ಸುಳ್ಯ: ನಗರ ಪಂಚಾಯತ್ ಸದಸ್ಯ ಶರೀಫ್ ಕಂಠಿ ಮನವಿ ಮೇರೆಗೆ ತಹಶೀಲ್ದಾರ್ ಎನ್.ಎ.ಕುಂಞಿ ಅಹಮ್ಮದ್ ನಾವೂರು ಕಾಲೋನಿಗೆ ಭೇಟಿ ನೀಡಿದರು. ಹಲವು ವರ್ಷಗಳಿಂದ ಗುಡಿಸಲಿನಲ್ಲಿ ವಾಸವಿರುವ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿರುವ ಜನರ ಮನೆಗಳಿಗೆ ಭೇಟಿ ನೀಡಿ ಜನರ ಜೊತೆ ಮಾತುಕತೆ ನಡೆಸಿ ಸಮಸ್ಯೆಗಳನ್ನು ಆಲಿಸಿದರು. ಗುಡಿಸಲಿನಲ್ಲಿ ವಾಸಿಸುವವರಿಗೆ ಮನೆ ನಿರ್ಮಿಸಿ ಕೊಡಲು ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಆ ಸಂದರ್ಭದಲ್ಲಿ ನಾವೂರು ಕಾಂಗ್ರೆಸ್ ಬೂತ್ ಅಧ್ಯಕ್ಷ ಹನೀಫ್ ಬೀಜಕೊಚ್ಚಿ. ಮಹಮ್ಮಾಯಿ ದೇವಸ್ಥಾನದ ಮುಖ್ಯಸ್ಥ ಕಂಜಲ, ಎಂ.ಬಿ. ಚೋಮ, ಅರುಣ. ಹುಕ್ರಪ್ಪ, ನಾರಾಯಣ, ರವಿ, ಕೊರಗಪ್ಪ, ಸೋಮನಾಥ್ ಉಪಸ್ಥಿತರಿದ್ದರು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel