Advertisement
MIRROR FOCUS

ಜಲಪ್ರಳಯವು ಮೊಣ್ಣಂಗೇರಿಯ ವಿದ್ಯಾ ದೇಗುಲವನ್ನು ನುಂಗಿತು….!

Share

ಸಂಪಾಜೆ : ಮೊಣ್ಣಂಗೇರಿಯ ಆ ಸರಕಾರಿ ಶಾಲೆಗೆ ಪುಟ್ಟ ಪುಟ್ಟ ಹೆಜ್ಜೆಗಳನ್ನಿಟ್ಟು, ಮಳೆಗೆ ಒದ್ದೆಯಾಗಿ ಬಂದು ಸಂಭ್ರಮಿಸುತ್ತಿದ್ದ ಮಕ್ಕಳ ಮನೆ ಪಕ್ಕದ ಪ್ರಾಥಮಿಕ ಶಾಲೆಗೆ ಬೀಗ ಬಿದ್ದು ವರ್ಷ ಕಳೆದಿದೆ.

ಮೊಣ್ಣಂಗೇರಿಯ ಪ್ರದೇಶದ ಜನರು ಆಗಸ್ಟ್ ತಿಂಗಳು, ಮಳೆಗಾಲ ಎಂದಾಗ ಈಗಲೂ ಕರಾಳ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ. ಅದರಲ್ಲಿ ಒಂದು ಭಾಗ ಮಕ್ಕಳ ವಿದ್ಯಾಭ್ಯಾಸ. ಜಲಪ್ರಳಯದ ಕಾರಣದಿಂದ ಮಕ್ಕಳ ಶಿಕ್ಷಣದ ಮೇಲೂ ಪರಿಣಾಮವಾಯಿತು. ಇಡೀ ಗ್ರಾಮದ ಕಿರೀಟದಂತಿದ್ದ ಶಾಲೆ ಕಳೆದ ಆಗಸ್ಟ್ ನಂತರ ಇಂದಿನವರೆಗೂ ತೆರಯಲಿಲ್ಲ..!

ಎರಡನೇ ಮೊಣ್ಣಂಗೇರಿಯಲ್ಲಿ  ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಇತ್ತು. ಸುಮಾರು 25 ರಿಂದ 30 ಮಕ್ಕಳು ಈ ಶಾಲೆಯಲ್ಲಿ  ಓದುತ್ತಿದ್ದರು. ಅಂಗನವಾಡಿಯೂ ಇಲ್ಲೇ ಹತ್ತಿರದಲ್ಲಿ ಇತ್ತು.  ಸದಾ ಮಕ್ಕಳ ಕಲರವ, ಲವಲವಿಕೆ ನಲಿದಾಡುತ್ತಿದ್ದ ಮೊಣ್ಣಂಗೇರಿಯ ಈ ಕಿರಿಯ ಪ್ರಾಥಮಿಕ ಶಾಲೆ ಪ್ರಳಯದ ನಂತರ ತೆರೆಯಲೇ ಇಲ್ಲ.  ಹಲವು ತಿಂಗಳುಗಳ ಕಾಲ ಮನೆಗಳ ಬಾಗಿಲು ಮುಚ್ಚಿದ್ದ ಕಾರಣ ಮಕ್ಕಳು ಶಾಲೆಗೆ ಬಾರದಂತಾದರು. ಬಳಿಕ ಇಲ್ಲಿ ಕಲಿಯುತ್ತಿದ್ದ ಮಕ್ಕಳನ್ನು ಪೋಷಕರು ಸಂಬಂಧಿಕರಲ್ಲಿಂದ ಹಾಸ್ಟೆಲ್ ಗಳಿಂದ ಹಾಗೂ  ಮತ್ತಿತರ ಕಡೆ ಶಾಲೆಗಳಿಗೆ ಸೇರಿಸಿದರು. ಪ್ರಳಯದ ನೋವಿನ ಜೊತೆಗೆ ಮಕ್ಕಳಿಂದಲೂ ದೂರ ಉಳಿಯಬೇಕಾದ ಮಾನಸಿಕ ಸ್ಥಿತಿ ಇಲ್ಲಿನ ಜನರದ್ದಾಯಿತು.

ಕಳೆದ ಆಗಸ್ಟ್ ನಂತರ  ಈ ಶಾಲೆಗೆ ಮಕ್ಕಳನ್ನು  ಕಳಿಸಲು ಸಾಧ್ಯವಾಗಲಿಲ್ಲ ಎನ್ನುತ್ತಾರೆ ಮೊಣ್ಣಂಗೇರಿಯ ಸುನಿತಾ.

ನಮ್ಮ ಬದುಕು ಹಾಗಾಯಿತು. ಆದರೆ ಮಕ್ಕಳ ಶಿಕ್ಷಣವೂ ಕುಂಠಿತವಾಗುವುದು ಬೇಡವೆಂದು ದೂರದ ಶಾಲೆಗೆ ಹಾಕಿದ್ದೇವೆ. ಈ ವರ್ಷವೂ ಕುಸಿತವಾದರೆ ಮಕ್ಕಳ ಬದುಕು ಹೇಗೆ ಎಂಬ ಚಿಂತೆಯಲ್ಲಿದ್ದಾರೆ ಮೊಣ್ಣಂಗೇರಿಯ ವನಿತಾ.

ಇದ್ದುದರಲ್ಲಿ ಒಳ್ಳೆಯದಿತ್ತು ಮೊಣ್ಣಂಗೇರಿಯ ಶಾಲೆ, ಆದರೆ ಏನು ಮಾಡೋಣ, ಜಲಪ್ರಳಯದ ಕಾರಣದಿಂದ ಎಲ್ಲಾ ವ್ಯವಸ್ಥೆಯೂ ಬದಲಾಗಬೇಕಾಯಿತು. ಹೇಗೋ ಬದುಕು ಸಾಗಿಸುತ್ತೇವೆ. ನಮಗೆ ಕಷ್ಟವಾದರೂ ಚಿಂತೆ ಇಲ್ಲ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು ಎನ್ನುವುದು  ಸುಂದರ ನಾಯ್ಕ್ ಅವರ ಅಭಿಪ್ರಾಯ.

 

ಇಂದಿಗೂ ಮೊಣ್ಣಂಗೇರಿಯ ಶಾಲೆ ಸುಂದರವಾದ ಕಟ್ಟಡಿಂದ ಕಂಗೊಳಿಸುತ್ತಿದೆ, ಮೇಲಿನ ಪ್ರದೇಶದ ಗುಡ್ಡ ಬಾಯಿ ತೆರೆದು ನಿಂತಿದೆ. ಈ ಮಳೆಗಾಲ ಏನಾಗುತ್ತೋ ಎಂಬ ಅವ್ಯಕ್ತ  ಭಯ ಆ ಪ್ರದೇಶದ ಜನರಲ್ಲಿ ಕಾಣುತ್ತಿದೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹಿಂದೂ ಮಹಾಸಾಗರದ ಹವಾಮಾನದಲ್ಲಿ ಹಠಾತ್ ಬದಲಾವಣೆ – ಮತ್ತೆ ಮಹಾಮಳೆಗೆ ಕಾರಣವಾಗುತ್ತಿದೆಯೇ?

ಹಿಂದೂ ಮಹಾಸಾಗರದ ಹವಾಮಾನ ಬದಲಾವಣೆ ಹಾಗೂ ಸಕಾರಾತ್ಮಕ IOD ಪರಿಣಾಮದಿಂದ ಕರ್ನಾಟಕದಲ್ಲಿ ಮುಂಗಾರು…

5 minutes ago

ರಾಜ್ಯದಲ್ಲಿ ಭಾರೀ ಮಳೆ ಆರ್ಭಟ – ಕೆಲವು ಜಿಲ್ಲೆಗಳಲ್ಲಿ ಇಂದು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ

ರಾಜ್ಯದ ಹಲವೆಡೆ ಭಾರೀ ಮಳೆಯ ಹಿನ್ನೆಲೆಯಲ್ಲಿ ಕೆಲವು ಜಿಲ್ಲೆಗಳಲ್ಲಿ ಶಾಲೆ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.…

5 hours ago

ಆಹಾರ-ನಿದ್ರೆ ಪರಸ್ಪರ ಪೂರಕ; ಉತ್ತಮ ನಿದ್ರೆಗೆ ಹಸಿವು ಅಗತ್ಯ: ರಾಘವೇಶ್ವರ ಶ್ರೀ

ಉತ್ತಮ ಆರೋಗ್ಯಕ್ಕೆ ಸರಿಯಾದ ಆಹಾರ ಮತ್ತು ನಿದ್ರೆ ಎರಡೂ ಅವಿಭಾಜ್ಯ ಎಂದು ಶ್ರೀ…

14 hours ago

ಕೃಷಿಕರ ಮಿತ್ರ ಸಾಯಿಶೇಖರ್‌ ಕರಿಕಳ ಅವರಿಗೆ ರೈತ ರತ್ನ ಪ್ರಶಸ್ತಿ

ಮಳೆ ಮಾಹಿತಿ ಮೂಲಕ ಕೃಷಿಕರಿಗೆ ನೆರವಾಗುತ್ತಿರುವ ಸಾಯಿಶೇಖರ್‌ ಕರಿಕಳ ಅವರಿಗೆ ರೈತ ರತ್ನ…

14 hours ago

ಮಂಗಳೂರಿನಲ್ಲಿ ರಾಷ್ಟ್ರೀಯ ಚೆಸ್ ಚಾಂಪಿಯನ್ ಶಿಪ್‌ಗೆ ಚಾಲನೆ – 28 ರಾಜ್ಯ–ಕೇಂದ್ರಾಡಳಿತ ಪ್ರದೇಶಗಳಿಂದ 644 ಬಾಲಕಿ-ಬಾಲಕಿಯರು

ಮಂಗಳೂರಿನಲ್ಲಿ ರಾಷ್ಟ್ರೀಯ ಅಂಡರ್‌-11 ಚೆಸ್ ಚಾಂಪಿಯನ್ಶಿಪ್‌ಗೆ ಭವ್ಯ ಚಾಲನೆ ದೊರೆತಿದ್ದು, ದೇಶದ 28…

15 hours ago

ಹವಾಮಾನ ವರದಿ | 02-08-2026 | ಕರಾವಳಿಯಲ್ಲಿ ಮಳೆ ಇಳಿಮುಖ ..? ರಾಜ್ಯದಲ್ಲಿ ಮುಂಗಾರು ಸ್ಥಿತಿ ಏನು..?

ರಾಜ್ಯದ ಕರಾವಳಿ ಮತ್ತು ಮಲೆನಾಡಿನಲ್ಲಿ ಮಳೆಯ ತೀವ್ರತೆ ಇಳಿಮುಖವಾಗಲಿದ್ದು, ಆಗಸ್ಟ್‌ 3ರಿಂದ ತೋಟದ…

17 hours ago