Advertisement
ಮಾಹಿತಿ

ತಡವಾಗಿ ಬಂದ ಮುಂಗಾರು : ಇಂದಿನಿಂದ “ಮುಂಗಾರು ಮಳೆ” ಯ ವೈಭವ ಶುರುವಂತೆ…!

Share

ಸುಳ್ಯ: ನಿಜವಾದ ಮಳೆಗಾಲ ಇಂದಿನಿಂದ ಶುರುವಾಗುತ್ತದೆ..!. ಹೀಗೆ ಹೇಳಿದಾಗಲೇ ಅನೇಕರು ಈ ಬಾರಿ ಸಂಶಯ ಪಡುತ್ತಾರೆ. ಈ ವರ್ಷ ಮಳೆಗಾಲದ, ಹವಾಮಾನದ ಎಲ್ಲಾ ನಿರೀಕ್ಷೆಗಳೂ ಶೇ.100 ಸರಿಯಾಗಿಲ್ಲ. ಕಾರಣ ಹವಾಮಾನದಲ್ಲಿನ ದಿಢೀರ್ ಏರುಪೇರು.

Advertisement
Advertisement
Advertisement
Advertisement

ಹವಾಮಾನದ ಬದಲಾವಣೆಯ ವೀಕ್ಷಣೆ, ಮಳೆ ಲೆಕ್ಕ, ವಾತಾವರಣ ಬದಲಾವಣೆಯ ವೀಕ್ಷಣೆ ಬಹಳ ಕುತೂಹಲವಾಗಿರುತ್ತದೆ.  ಮಳೆಗಾಲವು ನಿರೀಕ್ಷೆಯಂತೆ ಜೂ.7 ರಂದು ಕೇರಳ ತಲಪಿ ಕರಾವಳಿ ಮೂಲಕ ಜೂ.10 ಕ್ಕೆ ರಾಜ್ಯಕ್ಕೆ ಪ್ರವೇಶ ಮಾಡಬೇಕಾಗಿತ್ತು. ಆದರೆ ತೀರಾ ವಿಳಂಬವಾಗಿಯೂ ಸರಿಯಾಗಿ ಮಳೆಗಾಲ ಆರಂಭವಾಗಿಲ್ಲ. ಕಾರಣ ನೈರುತ್ಯ ಮುಂಗಾರು ಆರಂಭವಾದ ಹೊತ್ತಿನಲ್ಲೇ ವಾಯು ಚಂಡಮಾರುತ ಆರಂಭವಾಯಿತು. ಮುಂಗಾರು ಬಲಕಳೆದುಕೊಂಡಿತು.

Advertisement

ಇದೀಗ ಮಳೆಗಾಲ ತನ್ನ ಮೂಲಸ್ವರೂಪ ಪಡೆದುಕೊಂಡಿದೆ. ಒಂದೆರಡು ಮಳೆ ಜೋರಾಗುತ್ತದೆ. ಮಂಗಳೂರು ಕಾಸರಗೋಡು ಭಾಗಗಳಲ್ಲಿ ಭಾರಿ ಮಳೆಯ ಸಾಧ್ಯತೆ ಇದೆ.
ನಾಳೆಯಿಂದ  24 ರವರೆಗೆ ಮಡಿಕೇರಿ ಹಾಗೂ ಆಗುಂಬೆ ಭಾಗಗಳಲ್ಲಿ ಭಾರಿ ಮಳೆಯ ಮುನ್ಸೂಚನೆ ಇದೆ. ಇಡೀ ದ. ಕ. ಹಾಗೂ ಉಡುಪಿ ಭಾಗಗಳಲ್ಲೂ ಹೆಚ್ಚಿನ ಮಳೆಯ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯ ಚಿತ್ರ ಸೂಚಿಸುತ್ತದೆ.

Advertisement

ಈ ಬಾರಿ ಮಳೆಯ ಮುನ್ಸೂಚನೆ ಆಗಾಗ ತಪ್ಪಾಗಿದೆ. ಇದುವರೆಗೆ ಹೀಗೆ ಆಗುತ್ತಿರಲಿಲ್ಲ. ಹವಾಮಾನ ಇಲಾಖೆಯ ಉಪಗ್ರಹ ಆಧಾರಿತ ಚಿತ್ರ ಬಹುತೇಕ ಸರಿಯಾಗಿರುತ್ತಿತ್ತು ಎಂದು  ಹೇಳುತ್ತಾರೆ ಸಾಯಿಶೇಖರ್ ಕರಿಕಳ. ಇದೀಗ ಮಳೆಗಾಲ ಇಂದಿನಿಂದ ಶುರುವಾಗುತ್ತದೆ ಎಂದು ಉಪಗ್ರಹ ಚಿತ್ರ ಹೇಳುತ್ತದೆ ಎಂದು ಅವರು ಹೇಳುತ್ತಾರೆ.

 

Advertisement

ಇನ್ನೊಂದು ಶಾಕಿಂಗ್ ಅಂಶವೆಂದರೆ 1972 ರ ನಂತರ ಅತ್ಯಂತ ವಿಳಂಬವಾಗಿ ಮಳೆ ಬಂದ ವರ್ಷ 2019..!. ಈ ದಾಖಲೆಯನ್ನು  ಬಾಳಿಲದ ಪಿಜಿಎಸ್ ಎನ್ ಪ್ರಸಾದ್ ಹೇಳುತ್ತಾರೆ. ಅವರೇ ಹೇಳುವ ಹಾಗೆ,

 

Advertisement

ನನ್ನ ತಂದೆಯವರ ಡೈರಿಯಲ್ಲಿ ಕಂಡುಬಂದಂತೆ 1972 ರ ಬಳಿಕ (1972 ಜೂನ್ 20) ನಮ್ಮಲ್ಲಿ ಅತ್ಯಂತ ತಡವಾಗಿ (19/06/2019) ಮುಂಗಾರು ಮಳೆ ಆರಂಭವಾದ ವರ್ಷವಿದು. ಅಂದು ಜೂನ್ 20… ಈ ಬಾರಿ 19 ಜೂನ್…!. ಅತ್ಯಂತ ಗೊಂದಲದ ನೈರುತ್ಯ ಮುಂಗಾರು ಈ ಬಾರಿಯದು ಎಂದು ಪ್ರಸಾದ್ ಹೇಳುತ್ತಾರೆ.

Advertisement

 

ಪ್ರಸಾದ್ ಅವರ ಮಳೆ ಲೆಕ್ಕದ ಪ್ರಕಾರ

Advertisement

ವಾಡಿಕೆಗಿಂತ ( ಜೂನ್ 6 ) ತಡವಾಗಿ ಮಳೆಗಾಲ ಆರಂಭವಾದ ವರ್ಷಗಳು… ಹಾಗೂ ಆಯಾ ವರ್ಷ ವಾರ್ಷಿಕವಾಗಿ ಸುರಿದ ಒಟ್ಟು ಮಳೆ ಹೀಗಿದೆ

15/06/1979…. …3579 ಮಿ.ಮೀ
16/06/1983……..5119 ಮಿ.ಮೀ
11/06/1995……..4037 ಮಿ.ಮೀ
10/06/1996……..4562 ಮಿ.ಮೀ
12/06/1997……..4769 ಮಿ.ಮೀ
08/06/1998……..5443 ಮಿ.ಮೀ
10/06/2003……..4046 ಮಿ.ಮೀ
08/06/2005……..4253 ಮಿ.ಮೀ
12/06/2007……..4868 ಮಿ.ಮೀ
08/06/2012……..4314 ಮಿ.ಮೀ
09/06/2014……. 4450 ಮಿ.ಮೀ.
19/06/2019……..????

Advertisement

ಅತ್ಯಂತ ಗೊಂದಲದ ನೈರುತ್ಯ ಮುಂಗಾರು ಈ ಬಾರಿಯದು. ಹವಾಮಾನ ಇಲಾಖೆಯನ್ನೇ ಗೊಂದಲಕ್ಕೀಡು ಮಾಡಿದ ನೈರುತ್ಯ ಮುಂಗಾರು ಮಾರುತ ಈಗ ಸ್ವಲ್ಪ ಮಟ್ಟಿನ ವೇಗ ಪಡಕೊಂಡಂತಿದೆ. ಮುಂದಿನ ಬೆಳವಣಿಗೆ ಏನು ಗೊತ್ತಿಲ್ಲ…!

 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ದೆಹಲಿ ಚುನಾವಣೆ “ರಾಜಕೀಯ ಅಹಂಕಾರ”ಕ್ಕೆ ಉತ್ತರ | ರಚನಾತ್ಮಕ ವಿಪಕ್ಷವಾಗಿ ಕೆಲಸ ಮಾಡಬಹುದೇ ಎಎಪಿ..?

ಒಂದು ಹೋರಾಟದಿಂದ ರಾಜಕೀಯ ಪಕ್ಷವಾಗಿ ವೇಗವಾಗಿ ಬೆಳೆದಿರುವ ಆಮ್‌ ಆದ್ಮಿಪಕ್ಷ ಕೇವಲ 13…

1 hour ago

ದುಬೈಯಿಂದ ಅಡಿಕೆ ಕಳ್ಳಸಾಗಾಣಿಕೆ ದಂಧೆ | 1.47 ಕೋಟಿ ರೂಪಾಯಿ ಮೌಲ್ಯದ ಅಡಿಕೆ ವಶಕ್ಕೆ | 6 ಮಂದಿ ಬಂಧನ |

ದುಬೈಯಿಂದ ಒಣಖರ್ಜೂರ ಹೆಸರಿನಲ್ಲಿ ಅಡಿಕೆ ಕಳ್ಳಸಾಗಾಣಿಕೆಯ ಮತ್ತೊಂದು ಪ್ರಕರಣವನ್ನು ಡಿಆರ್‌ಐ ಪತ್ತೆ ಮಾಡಿದೆ.26.32…

3 hours ago

ಮುಳಬಾಗಿಲು ತಾಲೂಕಿನ ಎಲ್ಲಾ ಕೆರೆಗಳ ಒತ್ತುವರಿ ತೆರವು

ಹಸಿರು ನ್ಯಾಯಾಧೀಕರಣ ಆದೇಶ ಹಾಗೂ ಜಿಲ್ಲಾಧಿಕಾರಿ ಸೂಚನೆಯಂತೆ ಮುಳಬಾಗಿಲು ತಾಲೂಕಿನ ಎಲ್ಲಾ ಕೆರೆಗಳ…

15 hours ago

ಕಾಡು ಪ್ರಾಣಿಗಳ ಹಾವಳಿ ತಪ್ಪಿಸುವಂತೆ ಒತ್ತಾಯಿಸಿ ಕಳಸ ಬಂದ್ |

ಕಾಡು ಪ್ರಾಣಿಗಳ ಹಾವಳಿ ತಪ್ಪಿಸುವಂತೆ ಒತ್ತಾಯಿಸಿ  ಚಿಕ್ಕಮಗಳೂರು ಜಿಲ್ಲೆಯ ಕಳಸ ಪಟ್ಟಣದಲ್ಲಿ ಅಂಗಡಿ-ಮುಂಗಟ್ಟುಗಳನ್ನು…

15 hours ago

ಗ್ರಾಮೀಣ ಮಹಿಳೆಯರ ಸಶಕ್ತೀಕರಣ, ಡ್ರೋನ್ ದೀದಿ ನೆರವು | ಈವರೆಗೂ 500 ಡ್ರೋನ್ ಗಳ ವಿತರಣೆ

ಭವಿಷ್ಯದಲ್ಲಿ ದೇಶದ 6 ಲಕ್ಷ ಗ್ರಾಮಗಳಿಗೆ ತಲಾ 10 ಡ್ರೋಣ್ ಗಳನ್ನು ವಿತರಿಸುವ…

15 hours ago

ಮಹಿಳೆಯರಲ್ಲಿ ಗರ್ಭಕಂಠ ಕ್ಯಾನ್ಸರ್ ಪ್ರಕರಣಗಳು ಗಣನೀಯವಾಗಿ ಹೆಚ್ಚಳ

ಮಹಿಳೆಯರಲ್ಲಿ ಗರ್ಭಕಂಠ ಕ್ಯಾನ್ಸರ್ ಪ್ರಕರಣಗಳು ಗಣನೀಯವಾಗಿ ಹೆಚ್ಚಳವಾಗುತ್ತಿದ್ದು, ಆಯುಷ್ಮಾನ್ ಆರೋಗ್ಯ ಮಂದಿರಗಳಲ್ಲಿ, 30…

15 hours ago