ಸುಳ್ಯ: ಜೇಸಿಐ ಸುಳ್ಯ ಪಯಸ್ವಿನಿಯ ನೂತನ ಅಧ್ಯಕ್ಷರಾಗಿ ಜೇಸೀ ದೇವರಾಜ್ ಕುದ್ಪಾಜೆಯವರು ಸರ್ವಾನುಮತದಿಂದ ಆಯ್ಕೆಯಾಗಿರುತ್ತಾರೆ.
ಘಟಕದ ನಿಕಟಪೂರ್ವ ಅಧ್ಯಕ್ಷರಾಗಿ ಜೇಸೀ ತೀರ್ಥವರ್ಣ ಬಳ್ಳಡ್ಕ, ಜೇಸೀ ಕಾರ್ಯದರ್ಶಿಯಾಗಿ ಜೇಸೀ ಚೇತನ್ ಅಮೆಮನೆ, ಘಟಕ ಉಪಾಧ್ಯಕ್ಷರಾಗಿ ಜೇಸೀ ಅಭಿಜ್ಞಾ ಬೊಮ್ಮೆಟ್ಟಿ, ವ್ಯವಹಾರ ವಿಭಾಗದ ಉಪಾಧ್ಯಕ್ಷರಾಗಿ ಜೇಸೀ ಬಶೀರ್ ಯು.ಪಿ., ವ್ಯಕ್ತಿತ್ವ ವಿಕಸನ ಉಪಾಧ್ಯಕ್ಷರಾಗಿ ಜೇಸೀ ಶುೃತಿ ತೀರ್ಥವರ್ಣ ಬಳ್ಳಡ್ಕ, ಸಾರ್ವಜನಿಕ ವಿಭಾಗದ ಉಪಾಧ್ಯಕ್ಷರಾಗಿ ಜೇಸೀ ರವಿ ಬೊಮ್ಮೆಟ್ಟಿ, ಕಮ್ಯುನಿಟಿ ವಿಭಾಗದ ಉಪಾಧ್ಯಕ್ಷರಾಗಿ ಜೇಸೀ ದಿವ್ಯಾ ಚೇತನ್ ಅಮೆಮನೆ ಆಯ್ಕೆಯಾದರು.
ನೂತನ ಜೇಸಿರೆಟ್ ಅಧ್ಯಕ್ಷೆಯಾಗಿ ಚೈತನ್ಯ ದೇವರಾಜ್ ಕುದ್ಪಾಜೆ, ಖಜಾಂಜಿಯಾಗಿ ಜೇಸೀ ಶೋಭಾ ಅಶೋಕ್ ಚೂಂತಾರು, ಜೊತೆ ಕಾರ್ಯದರ್ಶಿಯಾಗಿ ಜೇಸೀ ದೀಕ್ಷಿತ್ ಪಾನತ್ತಿಲ, ಜೇಸೀ ಸಪ್ತಾಹ ನಿರ್ದೇಶಕರಾಗಿ ಜೇಸೀ ರಂಜಿತ್ ಕುಕ್ಕೆಟ್ಟಿ, ಯುವಜೇಸೀ ನಿರ್ದೇಶಕರಾಗಿ ಜೇಸೀ ಗುರುರಾಜ್ ಅಜ್ಜಾವರ, ಘಟಕದ ನಿರ್ದೇಶಕರಾಗಿ ಜೇಸೀ ಚಂದ್ರಶೇಖರ ಕನಕಮಜಲು, ಪಯಸ್ವಿನಿ ಘಟಕದ ಗೃಹ ಪತ್ರಿಕೆಯ ಸಂಪಾದಕರಾಗಿ ಜೇಸೀ ಮರಿಯಾಜ್ಯೋತಿ, ಕಮ್ಯುನಿಟಿ ನಿರ್ದೇಶಕರಾಗಿ ಜೇಸೀ ಯೋಗೀಶ್ ಚೂಂತಾರು ಆಯ್ಕೆಯಾಗಿರುತ್ತಾರೆ.
ಈ ಸಂದರ್ಭದಲ್ಲಿ ಘಟಕದ ಪೂರ್ವಾಧ್ಯಕ್ಷ ಜೇಸೀ ಅಬ್ದುಲ್ಲ ಎ. ಇವರ ನೇತೃತ್ವದಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ, ಜೇಸಿಐ ಸುಳ್ಯ ಪಯಸ್ವಿನಿ ಘಟಕದ ಪೂರ್ವಾಧ್ಯಕ್ಷ ಜೇಸಿಐ ಸೆನೆಟರ್ ಎಂ.ಬಿ. ಸದಾಶಿವ, ಜೇಸೀ ಜಯಪ್ರಕಾಶ್ ಕಾನತ್ತಿಲ, ಜೇಸೀ ದಿನೇಶ್ ಅಂಬೆಕಲ್ಲು, ಜೇಸೀ ಸೀತಾರಾಮ ಕೇವಳ, ಜೇಸೀ ದೇವಿಪ್ರಸಾದ್ ಕುದ್ಪಾಜೆ ಭಾಗವಹಿಸಿದ್ದರು.
ಇಂಡೋನೇಷ್ಯಾದ ಸುಲವೆಸಿಯಲ್ಲಿ ಪತ್ತೆಯಾದ ಸುಮಾರು 25,000 ವರ್ಷಗಳ ಹಿಂದಿನ ಮಾನವ ಹಲ್ಲುಗಳಲ್ಲಿ ಅಡಿಕೆ…
‘ಹನುಮಾನ್ ಅಂಶ್’ ಸಿನಿಮಾ 40ನೇ ದಿನವೂ ₹8.25 ಕೋಟಿ ಗಳಿಸಿ ಬಾಕ್ಸ್ ಆಫೀಸ್ನಲ್ಲಿ…
ನೈಋತ್ಯ ಮುಂಗಾರು ಹಿಂದೆ ಸರಿಯಲು ಪೂರಕ ಪರಿಸ್ಥಿತಿಗಳು ನಿರ್ಮಾಣವಾಗುತ್ತಿದ್ದು, ಸೆ.17ರ ವೇಳೆಗೆ ಪಶ್ಚಿಮ…
ಕರ್ನಾಟಕದ ಹಲವು ಭಾಗಗಳಲ್ಲಿ ಸೆ.17ರಂದು ಸಂಜೆ ಹಾಗೂ ರಾತ್ರಿ ಅಲ್ಲಲ್ಲಿ ಸಾಮಾನ್ಯ ಮಳೆಯ…
ಕೋಲಾರದಿಂದ ಬೆಂಗಳೂರಿಗೆ ಸಾಗಿಸಲಾಗುತ್ತಿದ್ದ ಸುಮಾರು 10 ಟನ್ ಸಿಂಥೆಟಿಕ್ ಅಡಿಕೆಯನ್ನು ಅಧಿಕಾರಿಗಳು ವಶಪಡಿಸಿಕೊಂಡಿರುವುದಾಗಿ…
ಮಂಗಳೂರಿನಲ್ಲಿ ಸೆ.18ರಂದು ನಡೆಯಲಿರುವ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಅಡಿಕೆ ಬೆಳೆಗಾರರ ಸಮಸ್ಯೆಗಳಿಗೆ…