ನಿನ್ನೆ,ಇಂದು ,ನಾಳೆ..

August 27, 2019
12:00 PM
ಬಾಲ್ಯ ಕಳೆದು ಹೋಗಿದೆ
ಇಂದು ಬೀಗುತ್ತಿದೆ ಯೌವನ
ಬೆನ್ನ ಹಿಂದೆ ಬರುತಿರುವುದು
ಮುಪ್ಪಲ್ಲವೇ…?
ಮನದಲ್ಲಿ ಹಳೆನೆನಪು
ಡಂಗೂರ ಸಾರುತಿರೆ
ಮುಪ್ಪಿನ ಚಿಂತೆಯೇಕೆ ಮನಕೆ?
ಬೇಡವೆಂದರೂ ಬರುವ ಮುಪ್ಪು
ಕರೆದಾಗ ಬರುವುದೇ ಬಾಲ್ಯ ?
ನಿನ್ನೆ,ನಾಳೆಯ ಅರಿವಿಲ್ಲದೆ
ಇಂದು ಮನದಲ್ಲಿ ‘ಅಹಂ’
ನಿನ್ನೆ ಆಡಿದ ಜಗಳ
ಇಂದು ಅದೇ..!
ಬದಲಾವಣೆ ಇದೆ
ನಿನ್ನೆ ಆಟಿಕೆಗಳಿಗಾಗಿ
ಇಂದು ಮೂರಡಿ ಜಾಗಕ್ಕಾಗಿ
ನಾಳೆ ನಿನ್ನೆಯ ದಿನಗಳ ಹಿನ್ನೋಟವಷ್ಟೇ..!
ನಿನ್ನೆ ಅಂತರಾಳದ ಮಾತು
ಇಂದು ಜಗಳದಿಂದ ಮುನಿಸು
ನಾಳೆ ಬರೀ ಚಿಂತೆ
ಮತ್ತೆ ಚಿತೆ
ಇದೇ ಮನುಜನ ಜೀವನ
ನಿನ್ನೆ ಇಂದು ನಾಳೆಗಳ ಸಮಾಗಮ

Advertisement
Advertisement
Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಅಪೂರ್ವಚೇತನ್ ಪೆರಂದೋಡಿ

ಶಿಕ್ಷಕಿ

ಇದನ್ನೂ ಓದಿ

ಸುಳ್ಯದಲ್ಲಿ ಏಕೆ ಇದೆಲ್ಲಾ ಬಗೆಹರಿಯದ ಸಮಸ್ಯೆ…? | ರಸ್ತೆ-ವಿದ್ಯುತ್‌-ಸೇತುವೆಗಳು ಮರೀಚಿಕೆಯೇ..? |
June 24, 2025
8:00 PM
by: ಮಹೇಶ್ ಪುಚ್ಚಪ್ಪಾಡಿ
ಬದುಕು ಪುರಾಣ | ನಾವ್ಯಾಕೆ ‘ಶಕುನಿ’ಗಳಾಗುತ್ತಿದ್ದೇವೆ?
June 22, 2025
7:00 AM
by: ನಾ.ಕಾರಂತ ಪೆರಾಜೆ
ಹೊಸರುಚಿ | ಹಲಸಿನ ಕಾಯಿ ಐಸ್ ಕ್ರೀಮ್
June 21, 2025
7:00 AM
by: ದಿವ್ಯ ಮಹೇಶ್
ಸಸ್ಯ ಪರಿಚಯ | ಕರ್ಲೆಂಕಿ
June 20, 2025
11:18 PM
by: ಜಯಲಕ್ಷ್ಮಿ ದಾಮ್ಲೆ

You cannot copy content of this page - Copyright -The Rural Mirror

Join Our Group