Advertisement
Opinion

ಮಾವು ಮಾಂತ್ರಿಕ ಹಾಗೂ ಸುಬ್ರಾಯ ಭಟ್ಟರ 200ಕ್ಕೂ ಹೆಚ್ಚು ನಾಡು ಮಾವು ಹಾಗೂ ಹಲಸು ತಳಿ ಸಂರಕ್ಷಣೆ

Share

ನಾಡು ಮಾವು ಸಂರಕ್ಷಣೆ ಕೆಲಸದ ಮೊದಲ ದಿನವದು. ನವೆಂಬರ್ 2022. ಕಸಿ ಕಡ್ಡಿಗಳನ್ನು ಸಂಗ್ರಹಕ್ಕೆ ಮೊದಲ ಭೇಟಿ ಮಾವು ಮಾಂತ್ರಿಕ ಮಾಫಲತೋಟ ಸುಬ್ರಾಯ ಭಟ್ಟರಲ್ಲಿಗೆ. ಅವರಿಂದ ಕಸಿಕಡ್ಡಿ(Transplant stick) ತರುವುದು ನಮಗೆ ಹೆಮ್ಮೆಯೂ ಹೌದು, ನಾವು ಅವರಿಗೆ ಕೊಡುವ ಗೌರವವೂ ಹೌದು. ಮೊಬೈಲ್, ವಾಹನ ಸಂಪರ್ಕ ಇಲ್ಲದ ಕಾಲದಲ್ಲೇ ಸುಮೂರು 200 ಕ್ಕೂ ಮಿಕ್ಕಿ ಮಾವು-ಹಲಸು ತಳಿಗಳ ಸಂರಕ್ಷಣೆ ಆಯ್ತೆಂದರೆ ವಿಸ್ಮಯವೇ ಸರಿ.

ಮೊದಲೇ ದಿನ ನಿಗದಿ ಪಡಿಸಿ ಅವರಲ್ಲಿ ಹೋದಾಗ ನಮಗೆ ಅಚ್ಚರಿಯ ಮೇಲೆ ಅಚ್ಚರಿಗಳು. ಇನ್ನೂರಷ್ಟು ತಳಿಗಳಿದ್ದರೂ ನಿಮಗೆ ಇಷ್ಟು ಸಾಕು ಎಂದು 24 ತಳಿಗಳ ಪಟ್ಟಿ ಮೊದಲೇ ಸಿದ್ಧಪಡಿಸಿದ್ದರು ಮಾತ್ರವಲ್ಲ, ಕಡ್ಡಿ ತೆಗೆಯಲು ಕಷ್ಟವಾಗಬಹುದು, ಸಮಯ ಜಾಸ್ತಿ ಬೇಕು ಎಂಬ ಕಾರಣಕ್ಕೆ ಕೆಲವು ಮರಗಳ ಕಸಿಕಡ್ಡಿಗಳನ್ನು ಸಹಾಯಕರ ಮೂಲಕ ತೆಗೆದಿರಿಸಿದ್ದರು. ಪ್ರತೀ ಮರದ ಜಾತಕ, ಜಾಗದ ಚಿತ್ರ (Map) ಎಷ್ಟು ಕರಾರುವಕ್ಕು ಎಂದರೆ ಪುಸ್ತಕದಲ್ಲಿರುವುದೆಲ್ಲವೂ ಮಸ್ತಕದಲ್ಲಿತ್ತು.

ಮೊದಲ (ಒಂದನೇ ನಂಬರ್) ಕಸಿ ಕಡ್ಡಿ ತೆಗೆದದ್ದು ಕೇರಳ ಅಪ್ಪೆ ಸಾಸಿವೆ ಎಂಬ ತಳಿ ಮರದ್ದು. ಅದರ ಬಗ್ಗೆ ಹೇಳುವಾಗ ಇದು ನಂಬರ್ ಒನ್ ಅವರು ಹೇಳಿದ್ದರೂ ನಮಗೆ ಸಮಯಕ್ಕೆ ಗ್ರಹಿಸಲು ಕಷ್ಟವಾಗಿತ್ತು. ಕಾರಣ ಅವರ 2-3 ದಶಕಗಳ ಅನುಭವಗಳನ್ನು ಜಲಪಾತದಿಂದ ಭೋರ್ಗರೆಯುವ ನೀರಿನಂತೆ ಲಭ್ಯವಿರುವ 2-3ಗಂಟೆಯಲ್ಲಿ ನಾವು ಒಳಗೆ ಎಳೆದು ಕೊಳ್ಳಬೇಕಿತ್ತು. (ವಿಡಿಯೋ ತುಣುಕು ಇಲ್ಲಿದೆ). ಆ ಕಸಿಕಡ್ಡಿಗಳ ಸಂಗ್ರಹ ಮುಳಿಯ ವೆಂಕಟಕೃಷ್ಣ ಶರ್ಮರ ನಿರ್ದೇಶನದಲ್ಲಿ ನಡೆಯಿತು. ಚಿಗುರು ನರ್ಸರಿಯ ಸರ್ವೇಶ ರಾಯರು ಕಸಿಗಿಡ ಮಾಡಿ ನಮಗೆಲ್ಲ ದೊರೆತದ್ದು ಹಳೆಯಕತೆ.

ಮರು ವರ್ಷ ಅಂದರೆ ಈ 2023 ಜುಲೈ ನಂತರವೇ ಆ ಗಿಡಗಳನ್ನು ಕೆಲವರು ನಾಟಿಮಾಡಿದರು. ನಮ್ಮಲ್ಲಿ ಆ ತಳಿಯ ಕಸಿಗಿಡ ನೆಟ್ಟದ್ದು ನವೆಂಬರ್ 2023ರಲ್ಲಿ. ಅದೇನು ಚೋದ್ಯವೋ ಏನೋ, ಆ ನಂಬರ್ ಒನ್ ಹೆಸರಿನ ಕೇರಳ ಅಪ್ಪೆ ಸಾಸಿವೆ ತಳಿ 3 ಬೇರೆ ಬೇರೆ ಮಣ್ಣಿನ ವಾತಾವರಣದಲ್ಲಿ ನೆಟ್ಟ ಒಂದು ವರ್ಷದ ಮೊದಲೇ ಫಲ ಬಿಟ್ಟಿತು. ನಾಡಮಾವಿನ ಕಸಿಗಿಡ ಹೀಗೆ ಶೀಘ್ರವಾಗಿ ಫಲಬಿಡುವುದು ಅಪರೂಪದ ವಿಚಾರ. ಮೊದಲ ಫಲ ಪೆರ್ಲ ಸಮೀಪ ವರ್ಮುಡಿ ಶಿವಪ್ರಸಾದರ ಮಾವಿನ ತೋಪಿನಲ್ಲಿ. ಎರಡನೆಯ ಗಿಡ ಕಲ್ಲಡ್ಕ ಸಮೀಪದ ನಾಡಮಾವಿನ ತೋಪು ಹೊಂದಿರುವ ಇಂಜಿನಿಯರ್ ರಘುರಾಜ್ ರಲ್ಲಿ. 3ನೆಯ ಗಿಡದ ಫಲ ನಮ್ಮ ಜೀನ್ ಬ್ಯಾಂಕ್ ಮಾವು ಮಂಟಪದಲ್ಲಿ.

ಸುಬ್ರಾಯ ಭಟ್ಟರ ಸಂಗ್ರಹದ ನಂಬರ್ ಒನ್ ತಳಿಯು ಫಲಕೊಡುವುದರಲ್ಲಿಯೂ ನಂಬರ್ ಒನ್ ಆಗಿ ಒದಗಿದ್ದು ನಮಗದು ವಿಶೇಷ. ಮಾವು ಮಂತ್ರಿಕನಿಗೆ ಗೌರವ ಸೂಚಕವಾಗಿ ಈ ಬರಹ.

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಅಡಿಕೆ ರೋಗ ಸಂಕಷ್ಟಕ್ಕೆ ಸಂಸತ್ತಿನಲ್ಲಿ ಧ್ವನಿ : ನಿಯಮ 377ರಡಿ ಕ್ಯಾ. ಬ್ರಿಜೇಶ್ ಚೌಟ ಒತ್ತಾಯ

ಅಡಿಕೆ ತೋಟಗಳಲ್ಲಿ ಹೆಚ್ಚುತ್ತಿರುವ ಎಲೆ ಚುಕ್ಕೆ, ಹಳದಿ ಎಲೆ ಮತ್ತು ಕೊಳೆ ರೋಗಗಳಿಗೆ…

16 hours ago

ದೇಶಾದ್ಯಂತ ಮುಂಗಾರು ಅಬ್ಬರ : ಹಲವು ರಾಜ್ಯಗಳಿಗೆ ಭಾರೀ ಮಳೆ ಎಚ್ಚರಿಕೆ, ಹಿಮಾಲಯ ತಪ್ಪಲಿನಲ್ಲಿ ರೆಡ್ ಅಲರ್ಟ್

ದೇಶಾದ್ಯಂತ ಮುಂಗಾರು ಮತ್ತಷ್ಟು ತೀವ್ರಗೊಂಡಿದ್ದು, ಉತ್ತರ ಭಾರತದ ಹಲವು ಭಾಗಗಳಿಗೆ ರೆಡ್ ಅಲರ್ಟ್…

1 day ago

ರಾಜ್ಯದಲ್ಲಿ ಬರದ ಛಾಯೆ | 178 ತಾಲ್ಲೂಕುಗಳಲ್ಲಿ ತೀವ್ರ ಮಳೆ ಕೊರತೆ, ಜಲಾಶಯಗಳ ನೀರಿನ ಮಟ್ಟ ಶೇ.40ಕ್ಕೆ ಕುಸಿತ

ರಾಜ್ಯದಲ್ಲಿ ಮುಂಗಾರು ಮಳೆ 39% ಕೊರತೆಯಾಗಿದ್ದು, 26 ಜಿಲ್ಲೆಗಳ 178 ತಾಲ್ಲೂಕುಗಳಲ್ಲಿ ಬರದ…

2 days ago

ಪುತ್ತೂರಿಗೆ ಪುತ್ತಿಲ? ಪುತ್ತೂರಿನ ರಾಜಕೀಯದ ಹೊಸ ವ್ಯಾಕರಣ

ಪುತ್ತೂರಿನ ರಾಜಕೀಯದಲ್ಲಿ ವ್ಯಕ್ತಿತ್ವದ ಪ್ರಭಾವ ಹೆಚ್ಚುತ್ತಿರುವ ಕುರಿತು ಈ ವಿಶ್ಲೇಷಣೆ ಬೆಳಕು ಚೆಲ್ಲುತ್ತದೆ.…

2 days ago

ತೆಂಗಿನ ನಾಡಿನಲ್ಲಿ ಅಡಿಕೆ ಕ್ರಾಂತಿ….! ತುಮಕೂರಿನಲ್ಲಿ ಅಡಿಕೆ ಸಸಿಗಳಿಗೆ ಭಾರೀ ಬೇಡಿಕೆ

ಕೊಪ್ಪರ ಬೆಲೆಯ ಏರಿಳಿತದಿಂದ ತುಮಕೂರಿನಲ್ಲಿ ರೈತರು ಅಡಿಕೆ ಕೃಷಿಯತ್ತ ಮುಖ ಮಾಡುತ್ತಿದ್ದಾರೆ. ಇದರ…

2 days ago

ಹವಾಮಾನ ವರದಿ | 19-07-2026 | ಜುಲೈ 20 ರಿಂದ ಮಳೆ ಇಳಿಮುಖ…! ಕರಾವಳಿ–ಮಲೆನಾಡಿನಲ್ಲಿ ಮಾತ್ರ ಅಲ್ಲಲ್ಲಿ ಮಳೆ ಮುಂದುವರಿಕೆ

ಜುಲೈ 20ರಿಂದ ರಾಜ್ಯದ ಬಹುತೇಕ ಭಾಗಗಳಲ್ಲಿ ಮಳೆಯ ಪ್ರಮಾಣ ಇಳಿಮುಖವಾಗುವ ಲಕ್ಷಣಗಳಿವೆ. ಉತ್ತರ…

2 days ago