ಸುಳ್ಯ: ಜೇಸಿಐ ಸುಳ್ಯ ಪಯಸ್ವಿನಿಯ ನೂತನ ಅಧ್ಯಕ್ಷರಾಗಿ ಜೇಸೀ ದೇವರಾಜ್ ಕುದ್ಪಾಜೆಯವರು ಸರ್ವಾನುಮತದಿಂದ ಆಯ್ಕೆಯಾಗಿರುತ್ತಾರೆ.
ಘಟಕದ ನಿಕಟಪೂರ್ವ ಅಧ್ಯಕ್ಷರಾಗಿ ಜೇಸೀ ತೀರ್ಥವರ್ಣ ಬಳ್ಳಡ್ಕ, ಜೇಸೀ ಕಾರ್ಯದರ್ಶಿಯಾಗಿ ಜೇಸೀ ಚೇತನ್ ಅಮೆಮನೆ, ಘಟಕ ಉಪಾಧ್ಯಕ್ಷರಾಗಿ ಜೇಸೀ ಅಭಿಜ್ಞಾ ಬೊಮ್ಮೆಟ್ಟಿ, ವ್ಯವಹಾರ ವಿಭಾಗದ ಉಪಾಧ್ಯಕ್ಷರಾಗಿ ಜೇಸೀ ಬಶೀರ್ ಯು.ಪಿ., ವ್ಯಕ್ತಿತ್ವ ವಿಕಸನ ಉಪಾಧ್ಯಕ್ಷರಾಗಿ ಜೇಸೀ ಶುೃತಿ ತೀರ್ಥವರ್ಣ ಬಳ್ಳಡ್ಕ, ಸಾರ್ವಜನಿಕ ವಿಭಾಗದ ಉಪಾಧ್ಯಕ್ಷರಾಗಿ ಜೇಸೀ ರವಿ ಬೊಮ್ಮೆಟ್ಟಿ, ಕಮ್ಯುನಿಟಿ ವಿಭಾಗದ ಉಪಾಧ್ಯಕ್ಷರಾಗಿ ಜೇಸೀ ದಿವ್ಯಾ ಚೇತನ್ ಅಮೆಮನೆ ಆಯ್ಕೆಯಾದರು.
ನೂತನ ಜೇಸಿರೆಟ್ ಅಧ್ಯಕ್ಷೆಯಾಗಿ ಚೈತನ್ಯ ದೇವರಾಜ್ ಕುದ್ಪಾಜೆ, ಖಜಾಂಜಿಯಾಗಿ ಜೇಸೀ ಶೋಭಾ ಅಶೋಕ್ ಚೂಂತಾರು, ಜೊತೆ ಕಾರ್ಯದರ್ಶಿಯಾಗಿ ಜೇಸೀ ದೀಕ್ಷಿತ್ ಪಾನತ್ತಿಲ, ಜೇಸೀ ಸಪ್ತಾಹ ನಿರ್ದೇಶಕರಾಗಿ ಜೇಸೀ ರಂಜಿತ್ ಕುಕ್ಕೆಟ್ಟಿ, ಯುವಜೇಸೀ ನಿರ್ದೇಶಕರಾಗಿ ಜೇಸೀ ಗುರುರಾಜ್ ಅಜ್ಜಾವರ, ಘಟಕದ ನಿರ್ದೇಶಕರಾಗಿ ಜೇಸೀ ಚಂದ್ರಶೇಖರ ಕನಕಮಜಲು, ಪಯಸ್ವಿನಿ ಘಟಕದ ಗೃಹ ಪತ್ರಿಕೆಯ ಸಂಪಾದಕರಾಗಿ ಜೇಸೀ ಮರಿಯಾಜ್ಯೋತಿ, ಕಮ್ಯುನಿಟಿ ನಿರ್ದೇಶಕರಾಗಿ ಜೇಸೀ ಯೋಗೀಶ್ ಚೂಂತಾರು ಆಯ್ಕೆಯಾಗಿರುತ್ತಾರೆ.
ಈ ಸಂದರ್ಭದಲ್ಲಿ ಘಟಕದ ಪೂರ್ವಾಧ್ಯಕ್ಷ ಜೇಸೀ ಅಬ್ದುಲ್ಲ ಎ. ಇವರ ನೇತೃತ್ವದಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ, ಜೇಸಿಐ ಸುಳ್ಯ ಪಯಸ್ವಿನಿ ಘಟಕದ ಪೂರ್ವಾಧ್ಯಕ್ಷ ಜೇಸಿಐ ಸೆನೆಟರ್ ಎಂ.ಬಿ. ಸದಾಶಿವ, ಜೇಸೀ ಜಯಪ್ರಕಾಶ್ ಕಾನತ್ತಿಲ, ಜೇಸೀ ದಿನೇಶ್ ಅಂಬೆಕಲ್ಲು, ಜೇಸೀ ಸೀತಾರಾಮ ಕೇವಳ, ಜೇಸೀ ದೇವಿಪ್ರಸಾದ್ ಕುದ್ಪಾಜೆ ಭಾಗವಹಿಸಿದ್ದರು.
ಜಗತ್ತು ಸದಾ ನಮ್ಮ ಜೊತೆಗಿರುತ್ತದೆ ಎಂಬ ನಿರೀಕ್ಷೆಗಿಂತ, ಪರಿಸ್ಥಿತಿ ಬದಲಾದರೂ ನಮ್ಮ ದಾರಿಯಲ್ಲಿ…
ಮಾರುಕಟ್ಟೆಗೆ ಯೋಗ್ಯವಲ್ಲದ ತೆಂಗಿನಕಾಯಿಯಿಂದ ಪಡೆದ ತೆಂಗಿನ ಎಣ್ಣೆಯನ್ನು ಬಳಸಿ ಸುಸ್ಥಿರ ವಿಮಾನ ಇಂಧನ…
ಕೃಷಿ ಮತ್ತು ಕೃಷಿ ಸಂಬಂಧಿತ ಕ್ಷೇತ್ರಗಳು ಯುವ ಉದ್ಯಮಶೀಲತೆಗೆ ಮುಂದಿನ ದೊಡ್ಡ ಅವಕಾಶಗಳಾಗಿದ್ದು,…
ಕರ್ನಾಟಕದ ಬರಪೀಡಿತ ಪ್ರದೇಶಗಳಲ್ಲಿ ಬೆಳೆ ವಿಮೆ ನೋಂದಣಿ ಹಾಗೂ ಪ್ರೀಮಿಯಂ ಕಡಿತದ ಅವಧಿಯನ್ನು…
ಕರ್ನಾಟಕದ 102 ತಾಲೂಕುಗಳಲ್ಲಿ ಬರ ಪರಿಸ್ಥಿತಿ ಉಂಟಾಗಿದ್ದು, ಈ ತಿಂಗಳಾಂತ್ಯಕ್ಕೆ ಕೇಂದ್ರ ಸರ್ಕಾರಕ್ಕೆ…
ಮಂಗಳೂರಿನ ಅಶ್ಮಿತ್ ಎ.ಜೆ. ಅವರು ಝೀ ಕನ್ನಡದ ‘ಸರಿಗಮಪ 2026’ರ ವಿಜೇತರಾಗಿ ₹20…