ಸುಳ್ಯ: ಸುಳ್ಯ ತಾಲೂಕು ಅಲ್ಪಸಂಖ್ಯಾತರ ವಿವಿದೋದ್ದೇಶ ಸಹಕಾರ ಸಂಘದ ಸದಸ್ಯರಾದ ಧೀರಾ ಕ್ರಾಸ್ತಾ ನಗರ ಪಂಚಾಯತ್ ಸದಸ್ಯರಾಗಿ ಆಯ್ಕೆಯಾದ ಹಿನ್ನಲೆಯಲ್ಲಿ ಸಂಘದ ವತಿಯಿಂದ ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷ ಇಸ್ಮಾಯಿಲ್ ಪಡ್ಪಿನಂಗಡಿ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಸಂಘದ ಸ್ಥಾಪಕಾಧ್ಯಕ್ಷ ಬಾಪು ಸಾಹೇಬ್ ಸನ್ಮಾನಿಸಿದರು. ಮಾಜಿ ಅಧ್ಯಕ್ಷ ಆರ್.ಕೆ. ಮಹಮ್ಮದ್ ಅಭಿನಂದನಾ ಭಾಷಣ ಮಾಡಿದರು. ಸಂಘದ ಉಪಾಧ್ಯಕ್ಷ ಶಾಫಿ ಕುತ್ತಮೊಟ್ಟೆ ಶುಭ ಹಾರೈಸಿದರು.ಈ ಸಂದರ್ಭದಲ್ಲಿ ಸದಸ್ಯರಾದ ಆಮಿನಾ, ಬೇಗಂ , ಖಾದರ್ ಸಂಪಾಜೆ, ಎಸ್.ಕೆ.ಹನೀಫ್, ಕಾರ್ಯದರ್ಶಿ ಪ್ರಜ್ವಲ್ ನಾಯಕ್,ಸಿಬ್ಬಂದಿಗಳಾದ ವಿನೋದ್,ಪ್ರಿಯಾ, ನಳಿನಿ ಉಪಸ್ಥಿತರಿದ್ದರು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel