. ಕೆಲವರು ಎರಡು ಮೂರು ವರ್ಷಗಳಿಗೇ ಅಡಿಕೆ ಸಸಿ ಫಸಲು ಬಿಡುತ್ತದೆ ಎನ್ನುತ್ತಾರೆ. ಹೀಗೆ ಬೇಗ ಫಸಲು ಬಂದ ಸಸ್ಯ ಬೇಗನೇ ಸಾಯುತ್ತದೆ.

ನಮ್ಮ ಮಲೆನಾಡಿನಲ್ಲಿ ಅಡಿಕೆ ನಿಜ ಫಸಲು ಪಡೆಯಲು ಕನಿಷ್ಠ ಹನ್ನೆರಡು ವರ್ಷ ಬೇಕೇ ಬೇಕು. ತಡವಾಗಿ ಮಲೆನಾಡಿನಲ್ಲಿ ಅಡಿಕೆ ಫಸಲು ನೀಡು ವುದರಿಂದ ಮಲೆನಾಡಿನಲ್ಲಿ ಅಡಿಕೆ ಮರದ ಜೀವಿತಾವಧಿ ಹೆಚ್ಚು.ನಮ್ಮ ಹಿರಿಯರ ಪ್ರಕಾರ ಮಲೆನಾಡಿನಲ್ಲಿ ಒಂದು ಅಡಿಕೆ ಮರ ಕನಿಷ್ಠ ಅರವತ್ತು ವರ್ಷ ಫಸಲು ನೀಡುತ್ತದೆ. ‌ಬಯಲು ಸೀಮೆಯಲ್ಲಿ ಬೇಗ ಫಸಲು ನೀಡಿ ಬೇಗ ಫಸಲು ಕುಂಠಿತವಾಗುತ್ತದೆ.

Advertisement
ಬರಹ :
ಪ್ರಬಂಧ ಅಂಬುತೀರ್ಥ
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಪ್ರಬಂಧ ಅಂಬುತೀರ್ಥ

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಅಂಬುತೀರ್ಥದ ನಿವಾಸಿ ಪ್ರಬಂಧ. ಬಿ ಎ. ವಿಧ್ಯಾಭ್ಯಾಸ ಮುಗಿಸಿದ ಮೇಲೆ ಕೃಷಿ ಕೆಲಸ. ಕಥೆ , ಪರಿಸರ, ಕೃಷಿ , ವಿಜ್ಞಾನ , ಸಾಮಾಜಿಕ ಮತ್ತು ರಾಜಕೀಯ ವಿಚಾರಗಳ ಲೇಖನ ಬರೆಯುವ ಹವ್ಯಾಸ. ಮಲೆನಾಡು ಗಿಡ್ಡ ಗೋ ತಳಿ ಸಂವರ್ಧನೆ, ಜೀರಿಗೆ ಮೆಣಸಿನಕಾಯಿ ಬೆಳೆಯ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಣೆ. ಮಲೆನಾಡು ಗಿಡ್ಡ ತಳಿ ಹಸುಗಳ ಸೆಗಣಿಯನ್ನು ಮೌಲ್ಯ ವರ್ಧನೆ ಮಾಡಿ ಕೃಷಿ ಸ್ನೇಹಿ ಸೂಕ್ಷ್ಮಾಣು ಜೀವಿಯುಕ್ತ ಸಾವಯವ ಗೊಬ್ಬರ ತಯಾರಿಸಿ ಮಾರಾಟ ಮಾಡುವ ಕೆಲಸವನ್ನೂ ಮಾಡುತ್ತಿದ್ದಾರೆ.

Published by
ಪ್ರಬಂಧ ಅಂಬುತೀರ್ಥ

Recent Posts

ಹಣ್ಣುಗಳ ರಾಜ ಮಾವಿಗೂ ತಟ್ಟಿದ ಬಿಸಿಲಿನ ತಾಪ | 400 ಕೋಟಿ ಮೌಲ್ಯದ ಮಾವು ನಷ್ಟ |

ತಾಪಮಾನದ ಕಾರಣದಿಂದ ಮಾವಿನ ಬೆಳೆಗೂ ಸಂಕಷ್ಟವಾಗಿದೆ.

5 hours ago

Karnataka Weather |12-05-2024 | ಹಲವು ಕಡೆ ಮಳೆಯ ನಿರೀಕ್ಷೆ ಇದೆ |

ಮುಂದಿನ 10 ದಿನಗಳವರೆಗೂ ರಾಜ್ಯದ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ.

2 days ago

ಕರ್ನಾಟಕದಾದ್ಯಂತ ಗೋಕೃಪಾಮೃತ ವಿತರಣೆ | ಗೋಕೃಪಾಮೃತ ಇರುವಾಗ ಕ್ರಿಮಿನಾಶಕಗಳ ಹಂಗೇಕೆ?

ಗೋಕೃಪಾಮೃತದ ಬಗ್ಗೆ ಡಾ ಬಿ ಎಂ ನಾಗಭೂಷಣ ಅವರು ಬರೆದಿದ್ದಾರೆ..

2 days ago

ಪುತ್ತೂರಿನಲ್ಲಿ ಹಲಸು ಹಣ್ಣು ಮೇಳ | ಸಮಗ್ರ ಕೃಷಿ ಉದ್ಯಮಶೀಲತೆಗೆ ಪ್ರೋತ್ಸಾಹ ಹಾಗೂ ಪ್ರಚಾರ ನೀಡುವ ಉದ್ದೇಶ

ಹಲಸು(Jack Fruit) ಹಾಗು ಪ್ರದೇಶದ ಇತರ ಸಕಾಲಿಕ ಹಣ್ಣುಗಳ(Fruit) ಕೃಷಿಗೆ(Agriculture) ಮತ್ತು ಕೃಷಿಕರಿಗೆ,…

2 days ago

ರಾಜ್ಯದ ಹಲವು ಭಾಗಗಳಲ್ಲಿ ಗಾಳಿ ಸಹಿತ ಭಾರೀ ಮಳೆ : ರೈತರ ಮೊಗದಲ್ಲಿ ಸಂತಸ : ಕೆಲವೆಡೆ ಹಾನಿ

ರಾಜ್ಯಾದ್ಯಂತ ಬರಗಾಲದ(Drought) ಛಾಯೆ ಆವರಿಸಿತ್ತು. ಕುಡಿವ ನೀರಿಗಾಗಿ(Drinking water) ಜನ-ಜಾನುವಾರುಗಳು ಪರಿತಪಿಸುವಂತಾಗಿತ್ತು. ಬಿಸಿಲಿನ…

2 days ago

ಇಂದು ದೇಶ್ಯಾದ್ಯಂತ ಕಾಮೆಡ್-ಕೆ ಪರೀಕ್ಷೆ : ವಿದ್ಯಾರ್ಥಿಗಳ ಭವಿಷ್ಯದ ಮೆಟ್ಟಿಲು

ವಿದ್ಯಾರ್ಥಿಗಳ(Students) ಭವಿಷ್ಯದ ಪ್ರಶ್ನೆ. ಇದು ಅವರ ಪ್ರಮುಖ ಘಟ್ಟ. ಪಿಯುಸಿ(PUC) ಮುಗಿದ ಕೂಡಲೇ…

2 days ago