ಗುತ್ತಿಗಾರು: ಗೆಳೆಯರಬಳಗ ದೇವ , ಜ್ಯೋತಿಲಕ್ಷ್ಮಿಮಹಿಳಾಮಂಡಲ ದೇವ , ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ದೇವ , ಅಂಗನವಾಡಿ ಬೆಂಬಲ ಸಮಿತಿ ದೇವ -ದೇವಚಳ್ಳ , ಇವುಗಳ ಜಂಟಿ ಆಶ್ರಯದಲ್ಲಿ 29ನೆ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ ದೇವ ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ವಠಾರ ದಲ್ಲಿ ನಡೆಯಿತು.
ಪುರುಷರ ಮೊಸರುಕುಡಿಕೆ ಮಹಿಳೆಯರ ಜಾರುಕಂಬ , 5 ವರ್ಷದ ಒಳಗಿನ ಸಾರ್ವಜನಿಕ ಮಕ್ಕಳಿಗೆ ಶ್ರೀಕೃಷ್ಣ ವೇಷ ಸ್ಪರ್ಧೆ , ಪುರುಷರಿಗೆ , ಮಹಿಳೆಯರಿಗೆ , ಸಾರ್ವಜನಿಕಶಾಲಾ ಮಕ್ಕಳಿಗೆ , ಶಾಲಾಮಕ್ಕಳಿಗೆ , ಅಂಗನವಾಡಿಮಕ್ಕಳಿಗೆ , ಪ್ರತ್ಯೇಕ ಆಟೋಟ ಸ್ಪರ್ಧೆ ಗಳು ನಡೆಯಿತು.
ಕಾರ್ಯಕ್ರಮ ಉದ್ಘಾಟನೆಯನ್ನು ಆನಂದ ದೇವ ನಿರ್ವಹಿದರು. ಸಂಜೆ ನಡೆದ ಸಮಾರೋಪ ಸಮಾರಂಭ ದಲ್ಲಿ ಯೋಗಿಶ್ ದೇವ ಅದ್ಯಕ್ಷತೆ ವಹಿಸಿದ್ದರು. ಮುಖ್ಯಅತಿಥಿಗಳಾಗಿ ದಿವಾಕರ ಮುಂಡೋಡಿ ಅಧ್ಯಕ್ಷರು ಗ್ರಾಮಪಂಚಾಯತ್ ದೇವಚಳ್ಳ ,ಸೀತಾರಾಮ ಬೆಳ್ಳಾರೆ ವಲಯ ಮೇಲ್ವಿಚಾರಕರು ಸುಬ್ರಹ್ಮಣ್ಯ ವಲಯ, ಬಾಲಕೃಷ್ಣ ಸೋನಮನೆ ಹಿರಿಯ ಗುಮಾಸ್ತ ರಬ್ಬರ್ ಖರೀದಿ ಕೇಂದ್ರ ಗುತ್ತಿಗಾರು, ವಸಂತಕುಮಾರ ಮುಂಡೋಡಿ ನಿವೃತ ಹಿರಿಯ ಗುಮಾಸ್ತ ಪಾ . ಕೃ . ಪ . ಸ . ಸಂಘ . ನಿ ಗುತ್ತಿಗಾರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಗೆಳೆಯರ ಬಳಗ ಮತ್ತು ಜ್ಯೋತಿ ಲಕ್ಷ್ಮಿ ಮಹಿಳಾ ಮಂಡಲ ಜಂಟಿಯಾಗಿ ಆಯೋಜಿಸಿದ ಅದೃಷ್ಟ ಚೀಟಿಯ ವಿಜೇತರನ್ನು ಚೀಟಿ ಎತ್ತುವ ಮೂಲಕ ಆಯ್ಕೆ ಮಾಡಲಾಯಿತು. ಗೆಳೆಯರ ಬಳಗದೇವ ಇದರ ರಂಗಮಂದಿರದ ವಿದ್ಯುತ್ ಸಂಪರ್ಕಕ್ಕೆ ಮುಂಗಡವಾಗಿ ರೂ.5000 ಸಾವಿರಗಳನ್ನು ನೀಡಿರುವ ವಸಂತ ಕುಮಾರ್ ಮುಂಡೋಡಿಯವರನ್ನು ಗೌರವಿಸಲಾಯಿತು .
ತೀರ್ಥೆಶ್ ಪಾರೆಪ್ಪಾಡಿ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ವಿನಯಕುಮಾರ್ ಮುಳುಗಾಡು ಕಾರ್ಯಕ್ರಮ ನಿರೂಪಿಸಿದರು. ಪುನೀತ್ ರವಿ ಹಿರಿಯಡ್ಕ ವಂದಿಸಿದರು.
ಎಳೆಕಾಯಿ ಹಾಗೂ ಬಲಿತ ಅಡಿಕೆ ಒಡೆದು ಬೀಳುತ್ತಿರುವ ಸಮಸ್ಯೆ ಹಲವು ಭಾಗಗಳಲ್ಲಿ ಕಂಡುಬರುತ್ತಿದೆ.…
ಜಾಗತಿಕ ಮಾರುಕಟ್ಟೆಯಲ್ಲಿ ನೈಸರ್ಗಿಕ ರಬ್ಬರ್ ಬೆಲೆ ಮೊದಲ ಬಾರಿಗೆ ಕೆಜಿಗೆ ₹300 ಗಡಿ…
ಬೇಸಿಗೆಯ ಹಣ್ಣುಗಳನ್ನು ತಿನ್ನುವ ಮೊದಲು ಹರಿಯುವ ನೀರು, ಬೇಕಿಂಗ್ ಸೋಡಾ ಅಥವಾ ವಿನೆಗರ್…
ಮೆಟಾ ಒಡೆತನದ Facebook, Instagram ಮತ್ತು Messenger ಸೇವೆಗಳು ಜಾಗತಿಕ ಮಟ್ಟದಲ್ಲಿ ತಾಂತ್ರಿಕ…
ಉತ್ತರ ಪ್ರದೇಶದಲ್ಲಿ ಅಡಿಕೆ ವ್ಯಾಪಾರದ ಮೇಲೆ ವಿಧಿಸಲಾಗುತ್ತಿರುವ ಮಂಡಿ ತೆರಿಗೆಯನ್ನು ರದ್ದುಗೊಳಿಸುವಂತೆ ಕ್ಯಾಂಪ್ಕೊ…
ಕರ್ನಾಟಕದ ಕರಾವಳಿ, ಮಲೆನಾಡು ಹಾಗೂ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮಳೆಯ ವಾತಾವರಣ…